ಕೋವಿಡ್ 19 ಯೋಧರು


Team Udayavani, Apr 7, 2020, 5:55 PM IST

josh-tdy-7

ಎಲ್ರೂ ಮನೆಯಲ್ಲೇ ಇರ್ರಪ್ಪಾ … ನೀವು ಮನೇನಲ್ಲಿ ಇದ್ದರೆ ನಮ್ಮ ಜೀವ ಉಳಿದಂತೆ ಅಂತೆಲ್ಲ ಹೇಳುತ್ತಿರುವಾಗ, ಇಲ್ಲೊಂದಿಷ್ಟು ಯುವಕರು ಬೀದಿಗೆ ಇಳಿದು ಸಮಾಜ ಸೇವೆ ಮಾಡುತ್ತಿದ್ದಾರೆ…

 

ಗುಡಿಗಳಲ್ಲಿ ಮೊಳಗುತ್ತಿದೆ ಜಾಗೃತಿ ಗೀತೆ : ಬಳ್ಳಾರಿ ಜಿಲ್ಲೆ, ಕೊಟ್ಟೂರು ತಾಲೂಕಿನ ದೂಪದಹಳ್ಳಿ ತಾಂಡದ ಯುವಕ ಆನಂದ ಸ್ವಾಮಿ, ಕೋವಿಡ್ 19 ಶುರುವಾಗುತ್ತಿದ್ದಂತೆ ಸುಮ್ಮನೆ ಕೂರಲಿಲ್ಲ. ಸೀದಾ ಹಳ್ಳಿಯ ಮೂರು ದೇಗುಲಗಳಿಗೆ ಹೋಗಿ, ಅಲ್ಲಿದ್ದ ಮೈಕ್‌ ಹಿಡಿದು, ಕೋವಿಡ್ 19  ಗೀತೆಗಳನ್ನು ಹಾಡಲು ಶುರುಮಾಡಿದರು. ಹೀಗಾಗಿ, ಈಗ ದೂಪದಹಳ್ಳಿಯ ಓಣಿಓಣಿಯಲ್ಲೂ ಕೋವಿಡ್ 19  ಜಾಗೃತಿ ಮೊಳಗಿದೆ.

ಜಾಗೃತಿ ಗೀತೆಯ ಸಾಹಿತ್ಯ ರಚಿಸಿಕೊಂಡಿದ್ದು ಸ್ವತಃ ಆನಂದಸ್ವಾಮಿಯೇ. ಅವರು ಹಾಡುವುದಲ್ಲದೇ, ಭಜನಾ ತಂಡ ರಚಿಸಿಕೊಂಡು ಓಣಿಓಣಿಗೂ ಹೋಗಿ ಹಾಡಿ, ಅರಿವು ಮೂಡಿಸುತ್ತಿದ್ದಾರೆ. ಮನೆಮನೆಗೆ ತೆರಳಿ, ಕೋವಿಡ್ 19 ಸೋಂಕು ಹರಡುವ ಬಗೆ, ಸೋಂಕಿನ ಲಕ್ಷಣಗಳು, ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮನದಟ್ಟು ಮಾಡುತ್ತಿದ್ದಾರೆ.

ಕೋವಿಡ್ 19  ಬಗ್ಗೆ ಕೇರ್‌ ಮಾಡದೆ ಇರುವವರ ಆನಂದವನ್ನು, ಈ ಆನಂದ್‌ ಕಸಿಯುತ್ತಿರುವುದಂತೂ ಸತ್ಯ. ನಿತ್ಯ ಜನ ಸೇರುವ ಜಾಗಗಳಲ್ಲಿ ಕೀಲು ಎಣ್ಣೆ ಬಳಿದು ಅಲ್ಲಿಗೆ ಜನ ಬಾರದಂತೆ ನೋಡಿಕೊಳ್ಳುತ್ತಿದ್ದಾರೆ. ಮರು ವಲಸೆ ಬಂದ ತಮ್ಮ ತಾಂಡದ ಸುಮಾರು ಮೂರ್ನಾಲ್ಕು ಸಾವಿರ ಜನರ ಮನವೊಲಿಸಿ, ಶುಚಿಯಾಗಿ, ಸಾಮಾಜಿಕ ಅಂತರ ಕಾಯ್ದು ಕೊಳ್ಳುವಂತೆ ನೋಡಿಕೊಳ್ಳುತ್ತಿದ್ದಾರೆ. ಇವರೊಟ್ಟಿಗೆ ಯುವಕರಾದ ಬಾಲನಾಯ್ಕ್ ರವಿನಾಯ್ಕ್ ರುದ್ರೇಶ್‌ ನಾಯ್ಕ್. ಕೈ ಜೋಡಿಸಿರುವುದರಿಂದ, ತಾಂಡದಲ್ಲಿ ಜಾಗೃತಿ ಮೂಡಿಸಲು ದೊಡ್ಡ ಯುವ ಪಡೆ ಸಿದ್ಧವಾಗಿದೆ. ಇಷ್ಟೇ ಅಲ್ಲದೆ, ತಾಂಡದ ನೂರಕ್ಕೂ ಹೆಚ್ಚು ಜನರಿಗೆ ಕುಡಿತ ಬಿಡಿಸಿದ್ದು, ಆನಂದಸ್ವಾಮಿಯವರ ಮತ್ತೂಂದು ಹೆಗ್ಗಳಿಕೆ.

“ನಮ್ಮವರಲ್ಲಿ ಬಹುತೇಕರು ಶುಚಿತ್ವಕ್ಕೆ ಹೆಚ್ಚು ಒತ್ತು ಕೊಡಲ್ಲ. ಹೊಟ್ಟೆಪಾಡಿಗೆ ವಲಸೆ ಹೋಗುತ್ತಾರೆ. ಇಂತಹವರು ಈ ವೈರಸ್‌ಗೆ ತುತ್ತಾದರೆ ಗತಿ ಏನು? ಎಂದು ಊಹಿಸಿಕೊಂಡೆ. ಎದೆ ಝಲ್‌ ಎಂದಿತು. ಕರ್ನಾಟಕಕ್ಕೆ ಕೊರೋನಾ ವಕ್ಕರಿಸಿದ್ದೇ ತಡ, ನಾನು ಅಲರ್ಟ್‌ ಆದೆ..’ ಎನ್ನುತ್ತಾರೆ ಆನಂದ ಸ್ವಾಮಿ.

ಕಾಲಿಗೆ ಬೀಳುವ ಮಾಸ್ತರ್‌…! :  ಕೊಟ್ಟೂರಿನ ದೈಹಿಕ ಶಿಕ್ಷಕ ನಾಗರಾಜ ಬಂಜಾರ, ಸೈಕಲ್ಲಿನಲ್ಲಿ ಓಣಿ ಓಣಿ ಸುತ್ತಿ ಕೋವಿಡ್ 19 ಜಾಗೃತಿ ಮೂಡಿಸುತ್ತಿದ್ದಾರೆ. ” ಕೋವಿಡ್ 19  ರೋಗ ಬಂದೈತೈ.. ಎಲ್ಲರೂ ಜಾಗೃತರಾಗೋಣ…’, ” ಕೋವಿಡ್ 19  ನಮ್ಮನ್ನು ನುಂಗಿತ್ತಾ…’ ಅಂತೆಲ್ಲಾ ಸ್ವರಚಿತ ಗೀತೆಗಳನ್ನು ಹಾಡುತ್ತಾ, ತಮಟೆ ಬಡಿಯುತ್ತಾ, ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ. ಗುಂಪುಸೇರುವವರ ಬಳಿ ಹೋಗಿ ಕೈ ಮುಗಿದು, ಚದುರುವಂತೆ ವಿನಂತಿಸುತ್ತಾರೆ. ಮಾತು ಕೇಳದಿದ್ದಾಗ ಅವರ ಕಾಲಿಗೂ ಬೀಳುತ್ತಾರೆ!.  

ಮೇಷ್ಟ್ರು ನಮ್ಮ ಕಾಲಿಗೆ ಬೀಳ್ಳೋದೇ… ಅಂತ ಜನ ಗಾಬರಿಯಾಗಿ ದೂರ ನಿಲ್ಲುತ್ತಾರೆ. ನಾಗರಾಜ ಮಾಸ್ತರ್‌, ನಿತ್ಯ ಬೆಳಗ್ಗೆ, ಸಂಜೆಯಂತೆ ದಿನದಲ್ಲಿ ಕನಿಷ್ಠ ನಾಲ್ಕೈದು ಗಂಟೆಯನ್ನು ಜನ ಜಾಗೃತಿಗೆ, ಊರಿನ ಸ್ವಚ್ಛತೆಗೆಂದೇ ಮೀಸಲಿಟ್ಟಿದ್ದಾರೆ. ಇವರ ಬೆನ್ನಿಗೆ ಹಸಿರು- ಹೊನಲು ತಂಡದ ಯುವಕರು ನಿಂತಿದ್ದಾರೆ. ಉಪನ್ಯಾಸಕ ಬಸವರಾಜ್‌, ಕೃಷ್ಣಸಿಂಗ್‌, ಪೇಂಟರ್‌ ಗುರು, ಅಭಿಷೇಕ್‌ ಸಹಕರಿಸುವವರ ಪಟ್ಟಿ ಹೀಗೆ ಬೆಳೆಯುತ್ತದೆ. “ಮೊದಮೊದಲಿಗೆ ಜನ ನಮ್ಮ ಮಾತಿಗೆ ಕಿವಿಗೊಡುತ್ತಿರಲಿಲ್ಲ. ಆದರೆ, ಇತ್ತೀಚೆಗೆ ಪರವಾಗಿಲ್ಲ. ಜನ ಜಾಗೃತರಾಗುತ್ತಿದ್ದಾರೆ’ ಎನ್ನುತ್ತಾರೆ ನಾಗರಾಜ.­

 

ಸ್ವರೂಪಾನಂದ ಎಂ. ಕೊಟ್ಟೂರು

 

 

ಟಾಪ್ ನ್ಯೂಸ್

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.