ಹೃದಯ ಚೀರುತ್ತಿದೆ ಈಗ ಬಾ, ಬೇಗ ಬಾ!


Team Udayavani, Mar 27, 2018, 5:54 PM IST

8.jpg

ಹಗಲೂ ಇರುಳೂ ನಿನ್ನದೇ ಧ್ಯಾನ. ನಿನ್ನ ನೆನಪಲ್ಲಿ ಲೋಕವನ್ನೇ ಮರೆತಿರುವೆ. ನಿನ್ನ ಕುರಿತ ಹಗಲುಗನಸುಗಳಲ್ಲಿ ಕಳೆದು ಹೋಗುತ್ತಿದ್ದೇನೆ. ಗೆಳೆಯಾ, ಈ ರೀತಿ ನನ್ನನ್ನು ಪರೀಕ್ಷಿಸಬೇಡ. 

ನನ್ನೊಲವೇ,
ಸುಮ್ಮಸುಮ್ಮನೇ ನನ್ನಿಂದ ದೂರವಿದ್ದು ನನ್ನನ್ನು ಗೋಳು ಹೊಯ್ಯುತ್ತಿರುವ ನಿನಗೆ ಮತ್ತೂಮ್ಮೆ ನಾನೇ ಈ ಪತ್ರ ಬರೆಯುತ್ತಿದ್ದೇನೆ. (ಇದು ನಿನಗೆ ಬರೆದ ಎಷ್ಟನೇ ಪತ್ರ? ನಾನು ಲೆಕ್ಕವಿಟ್ಟಿಲ್ಲ) ಇದು ಕಾಗದದಲ್ಲಿ ಬರೆದಿರುವ ಅಕ್ಷರಗಳೆಂದುಕೊಳ್ಳಬೇಡ. ಇದು ನನ್ನ ಹೃದಯದ ಭಾವ. ಮನದ ಮಾತು, ಎದೆಯ ಅಳಲು. ಕಾಣಲು ಕುರುಡಾಗಬೇಡ. ಕಿವುಡನಂತೆ ನಟಿಸಿ ನನ್ನ ಹೃದಯದ ರೋದನವನ್ನು ಕೇಳದಿರಬೇಡ. ಛಿದ್ರಗೊಂಡ ನನ್ನ ಹೃದಯದ ಚೂರುಗಳನ್ನು ಪುನಃ ಪೇರಿಸಿಟ್ಟು ಈ ಪತ್ರ ಬರೆಯುತ್ತಿದ್ದೇನೆ. ಕಣ್ಣೆದುರು ಈಗ ನೀನಿಲ್ಲ. ಕನಸಲ್ಲೂ ನಿನ್ನ ಸುಳಿವಿಲ್ಲ. ಕನಸಿನ ಉಯ್ನಾಲೆ ಜೀಕಿಕೊಂಡು ನೀನು ಬರಲಾರೆಯಾ? ಪ್ರೀತಿಯ ಪರಿಮಳ ಹೊತ್ತ ತಂಗಾಳಿಯಾಗಿ ಸುಳಿಯಲಾರೆಯಾ? ನಿನ್ನ ಕಾಣದೇ ಬರಡಾದ ಕಂಗಳನ್ನು ತಂಪಾಗಿ ತೀಡಲಾರೆಯಾ? ನೊಂದು ಬೆಂದು ಬೆಂಗಾಡಾಗಿರುವ ಮನಸ್ಸಲ್ಲಿ ಮಳೆಯಾಗಿ ಸುರಿಯಲಾರೆಯಾ?

ಗೆಳೆಯಾ, ನಿನಗಾಗಿ ನಾನೆಷ್ಟು ಹಂಬಲಿಸುತ್ತಿದ್ದೇನೆ ಗೊತ್ತಾ? ನನ್ನ ಚಡಪಡಿಕೆ, ಗೊಂದಲ, ಕಾತರ ನಿನಗೆ ತಿಳಿಯದ್ದಂತೂ ಅಲ್ಲ. ಮತ್ತೆ ಬೇಕೆಂತಲೇ ಎಲ್ಲೋ ದೂರ ಅಡಗಿ ಕುಳಿತು ನನ್ನ ಹೃದಯವನ್ನೇಕೆ ಹಿಂಡುವೆ? ನೆನಪಿನ ಅಂಕುಶದಿಂದ ಪ್ರಾಣವನ್ನೇಕೆ ಸೆಳೆಯುವೆ? ನಿನ್ನ ಕೈಹಿಡಿದು ನಡೆದ ಮುಸ್ಸಂಜೆಗಳ ಲೆಕ್ಕವಿದೆ ನನ್ನಲ್ಲಿ. ನಿನ್ನ ಜೊತೆ ಹಾಕಿದ ಹೆಜ್ಜೆಗಳ ಗುರುತು ನನ್ನ ಮನಸ್ಸಲ್ಲಿ ಅಚ್ಚಾಗಿದೆ. ಜೊತೆಯಾಗಿ ನಾವು ಕಂಡ ಪ್ರೀತಿಯ ಕನಸುಗಳು ಹೃದಯದ ತಿಜೋರಿಯಲ್ಲಿ ಭದ್ರವಾಗಿವೆ.  ನೀನು ಕನಸಿನ ಕದ ತೆರೆದು ಒಳ ಬರುವುದನ್ನೇ ಕಾಯುತ್ತಾ ನನ್ನ ಕಣ್ಣುಗಳು ನಿದ್ದೆಯನ್ನೇ ಮರೆತಿವೆ. ನೀನು ಬಿತ್ತಿದ ಪ್ರೀತಿಯ ಬೀಜಗಳು ನನ್ನ ಮನದಲ್ಲಿ ಮೊಳಕೆಯೊಡೆದಿವೆ. ಅವಕ್ಕೆ ನೀರುಣಿಸಲು ಬೇಗ ಬಂದುಬಿಡು. ನಿನ್ನ ಪ್ರೀತಿ ಮಾತುಗಳೆಂಬ ನೀರಿಲ್ಲದೇ ಅವು ಬಾಡಿ ಒಣಗುತ್ತಿವೆ. ನೀನಿನ್ನೂ ಬಾರದಿದ್ದರೆ ನನ್ನ ಹೃದಯವೂ ಬರಡು ನೆಲದಂತೆ ಬಿರುಕು ಬಿಡಬಹುದು. ಅದಕ್ಕೂ ಮೊದಲು ದಯವಿಟ್ಟು ಬಂದುಬಿಡು.

ನನಗಂತೂ ಈಗ ಹಗಲೂ ಇರುಳೂ ನಿನ್ನದೇ ಧ್ಯಾನ. ನಿನ್ನ ನೆನಪಲ್ಲಿ ಲೋಕವನ್ನೇ ಮರೆತಿರುವೆ. ನಿನ್ನ ಕುರಿತ ಹಗಲುಗನಸುಗಳಲ್ಲಿ ಕಳೆದು ಹೋಗುತ್ತಿದ್ದೇನೆ. ಗೆಳೆಯಾ, ಈ ರೀತಿ ನನ್ನನ್ನು ಪರೀಕ್ಷಿಸಬೇಡ. ತಮಾಷೆಯ ಮಾತನ್ನು ಗಹನವಾಗಿ ಪರಿಗಣಿಸಿ ನನ್ನನ್ನು ಕಾಡಬೇಡ. ಅಜ್ಞಾತವಾಸ ಕೊನೆಗೊಳಿಸಿ ಬೇಗ ಬಂದುಬಿಡು. ಆಕಾಶವೇ ಕಳಚಿ ಬಿದ್ದರೂ, ಲೋಕವೇ ಎದುರು ನಿಂತರೂ ನಿನ್ನ ಕೈ ಬಿಡಲಾರೆ, ಜನುಮಜನುಮಕ್ಕೂ ನೀನೇ ನನ್ನ ಸಂಗಾತಿ ಎನ್ನುತ್ತಿದ್ದವ ನೀನು. ನಿನ್ನ ಪ್ರೀತಿ ಪ್ರಾಮಾಣಿಕವಾಗಿದ್ದರೆ ಬೇಗ ಬಂದು ಬಿಡು.

ನಿನಗಾಗಿ ಹಂಬಲಿಸುತ್ತಾ, ನಿನ್ನದೇ ನಿರೀಕ್ಷೆಯಲ್ಲಿರುವ-

ನಿನ್ನ ಗೆಳತಿ
ಜೆಸ್ಸಿ. ಪಿ.ವಿ

ಟಾಪ್ ನ್ಯೂಸ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.