ಕತೆಗಳ ನಡುವೆ ಕಲ್ಲು ಹುಡುಕುತ್ತಾ…
Team Udayavani, Jul 30, 2019, 3:00 AM IST
ಕತೆಗಳ ಓದು, ಚರ್ಚೆಗಾಗಿಯೇ ನಾವು ರಚಿಸಿಕೊಂಡಿದ್ದ ಗ್ರೂಪು, “ನನ್ನ ಓದು’. ಮೊದಲು ನಾಲ್ಕು ಮಂದಿ ಇದ್ದ ಈ ಗುಂಪಿನಲ್ಲಿ, ಈಗ ಸದಸ್ಯರ ಸಂಖ್ಯೆ 20 ದಾಟಿದೆ. ನಿತ್ಯವೂ ಒಳ್ಳೊಳ್ಳೆ ಕತೆಗಳ ಬಗ್ಗೆ ಮಾತುಕತೆಗಳು ಸಾಗುತ್ತಿರುತ್ತದೆ. ಈ ಗುಂಪಿನಲ್ಲಿದ್ದ ಒಬ್ಟಾತ, ಸಣ್ಣ ಸಣ್ಣ ವಿಚಾರಗಳಿಗೂ ಎಲ್ಲರ ಕಾಲೆಳೆಯುತ್ತಿದ್ದ. ಒಂದು ಕಾಗುಣಿತ ತಪ್ಪಾದರೂ, ಅದು ದೊಡ್ಡ ತಪ್ಪೆಂದು, ಅವರ ತೇಜೋವಧೆಗೆ ಇಳಿಯುತ್ತಿದ್ದ.
ಕತೆಗೆ ಅಭಿಪ್ರಾಯ ತಿಳಿಸುವುದರ ಬದಲು, ಸಣ್ಣಪುಟ್ಟ ತಪ್ಪನ್ನು ಕಂಡು ಹಿಡಿಯುವುದನ್ನೇ ತನ್ನ ಉದ್ದೇಶವಾಗಿಸಿ ಕೊಂಡಿದ್ದ. ಅದಲ್ಲದೆ, ಸಮೂಹದ ಮಹಿಳಾ ಸದಸ್ಯರಿಗೆ ಹೆಚ್ಚಿನ ಕಾಳಜಿ ತೋರಿಸುವಂತೆ ನಟಿಸುತ್ತಿದ್ದ. ತಾನೇ ಎಲ್ಲವನ್ನೂ ಬಲ್ಲವನಂತೆ ಆಡುತ್ತಿದ್ದ. ಅಲ್ಲದೆ, ಅಂಬಿ ಹೆಸರಿನ ನನ್ನದೇ ಡಿಪಿ ಇದ್ದಾಗ್ಯೂ “ನೀನು ಹುಡುಗನಾ? ಹುಡುಗಿಯಾ?’ ಎಂದು ಕೇಳಲು ಶುರುಮಾಡಿದ.
ನನಗೆ ಕೋಪ ನೆತ್ತಿಗೇರಿತು. “ಅಲ್ಲಯ್ಯಾ, ಇಲ್ಲಿ ಕತೆಗೆ ಅಭಿಪ್ರಾಯ ತಿಳಿಸುವವರು ಗಂಡಾಗಲಿ, ಹೆಣ್ಣಾಗಲಿ, ನಪುಂಸಕರಿರಲಿ, ನಿಂಗೇಕಯ್ನಾ? ಕೋತಿ ತಾನು ಕೆಡೋದಲ್ಲದೆ, ವನ ಕೆಡಿಸಬಾರದು’ ಅಂತ ದಬಾಯಿಸಿದೆ. ಸಮೂಹದ ಎಲ್ಲ ಸದಸ್ಯರೂ ಅವನನ್ನು ತರಾಟೆಗೆ ತೆಗೆದುಕೊಂಡರು. ಅಷ್ಟಕ್ಕೇ ಅವನಿಗೆ ಅವಮಾನ ವಾದಂತಾಗಿ, ಆ ಆಸಾಮಿ ಹೆದರಿ ನಾನು ಇಲ್ಲಿರಲು ಅರ್ಹನಲ್ಲವೆಂದು, ಎಲ್ಲರ ಕ್ಷಮೆ ಕೇಳಿ ಗ್ರೂಪ್ನಿಂದ ಪರಾರಿಯಾಗಿಬಿಟ್ಟ.
* ಅಂಬಿ ಎಸ್. ಹೈಯ್ಯಾಳ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ