ಕುಳಿತ ಜಾಗದಲ್ಲೇ ಯೋಗ ಮಾಡಿ!


Team Udayavani, May 12, 2020, 5:43 AM IST

ಕುಳಿತ ಜಾಗದಲ್ಲೇ ಯೋಗ ಮಾಡಿ!

ಸಾಂದರ್ಭಿಕ ಚಿತ್ರ

ವರ್ಕ್‌ ಫ್ರಂ ಹೋಮ್‌ ಆಗಿ ಕೆಲಸ ಮಾಡುವಾಗ, ಕುಂತಲ್ಲೇ ಕೂರಬೇಕು. ತೊಡೆಯ ಮೇಲೆ ಲ್ಯಾಪ್‌ಟಾಪ್‌ ಇಟ್ಟುಕೊಂಡು ಕೂತರೆ, ಜಗವೇ ಮರೆತುಹೋಗುತ್ತದೆ. ಸೋಫಾಗಳು,
ಮಂಚದ ಮೇಲೆ ಕುಳಿತು ಕೆಲಸ ಮಾಡಬಹುದಾದರೂ, ಅದು ಟೇಬಲ್‌ ಮುಂದೆ ಕೂತಷ್ಟು ಆರಾಮ್‌ ಅನಿಸೋಲ್ಲ. ಆದರೆ, ತುಂಬಾ ಹೊತ್ತು ಒಂದೇ ಭಂಗಿಯಲ್ಲಿ ಕೂರುವುದರಿಂದಲೂ ತೊಂದರೆಯಿದೆ. ಹೀಗಾಗಿ, ಚೇರ್‌ನಲ್ಲಿ ಕುಳಿತಿದ್ದೇ ಯೋಗಗಳನ್ನು ಮಾಡಬಹುದು. ಅದು ಹೀಗೆ- ನೀವು ಲ್ಯಾಪ್‌ಟಾಪ್‌ ಇಟ್ಟುಕೊಳ್ಳುವ ಚೇರು, ಟೇಬಲ್‌ನ ಅಂತರ ಸರಿಯಾಗಿರಲಿ.

ಟೇಬಲ್‌ ಮೇಲೆ ಲ್ಯಾಪ್‌ಟಾಪ್‌ ಇರಲಿ. ಹೀಗೆ ಇಟ್ಟುಕೊಂಡು ಟೈಪ್‌ ಮಾಡುವಾಗ, ಎರಡೂ ಕೈಗಳಲ್ಲಿ ರಕ್ತಸಂಚಾರ ಕೆಳಮುಖವಾಗಿರುತ್ತದೆ. ಇದು ಮೇಲ್ಮುಖವಾದರೆ ಜೋಮು ಬರಬಹುದು. ಗಂಟೆಗೊಮ್ಮೆ ಎದ್ದು ಓಡಾಡಿ. ಆಗ, ಸೊಂಟದ ಸುತ್ತಮುತ್ತಲಿನ ಪ್ರದೇಶದಲ್ಲಿ ರಕ್ತಸಂಚಾರ ಚೆನ್ನಾಗಿ ಆಗುತ್ತದೆ. ಜೊತೆಗೆ, ಚೇರಿನ ಮೇಲೆ ಕೂತೇ, ಎರಡೂ ಕೈಗಳನ್ನು ಮಂಡಿಯ ತನಕ ಚಾಚಿ, ಕತ್ತನ್ನು ಬಗ್ಗಿಸಿ. ಹೀಗೆ ಮಾಡಿದರೆ, ಕುತ್ತಿಗೆ ಸುತ್ತಮುತ್ತಲ ಪ್ರದೇಶದಲ್ಲಿ ರಕ್ತಸಂಚಾರ ಸುಗಮವಾಗುತ್ತದೆ. ಬಹಳ ಹೊತ್ತು ಕೂತೇ ಕೆಲಸ ಮಾಡಿದರೆ, ಸೊಂಟ ಹಿಡಿದುಕೊಂಡಂತೆ ಆಗುತ್ತದೆ. ಆಗ, ಚೇರಿಂದ ಮೇಲೆದ್ದು, ಎರಡೂ ಕೈಯನ್ನು ಮುಂದಕ್ಕೆ ಚಾಚಿ, ಎರಡೂ ಕೈಗಳ ಮಧ್ಯೆ ಮುಖ ಭೂಮಿ ನೋಡುವ ಹಾಗೆ ಬಾಗಿ. ಈ ಸಂದರ್ಭದಲ್ಲಿ ಕಾಲು ನೇರವಾಗಿರಬೇಕು. ಹೀಗೆ, ನಾಲ್ಕು ಸಲ ಮಾಡಿದರೆ, ಸೊಂಟದ ಸುತ್ತಲಿನ ನೋವು ಇಳಿಯುತ್ತದೆ. ತೊಡೆಯಲ್ಲಿ ಸ್ನಾಯುಗಳ ಬಿಗಿತ ಕಡಿಮೆಯಾಗುತ್ತದೆ. ಇದೆಲ್ಲ ಸೊಂಟದ ವಿಷ್ಯ ಆಯ್ತು. ಮಂಡಿ, ಕಾಲು, ಮಾಂಸ ಖಂಡಗಳ ನೋವಿಗೆ ಏನು ಮಾಡು ವುದು, ಅಂದಿರಾ? ಅದಕ್ಕೂ ಇಲ್ಲಿ ಪರಿಹಾರವಿದೆ. ಟೇಬಲ್‌ನಿಂದ ಸ್ವಲ್ಪ ದೂರಕ್ಕೆ ಚೇರನ್ನು ಎಳೆದುಕೊಂಡು, ಅದರಲ್ಲೇ ಕೂತು ಎರಡು ಕಾಲುಗಳನ್ನೂ ನೇರಕ್ಕೆ ಎತ್ತಿ. ಬಲಗಾಲನ್ನು ಮೊದಲು ಎತ್ತಿ, ಎಡಗಾಲನ್ನು ಆಮೇಲೆ. ಹೀಗೆ, ಐದಾರು ಸಲ ಮಾಡಿದರೆ, ಮಂಡಿ ಗಟ್ಟಿಯಾಗುತ್ತಾ ಹೋಗುತ್ತದೆ. ಕೀಲು ನೋವು ಕಡಿಮೆಯಾಗು ತ್ತದೆ.
ಲ್ಯಾಟ್‌ಟಾಪ್‌, ಕಂಪ್ಯೂಟರ್‌ ಪರದೆಯನ್ನು ತದೇಕ ಚಿತ್ತದಿಂದ ನೋಡುವುದರಿಂದ, ಕಣ್ಣಿನ ಸಮಸ್ಯೆ ಆಗಬಹುದು. ಹಾಗಾಗಿ, 15-20 ನಿಮಿಷಕ್ಕೊಮ್ಮೆ, ಕಣ್ಣುಗಳನ್ನು ಆ ಕಡೆ ಈ ಕಡೆ
ಹೊರಳಿಸಿ. ಅರ್ಧಗಂಟೆಗೆ ಒಂದು ಬಾರಿ ಹಾಗೇ ಚೇರಿಗೆ ಒರಗಿ, ಮೂರು ನಿಮಿಷಗಳ ಕಾಲ ಕಣ್ಣುಮುಚ್ಚಿ. ಮನೆಯಲ್ಲಿ ಸೌತೇಕಾಯಿ ಇದ್ದರೆ, ಒಂದು ಚೂರನ್ನು ಕಣ್ಣ ಮೇಲೆ ಮೂರು
ನಿಮಿಷ ಇಟ್ಟುಕೊಳ್ಳಿ. ಕಣ್ಣು ತಂಪಾಗುತ್ತದೆ. ಹೊಸ ಚೈತನ್ಯ ಬರುತ್ತದೆ.

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.