ಕಾಪಿ ಚಿರಾಯು: ನನ್ನನ್ನು ಹಿಡಿದುಕೊಟ್ಟ ಸಹಪಾಠಿಗೆ ಥ್ಯಾಂಕ್ಸ್‌!


Team Udayavani, Aug 1, 2017, 12:06 PM IST

01-JOSH-1.jpg

ಪರೀಕ್ಷೆ ಸಮಯ ಬಂತೆಂದರೆ ನಿದ್ದೆಗೆಟ್ಟು ಕಲಿಯಲೇಬೇಕು. ನಾನು ಅಲ್ಪ ಸ್ವಲ್ಪ ನೆನಪಿಗೆ ಬರುವುದನ್ನು ಪರೀಕ್ಷೆಯಲ್ಲಿ ಗೀಚಿ ಬರುತ್ತಿದ್ದೆ. ಹೀಗೇ ಒಂದು ದಿನ ಪರೀಕ್ಷೆಗೆ ಓದುತ್ತಾ ಕೂತಿದ್ದಾಗ ಹೊಳೆದಿದ್ದು ಕಾಪಿ ಮಾಡುವ ಐಡಿಯಾ. ದಿನ ಪೂರ್ತಿ ಅದೇ ವಿಷಯ ತಲೆಯಲ್ಲಿ ತಿರುಗುತ್ತಿತ್ತು, ಕೊನೆಗೂ ಗಟ್ಟಿ ಮನಸ್ಸು ಮಾಡಿ ಕಾಪಿ ಮಾಡಲು ನಿರ್ಧರಿಸಿದೆ.

ಪರೀಕ್ಷೆಯ ಹಿಂದಿನ ದಿನ ರಾತ್ರಿ ಕಾಪಿ ಚೀಟಿ ರೆಡಿ ಮಾಡಿದೆ. ಬೆಳಗ್ಗೆ ಬಯಾಲಜಿ ಪರೀಕ್ಷೆಗೆ ಚೀಟಿ ಸಮೇತ ಪರೀಕ್ಷೆ ಹಾಲ್‌ಗೆ ಭಯದಿಂದಲೇ ಹೋದೆ. ಪ್ರಶ್ನೆಪತ್ರಿಕೆ ಕೈಗೆ ಸಿಕ್ಕಿದ ಹಾಗೆ ಆಚೆ- ಈಚೆ ನೋಡಿ ತಂದಿದ್ದ ಚೀಟಿಯನ್ನು ಹೊರತೆಗೆದು ಗೀಚಲು ಪ್ರಾರಂಭಿಸಿದೆ. ಅಂತೂ ಇಂತೂ ಸಲೀಸಾಗಿ ಅಂದು ನನ್ನ ಬಯಾಲಾಜಿ ಪರೀಕ್ಷೆ ಮುಗಿಯಿತು. ಖುಷಿಯಿಂದ ಮನೆಗೆ ಹೋಗಿ, ಇವತ್ತು ಸಿಕ್ಕಿಬಿದ್ದಿಲ್ಲ ಎನ್ನುವ ಧೈರ್ಯದಿಂದ ಮರುದಿನದ ಪರೀಕ್ಷೆಗೂ ರಾತ್ರಿಯಿಡೀ ನಿದ್ದೆಗೆಟ್ಟು ಚೀಟಿ ರೆಡಿ ಮಾಡಿದೆ. ನಮ್ಮ ಮಗಳು ಪರೀಕ್ಷೆಗೆ ಶ್ರದ್ದೆಯಿಂದ ಓದುತ್ತಿದ್ದಾಳೆ ಎಂದು ಅಮ್ಮ ಅಪ್ಪನಲ್ಲಿ ಹೇಳುವುದು ಕೇಳಿಸುತ್ತಿತ್ತು. ಆ ಮಾತು ಕೇಳಿ ಮನಸೊÕಳಗೇ ನಕ್ಕು ಬಿಟ್ಟೆ. ಬೆಳಗ್ಗೆ ಬೇಗ ಎದ್ದು  ಶಾಲೆಗೆ ಹೊರಟೆ, ಚೀಟಿ ಕಿಸೆಯಲ್ಲಿಟ್ಟುಕೊಂಡು ಪರೀಕ್ಷೆ ಹಾಲ್‌ನಲ್ಲಿ ಹೋಗಿ ಕೂತೆ. ಅಂದು ಮುಂಚಿಗಿಂತ ಭಯ ಸ್ವಲ್ಪ ಕಮ್ಮಿಯೇ ಇತ್ತು. ಯಾಕೆಂದರೆ ಮೊದಲ ಸಲ ಸಿಕ್ಕಿ ಬಿದ್ದಿಲ್ಲ, ಇವತ್ತೂ ಸಲೀಸಾಗಿ ಕಾಪಿ ಮಾಡಬಹುದೆಂದು ಖುಷಿಯಾಗಿದ್ದೆ. ಆದರೆ ನನ್ನ ಗ್ರಹಚಾರಕ್ಕೆ ಅಂದು ನಡೆದದ್ದೇ ಬೇರೆ: ನನ್ನ ಕೈಯಲ್ಲಿದ್ದ  ಚೀಟಿಯನ್ನು ನೋಡಿದ ಪಕ್ಕದವಳು ಪರೀಕ್ಷಾ ಕೊಠಡಿಯಲ್ಲಿದ್ದ ಶಿಕ್ಷಕಿಯನ್ನು ಕರೆದು ಹೇಳಿಯೇಬಿಟ್ಟಿದ್ದಳು. ಅದನ್ನು ಕೇಳಿದ ಶಿಕ್ಷಕಿ ಓಡಿ ಬಂದು ಕೈಯಲ್ಲಿದ್ದ ಚೀಟಿ ಸಮೇತ ನನ್ನನ್ನು ಪ್ರಾಂಶುಪಾಲರ ಕೊಠಡಿಗೆ ಕರೆದುಕೊಂಡು ಹೋದರು. ಅಂದು ಆ ಸುದ್ದಿ ಶಾಲೆ ತುಂಬಾ ಹರಡಿತ್ತು. ತಲೆಯೆತ್ತಿ ಯಾರಿಗೂ ಮುಖ ತೋರಿಸಲಾಗದ ಸ್ಥಿತಿ. ನಾಚಿಕೆ, ಮುಜುಗರ, ಒಂದು ಕಡೆ ಬೇಸರವೂ ಆಗಿತ್ತು.

ಪ್ರಾಂಶುಪಾಲರು ಹೆತ್ತವರನ್ನು ಕರೆತರಲು ಹೇಳಿದರು. ಶಾಲೆಯಲ್ಲಿ ಮೀಟಿಂಗ್‌ ಇದೆ ಎಂದು ಸುಳ್ಳು ಹೇಳಿ ಅಮ್ಮನನ್ನು ಶಾಲೆಗೆ ಕರೆದುಕೊಂಡು ಬಂದೆ. ಪ್ರಾಂಶುಪಾಲರು ಹೇಳಿದಾಗಲೇ ಅಮ್ಮನಿಗೆ ವಿಷಯ ಗೊತ್ತಾಗಿದ್ದು. ವಿಷಯ ಕೇಳಿ ಅಮ್ಮತಲೆ ತಗ್ಗಿಸಿ ಕಣ್ಣೀರು ಹಾಕುತ್ತಾ ಕುಳಿತುಬಿಟ್ಟರು. ಆವತ್ತೇ ನಿರ್ಧರಿಸಿದೆ. ಆವತ್ತು ತಲೆತಗ್ಗಿಸಿದ ಅಮ್ಮ ತಲೆಯೆತ್ತಿ “ಇವಳು ನನ್ನ ಮಗಳು’ ಎಂದು ಹೆಮ್ಮೆ ಪಡುವಂತೆ ಮಾಡಬೇಕು ಅಂತ. ಅದರಂತೆ ಕಷ್ಟಪಟ್ಟು ಶ್ರದ್ಧೆಯಿಂದ ಓದಿದೆ. ತರಗತಿಗೆ ಉತ್ತಮ ಅಂಕಗಳನ್ನು ಗಳಿಸಿದೆ. ಆವತ್ತು ಪರೀಕ,ಆಲ್‌ನಲ್ಲಿ ನನ್ನನ್ನು ಶಿಕ್ಷಕಿಗೆ ಹಿಡಿದುಕೊಟ್ಟ ಸಹಪಾಠಿಗೆ ಥ್ಯಾಂಕ್ಸ್‌!

ಕಾವ್ಯ ಕುಲಾಲ್‌, ಮಂಗಳೂರು

ಟಾಪ್ ನ್ಯೂಸ್

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

19

Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್‌

BCCI instructions to share photos of the IPL match day ground!

IPL 2024 ಪಂದ್ಯ ದಿನ ಮೈದಾನದ ಫೋಟೋ ಹಂಚದಂತೆ ಬಿಸಿಸಿಐ ಸೂಚನೆ!

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Sensible voters know who to win: Yatnal

Vijayapura; ಯಾರನ್ನು ಗೆಲ್ಲಿಸಬೇಕೆಂದು ಪ್ರಜ್ಞಾವಂತ ಮತದಾರರಿಗೆ ಗೊತ್ತಿದೆ: ಯತ್ನಾಳ್

1-ckm-rsrt-close

Tourists ಗಮನಕ್ಕೆ: ಈ 2 ದಿನಗಳ ಕಾಲ ಚಿಕ್ಕಮಗಳೂರಿನ‌ ಎಲ್ಲ ಹೋಂ ಸ್ಟೇ, ರೆಸಾರ್ಟ್‌ ಬಂದ್!

ಸಿ.ಟಿ.ರವಿ

Vijayapura; ವಿಕಸಿತ ಭಾರತಕ್ಕೆ ವಿಶ್ವನಾಯಕ ಮೋದಿ ನಾಯಕತ್ವ ಅನಿವಾರ್ಯ: ಸಿ.ಟಿ.ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

ಹೊಸ ಸೇರ್ಪಡೆ

ಮೂಡಿಗೆರೆ: ನೆಮ್ಮದಿ ಕಳೆದುಕೊಂಡ ಜನರಿಂದ ತಕ್ಕ ಉತ್ತರ- ಕೆ.ಜಯಪ್ರಕಾಶ್‌ ಹೆಗ್ಡೆ

ಮೂಡಿಗೆರೆ: ನೆಮ್ಮದಿ ಕಳೆದುಕೊಂಡ ಜನರಿಂದ ತಕ್ಕ ಉತ್ತರ- ಕೆ.ಜಯಪ್ರಕಾಶ್‌ ಹೆಗ್ಡೆ

3-

ಕಾರ್ಯಕರ್ತರ ಸಭೆ; ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆಗೆ ಬೆಂಬಲ ನೀಡಿ ಗೆಲ್ಲಿಸುವಂತೆ ಮನವಿ

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

2-

ಸಂಸದರ ವಿರುದ್ಧ ಸುದ್ದಿ ಹರಿಬಿಟ್ಟು,ಪೊಲೀಸ್ ಪ್ರಕರಣ ಎದುರಿಸಿದ್ದವರಿಂದ ಪಾಠ ಕಲಿಯಬೇಕಾಗಿಲ್ಲ

19

Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.