ಹೂಂ ಅಂತೀಯ, ಹುಂ ಅಂತೀಯ?


Team Udayavani, Feb 12, 2019, 12:30 AM IST

x-7.jpg

ಬೆಳಗ್ಗೆ 6 ಗಂಟೆಗೆ ಅಲರಾಂ ಕಿರೊ ಎಂದು ಬಡಿದುಕೊಳ್ಳುತ್ತಿದೆ. ಆದರೆ ಏಳುವುದಕ್ಕೆ ಮನಸ್ಸೇ ಇಲ್ಲ. ತುಂಬಾ ಚಳಿ. ಇನ್ನು ಸ್ವಲ್ಪ ಹೊತ್ತು ಹೀಗೇ ಮಲಗೋಣ ಎಂದು ಮುದುರಿಕೊಳ್ಳುವಷ್ಟರಲ್ಲಿ, ಆತ ಇಂದು ನನ್ನನ್ನು ಭೇಟಿಯಾಗಲು ಬರುತ್ತಿದ್ದಾನೆ ಎಂಬ ವಿಷಯ ನೆನಪಾಯ್ತು. ತಕ್ಷಣ ಅವಸರವಾಗಿ ಎದ್ದು, ಪಕ್ಕದಲ್ಲಿದ್ದ ಮೊಬೈಲ್‌ ಎತ್ತಿಕೊಂಡು ಅವನಿಗೆ ಕಾಲ್‌ ಮಾಡಿ, ಇಂದಿನ ಭೇಟಿಯ ಬಗ್ಗೆ ಖಾತ್ರಿಪಡಿಸಿಕೊಂಡೆ. ಯಾಕಂದ್ರೆ, ಆತನೂ ನಿದ್ದೆ ಪ್ರಿಯ. ನಾನು ಊಹಿಸಿದಂತೆ ಆತ ಇನ್ನೂ ಕನಸಿನ ಲೋಕದಲ್ಲಿ ತೇಲಾಡುತ್ತ ಇದ್ದ. “ಹೋಯ್‌…ಸೋಂಬೇರಿ ಇನ್ನೂ ಮಲಗಿದ್ದೀಯಾ?’ ಎಂಬ ನನ್ನ ಗದರು ಧ್ವನಿಗೆ ಬೆಚ್ಚಿ ಬಿದ್ದು, ” ಹೇಳು ಜಾನು’ ಎಂದ. “ಬೇಗ ಎದ್ದು ರೆಡಿಯಾಗಿ ಬಾ. ಬಸ್‌ಸ್ಟಾಂಡಿನಲ್ಲಿ ಕಾಯ್ತಾ ಇರ್ತೀನಿ’ ಎಂದು ಹೇಳಿ, ಅವನ ಗುಂಗಿನಲ್ಲಿಯೇ ಉಳಿದ ಕೆಲಸ ಮುಗಿಸಿದೆ. 

ಆ ದಿನ ಎಷ್ಟೇ ಶೃಂಗಾರ ಮಾಡಿಕೊಂಡರೂ ಮನಸ್ಸಿಗೆ ತೃಪ್ತಿ ಎನಿಸಲಿಲ್ಲ. ಕಡೆಗೊಮ್ಮೆ ತರಾತುರಿಯಲ್ಲಿ ರೆಡಿಯಾಗಿ “ಅಮ್ಮಾ..ಬರ್ತೀನಿ’ ಎಂದು ಮನೆಯಿಂದೀಚೆ ಹೆಜ್ಜೆ ಇಟ್ಟಾಕ್ಷಣ ಏನೋ ಒಂಥರ ಭಯ. ಯಾಕಂದ್ರೆ ಅದು ನಮ್ಮಿಬ್ಬರ ಮೊದಲ ಭೇಟಿ. ಒಂದೆಡೆ ಮೊದಲ ಭೇಟಿಯ ಖುಷಿ, ಇನ್ನೊಂದೆಡೆ ಅವನ ಜೊತೆ ಹೇಗೆ ಮಾತು ಪ್ರಾರಂಭಿಸೋದು, ನಾವಿಬ್ಬರೂ ಜೊತೆಯಲ್ಲಿರೋದನ್ನು ಯಾರಾದರೂ ನೋಡಿದ್ರೆ ಎಂಬಿತ್ಯಾದಿ ಆತಂಕಗಳು. ಈ ಗೊಂದಲದಲ್ಲೇ ಬಸ್‌ಸ್ಟಾಂಡಿಗೆ ಬಂದೆ. 

ಆತ ಇನ್ನೂ ಬಂದಿರಲಿಲ್ಲ. ಕಾಲ್‌ ಮಾಡಿದೆ, “ಹತ್ತು ನಿಮಿಷದಲ್ಲಿ ಬರ್ತೀನಿ’ ಎಂದ. ನಿಮಿಷಗಳು ಸರಿಯುತ್ತಾ ಹೋದವು. ಸುಡುಬಿಸಿಲಿನಲ್ಲೂ ಚಳಿಯ ಅನುಭವ. ಇದ್ದಕ್ಕಿದ್ದಂತೆ ಮನಸ್ಸಲ್ಲೇನೋ ಸಂತೋಷ. ಯಾರೋ ನನ್ನನ್ನು ಸೆಳೆಯುತ್ತಿರುವಂಥ ಭಾವ, ಆ ಸೆಳೆತ ಸಮೀಪಿಸುತ್ತಿದ್ದಂತೆ ಎದೆ ಬಡಿತ ಹೆಚ್ಚುತ್ತಾ ಹೋಯಿತು. ತಲೆ ಎತ್ತಿ ನೋಡಿದಾಗ ಕಣ್ಣು ತುಂಬಿ ಬಂತು. ಇಷ್ಟು ದಿನ ದೂರದಿಂದಲೇ ಕಾಡಿದವನು, ಕಾಯಿಸಿದವನು ಎದುರಿಗೆ ಬಂದು ನಿಂತಿದ್ದ!  “ಹಲೋ… ಏನಾಯ್ತು? ಯಾಕ್‌ ಹೀಗೆ ಸುಮ್ಮನೆ ಮುಖ ನೋಡ್ತಿದ್ದೀಯಾ?’ ಅಂತ ಭುಜ ಹಿಡಿದು ಅಲುಗಾಡಿಸಿದಾಗ ನಾಚಿ ನೀರಾದೆ. 

“ಹೀಗೇ ಯೋಚನೆ ಮಾಡ್ತಾ ಕುಳಿತಿರುತ್ತೀಯಾ? ನನ್ನ ಜೊತೆ ಮಾತಾಡ್ತೀಯಾ?’ ಎಂದಾಗ ಗಂಟೆಗಟ್ಟಲೆ ಮೊಬೈಲ್‌ನಲ್ಲಿ ಅವನೊಂದಿಗೆ ಮಾತಾಡುತ್ತಿದ್ದವಳು ನಾನೇನಾ ಅನ್ನಿಸಿತು. ಕಡೆಗೆ ಅವನೇ ಮಾತು ಆರಂಭಿಸಿದ. ಅಲ್ಲಿಂದ ಪ್ರಾರಂಭವಾದ ನಮ್ಮಿಬ್ಬರ ಹರಟೆ, ಕಾಫಿಡೇಗೆ ಹೋಗಿ ಕಾಫಿ ಕುಡಿದು, ಪಾರ್ಕ್‌ನಲ್ಲೆಲ್ಲಾ ಸುತ್ತಾಡಿದರೂ ಮುಗಿಯಲಿಲ್ಲ. ಸಮಯ ಕಳೆದದ್ದೇ ತಿಳಿಯಲಿಲ್ಲ.

ಅವನ ಧ್ಯಾನದಲ್ಲಿ ಮನೆಗೆ ಹೋಗುವುದನ್ನೇ ಮರೆತು ನಿಂತುಬಿಟ್ಟಿದ್ದೆ. ಹೀಗಿದ್ದಾಗಲೇ- “ಎಷ್ಟೊತ್ತು ಮಲಗಿರಿ¤àಯ? ಕ್ಲಾಸ್‌ಗೆ ಟೈಮ್‌ ಆಯ್ತು, ಎದ್ದೇಳು’ ಎಂದು ಬೈಯುತ್ತಿರುವ ಅಮ್ಮನ ಧ್ವನಿ ಕೇಳಿಸಿತು. ತಟ್ಟನೆ ಕಣ್ಣು ಬಿಟ್ಟು ಸುತ್ತ ಮುತ್ತ ನೋಡಿದೆ! ಅಯ್ಯೋ, ಇಷ್ಟೊತ್ತು ನಾ ನೋಡಿದ್ದು ಕನಸಾ ಎಂದು ಬೇಸರವಾಯ್ತು… 

 ಷಾಹಿನಾ ಎ., ತುಮಕೂರು

ಟಾಪ್ ನ್ಯೂಸ್

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.