ಪ್ರೇಮ ಜ್ವರದಲ್ಲಿ ಬೇಯುತ್ತಾ….


Team Udayavani, Sep 17, 2019, 5:00 AM IST

u-11

ಈ ಬದುಕಿನ ಪ್ರತೀ ಕ್ಷಣದಲ್ಲೂ ನೆರಳಿನಂತೆ ಜತೆಗೇ ನೀ ಇರುವಾಗ ನಾ ಒಬ್ಬಂಟಿ ಅಂತ ಹೇಗಾದರೂ ಅಂದುಕೊಳ್ಳಲಿ. ಯಾವತ್ತಾದರೂ ನನ್ನ ಉಸಿರು ನಿನ್ನ ತಲುಪಲಿ. ನಿಟ್ಟುಸಿರು ನನ್ನಲ್ಲೇ ಉಳಿಯಲಿ.

ರೂಪಸಿ….
ಮಧ್ಯಾನದ ಬಿರುಮಳೆ ನಿಂತಿದೆ. ಮೋಡವಿದ್ದಿದ್ದೇ ಸುಳ್ಳು ಅನ್ನುವಂತೆ ತೆರೆದುಕೊಂಡ ಆಕಾಶ . ಕಳ್ಳ ಹೆಜ್ಜೆಯಿಟ್ಟು ಬಂದು ನಗುವಿನ ಕಿರಣ ಸುರಿಯುತ್ತಿರುವ ಸಂಜೆ ಸೂರ್ಯ. ಬೀಸುಗಾಳಿಯ ತುಂಬಾ ಹೊಸತೊಂದು ಚೈತನ್ಯ. ಖಾಲಿ ಖಾಲಿ ಇದ್ದ, ಒದ್ದೆ ಒದ್ದೆ ರಸ್ತೆಯ

ತುಂಬಾ ಈಗ ಜೀವ ಸಂಚಾರ. ಮಳೆ ನಿಂತಿದ್ದರೂ , ಬಿಡಿಸಿದ ಬಣ್ಣದ ಛತ್ರಿ ಅಡಿಯಲ್ಲಿ ನೀ ನಡೆದು ಬರುವ ಹೊತ್ತಿಗೆ , ನೀ ಬರುವ ಹಾದಿ ಬದಿಯಲಿ ಕಾಯುತ್ತಾ ನಿಲ್ಲುವ ಅನಾಮಿಕ ನಾನು. ಈ ಕಾಯಕ ಶುರುವಾಗಿ ವರ್ಷವಾಗುತ್ತಾ ಬಂತು. ನಿನಗದರ ಸುಳಿವು ಸಿಗದಂತೆ ಉಳಿದುಹೋದವನು ನಾನು. ಎದೆಯೊಳಗಿನ ಒಲವು ನಿನ್ನೆದುರು ಪದಗಳಾಗಿಸುವ ಪರಿಯ ಅರಿಯದೇ ಮೌನವಾದವನು ನಾನು.

ಹೀಗೆ ಇನ್ನೆಷ್ಟು ದಿನಾ…? ನನ್ನೊಳಗೆ ಹುಟ್ಟುವ ಈ ಪ್ರಶ್ನೆಗೆ ಉತ್ತರ ದಕ್ಕುತ್ತಿಲ್ಲ. ಇವತ್ತಿನ ಈ ಕ್ಷಣ ನನ್ನದು. ನೀ ದಾಟಿ ಹೋಗುವ ಈ ಅರೆ ಘಳಿಗೆ ನನ್ನದು. ಗಾಳಿಯಲ್ಲಿ ತೇಲಿ ಬರುವ ನಿನ್ನ ಮೈಯ ಅತ್ತರಿನ ಘಮ ನನ್ನದು. ಮಿಂಚಂತೆ ಸುಳಿದು ಮಾಯವಾಗುವಾಗ ಉಳಿದ ಆ ಅನೂಹ್ಯ ಅನುಭವ ನನ್ನದು. ನೀ ಎದುರಾದಾಗೆಲ್ಲಾ ಎದೆಯೊಳಗೆ ಮೂಡುವ ಹೊಸ ಹಾಡಿಗೆ ಹಳೆಯ ಶ್ರೋತೃ ನಾನು. ಈ ಬದುಕಿನಲ್ಲಿ ಯಾವತ್ತಾದರೂ ಒಮ್ಮೆ ನಿನ್ನನ್ನ ಮಾತನಾಡಿಸಲು ಸಾಧ್ಯವಾ ? ಗೊತ್ತಿಲ್ಲ.

ಪ್ರತಿಸಾರಿ ನಿನ್ನ ನೋಡಿದಾಗಲೂ , ಎಂಥದ್ದೋ ಸಂತೋಷವೊಂದು ಸದ್ದಿಲ್ಲದೇ ಎದೆ ತುಂಬಿಕೊಳ್ಳುತ್ತದೆ. ಈ ಒಬ್ಬಂಟಿ ಹಾದಿಯಲ್ಲೇ ಖುಷಿ ಇದೆ. ಇರುಳ ಆಕಾಶದಲ್ಲಿನ ಚುಕ್ಕಿ ಕಣ್ಣಿಗಷ್ಟೇ ಸಿಗುತ್ತದೆ. ಕೈ ಚಾಚಿ ನಿರಾಸೆಯ ನಿರ್ವಾತದಲ್ಲಿ ಖಾಲಿ ಕೈಯಲ್ಲಿ ಉಳಿಯಲಾರೆ. ನಿಂಗೆ ನೀಲಿ ಬಣ್ಣದ ಆ ಚೂಡಿದಾರ್‌ ಅದರ ಮೇಲೆ ಚಿಮುಕಿಸಿದಂತಿರುವ , ಹೊಳೆ ಹೊಳೆವ ಸಣ್ಣ ಮಿಂಚಿನ ಚೂರುಗಳು. ಅದೆಷ್ಟು ಚೆನ್ನಾಗಿ ಒಪ್ಪುತ್ತದೆ ಗೊತ್ತಾ?. ಗಾಳಿಗೆ ಹಾರುವ ಹೆರಳಂತೂ ನನ್ನೊಳಗೆ ಸಂತಸದ ತೂಫಾನು ಎಬ್ಬಿಸುತ್ತದೆ. ಇದೆಲ್ಲಾ ನೆನಪಾದಾಗ ಏಕಾಂಗಿಯೊಬ್ಬ ನನ್ನೊಳಗೆ ಹಾಡಿಕೊಳ್ಳುತ್ತಾನೆ.

ನಿನ್ನ ಕನಸಿನ ಹುಡುಗ ಹೇಗಿದ್ದಾನೋ ಗೊತ್ತಿಲ್ಲ. ಆದರೆ, ನಾನು ಅವನಿಗಿಂತ ನಿನ್ನನ್ನ ತುಂಬಾ ಪ್ರೀತಿಸುತ್ತೇನೆ. ಅವನು ಎಷ್ಟು ಪ್ರೀತಿಸುತ್ತಾನೆ ಅಂತ ನೀ ತಿಳಿದಿದ್ದಿಯೋ ಅದಕ್ಕಿಂತ ಹೆಚ್ಚು ನಾ ನಿನ್ನ ಪ್ರೀತಿಸುತ್ತೇನೆ. ಯಾಕೆಂದರೆ, ನನ್ನನ್ನ ನಾನು ಪ್ರೀತಿಸೋದಕ್ಕಿಂತ ಹೆಚ್ಚು ನಿನ್ನನ್ನ ಪ್ರೀತಿಸ್ತಿನಿ. ಒಮ್ಮೊಮ್ಮೆ ಇದೆಲ್ಲಾ ಎಂಥಾ ಹುಚ್ಚಾಟ ಅನಿಸುತ್ತದೆ. ಆದರೆ ಇಷ್ಟೊಂದು ಸಂಭ್ರಮ ಉಕ್ಕಿಸುವ , ಕತ್ತಲೆಯ ಎದೆಯೊಳಗೊಂದು ನೀಲಾಂಜನ ಹೆಚ್ಚಿಡುವ , ಅಪರಿಮಿತ ಸಂತೋಷ ನೀಡುವ, ಈ ಒಲವ ಮಳೆಯಲಿ ನೆನೆಯದೇ ನಾ ಹೇಗೆ ಉಳಿಯಲಿ?

ನಿತ್ಯ ನೋಡುವ ಸಾವಿರ ಮುಖಗಳ ಮೇಲಿನ ಆಳದ ನೋವು ನಲಿವುಗಳು , ಯಾವತ್ತಿನದೋ ಒಲವಿನ ಕಾಣಿಕೆಯೇ ಆಗಿರುತ್ತದಲ್ವಾ? ಮತ್ತೆ ನಿನ್ನ ನೋಡಲು ನಾನು ಇಡೀ ರಾತ್ರಿ ಸುಟ್ಟು ಹಗಲಾಗಿಸಿಕೊಳ್ಳಬೇಕು. ನಿನ್ನ ನೆನಪುಗಳ ಜ್ವರದಲ್ಲಿ ಬೇಯಬೇಕು. ನನ್ನ ಕನಸುಗಳ ದರ್ಬಾರಿಗೆ ನಿನ್ನ ಬರಮಾಡಿಕೊಳ್ಳಬೇಕು. ಈ ಬದುಕಿನ ಪ್ರತೀ ಕ್ಷಣದಲ್ಲೂ ನೆರಳಿನಂತೆ ಜತೆಗೇ ನೀ ಇರುವಾಗ ನಾ ಒಬ್ಬಂಟಿ ಅಂತ ಹೇಗಾದರೂ ಅಂದುಕೊಳ್ಳಲಿ. ಯಾವತ್ತಾದರೂ ನನ್ನ ಉಸಿರು ನಿನ್ನ ತಲುಪಲಿ. ನಿಟ್ಟುಸಿರು ನನ್ನಲ್ಲೇ ಉಳಿಯಲಿ.

ಕಣ್ಣಿಗೆ ಕತ್ತಲು ಕವಿಯುವ ಮುನ್ನ ನಿನ್ನ ನೋಡುವೆನೆಂಬ ಭರವಸೆಗೆ ವಯಸ್ಸಾಗದಿರಲಿ.

ನಿನ್ನ ಸವಿ ನೆನಪೇ ಮನದಲ್ಲಿ ಆರಾಧನೆ…..

ನಿನ್ನವನು
ಜೀವ ಮುಳ್ಳೂರು.

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.