ತಿರುವಲ್ಲಿ ನಿಂತು ಹಿಂತಿರುಗು ಒಮ್ಮೆ ಕಡೆಯ ಸೆಮಿಸ್ಟರಿನ ಲಾಸ್ಟ್‌ಲೆಟರ್


Team Udayavani, Jan 31, 2017, 3:45 AM IST

Pugazh-Movie-Review.jpg

ಎರಡು ವರ್ಷ ಒಂದೇ ಕಾಲೇಜ್‌ನಲ್ಲಿ ಇದ್ರೂ ಪರಿಚಯವೇ ಇರಲಿಲ್ಲ. ಒಮ್ಮೊಮ್ಮೆ ಕಾಲೇಜ್‌ ಕಾರಿಡಾರ್‌ನಲ್ಲಿ ನಿನ್ನನ್ನು ಕಂಡಾಗ ಗೊಣಗಿಕೊಂಡ ನೆನಪಷ್ಟೇ. ಇದನ್ನ ಬಿಟ್ಟರೆ ನಮ್ಮಿಬ್ಬರಿಗೆ ಯಾವುದೇ ರೀತಿಯ ಪರಿಚಯವಿರಲಿಲ್ಲ. ಹಿರಿಯರು ಹೇಳಿದ ಹಾಗೆ ಸ್ನೇಹ ಬೆಳೆಯಲು ಕಾರಣಗಳು ಬೇಕಿಲ್ಲ. ಕೆಲವರಿಗೆ ರಸ್ತೆಯಲ್ಲಿ ನಡೆಯುವಾಗ ಪರಿಚಯವಾಗಿ ಸ್ನೇಹ ಬೆಳೆಯುತ್ತದೆ. ಇನ್ನು ಕೆಲವರಿಗೆ ಕೆಲಸ ಮಾಡುವ ಸ್ಥಳದಲ್ಲಿ ಪರಿಚಯವಾಗಿ ಸ್ನೇಹ ಬೆಳೆಯುತ್ತದೆ. ಆದರೆ ಆ ವಿಧಿಯ ಆಟ ನೋಡು ಗೆಳತಿ ನಮ್ಮಿಬ್ಬರ ಸ್ನೇಹ ಎನ್‌ಎಸ್‌ಎಸ್‌ ಕ್ಯಾಂಪಿನಲ್ಲಿ ಬೆಳೆಯಿತು.

ಗೆಳತಿ ನಾನಿನ್ನ ಮೊದಲು ಎಲ್ಲೋ ಒಂದೆರಡು ಬಾರಿ ನೋಡಿರಬಹುದು ಅಷ್ಟೇ. ಕ್ಯಾಂಪಿನಲ್ಲಿ ನೀ ಮೊದಲ ದಿನ ಧ್ವಜದ ಸುತ್ತ ರಂಗೋಲಿ ಹಾಕುತ್ತಿದ್ದೆ. ಅಂದು ನಾನು ನಿನ್ನ ಮೊದಲು ನೋಡಿದೆ, ಅಲ್ಲಿಂದ ನಮ್ಮ ಸ್ನೇಹದ ಬೀಜ ಮೊಳಕೆಯೊಡೆದು ಚಿಗುರಲು ಶುರುಮಾಡಿತು. ಆದರೆ ಈಗ ನೋಡು, ಆ ಚಿಗುರು ಹೆಮ್ಮರವಾಗಿ ಬೆಳೆದು ನಿಂತಿದೆ. ನಾನಿನ್ನ ಎಷ್ಟೋ ಬಾರಿ ಬೇಜಾರು ಮಾಡಿರುವೆ, ಬೈದಿರುವೆ, ತರ್ಲೆ ಮಾಡಿರುವೆ. ಆದರೂ ನೀ ನನ್ನ ಸ್ನೇಹವನ್ನು ಬಯಸಿರುವೆ.

ಎನ್‌ಎಸ್‌ಎಸ್‌ನ ಕೊನೆಯ ದಿನ ಯಾಕಾದರೂ ಬಂದಿತೋ ಎನಿಸಿತು. ಅಂದು ಪರಸ್ಪರ ಚರವಾಣಿಯ ಸಂಖ್ಯೆಗಳನ್ನು ಪಡೆದೆವು. ಅಂದಿನಿಂದ ನಮ್ಮ ಚರವಾಣಿಗಳಲ್ಲಿ ರವಾನಿಸಿದ ಸಂದೇಶಗಳು ಸಾವಿರಾರು. ಪ್ರತಿದಿನ ನಿನ್ನ ಶುಭ ಮುಂಜಾನೆಯ ಸಂದೇಶದಿಂದ ನನಗೆ ಬೆಳಕಾಗಬೇಕಿತ್ತು. ಇಲ್ಲವಾದರೆ ಮನಸ್ಸಿಗೇನೋ ಜಡತ್ವ, ಏನನ್ನೋ ಕಳೆದುಕೊಂಡ ಹಾಗೆ ಅನಿಸುತ್ತಿತ್ತು. ನಿಜ ಹೇಳಬೇಕೆಂದರೆ ನೀನೊಂದು ಕಡೆ ನಾನೊಂದು ಕಡೆ ಇದ್ದರೂ ನಮ್ಮ ಆಲೋಚನೆಗಳು ಒಂದೇ ಆಗಿರುತ್ತಿದ್ದವು.

ನಿಜವಾದ ಗೆಳೆತನದ ಸಿಹಿ ತಿಳಿಯದೇ ಇದ್ದ ನನಗೆ ಗೆಳೆತನದ ಸಿಹಿಯನ್ನು ಉಣಬಡಿಸಿದೆ. ಗೆಳತಿ ನೀನು ನನ್ನ ಮೇಲೆ ತೋರಿಸುತ್ತಿರುವ ಪ್ರೀತಿ ಕಾಳಜಿಯಿಂದ ಪ್ರಪಂಚದ ಎಲ್ಲಾ ಸಂತೋಷ ನನಗೆ ಸ್ವಂತ ಅನಿಸಿದೆ. ಕಾಲೇಜಿನ ಕ್ಯಾಂಪಸ್‌ನಲ್ಲಿ ದಿನಕ್ಕೆ ಒಮ್ಮೆಯಾದರೂ ನಿನ್ನ ನೋಡಬೇಕೆನಿಸುತ್ತದೆ, ನನ್ನ ಕಣ್ಣಳತೆಯಿಂದ ಮರೆಯಾದರೆ ನನಗೆ ಏನೋ ಚಡಪಡಿಕೆ.

ಗೆಳತಿ ನಿನ್ನ ಗೆಳೆತನದಿಂದ ನನ್ನ ಜೀವನದಲ್ಲಿ ಆದ ಬದಲಾವಣೆಗಳು ಅದೆಷ್ಟೋ. ನೀನು ನನಗೆ ನಿಜವಾದ ಗೆಳೆತನ, ಪ್ರೀತಿ, ಬದುಕು ಹೀಗೆ ಎಲ್ಲವನ್ನೂ ಕಲಿಸಿರುವೆ. ಹೇಳಬೇಕೆಂದರೆ ಮನ ಮೆಚ್ಚಿದ ದೋಸ್ತಿ ನೀನಾದೆ. ಅರೆಕ್ಷಣಕೊಮ್ಮೆ ಬೇಸರ, ಕ್ಷಣಕೊಮ್ಮೆ ಮುನಿಸು, ಚಿಕ್ಕ ಮಕ್ಕಳ ಹಾಗೆ ತರ್ಲೆ, ಇವೆಲ್ಲ ನಮಗೆ ಸರ್ವೇ ಸಾಮಾನ್ಯವಾದವು.

ನೋಡು ಗೆಳತಿ ಇದೆಲ್ಲ ಕಾಲದ ಜೊತೆಗೆ ನಡೆದು ಬಂದ ಪಯಣ. ಆದರೆ ಜೀವನ ಅನ್ನುವುದು ಪ್ಯಾಸೆಂಜರ್‌ ಟ್ರೆ„ನ್‌ ಥರ. ನಮ್ಮ ಪಯಣದ ಹಾದಿಯಲ್ಲಿ ನಮ್ಮ ಸ್ಥಳ ಸಿಕ್ಕ ಮೇಲೆ ಇಳಿಯಲೇ ಬೇಕು. ಇನ್ನು ಮೂರು ತಿಂಗಳು ಮಾತ್ರ ಜೊತೆಯಲ್ಲಿ ವ್ಯಾಸಂಗ ಮಾಡುತ್ತೇವೆ ಅಷ್ಟೇ. ಆದರೆ ನೀ ಬೇಸರ ಪಡಬೇಡ, ಏಕೆಂದರೆ ನಮ್ಮಿಬ್ಬರ ನಡುವೆ ಇರುವ ಸ್ನೇಹ ಒಂದೇ ದಿನ ಅರಳಿ ಬಾಡಿ ಹೋಗುವ ಸ್ನೇಹವಲ್ಲ. ಎಷ್ಟೇ ಬಿಸಿಲು ಬಡಿದರೂ ಚಿರಾಯುವಾಗಿರುವ ಸ್ನೇಹ. ಖುಷಿಯಾಗಿರು. ಎಲ್ಲೇ ಇರು ಹೇಗೆ ಇರು ಹ್ಯಾಪಿಯಾಗಿರು ಬುಜ್ಜಿ.

– ಗಿರೀಶ ಜಿಆರ್‌ 
ಪತ್ರಿಕೋದ್ಯಮ ವಿಭಾಗ,
ಕುವೆಂಪು ವಿವಿ,ಶಂಕರಘಟ್ಟ.

ಟಾಪ್ ನ್ಯೂಸ್

Scrutiny of complaint against Modi: Election Commission

Loksabha Election; ಮೋದಿ ವಿರುದ್ಧದ ದೂರು ಪರಿಶೀಲನೆ: ಚುನಾವಣ ಆಯೋಗ

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಮುಸ್ಲಿಮರು: ಆಯೋಗ ಆಕ್ಷೇಪ

ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಮುಸ್ಲಿಮರು: ಆಯೋಗ ಆಕ್ಷೇಪ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

IPL 2024; ಫಿಟ್‌ ಆಗಿದ್ದೇ ನಿನ್ನೆ: ಸಂದೀಪ್‌ ಶರ್ಮ

Pakistan cricket team military training wasted

PCB; ಪಾಕ್‌ ಕ್ರಿಕೆಟ್‌ ತಂಡದ ಸೇನಾ ತರಬೇತಿ ವ್ಯರ್ಥ: ಹಾಸ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Scrutiny of complaint against Modi: Election Commission

Loksabha Election; ಮೋದಿ ವಿರುದ್ಧದ ದೂರು ಪರಿಶೀಲನೆ: ಚುನಾವಣ ಆಯೋಗ

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಮುಸ್ಲಿಮರು: ಆಯೋಗ ಆಕ್ಷೇಪ

ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಮುಸ್ಲಿಮರು: ಆಯೋಗ ಆಕ್ಷೇಪ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.