ಫೇಸ್‌ಬುಕ್‌ ನಾಟಕ ಶಾಲೆ, ಮುಖಪುಟದ ಮುಖವಾಡ ಕಳಚಿದಾಗ…


Team Udayavani, May 23, 2017, 9:57 AM IST

facebook.jpg

ಪದೇ ಪದೇ ಲೈಕ್ಸ್‌, ಕಾಮೆಂಟ್ಸ್‌, ಶೇರ್‌ಗಳನ್ನು ಮಾಡೋರು, ಗಂಟೆಗಟ್ಟಲೆ ಪೋನ್‌ನಲ್ಲಿ ಮಾತಾಡೋರು, ಚಾಟಿಂಗ್‌ ಮಾಡೋರು, ಆತ್ಮೀಯ ಎನಿಸಿಕೊಂಡ ಸ್ನೇಹಿತರು ಕೂಡ ಎದುರಿಗೆ ಸಿಕ್ಕಾಗ ನಮಗೆ ಮಾತನಾಡಲು ಪುರುಸೊತ್ತಿರುವುದಿಲ್ಲ.

ಸ್ನೇಹಿತರೆ ‘ಗೆಳೆತನ’ ಎಂಬುದಕ್ಕೆ ಅಗಾಧವಾದ ಅರ್ಥವನ್ನು ಜಗತ್ತಿನ ನಿಘಂಟುಗಳು ನೀಡಿದ್ದು,ಸರಳವಾಗಿ ಹೇಳುವದಾದರೆ ಸುಖ ದುಃಖಗಳನ್ನು ಹಂಚಿಕೊಳ್ಳುವುದಾಗಿದೆ. ಕಷ್ಟದ ಕಾಲವನ್ನು ಅರಿತು ಸಹಾಯಕ್ಕೆ ಮುಂದಾಗಬೇಕು: ಅದು ಗೆಳೆತನ. ಆದರೆ ಈಗೀನ ವಿದ್ಯಮಾನಗಳನ್ನು ಅವಲೋಕಿಸಿದಾಗ, ಗೆಳೆತನ ಕೇವಲ ಫೇಸ್‌ಬುಕ್‌, ವಾಟ್ಸಾಪ್‌, ಹ್ಯಾಂಗ್‌ಔಟ್‌ ಇತ್ಯಾದಿಗಳಿಗೆ ಸೀಮಿತವಾಗಿದೆಯೇ ಎಂಬ ಸಂಶಯವಾಗುತ್ತದೆ. ಲೈಕ್ಸ್‌, ಕಮೆಂಟ್ಸ್‌ ಮತ್ತು ಶೇರ್‌ಗಳಿಗಷ್ಟೇ ಗೆಳೆತನದ ಅರ್ಥ ಸಂಕುಚಿತವಾಗಿದೆಯೇ? ಎಂಬ ತಾಕಲಾಟ ಮನದಲ್ಲಿ ಮೂಡುತ್ತದೆ.

ಅದರಲ್ಲೂ ಫೇಸ್‌ಬುಕ್‌ ಎಂಬ ಮಾಯಾಜಿಂಕೆಯ ಕಾರುಬಾರು ಅಷ್ಟಿಷ್ಟಲ್ಲ.ಗೆಳೆತಿಯೊಬ್ಬಳ ಪ್ರಕಾರ ಫೇಸ್‌ಬುಕ್‌ನಲ್ಲಿ ಒಟ್ಟು ಸ್ನೇಹಿತರ ಸಂಖ್ಯೆಯನ್ನು ಲಿಸ್ಟ್‌ ಮಾಡಿಕೊಂಡು ಬೀಗುವುದೇ ಗೆಳೆತನವಾಗಿದೆ. ಸಾವಿರ ಫೇಸ್‌ಬುಕ್‌ ಸ್ನೇಹಿತರಲ್ಲಿ ಎಷ್ಟು ಮಂದಿಯನ್ನು ಗುರುತಿಟ್ಟುಕೊಂಡಿದ್ದೀರಿ? ಅವರಲ್ಲಿ ಎಷ್ಟು ಮಂದಿ ನಿಜಕ್ಕೂ ನಿಮ್ಮ ಸ್ನೇಹಿತರು? ಎಂಬಿತ್ಯಾದಿ ಪ್ರಶ್ನೆಗಳು ಯಾರಿಗೂ ಪ್ರಸ್ತುತವೆಂದು ಅನ್ನಿಸುವುದೇ ಇಲ್ಲ!

ಇತ್ತೀಚಿಗೆ ಗೆಳೆತಿಯೊಬ್ಬಳು ಹೇಳಿದ್ದಳು: “ನನಗೆ ಇಷ್ಟವಿಲ್ಲದಿದ್ದರೂ ಹಲವರ ಪೋಸ್ಟ್‌ಗಳಿಗೆ ಲೈಕ್‌ ಒತ್ತುತ್ತಿರುತ್ತೇನೆ. ಯಾಕೆ ಅಂದ್ರೆ ಅವರು ಈ ಮೊದಲು ಬಹಳಷ್ಟು ಸಲ ನನ್ನ ಪೋಸ್ಟ್‌ಗಳಿಗೆ ಲೈಕ್‌ ಒತ್ತಿರುತ್ತಾರೆ. ಇದು ಒಂಥರಾ ಸೆಲ್ಫ್ ಆಬ್ಲಿಗೇಷನ್‌, ಕಮಿಟ್‌ಮೆಂಟ್‌ ಥರ. ನೀವು ಲೈಕ್‌ ಒತ್ತದಿದ್ದರೆ ನಿಮ್ಮ ಪೋಸ್ಟ್‌ಗಳಿಗೆ ಅವರು ಲೈಕ್‌ ಒತ್ತುವುದನ್ನು ನಿಲ್ಲಿಸಿಬಿಡುತ್ತಾರೆ. ಇದೊಂಥರಾ ಮೈಂಡ್‌ಗೆàಮ್‌’. 

ಗೆಳತಿ ಹೇಳಿದ್ದನ್ನು ಕೇಳಿ ಶಾಕ್‌ ಆಯಿತು. ಅವಳು ಹೇಳಿದ್ದರಲ್ಲಿ ಸತ್ಯವಿತ್ತು. ಪರಿಸ್ಥಿತಿ ಹೀಗಿರುವಾಗ ನಮ್ಮೆದುರಿಗಿರುವ ವ್ಯಕ್ತಿ ನಮ್ಮನ್ನು ಹೊಗಳುತ್ತಿದ್ದರೆ ಅವರನ್ನು ಹೇಗೆ ನಂಬುವುದು ಎಂಬ ಸಂಧಿಗ್ಧತೆಯೂ ಶುರುವಾಯಿತು. ಬರೀ ಉಬ್ಬಿಸಲಿಕ್ಕೆ ಹೀಗೆ ಮಾಡುತ್ತಾರಾ ಎಂಬ ಅನುಮಾನ. 

ಕೆಲವರಂತೂ ತಮ್ಮೆಲ್ಲ ಖಾಸಗಿ ವಿಚಾರಗಳನ್ನು ಹಾಗು ಫೋಟೋಗಳನ್ನು ಸಾರ್ವಜನಿಕವಾಗಿ ಹಂಚುತ್ತಾರೆ. ಇಲ್ಲಿ ಎಷ್ಟು ಅತಿಶಯೋಕ್ತಿಯಿರುತ್ತದೆಂದರೆ ಉದಾಹರಣೆಗೆ ಗಂಡ- ಹೆಂಡತಿ, ತಾವು ವೈಯಕ್ತಿಕವಾಗಿ ಮಾತನಾಡಬೇಕಾದ್ದನ್ನೆÇÉಾ ಬಹಿರಂಗವಾಗಿ ಎಲ್ಲರೆದುರಿಗೆ ಕಾಮೆಂಟು, ಪೋಸ್ಟುಗಳ ಮೂಲಕ ಮಾತಾಡುವುದು. ಇದು ಹೇಗೆನಿಸುತ್ತದೆಂದರೆ ಸಂಬಂಧಗಳು ಗಟ್ಟಿಯಾಗಿರದಿದ್ದರೂ, ಜನರ ತೋರಿಕೆಗಾಗಿ ಈ ರೀತಿ ಮಾಡುತ್ತಾರೇನೋ ಎಂದೆನಿಸುವಷ್ಟು ಕೃತಕವಾಗಿರುತ್ತವೆ. 

ಇಷ್ಟಕ್ಕೂ ಇದು ಯಾವ ತರಹದ ಹುಚ್ಚು ಎನ್ನುವುದು ಅರ್ಥವಾಗುವುದಿಲ್ಲ. ಎಲ್ಲವನ್ನೂ ಬಹಿರಂಗ ಪಡಿಸಿದಾಗಲೇ ಖುಷಿ ಸಿಗುತ್ತಾ? ಎಲ್ಲಿ ಹೋದ್ವಿ, ಬಂದ್ವಿ, ಕುಂತ್ವಿ, ಯಾರೊಟ್ಟಿಗೆ ಮಾತಾಡಿದ್ವಿ ಇವನ್ನೆಲ್ಲ ಹೇಳ್ಳೋದು ಅನಿವಾರ್ಯವೇ? ಅವಶ್ಯವೇ? ನಮ್ಮ ಜೀವನದ ಪ್ರತಿ ಸೆಕೆಂಡುಗಳನ್ನು ಸಾರ್ವಜನಿಕವಾಗಿ ಎಲ್ಲರೊಂದಿಗೆ ಹಂಚಿಕೊಳ್ಳೋದು ಸರಿಯೇ? ಫೇಸ್‌ಬುಕ್‌ ಅನ್ನು ದ್ವೇಷಿಸುವುದು ಬೇಡ, ಅದನ್ನು ಸಂಪೂರ್ಣವಾಗಿ ತ್ಯಜಿಸುವುದೂ ಬೇಡ. ಆದರೆ ಪ್ರಮುಖ ಘಟನೆಗಳನ್ನು ಮಾತ್ರವೆ ಹತ್ತಿರದವರೊಂದಿಗೆ ಹಂಚಿಕೊಂಡರೆ ಸಾಕಲ್ಲವೆ? ನಮ್ಮ ನಡವಳಿಕೆಗಳು ಯಾರಿಗೂ ನೋವುಂಟು ಮಾಡದಿದ್ದರೆ ಸಾಕಲ್ಲವೆ? 

ಪದೇ ಪದೇ ಲೈಕ್ಸ್‌, ಕಾಮೆಂಟ್ಸ್‌, ಶೇರ್‌ಗಳನ್ನು ಮಾಡೋರು, ಗಂಟೆಗಟ್ಟಲೆ ಪೋನ್‌ನಲ್ಲಿ ಮಾತಾಡೋರು, ಚಾಟಿಂಗ್‌ ಮಾಡೋರು, ಆತ್ಮೀಯ ಎನಿಸಿಕೊಂಡ ಸ್ನೇಹಿತರು ಕೂಡ ಎದುರಿಗೆ ಸಿಕ್ಕಾಗ ನಮಗೆ ಮಾತನಾಡಲು ಪುರುಸೊತ್ತಿರುವುದಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಕಳೆಯುವ ಹೊತ್ತಿನ ಒಂದಂಶವನ್ನಾದರೂ ನಿಜಜೀವನದಲ್ಲಿ ಜೊತೆಗೆ ಕಳೆಯಲಾಗದಿದ್ದರೆ ಅದೆಂಥ ಗೆಳೆತನ? 

ಪೇಸ್‌ಬುಕ್ಕಿಗರಿಗೆ ಇನ್ನೊಂದು ರೋಗವಿದೆ. ಸಿಕ್ಕ ಸಿಕ್ಕ ಪೋಸ್ಟ್‌ಗಳಿಗೆ, ಫೋಟೋಗಳಿಗೆ ಸಂಬಂಧವಿಲ್ಲದವರನ್ನು ಟ್ಯಾಗ್‌ ಮಾಡೋದು! ನಾವು ಟ್ಯಾಗ್‌ ಮಾಡುತ್ತಿರುವ ವ್ಯಕ್ತಿಗೆ ಆ ಪೋಸ್ಟ್‌ ಇಷ್ಟವಾಗದೆಯೂ ಹೋಗಬಹುದು ಎನ್ನುವ ಕನಿಷ್ಠ ಜ್ಞಾನವೂ ಇಲ್ಲದೆ ಹೋಗುತ್ತಿರುವುದು ದುರಂತ. ಬಹಳಷ್ಟು ಸಲ ಟ್ಯಾಗ್‌ ಮಾಡಲ್ಪಟ್ಟ ವ್ಯಕ್ತಿಗೆ ಕಿರಿಕಿರಿಯಾಗಿದ್ದರೂ ಸಹ ನೀವು ಸ್ನೇಹಿತ ಎಂಬ ಒಂದೇ ಕಾರಣಕ್ಕೆ ಮೌನ ತಾಳಿರಬಹುದು. ಅದನ್ನು ಅರ್ಥ ಮಾಡಿಕೊಳ್ಳುವುದು ನಮ್ಮ ಕೆಲಸ.
ಈಗಿನ ಕಾಲದಲ್ಲಿ ನಮ್ಮ ಸ್ಮಾರ್ಟ್‌ ಉಪಕರಣಗಳಿಗೆ ಹೊಸ ಹೊಸ ಆ್ಯಪ್‌ಗ್ಳು ಬೇಕು. ಅದರ ಅಗತ್ಯ ನಮಗೆ ಅಷ್ಟಾಗಿ ಇಲ್ಲದಿದ್ದರೂ ಅದು ನಮಗೆ ಬೇಕು ಎನ್ನುವ ಮನಸ್ಥಿತಿ ದಿಗಿಲು ತರುತ್ತದೆ. ಒಮ್ಮೆ ಯೋಚಿಸಿದರೆ, ಇವೆಲ್ಲ ಇರದಿ¨ªಾಗಲೂ ಜೀವನ ನಡೆದಿತ್ತÇÉಾ ಎಂಬ ಪ್ರಶ್ನೆ ಕಾಡುತ್ತದೆ. ಹೊಸ ಹೊಸ ಉಪಕರಣ, ತಂತ್ರಜ್ಞಾನಗಳನ್ನು ಬಳಸಬೇಕು. ಆದರೆ, ಅದೇ ಸರ್ವಸ್ವವೂ ಆಗಬಾರದು. ನಮ್ಮ ಜೀವನದ ಪ್ರತಿಯೊಂದು ವಿವರಗಳನ್ನು ಫೇಸ್‌ಬುಕ್ಕಿನಲ್ಲಿ ಹಂಚಿಕೊಳ್ಳುವುದರಿಂದ ಅಪಾಯವೇ ಹೆಚ್ಚು. ನೀವು ಪ್ರವಾಸ ಹೋಗಿರುವ ಪೋಸ್ಟನ್ನು ಓದಿ ವಿಷಯ ತಿಳಿದು ಕಳ್ಳರು ಮನೆಗೆ ಕನ್ನಹಾಕಬಹುದಲ್ಲವೆ? ಆ ರೀತಿಯ ಘಟನೆಗಳು ಎಷ್ಟೋ ನಡೆದಿವೆ. ಅತಿಯಾದರೆ ಅಮೃತವೂ ವಿಷ ಎಂದಿದ್ದಾರೆ ತಿಳಿದವರು. ಆದ್ದರಿಂದ ಫೇಸ್‌ಬುಕ್ಕನ್ನು ನಮ್ಮ ಜ್ಞಾನಾಭಿವೃದ್ಧಿ, ಸ್ಫೂರ್ತಿ ಪಡೆಯಲು ಮಾತ್ರ ಮಿತವಾಗಿ ಬಳಸಿದರೆ ಸಾಕು. 

– ಮಾಲಾ ಮ ಅಕ್ಕಿಶೆಟ್ಟಿ, ಬೆಳಗಾವಿ

ಟಾಪ್ ನ್ಯೂಸ್

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್‌ ಮುರಿದು ಕಳ್ಳತನ

Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್‌ ಮುರಿದು ಕಳ್ಳತನ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

20-shirva-1

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.