ಅಂಬಾರೀನ ಕದ್ದಿದ್ದಾರಂತೆ ದಸರಾ ನಡೆಯಲ್ವಂತೆ! 


Team Udayavani, Sep 25, 2018, 6:00 AM IST

josh-page-3.jpg

ಯಾರೋ ಕಿಡಿಗೇಡಿಗಳು ಅಂಬಾರೀನ ಕದ್ದಿದ್ದಾರಂತೆ ಕಣಪ್ಪಾ. ಕಳ್ಳರು, ಅಂಬಾರಿ- ಎರಡೂ ಸಿಕ್ಕಿಲ್ವಂತೆ. ಅದೇ ಕಾರಣಕ್ಕೆ ಈ ಬಾರಿ ದಸರಾ ನಡೆಯೋದೇ ಡೌಟ್‌ ಅಂತೆ ಎಂದರು ಅಪ್ಪ. ದಸರಾ ರಜೆಗೆಂದು ಊರಿಗೆ ಬಂದಿದ್ದ ನನಗೆ, ಅವರು ಮಾತು ಕೇಳಿ ಗಾಬರಿಯಾಯಿತು… 

ಇದು ಎಂಟು ವರ್ಷಗಳ ಹಿಂದೆ ನಡೆದ ಘಟನೆ. ಅದು ಅಕ್ಟೋಬರ್‌ ತಿಂಗಳು. ಶಾಲಾ ಕಾಲೇಜುಗಳಿಗೆ ದಸರಾ ರಜೆ ಇತ್ತು. ಶಿಕ್ಷಕನಾದ್ದರಿಂದ ನನಗೂ ರಜೆ ಇತ್ತು. ರಜಾ ದಿನಗಳಲ್ಲಿ ಅಪ್ಪನ ಜೊತೆ ಹೊಲ-ಗದ್ದೆಗೆ ಹೋಗಿ ದುಡಿಯುವ ಹವ್ಯಾಸ ಇದೆ. ಹಾಗೆಯೇ ಅವತ್ತೂ ಜಮೀನಿಗೆ ಹೋಗುತ್ತಿದ್ದಂತೆ, ತಂದೆಯಿಂದ ಒಂದು ಆಶ್ಚರ್ಯ ಮತ್ತು ಆಘಾತಕರ ಸುದ್ದಿ ಕಾದಿತ್ತು. ಅದನ್ನು ಕೇಳಿ ದಂಗು ಬಡಿದಂತಾಯಿತು. 

“ಮೈಸೂರು ಅರಮನೆಯಲ್ಲಿ ಅಂಬಾರಿ ಕಳುವಾಯಿತಂತೆ! ಪೊಲೀಸರು ಕಳ್ಳರನ್ನು ಹುಡುಕುತ್ತಿ¨ªಾರಂತೆ. ಅಂಬಾರಿಯೇ ಇಲ್ಲ ಎಂಬ ಕಾರಣದಿಂದ, ಈ ಬಾರಿ ದಸರಾ ನಡೆಯುವುದು ಅನುಮಾನ ಅಂತೆಲ್ಲಾ ಊರಿಗೆ ಊರೇ ಮಾತನಾಡುತ್ತಿದೆ’ ಎಂದರು ನಮ್ಮಪ್ಪ. 
ಆ ವಿಚಾರ ಕೇಳಿ ನನಗೂ ಗಾಬರಿ ಆಯ್ತು. ಇದೇನು ಸಾಮಾನ್ಯ ಸಂಗತಿಯೇ? ಅದಲ್ಲದೇ ನಾವು ಹದಿನಾರು ಗ್ರಾಮದ ಮಂದಿ. ಮೈಸೂರಿನಿಂದ ಕೇವಲ 24 ಕಿ.ಮೀ ದೂರದಲ್ಲಿರುವ ನಮ್ಮೂರಿಗೂ ಅರಮನೆಗೂ ಭಾವನಾತ್ಮಕ ಸಂಬಂಧವಿದೆ. ಅದ್ಹೇಗೆ ಎಂದಿರಾ?  ಮೈಸೂರು ಒಡೆಯರು ಸಂಸ್ಥಾನದ ಮೂಲ ಪುರುಷರು “ಯದುರಾಯರು’. ಅವರ ಮೂಲ ನೆಲೆ “ಯದುನಾಡು’. ಆ ಯದುನಾಡೆಂಬ ಹೆಸರು ಕಾಲಘಟ್ಟದ ನಂತರದಲ್ಲಿ ಜನರ ಉಚ್ಚಾರಣಾ ದೋಷದಿಂದಾಗಿ “ಹದಿನಾರು’ ಎಂದಾಗಿದೆ. ಹಾಗಾಗಿ, ಮೈಸೂರು, ಮಹಾರಾಜರು, ಅರಮನೆ ಎಂದರೆ ಸಾಕು ನಮ್ಮೂರಿನವರಿಗೆ ಸಂಭ್ರಮ ಜೊತೆಯಾಗುತ್ತಿತ್ತು. ಇದೀಗ, ಅಂಬಾರಿ ನಾಪತ್ತೆಯಾದ ಸುದ್ದಿ ನಮ್ಮೂರಿನಲ್ಲಿ ಈ ಭಾರೀ ಸದ್ದು ಮಾಡಿತ್ತು. 

ನಾನು ಅಂಬಾರಿ ಕಳವಿನ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡು, “ನಿಮಗೆ ಈ ವಿಚಾರ ಹೇಳಿದ್ಯಾರು?’ ಎಂದು ಅಪ್ಪನನ್ನು ಕೇಳಿದೆ. ಅವರು “ಅನಾಚಿ ಹೇಳಿದ’ ಎಂದರು. “ಅನಾಚಿ’ ಎಂಬುದು ನಮ್ಮೂರಿನ ನಾಗರಾಜುವಿನ ಅಡ್ಡ ಹೆಸರು. ಆತ ಊರಿನ ಒಬ್ಬ ಮುಗ್ಧ ವ್ಯಕ್ತಿ. ಮರಗೆಲಸ ಆತನ ಕುಲಕಸುಬು. ಅದನ್ನು ಬದಿಗೊತ್ತಿ, ತೆಂಗಿನ ಕಾಯಿಯಿಂದ ಅಂತರ್ಜಲ ಪರೀಕ್ಷಿಸುವ ಕುಶಲತೆಯನ್ನೂ ಆತ ಕಲಿತಿದ್ದ. ಅವನಿಗೆ ಅಂಬಾರಿ ಕಳುವಿನ ವಿಚಾರ ಹೇಗೆ ತಿಳಿಯಿತು ಎಂಬುದೇ ಕೌತುಕ. ಆತನನ್ನು ವಿಚಾರಿಸಿದರೆ, “ಟಿ.ವಿಯಲ್ಲಿ ಉದಯ ವಾರ್ತೆ ನೋಡುತ್ತಿದ್ದೆ; ಅದರಲ್ಲಿ ಪ್ರಕಟಿಸಿದರು’ ಎಂದ! 

ಆತ ಉದಯ ವಾರ್ತೆ ನೋಡುತ್ತಿದ್ದದ್ದು ನಿಜ. ಅಂಬಾರಿ ಕಳುವಿನ ವಾರ್ತೆ ಬಂದಿದ್ದೂ ಸತ್ಯವೇ! ಆದರೆ ಅÇÉೊಂದು ತಮಾಷೆ ನಡೆದಿತ್ತು. ಏನಾಗಿತ್ತೆಂದರೆ- ಕೈಯಲ್ಲಿ ರಿಮೋಟ್‌ ಹಿಡಿದಿದ್ದ ಆತನ ಹೆಂಡತಿಯೋ, ಮಕ್ಕಳ್ಳೋ ವಾರ್ತೆ ಕೇಳಲು ಬೇಜಾರಾಗಿ ಉದಯ ಮೂವೀಸ್‌ ಚಾನೆಲ್‌ಗೆ ಬದಲಿಸಿ¨ªಾರೆ. ಆ ಚಾನೆಲ್‌ನಲ್ಲಿ, ಅಂದು ದಸರಾ ಪ್ರಯುಕ್ತ “ನವಗ್ರಹ’ ಸಿನಿಮಾ ಬಿತ್ತರವಾಗುತ್ತಿತ್ತು. “ನವಗ್ರಹ’ ಸಿನಿಮಾ, ಅಂಬಾರಿ ಕಳುವಿನ ಕಾಲ್ಪನಿಕ ಕಥೆಯನ್ನು ಆಧರಿಸಿದ್ದಾಗಿದೆ. ಸಿನಿಮಾದಲ್ಲಿನ ವಾರ್ತೆಯಲ್ಲಿ ಅಂಬಾರಿ ಕಳುವಿನ ವಿಚಾರವನ್ನು ಪ್ರಕಟ ಮಾಡುವ ಸನ್ನಿವೇಶಕ್ಕೂ, ಉದಯ ವಾರ್ತೆಯಿಂದ ಉದಯ ಮೂವೀಸ್‌ ಚಾನೆಲ್‌ಗೆ ಬದಲಾಗಿದ್ದಕ್ಕೂ “ಕಾಕತಾಳೀಯ’ ಎಂಬಂತೆ ತೇಪೆಯಾಗಿದೆ. ಪಾಪ, ನಾಗರಾಜನಿಗೆ ಇದರ ಅರಿವಾಗಿಲ್ಲ. ನಿಜವಾಗಿಯೂ ಅಂಬಾರಿ ಕಳುವಾಗಿದೆ ಎಂದು ತಿಳಿದು, ತನಗೇ ಮೊದಲು ಸುದ್ದಿ ಗೊತ್ತಾಗಿದ್ದು ಎಂಬ ಹೆಮ್ಮೆಯಿಂದ ಅರ್ಧ ಊರಿಗೆ ಅಂಬಾರಿ ಕಳುವಿನ ಸುದ್ದಿಯನ್ನು ಹರಡಿಬಿಟ್ಟಿದ್ದ. ಸುದ್ದಿಯ ಸತ್ಯಾಸತ್ಯತೆ ವಿಚಾರಿಸುವ ಗೋಜಿಗೇ ಹೋಗದೆ ಊರಿನವರೂ ನಂಬಿಬಿಟ್ಟರು. ನಿಜಾಂಶ ತಿಳಿಯಲು ಸ್ವಲ್ಪ ಸಮಯವೇ ಬೇಕಾಯ್ತು. ಆಮೇಲೆ ಎಲ್ಲರಿಗೂ ನಕ್ಕು ನಕ್ಕು ಸಾಕಾಯಿತು. ಅವನನ್ನು ಕಂಡಾಗಲೆಲ್ಲ ಆ ಘಟನೆ  ನೆನಪಿಗೆ ಬರುತ್ತದೆ. ಕೆಲವೊಮ್ಮೆ ಅಸ್ಪಷ್ಟ ಮಾಹಿತಿಗಳು ಏನೆಲ್ಲ ರಾದ್ಧಾಂತ ಉಂಟು ಮಾಡುತ್ತವೆ ಎಂಬುದಕ್ಕೆ ಈ ಪ್ರಸಂಗವೇ ಸಾಕ್ಷಿ.         

– ನಂದೀಶ.ಬಿ.ಹದಿನಾರು 

ಟಾಪ್ ನ್ಯೂಸ್

ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Ireland postponed Aussie series

Dublin; ಆಸೀಸ್‌ ಸರಣಿ ಮುಂದೂಡಿದ ಐರ್ಲೆಂಡ್‌

“Will not play T20 World Cup for West Indies”: Sunil Narine

T20 Cricket: “ವಿಂಡೀಸ್‌ ಪರ ಟಿ20 ವಿಶ್ವಕಪ್‌ ಆಡಲ್ಲ’: ಸುನೀಲ್‌ ನಾರಾಯಣ್‌ ಸ್ಪಷ್ಟ ನುಡಿ

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

weapon used to attack Salman’s house was seized in the river!

Tapi River; ಸಲ್ಮಾನ್‌ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!

ಕಾಂಗ್ರೆಸ್‌ ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

Congress ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

14-mng

Ullala: ಮಲಗಿದ್ದಲ್ಲೇ ಹೃದಯಾಘಾತದಿಂದ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Ireland postponed Aussie series

Dublin; ಆಸೀಸ್‌ ಸರಣಿ ಮುಂದೂಡಿದ ಐರ್ಲೆಂಡ್‌

“Will not play T20 World Cup for West Indies”: Sunil Narine

T20 Cricket: “ವಿಂಡೀಸ್‌ ಪರ ಟಿ20 ವಿಶ್ವಕಪ್‌ ಆಡಲ್ಲ’: ಸುನೀಲ್‌ ನಾರಾಯಣ್‌ ಸ್ಪಷ್ಟ ನುಡಿ

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

weapon used to attack Salman’s house was seized in the river!

Tapi River; ಸಲ್ಮಾನ್‌ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.