ದೇಹಕ್ಕಲ್ಲ, ಮನಸ್ಸಿಗೆ ಯೋಗ ಮಾಡಿಸಿ


Team Udayavani, Apr 7, 2020, 4:52 PM IST

ದೇಹಕ್ಕಲ್ಲ, ಮನಸ್ಸಿಗೆ ಯೋಗ ಮಾಡಿಸಿ

ನೆಗೆಟಿವ್‌ ಥಿಂಕ್‌ ಒಮ್ಮೆ ಶುರುವಾದರೆ, ಮನಸ್ಸಿನ ಮೂಲೆಯಲ್ಲಿ ಆತಂಕದ ಒಲೆ ಹೊತ್ತಿಕೊಳ್ಳುತ್ತದೆ. ಅದರ ಮೇಲೆ ಗಾಬರಿ ಅನ್ನೋ ಪಾತ್ರೆ ಕೂತು, ಆ ದಿನದ ನೆಗೆಟಿವ್‌ ಘಟನೆಗಳೆಲ್ಲ ಅದರೊಳಗೆ ಬಿದ್ದು, ಕೊತಕೊತ ಕುದಿಯೋಕ್ಕೆ ಶುರುವಾಗುತ್ತದೆ…

ಕೋವಿಡ್ 19 ನ ಈ ಬಂಧನ ದೇಹಕ್ಕೆ ಮಾತ್ರ. ಮನಸ್ಸಿಗಲ್ಲ. ಹೀಗಂದುಕೊಂಡರೆ ನೀವು ಏನೇನೆಲ್ಲಾ ಸಾಧಿಸಬಹುದು ಗೊತ್ತಾ? ನಮ್ಮ ಮನಸ್ಸು ಹಾಗೇನೇ, ಸದಾ ನೆಗೆಟಿವ್‌ ಥಿಂಕ್‌ ಮಾಡುತ್ತಿರುತ್ತದೆ. ಕತ್ತಲು ಅಂದರೆ ಬಹಳ ಇಷ್ಟ. ಬೆಳಕು ಬಿದ್ದರೆ ಕಣ್ಣೇ ಬಿಡಲೊಲ್ಲದು… ಅಯ್ಯೋ, ಮನೆಯಲ್ಲೇ ಕೂತು, ಕೊಳೆಯೋ ಹಾಗೆ ಆಯ್ತಲ್ಲಪ್ಪಾ ಅಂತ ಅಂದುಕೊಂಡರೆ, ಇಡೀ ದಿನ ಇಂಥ ಋಣಾತ್ಮಕ ಯೋಚನೆಗಳೇ ನಿಮ್ಮನ್ನು ಮುತ್ತಿಕೊಂಡು ಬಿಡುತ್ತವೆ, ಅಂಥ ಘಟನೆಗಳನ್ನೇ ಹುಡುಕುತ್ತಾ ಹೋಗ್ತದೆ ಮನಸ್ಸು.

ಬೆಳಗಿನ ವಾತಾವರಣ, ಮನಸನ್ನು ಫ್ರೆಶ್‌ ಆಗಿಸುತ್ತದೆ. ಅದಕ್ಕೂ ಒಂದು ಕಾರಣವಿದೆ. ಏನೆಂದರೆ, ಟೆರಟೊಮೀನ್‌ ಅನ್ನೋ ಹಾರ್ಮೋನ್‌ ಗಳು ಉತ್ಪತ್ತಿ ಆಗೋದು ಈ ಧ್ಯಾನಸ್ಥಿತಿಯಲ್ಲಿ. ನೀವು ಈಗ ಪಾಸಿಟಿವ್‌ ಆಗಿ ಯೋಚನೆ ಮಾಡಿದಷ್ಟೂ ಇವುಗಳ ಸಂಖ್ಯೆ ದುಪ್ಪಟ್ಟಾಗುತ್ತದೆ. ಅದೇ, ಏನ್‌ ಇವತ್ತು ಏನಾಗಿºಡುತ್ತೋ ಏನೋ, ಕೆಲಸಗಿಲಸ ಹೋಗಿಬಿಟ್ರೇ.. ಅಂತ ಒಂದು ಸಲ ಅಂದುಕೊಳ್ಳಿ ನೋಡೋಣ. ಕೂಡಲೇ, ನಮ್ಮ ಲುಂಬಿಕ್‌ ಸಿಸ್ಟಮ್‌ನಲ್ಲಿ, ಗಾಬಾ ಪೇಟಿಂಗ್‌ ಅನ್ನೋ ಹಾರ್ಮೋನ್‌ ಉತ್ಪತ್ತಿಯಾಗುತ್ತದೆ. ತಕ್ಷಣ ಮನಸ್ಸಿನ ಮೂಲೆಯಲ್ಲಿ ಆತಂಕದ ಒಲೆ ಹೊತ್ತಿಕೊಳ್ಳುತ್ತದೆ. ಅದರ ಮೇಲೆ ಗಾಬರಿ ಅನ್ನೋ ಪಾತ್ರೆ ಕೂತು, ಆ ದಿನದ ನೆಗೆಟಿವ್‌ ಘಟನೆಗಳೆಲ್ಲ ಅದರೊಳಗೆ ಬಿದ್ದು, ಕೊತಕೊತ ಕುದಿಯೋಕ್ಕೆ ಶುರುವಾಗುತ್ತದೆ.

ಆಗಲೇ ನೋಡಿ, ನೀವು ಬುಸ್‌ ಬುಸ್‌ ಅಂತ ಸಿಕ್ಕವರ ಮೇಲೆಲ್ಲಾ ಎಗರಾಡೋದು. ಮನೆಯಲ್ಲಿ ಕೂತು ಹೀಗೆಲ್ಲಾ ಮಾಡಿದರೆ, ಯಾರು ತಾನೇ ಸಹಿಸಿಕೊಳ್ಳುತ್ತಾರೆ ಹೇಳಿ? ಈಗ ಸಿಕ್ಕಿರೋದು ಅಮೂಲ್ಯ ಸಮಯ. ಜೇಬಿನ ತುಂಬ ಹಣ ಇದೆಯೋ ಇಲ್ಲವೋ, ಆದರೆ ಕೈ ತುಂಬಾ ಸಮಯ ಅಂತೂ ಇದೆ. ಸಂಬಂಧಗಳ ನೇವರಿಕೆಗೆ, ಗೆಳೆತನದ ಶುದ್ಧೀಕರಣ, ಆತ್ಮಾವಲೋಕನದ ಮಜ್ಜನಕ್ಕೆ ಇದಕ್ಕಿಂತ ಅದ್ಭುತ ಸಮಯ ಬೇಕಾ ಹೇಳಿ…

ಯಾವುದಕ್ಕೂ ಮನಸ್ಸು ರಿಲ್ಯಾಕ್ಸ್ ಆಗಿರಬೇಕು. ಆಗಲೇ ಎಲ್ಲವೂ ಸ್ಪಷ್ಟವಾಗಿ ಕಾಣೋದು. ನಾವು ಸದಾ ಗಜಿಬಿಜಿ ಬದುಕಲ್ಲಿ ಇದ್ದವರು. ಈಗ, ಇದ್ದಕ್ಕಿದ್ದಂತೆ ಏಕಾಂತದ ಕೊಳದಲ್ಲಿ ಬಿದ್ದಾಗ ಏನಾಗಬೇಡ? ಚಿಂತೆ ಬೇಡ. ಮೊದಲು ಸಾವಧಾನದ ಬದುಕಿಗೆ ಹೊಂದಿಕೊಳ್ಳಲು. ಜಿಮ್‌ ಮಾಡಿ, ದೇಹಕ್ಕಲ್ಲ ರೀ. ಮನಸ್ಸಿಗೆ ಯೋಗ ಮಾಡಿಸಿ, ಆಗ ನೋಡಿ, ನಿಮ್ಮ ನಡೆಗೆ ತಕ್ಕಂತೆ ಜಗತ್ತು ಬರುತ್ತಿದೆ ಅನ್ನೋ ಅನುಭವ ಸಿಗುತ್ತದೆ.­

 

-ಕೆ.ಜಿ

ಟಾಪ್ ನ್ಯೂಸ್

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

arrested

Bangaluru cafe ಸ್ಫೋಟದ ಸಂಚುಕೋರ ಎನ್‌ಐಎ ಬಲೆಗೆ: ಯಾರಿದು ಷರೀಫ್?

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

1-wqweqeqweqweqeeqeqwe

ILO ವರದಿ; ಭಾರತದಲ್ಲಿ ನಿರುದ್ಯೋಗ ಉಲ್ಬಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ

Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.