ಸಂಕಲನವೆಂಬ ವ್ಯವಕಲನ


Team Udayavani, Jan 22, 2019, 3:02 AM IST

90.jpg

ನಿಜವಾಗಿಯೂ ಒಂದು ಸಿನಿಮಾ ಸೃಷ್ಟಿಯಾಗುವುದು ಎಡಿಟಿಂಗ್‌ ಟೇಬಲ್‌ನಲ್ಲಿ ಎನ್ನುವ ಮಾತನ್ನು ಜಗದ್ವಿಖ್ಯಾತ ಸಿನಿಮಾ ನಿರ್ದೇಶಕರು ಒಪ್ಪುತ್ತಾರೆ. ಅದು ಎಡಿಟಿಂಗ್‌(ಸಂಕಲನ)ಗಿರುವ ಸಾಮರ್ಥ್ಯ. ಹಿಂದೆಲ್ಲಾ ಫಿಲಂ ರೀಲುಗಳನ್ನು ಕೈಯಲ್ಲಿ ಹಿಡಿದು ಕತ್ತರಿಸಿ, ಅಂಟಿಸಿಬಿಡುತ್ತಿದ್ದರು. ಸಣ್ಣ ಎಫೆಕ್ಟು ಕೊಡಬೇಕೆಂದರೂ ತ್ರಾಸವಿರುತ್ತಿತ್ತು. ಇಂದು ಆ ಸ್ಥಿತಿಯಿಲ್ಲ. ಅವರ ಹೆಚ್ಚಿನ ಕೆಲಸ ಕಂಪ್ಯೂಟರ್‌ ಟೇಬಲ್‌ ಮೇಲೆಯೇ ನಡೆಯುತ್ತದೆ. ದೃಶ್ಯ ಜೋಡಣೆ, ಟ್ರಾನ್ಸಿಷನ್‌ (ದೃಶ್ಯಗಳು ಬದಲಾಗುವ ಶೈಲಿ) ಇನ್ನೂ ಹತ್ತು ಹಲವು ಚಮತ್ಕಾರಗಳನ್ನು ಮಾಡಬಲ್ಲವರು ಸಂಕಲನಕಾರರು(ಎಡಿಟರ್‌). ಸಿನಿಮಾ, ಧಾರಾವಾಹಿ, ಕಿರುಚಿತ್ರ, ಸುದ್ದಿ ಮಾಧ್ಯಮ ಮುಂತಾದೆಡೆ ಅವರಿಗೆ ಅಪಾರ ಬೇಡಿಕೆ.

ವಿಡಿಯೋ ಸಂಕಲನದ ಕೋರ್ಸ್‌
ವಿಡಿಯೋ ತುಣುಕುಗಳನ್ನು ಚಿತ್ರಕತೆಗೆ ಅನುಸಾರವಾಗಿ ಸೇರಿಸುವುದು, ಪೂರಕವಾದ ಗ್ರಾಫಿಕ್ಸ್‌ಗಳನ್ನು ಒದಗಿಸುವುದು, ಇತ್ಯಾದಿ ಕೆಲಸಗಳನ್ನು ವಿಡಿಯೋ ಸಂಕಲನ (ಎಡಿಟಿಂಗ್‌) ಒಳಗೊಂಡಿರುತ್ತದೆ. ಪದವಿಪೂರ್ವ ಹಂತದ ನಂತರ, ಅನಿಮೇಷನ್ನಲ್ಲಿ ಡಿಪ್ಲೊಮಾ, ಅಥವಾ ಪದವಿ ಅಧ್ಯಯನ ಮಾಡಿರಬೇಕು. ಯಾವುದೇ ಪದವಿ ಗಳಿಸಿರುವ ವಿದ್ಯಾರ್ಥಿಗೂ ಇಲ್ಲಿ ಪ್ರವೇಶವಿರುತ್ತದೆ. ಕಿರುತೆರೆ, ಚಲನಚಿತ್ರ, ಪತ್ರಿಕೋದ್ಯಮ, ಸಾಕ್ಷ್ಯಚಿತ್ರ ತಯಾರಿಕೆ ಹಾಗೂ ಕಂಪ್ಯೂಟರ್‌ ಅನಿಮೇಷನ್ ಮುಂತಾದ ಕ್ಷೇತ್ರಗಳಲ್ಲಿ ಆಸಕ್ತಿ ಇರುವವರು ಈ ಕೋರ್ಸ್‌ಗೆ ಸೇರಬಹುದು. 

ಅಗತ್ಯ ಕೌಶಲ
ಚಲನಚಿತ್ರ ಮತ್ತು ವಿಡಿಯೋ ಸಂಕಲನಕಾರರು ಹೆಚ್ಚಿನ ಸಮಯ ಕಂಪ್ಯೂಟರ್‌ನ ಜೊತೆಯಲ್ಲೇ ಕೆಲಸ ಮಾಡಬೇಕಾಗುತ್ತದೆ. ಪವರ್‌ ಪಾಯಿಂಟ್‌, ಫೋಟೋಶಾಪ್‌ ಮುಂತಾದ ಸಾಮಾನ್ಯ ತಂತ್ರಾಂಶ (ಸಾಫ್ಟ್ವೇರ್‌)ಗಳ ಬಳಕೆಯ ಅನುಭವವಿದ್ದರೆ ಒಳ್ಳೆಯದು. ಎಡಿಟಿಂಗ್‌ಗೆ ಸಂಬಂಧಿಸಿದ ನಿಯತಕಾಲಿಕೆಗಳನ್ನು ಓದುವುದು, ಕಿರುತೆರೆ ಚಾನೆಲ್‌ಗ‌ಳಲ್ಲಿ, ಆಡಿಯೋ- ವಿಡಿಯೋ ಕ್ಲಬ್‌ಗಳಲ್ಲಿ, ಚಲನಚಿತ್ರ ಸ್ಟುಡಿಯೋಗಳಲ್ಲಿ ಅಥವಾ ಕೇಬಲ್‌ ನೆಟ್‌ವರ್ಕ್‌ಗಳಲ್ಲಿ ಕೆಲ ಕಾಲ ವೃತ್ತಿ ಮಾಡಿದ್ದರೆ ಅನುಕೂಲ. ತಾಳ್ಮೆ, ನಿರ್ದಿಷ್ಟತೆ ಹಾಗೂ ಪ್ರತಿಯೊಂದನ್ನೂ ವರವಾಗಿ ಅವಲೋಕಿಸುವ ಗುಣಗಳಿರುವುದು ಅತ್ಯವಶ್ಯ. ನಿರ್ದೇಶಕ ಮತ್ತು ನಿರ್ಮಾಪಕರ ಜೊತೆಗೆ ಸುಲಲಿತವಾಗಿ ಸಂವಹನ ನಡೆಸಬಲ್ಲ ದಕ್ಷತೆ ನಿಮ್ಮಲ್ಲಿರಬೇಕು.

ನೌಕರಿ ಭವಿಷ್ಯ
ಸ್ವತಂತ್ರವಾಗಿ ವೃತ್ತಿ ಹಿಡಿಯುವ ಮನಸ್ಸಿದ್ದರೆ, ಅದಕ್ಕೂ ದಾರಿಗಳಿವೆ. ಕಾರ್ಪೊರೆಟ್‌ ಸಂಸ್ಥೆಗಳೊಡನೆ ಮತ್ತಿತರ ಸಂಸ್ಥೆಗಳೊಡನೆ ಒಡನಾಟ ಇಟ್ಟುಕೊಳ್ಳಬೇಕಾಗುತ್ತದೆ. ಅನುಭವಕ್ಕೆ ಅನುಗುಣವಾಗಿ, ಕಿರುತೆರೆ‌ ಧಾರಾವಾಹಿಗಳು, ಚಲನಚಿತ್ರಗಳು, ಸಾಕ್ಷ್ಯಚಿತ್ರಗಳು, ಕಾರ್ಪೊàರೆಟ್‌ ಸಂಸ್ಥೆಗಳ ತರಬೇತಿ ವಿಡಿಯೋಗಳು, ಜಾಹೀರಾತು ಸಂಸ್ಥೆಗಳು ಹಾಗೂ ಸಂಗೀತದ‌ ವಿಡಿಯೋ ತಯಾರಕರು ನಿಮಗೆ ಉದ್ಯೋಗ ನೀಡಬಹುದು. ಜೊತೆಗೆ, ಜಾಹೀರಾತು ಸಂಸ್ಥೆಗಳಲ್ಲಿ, ಕಿರುತೆರೆ ಚಾನೆಲ್‌ಗ‌ಳಲ್ಲಿ ಹಾಗೂ ಚಲನಚಿತ್ರ ನಿರ್ಮಾಣ ಸಂಸ್ಥೆಗ‌ಳಲ್ಲಿ ಉಪಸಂಕಲನಕಾರರಾಗಿ ಸೇರಿ ಮುಂದೆ ಸಂಕಲನಕಾರರಾಗಿ ಭಡ್ತಿ ಹೊಂದಬಹುದು. ಅಲ್ಲದೆ, ಚಲನಚಿತ್ರ ತರಬೇತಿ ಸಂಸ್ಥೆಗಳಲ್ಲಿ, ತಾಂತ್ರಿಕ ಶಾಲೆಗಳಲ್ಲಿ ಅಥವಾ ವಿಶ್ವವಿದ್ಯಾಲಯಗಳಲ್ಲಿ ಬೋಧಕರಾಗಿಯೂ ಕೆಲಸಕ್ಕೆ ಸೇರಬಹುದು. ಕೆಲ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಬಂದ ಲಾಭಾಂಶವನ್ನು ಸಂಕಲನಕಾರರ ಜೊತೆಗೆ ಹಂಚಿಕೊಳ್ಳುವ ವ್ಯವಸ್ಥೆ ಕೂಡ ಇರುತ್ತದೆ.

ಡಾ. ಟಿ. ಎ. ಬಾಲಕೃಷ್ಣ ಅಡಿಗ, ನಿವೃತ್ತ ಪ್ರಾಂಶುಪಾಲರು
 

ಟಾಪ್ ನ್ಯೂಸ್

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

16-fusion

UV Fusion: ಎಳೆಯರಿಗೂ ಒಂದಿಷ್ಟು ಸಮಯ ಮೀಸಲಿಡೋಣ

15-uv-fusion

Time management: ತಂತ್ರಜ್ಞಾನ ಯುಗದಲ್ಲಿ ಸಮಯ ನಿರ್ವಹಣೆ ಮುಖ್ಯ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

14-fusion

Women: ಸ್ತ್ರೀ ಎಂದರೆ ಅಷ್ಟೇ ಸಾಕೇ

13-

Woman: ಸದಾಕಾಲ ಸಾಧಕಿ ಹೆಣ್ಣು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.