ಗಡ್ಡ ತಂದೊಡ್ಡಿದ ಸಂಕಷ್ಟ…


Team Udayavani, Jun 30, 2020, 4:49 AM IST

beard hard

ಇವರು ಬಗ್ಗುವುದಿಲ್ಲ ಅನ್ನಿಸಿದಾಗ ವಾರ್ಡನ್‌ ಏನು ಮಾಡಿದರು ಗೊತ್ತೇ? ಅಶಿಸ್ತಿನ ಹುಡುಗರು ಎಂದು ಷರಾ ಬರೆದು, ಪ್ರಿನ್ಸಿಪಾಲರಿಗೆ ದೂರು ಕೊಟ್ಟುಬಿಟ್ಟರು!

ಕಾಲೇಜು ಜೀವನವೇ ಹಾಗೆ. ಸಂಕ್ರಾಂತಿಯಲ್ಲಿ ಸವಿಯುವ ಎಳ್ಳು ಬೆಲ್ಲದಂತೆ. ಹುಡುಕಿದರೆ, ಕೆಲವೊಮ್ಮೆ ಸಿಹಿಯೂ, ಇನ್ನೂ ಕೆಲವೊಮ್ಮೆ ಕಹಿಯೂ ಇರುತ್ತದೆ. ನೆನಪಿನ ಒಲೆಯ ಮುಂದೆ ಕೂತಾಗ ಹಿತವಾದ ಅನುಭವ. ದಾಡಿ  ಬಿಡುವುದು, ನಮ್ಮ ಕಾಲೇಜು ದಿನಗಳಲ್ಲಿ ಫ್ಯಾಷನ್‌ ಆಗಿಹೋಗಿತ್ತು. ಹೀಗಾಗಿ, ನಾವು ಜಿದ್ದಿಗೆ ಬಿದ್ದವರಂತೆ ದಾಡಿ ಬಿಟ್ಟಿದ್ದೆವು. ಪರಿಣಾಮ, ಒಬ್ಬೊಬ್ಬರ ಮೂತಿ ಸರಿಯಾಗಿ ಕಾಣದೆ ತಿಂಗಳುಗಳೇ ಕಳೆದಿದ್ದವು.

ಈ ದಾಡಿ ನಮ್ಮ ಪಾಲಿಗೆ  ಶತ್ರುವಾಗಿ ಕಾಡಿದ್ದು ಕಾಲೇಜಿನಲ್ಲಿ ಅಲ್ಲ, ಹಾಸ್ಟೆಲಿನಲ್ಲಿ. ನಮ್ಮ ಹಾಸ್ಟೆಲ್‌ ವಾರ್ಡನ್‌ ತುಂಬಾ ಸ್ಟ್ರಿಕ್ಟ್‌ ಪ್ರತಿದಿನ ನಮ್ಮ ಮುಖ ನೋಡಿದಾಗ “ಗಡ್ಡ ಬೋಳಿಸ್ರಪ್ಪ, ಸ್ವಲ್ಪ ನಿಮ್ಮ ಮುಖ ಸರಿಯಾಗಿ ನೋಡ್ಬೇಕು’ ಎಂದು ಬೈಯುತ್ತಲೇ  ಇದ್ದರು. ನಾವು ಅದನ್ನ ಅಷ್ಟೇ ಕೂಲ್‌ ಆಗಿ ತೆಗೆದುಕೊಂಡು ಒಂದೂ ಮಾತಾಡದೆ ಮುಂದೆ ಹೋಗುತ್ತಿದ್ದೆವು.

ಒಂದು ದಿನ ಮಾತ್ರ ವಾರ್ಡನ್‌ ಸಿಟ್ಟಾಗಿ- “ಗಡ್ಡ ತೆಗೆಸದಿದ್ದರೆ ಅಡ್ಮಿಷನ್‌ ಕ್ಯಾನ್ಸಲ್‌ ಮಾಡುತ್ತೇನೆ’ ಎಂದು ಖಾರವಾಗಿ  ಬೈದರು. ಅಕಸ್ಮಾತ್‌, ಹೇಳಿದಂತೆಯೇ ಮಾಡಿಬಿಟ್ಟರೆ ಗತಿಯೇನು? ಆಗ ಪೋಷಕರಿಗೆ ಏನು ಉತ್ತರ ಕೊಡೋದು ಅನಿಸಿತು. ಅಂಥದೇನೂ ಆಗಲ್ಲ ಎಂದು ನಮಗೆ ನಾವೇ ಹೇಳಿಕೊಂಡು ಸುಮ್ಮನಾದೆವು. ಇವರು ಬಗ್ಗುವುದಿಲ್ಲ ಅನ್ನಿಸಿದಾಗ ವಾರ್ಡನ್‌  ಏನು ಮಾಡಿದರು ಗೊತ್ತೇ?

ಅಶಿಸ್ತಿನ ಹುಡುಗರು ಎಂದು ಷರಾ ಬರೆದು, ಪ್ರಿನ್ಸಿಪಾಲರಿಗೆ ದೂರು ಕೊಟ್ಟುಬಿಟ್ಟರು! ಪ್ರಿನ್ಸಿಪಾಲರು- “ವಾರ್ಡನ್‌ ಹೇಳಿದಂತೆ ಕೇಳದಿದ್ದರೆ ಪರೀಕ್ಷೆಗೆ ಹಾಲ್‌ ಟಿಕೆಟ್‌ ಕೊಡಲ್ಲ’ ಅಂದರು. ಆಗ ಮಾಡುವುದೇನು?  ನಾವೆಲ್ಲಾ ವಾರ್ಡನ್‌ ಎದುರು ತಲೆಬಾಗಿ ನಿಲ್ಲಬೇಕಾಯಿತು. ಗಡ್ಡ ತೆಗೆಸುವುದು ಅನಿವಾರ್ಯವಾಯಿತು. ವಾರ್ಡನ್‌ ಗೆದ್ದವನಂತೆ ಬೀಗಿದರು. ನಾವು ನಕ್ಕೆವು. ಒಳಗೆ, ಗಡ್ಡ ತೆಗೆದ ನೋವು ಇತ್ತು.

* ಮೋಹನ್‌ ವೈ.ಕೆ. ತೀರ್ಥಹಳ್ಳಿ

ಟಾಪ್ ನ್ಯೂಸ್

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

17

ಕೋರ್ಟ್‌ ಮೇಲೆ ಪಟ್ಟಭದ್ರರ ಒತ್ತಡ: ವಕೀಲರ ಪತ್ರ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

16-

ನಟ, ಕಾಂಗ್ರೆಸ್‌ ಮಾಜಿ ಸಂಸದ ಗೋವಿಂದ “ಶಿಂಧೆ ಸೇನೆ’ ಸೇರ್ಪಡೆ

15-

ಕಂಗನಾ ವಿರುದ್ಧ ಪೋಸ್ಟ್: ಕೈ ನಾಯಕಿಗೆ‌ ಟಿಕೆಟ್‌ ಡೌಟ್‌

14-

Chandigarh: ಪುತ್ರನ ಬೆನ್ನಲ್ಲೇ ಪುತ್ರಿ ಜತೆಗೆ ಸಾವಿತ್ರಿ ಜಿಂದಾಲ್‌ ಬಿಜೆಪಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.