ಇ-ಮೇಲ್‌ ಕೋಟೆ! 


Team Udayavani, Feb 12, 2019, 12:30 AM IST

x-6.jpg

ಪ್ರತಿಯೊಂದು ಕಂಪನಿಯೂ ಜಾಹೀರಾತಿಗೆಂದು ವರ್ಷಕ್ಕೆ ಕೋಟಿಗಟ್ಟಲೆ ಮೊತ್ತವನ್ನು ಖರ್ಚು ಮಾಡುತ್ತದೆ. ಟಿ.ವಿ., ರೇಡಿಯೋ, ಮತ್ತಿತರ ವಿಧಾನಗಳ ಮೂಲಕ ಜಾಹೀರಾತುಗಳನ್ನು ನೀಡುತ್ತವೆ. ಪಾಶ್ಚಾತ್ಯ ದೇಶಗಳಲ್ಲಿ ಬಹಳ ಹಿಂದೆ ಕಂಪನಿಗಳು ಪತ್ರಗಳ ಮೂಲಕ ಪ್ರತಿ ಮನೆ ಮನೆಗೂ ತಮ್ಮ ಉತ್ಪನ್ನಗಳ ಕುರಿತ ಜಾಹೀರಾತನ್ನು ರವಾನಿಸುತ್ತಿದ್ದವು. ಆಪ್ತತೆಯ ಕಾರಣದಿಂದಾಗಿ ಈ ಉಪಾಯ ಹೆಚ್ಚು ಜನಪ್ರಿಯವಾಗಿತ್ತು. ಅದರ ಆಧುನಿಕ ರೂಪವೇ ಇಮೇಲ್‌ ಮಾರ್ಕೆಟಿಂಗ್‌. ಅತಿ ಕಡಿಮೆ ಖರ್ಚಿನಲ್ಲಿ, ವೇಗವಾಗಿ ಅತಿ ಹೆಚ್ಚು ಜನರನ್ನು ಪರಿಣಾಮಕಾರಿಯಾಗಿ ತಲುಪಬಲ್ಲದು ಎಂಬುದೇ ಇದರ ಹೆಗ್ಗಳಿಕೆ. ಅಲ್ಲದೆ ವಸ್ತು, ವಿಷಯ, ಅನುಗುಣವಾಗಿ ನಿರ್ದಿಷ್ಟ ವಯೋಮಾನದ ಮಂದಿಗೆ ಸಂದೇಶ ರವಾನಿಸುವುದು ಇಲ್ಲಿ ಸಾಧ್ಯ. ಅಲ್ಲದೆ ಹಾಗೆ ಸಂದೇಶ ಮುಟ್ಟಿದವರ ಪ್ರತಿಕ್ರಿಯೆಯನ್ನು ಕೂಡ ಟ್ರ್ಯಾಕ್‌ ಮಾಡಬಹುದು. ಇಂದು ಸಹಸ್ರಾರು ಕಂಪನಿಗಳು ತಮ್ಮ ಸೇವೆ ಹಾಗೂ ಉತ್ಪನ್ನಗಳ ಮಾರ್ಕೆಟಿಂಗಿಗೆ ಇ-ಮೇಲ್‌ ಮಾರ್ಕೆಟಿಂಗ್‌ ವಿಭಾಗವನ್ನು ಅವಲಂಬಿಸಿವೆ. ಇದರಿಂದಾಗಿ ಈ ಕ್ಷೇತ್ರ ವಿಪುಲ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದೆ.

ಕಡಿಮೆ ಖರ್ಚಿನ ಜಾಹೀರಾತು
ಇಂದಿನ ಡಿಜಿಟಲ್‌ ಯುಗದಲ್ಲಿ ಕಂಪನಿಗಳು ತಮ್ಮ ಅಸ್ತಿತ್ವವನ್ನು ಕಾಪಾಡಿಕೊಳ್ಳಬೇಕೆಂದರೆ ಆನ್‌ಲೈನ್‌ನಲ್ಲಿ ಕಾಣಿಸಿಕೊಳ್ಳಲೇಬೇಕು ಎಂಬಂತಾಗಿದೆ. ಹೀಗಾಗಿ ಬಹುತೇಕ ಕಂಪೆನಿಗಳು ಆನ್‌ಲೈನ್‌ನಲ್ಲಿ ಕ್ರಿಯಾಶೀಲವಾಗಿದೆ. ಪ್ರತಿಯೊಂದು ಕಂಪೆನಿಗೂ ವೆಬ್‌ಸೈಟ್‌ ಇದೆ. ತಮ್ಮ ಸೇವೆ ಹಾಗೂ ಉತ್ಪನ್ನಗಳನ್ನು ಕುರಿತಂತೆ ಜನರಿಗೆ ಮಾಹಿತಿ ನೀಡಲು, ಹೊಸ ಉತ್ಪನ್ನಗಳನ್ನು ಪರಿಚಯಿಸಲು ಇ-ಮೇಲ್‌ ಬಹಳ ಪರಿಣಾಮಕಾರಿ ಸಾಧನ. ಇಮೇಲ್‌ ಮಾರ್ಕೆಟಿಂಗ್‌ ನಿರ್ವಹಿಸಲೆಂದೇ ಬಹಳಷ್ಟು ಕಂಪನಿಗಳು ನಮ್ಮ ನಡುವೆ ಇದೆ. ಜಾಹೀರಾತು ನೀಡಬೇಕೆಂದಿಚ್ಛಿಸುವ ಸಂಸ್ಥೆ ಇಮೇಲ್‌ ಮಾರ್ಕೆಟಿಂಗ್‌ ಸಂಸ್ಥೆಗಳನ್ನು ನೇಮಿಸಿಕೊಳ್ಳುತ್ತವೆ. 

ಇಮೇಲ್‌ ಬರವಣಿಗೆ
ಇಮೇಲ್‌ಗ‌ಳನ್ನು ರೂಪಿಸುವಾಗ ಜಾಣ್ಮೆ ಅಗತ್ಯ. ಆಕರ್ಷಕವಾಗಿದ್ದು, ಪೂರ್ತಿಯಾಗಿ ಓದಲು ಪ್ರೇರೇಪಿಸುವಂತೆ ಅದನ್ನು ರೂಪಿಸಬೇಕು. ಸಾಮಾನ್ಯವಾಗಿ ಮಾರ್ಕೆಟಿಂಗ್‌ ಇಮೇಲ್‌ಗ‌ಳನ್ನು ಹೆಚ್ಚಿನವರು ಪೂರ್ತಿ ಓದುವುದಿಲ್ಲ. ಅದನ್ನು ಓದುವಂತೆ ಮಾಡುವುದು, ಬಳಿಕ ಪ್ರತಿಕ್ರಿಯಿಸಲು ಅನುಕೂಲವಾಗುವಂತೆ ಮತ್ತೂಂದು ಕೊಂಡಿಯನ್ನೋ, ಇನ್ನೊಂದು ಫೈಲನ್ನೊ ಡೌನ್‌ಲೋಡ್‌ ಮಾಡುವಂತೆ ಬಳಕೆದಾರನನ್ನು ಪ್ರಚೋದಿಸುವುದು ಬಹಳ ಮುಖ್ಯ. ಇಲ್ಲಿ ಮಾರ್ಕೆಟಿಂಗ್‌ ತಂತ್ರಜ್ಞಾನ ಕ್ರಿಯಾಶೀಲತೆಯನ್ನು ಬೇಡುತ್ತದೆ.

ಬೇಕಾದ ಕೌಶಲ್ಯಗಳು
ಮೊದಲು ಪರಿಣಾಮಕಾರಿ ಪಟ್ಟಿ (ಪ್ರತಿಕ್ರಿಯಿಸುವಂಥವರ ಇ- ಮೇಲ್‌ ವಿಳಾಸ ಪಟ್ಟಿ) ಸಿದ್ಧಪಡಿಸಬೇಕು. ಬ್ಲಾಗಿಂಗ್‌, ವೆಬಿನಾರ್‌, ಸೋಷಿಯಲ್‌ ಮೀಡಿಯಾ, ಗೆಸ್ಟ್‌ ಬ್ಲಾಗಿಂಗ್‌ ಮುಂತಾದ ಮಾಧ್ಯಮಗಳಲ್ಲಿ ನಿರತರಾಗಿರುವ ಪ್ರಭಾವಶಾಲಿ ತಂಡವನ್ನು ಬಳಸಿಕೊಳ್ಳುವ ಚಾಕಚಕ್ಯತೆ ಇರಬೇಕು. ಬಹಳ ಮುಖ್ಯವಾಗಿ ಸೋಷಿಯಲ್‌ ಮೀಡಿಯಾವನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳುವ ಕೌಶಲ ಇರಬೇಕು. ಹೀಗೆ ಇ-ಮೇಲ್‌ ಲಿಸ್ಟ್‌ಅನ್ನು ಬೆಳೆಸಿಕೊಳ್ಳುತ್ತಾ ಹೋಗಬೇಕು. 

ಒಂದು ನ್ಪೋರ್ಟ್ಸ್ ಉತ್ಪನ್ನಗಳ ಸಂಸ್ಥೆ ಶೂ ಒಂದನ್ನು ಬಿಡುಗಡೆಗೊಳಿಸುತ್ತಿದೆ ಎಂದಿಟ್ಟುಕೊಳ್ಳೋಣ. ಆ ಉತ್ಪನ್ನದ ಕುರಿತ ಇಮೇಲನ್ನು 30ರ ಒಳಗಿನ ಬಳಕೆದಾರರಿಗೆ ಕಳಿಸಿದರೆ ಅವರು ಆಸಕ್ತಿಯಿಂದ ಓದಿ ಪ್ರಭಾವಿತರಾಗುತ್ತಾರೆ. ಅವರು ಕೊಳ್ಳಲೂಬಹುದು. ಅದೇ ವಯಸ್ಕರಿಗೆ ಆ ಇಮೇಲನ್ನು ಕಳಿಸಿದರೆ ಅವರು ಆ ಉತ್ಪನ್ನವನ್ನು ಕೊಳ್ಳುವುದಿರಲಿ ಇಮೇಲನ್ನು ಪೂರ್ತಿ ಓದುವುದೇ ಅನುಮಾನ. ಹೀಗಾಗಿ ಯಾವ ಯಾವ ಇಮೇಲುಗಳನ್ನು ಯಾರಿಗೆ ಕಳಿಸಿದರೆ ಹೆಚ್ಚು ಉಪಯೋಗ ಎನ್ನುವುದನ್ನು ಇಮೇಲ್‌ ಮಾರ್ಕೆಟಿಂಗ್‌ ತಂತ್ರಜ್ಞ ಅರಿತಿರಬೇಕಾಗುತ್ತದೆ. ಹೆಚ್ಚಿನ ಫ‌ಲಿತಾಂಶ ತಂದುಕೊಡುವ ಕೆಲಸಗಾರನಿಗೆ ಈ ಕ್ಷೇತ್ರದಲ್ಲಿ ಬೇಡಿಕೆ ಹೆಚ್ಚು. 

ಸರ್ಟಿಫಿಕೇಶನ್‌ ಕೋರ್ಸ್‌
ಇಮೇಲ್‌ ಮಾರ್ಕೆಟಿಂಗ್‌ ಕ್ಷೇತ್ರದಲ್ಲಿ ಮುಂದುವರಿಯುವ ಆಸೆಯಿದ್ದವರು ಸರ್ಟಿಫಿಕೇಷನ್‌ ಕೋರ್ಸುಗಳನ್ನು ಮಾಡಿಕೊಂಡರೆ ಉತ್ತಮ ಭವಿಷ್ಯವಿದೆ. ಸರ್ಕಾರದ ವತಿಯಿಂದ ಗಿ ಞಟಟ ಸರ್ಟಿಫಿಕೇಶನ್‌ ಲಭ್ಯವಿದೆ. ಗೂಗಲ್‌ ಮಾರ್ಕೆಟಿಂಗ್‌ನಿಂದ ಕೂಡ ಸರ್ಟಿಫಿಕೇಟ್‌ ಪಡೆಯಬಹುದು. ಅದೇ ರೀತಿ ಹಬ್‌ಸ್ಪಾಟ್‌ನಲ್ಲಿ ಇ-ಮೇಲ್‌ ಮಾರ್ಕೆಟಿಂಗ್‌ನ ಬೇರೆ ಬೇರೆ ವಿಭಾಗದ ಅಂದರೆ, ಸೆಗ್‌ಮೆಂಟಿಂಗ್‌, ಟಾರ್ಗೆಟಿಂಗ್‌, ಅಟ್ರಾಕ್ಟಿಂಗ್‌ ಮತ್ತು ಕನ್ವರ್ಟಿಂಗ್‌ ವಿಭಾಗಗಳದ್ದೇ ಪ್ರತ್ಯೇಕ ಕೋರ್ಸುಗಳು ಇವೆ. ಅವನ್ನೂ ಮಾಡಬಹುದು. ಸರ್ಟಿಫಿಕೇಶನ್‌, ಅನುಭವ, ವಿದ್ಯಾರ್ಹತೆ, ತಾಂತ್ರಿಕ ಪರಿಣತಿಗಳನ್ನು ಆಧರಿಸಿ ಸಂಬಳ-ಸವಲತ್ತುಗಳನ್ನು ನಿಗದಿಪಡಿಸಲಾಗುತ್ತದೆ. 

ಪ್ರೊ. ರಘು, ಪ್ರಾಂಶುಪಾಲರು

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.