ಏನೆಂದು ಹೆಸರಿಡಲಿ, ಈ ಚೆಂದ ಅನುಭವಕೆ?


Team Udayavani, Aug 11, 2020, 3:54 PM IST

ಏನೆಂದು ಹೆಸರಿಡಲಿ, ಈ ಚೆಂದ ಅನುಭವಕೆ?

ಕನಸಲ್ಲಿ ಕಂಡ ಕನಸಿನ ಹುಡುಗನೇ, ನಿನ್ನಾಗಮನದ ಆ ಕನಸುಗಳು ಬರೀ ಕನಸಾಗಿ ಉಳಿಯುವುದು ನನಗಿಷ್ಟವಿಲ್ಲ. ಹೃದಯವೆಂಬ ಖಾಲಿ ಡಬ್ಬದಲ್ಲಿ ನಿನ್ನ ಮೇಲಿರುವ ಅಷ್ಟೂ ಪ್ರೀತಿಯ ತುಂಬಿರುವೆ. ಈಗ ಆ ಪ್ರೀತಿಯ ಪ್ರಮಾಣ ವಿಪರೀತ ಹೆಚ್ಚಿ, ಅದು ಡಬ್ಬಿಯಿಂದ ಆಚೆಗೂ ಚೆಲ್ಲತೊಡಗಿದೆ.

ಅದು ವ್ಯರ್ಥವಾಗದಂತೆ, ಚೆಲ್ಲಿ ಹೋಗದಂತೆ, ನಮ್ಮ ಪ್ರೇಮದ ರೀತಿ ಮತ್ಯಾರಿಗೂ ಗೊತ್ತಾಗದಂತೆ ನೋಡಿಕೊಳ್ಳಬೇಕಾದವನು, ಆಗಾಗ ನನ್ನನ್ನು ಸಮಾಧಾನಿಸುತ್ತಾ, ಪ್ರೀತಿಯ ಮಾತುಗಳಿಂದ ಧೈರ್ಯ ಹೇಳುತ್ತಾ ಕೈ ಹಿಡಿದು ನಡೆಸಬೇಕಿರುವವನು ನೀನು. ಇದೆಲ್ಲಾ ನಿನಗೆ ಗೊತ್ತಿಲ್ಲವಾ? ಇಂಥ ಸಂಗತಿಗಳು ನಿನಗೆ ಬೇಗ ಅರ್ಥವಾಗುವುದಿಲ್ಲವಾ? ಅಥವಾ, ಎಲ್ಲಾ ಅರ್ಥವಾದರೂ ಏನೂ ಮಾತಾಡದೆ ಇದ್ದುಬಿಡುವುದೇ ನಿನಗೆ ಇಷ್ಟವಾ? ತಂಪು ಗಾಳಿಗೆ ಇಂಪಾಗಿ ನರ್ತಿಸುವ ನನ್ನ ಮುಂಗುರುಳ ನರ್ತನಕೆ ಮನಸೋತು ನೀನು ಮಂದಹಾಸ ಬೀರಿ, ನನ್ನ ಮೊಗವ ನಿನ್ನ ಬೊಗಸೆಯಲ್ಲಿ ಹಿಡಿಯುತ್ತೀಯಲ್ಲ; ಆ ಕ್ಷಣದಲ್ಲಿ ನನಗೆ ಆಗುವ ಖುಷಿಯನ್ನು ಏನೆಂದು ಬಣ್ಣಿಸಲಿ? ನಾನು ಮಾತು ಹೊರಡದೆ, ಹೇಳಲಾರೆನು ತಾಳಲಾರೆನು ಎಂದು ನಿಂತುಕೊಂಡರೆ- ಅದೇ ಸಮಯಕ್ಕೆ ನೀನೂ ಸೈಲೆಂಟಾಗಿ ನಿಲ್ಲುವುದಾ? ಕಳ್ಳ ನೀನು, ನಿನ್ನಂದ, ಮಾತು, ಕೃತಿಗಳಿಂದ ನನ್ನ ಮನ ಕದ್ದೆ. ಕೊಲೆಗಾರ ನೀನು- ನಾ ಅಳುವಾಗ ನಿನ್ನ ಚಾಣಾಕ್ಷತನದಿಂದ ನನ್ನಲ್ಲಿನ ದುಃಖವನ್ನು ಕೊಂದೆ. ನನ್ನ ನಗಿಸಿ, ಆ ನಗುವಿನಲ್ಲಿ ನಿನ್ನ ಸಂತೋಷ ಕಂಡುಕೊಂಡೆ. ಜಿಪುಣ ನೀನು- ಎಂದೆಂದಿಗೂ ನನ್ನ ಬಿಟ್ಟುಕೊಡಲಿಲ್ಲ. ಜಾಣ ನೀನು, ಯಾರ ಬಲೆಗೂ ಬೀಳದ, ಭದ್ರ ಬೀಗ ಹಾಕಿದ್ದ ನನ್ನ ಹೃದಯಕ್ಕೆ ಸದ್ದಿಲ್ಲದೇ ಬೀಗದ ಕೈ ಕದ್ದು ಒಳಗೆ ಬಂದು ಕುಳಿತು, ಒಲವಿನ ರಾಗ ಹೇಳಿಕೊಡಲು ಪ್ರಾರಂಭಿಸಿದೆ.

ಕೋಟಿಕೋಟಿ ಕನಸುಗಳ ಹೊತ್ತುತಂದ ಗೆಳೆಯನೇ, ನನಗೊಂದು ಪ್ರೀತಿಯ ಹೆಸರಿಟ್ಟು, ನೀನು ಮಾತ್ರ ಆ ಹೆಸರಿನಿಂದ ಕರೆಯುವಾಗ, ಅದೇನೋ ಖುಷಿ ನನಗೆ. ಅದೇ ಹೆಸರನ್ನು ನೀನು ಮತ್ತೂಮ್ಮೆ, ಮಗದೊಮ್ಮೆ ಕರೆಯಲಿ ಎಂಬ ಆಸೆಯಿಂದ, ನೀನು ಕರೆದದ್ದು ಕೇಳಿಸಲೇ ಇಲ್ಲ ಅನ್ನುವಂತೆ ಆಗಾಗ ನಟಿಸುತ್ತಲೇ ಇರುತ್ತೇನೆ ನಾನು. ಈ ಸತ್ಯ ಗೊತ್ತಿದ್ದರೂ ಗೊತ್ತಿಲ್ಲದಂತೆ, ನೀನೂ ನಟಿಸುತ್ತಿರುವೆ. ಇದೇ ಅಲ್ಲವೇ ಪ್ರೀತಿ ಎಂದರೆ? ನಮ್ಮಿಬ್ಬರ ಪ್ರೀತಿಯ ತೊರೆಗೆ ಅಡ್ಡಗಾಲಿಕ್ಕಲು ಯಾರೂ ಮಧ್ಯೆ ಬಾರದಿರಲಿ. ಯಾರ ಕೆಟ್ಟ ದೃಷ್ಟಿಯೂ ಬೀಳದಿರಲಿ ನಮ್ಮ ಪ್ರೀತಿಯ ಮೇಲೆ…

 

-ಸೌಮ್ಯಶ್ರೀ ಸುದರ್ಶನ್‌ ಹಿರೇಮಠ್

ಟಾಪ್ ನ್ಯೂಸ್

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ

ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

12

ʼಭಜರಂಗಿ ಭಾಯಿಜಾನ್‌ʼ, ʼರೌಡಿ ರಾಥೋರ್ʼ ಸೀಕ್ವೆಲ್‌ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ನಿರ್ಮಾಪಕ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

1-wewqewqe

Revealed; ನೇಹಾ ಹಿರೇಮಠ ಹಂತಕ ಫಯಾಜ್‌ನ ಮತ್ತೊಂದು ಕರಾಳ ಮುಖ ಅನಾವರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

1-wewqewq

Bandipur: ನಡು ರಸ್ತೆಯಲ್ಲೇ ಹುಲಿ ದಾಳಿಗೆ ಆನೆ ಮರಿ ಸಾವು!

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ

ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.