ವ್ಹಾ ಮೇರೆ ಷೇರು!
Team Udayavani, Jan 2, 2018, 9:27 AM IST
ಪರಿಸ್ಥಿತಿಯ ಕೈಗೊಂಬೆಯಾಗಿ ನನ್ನದಲ್ಲದ ತಪ್ಪಿಗೆ ವಿದ್ಯಾಭ್ಯಾಸ ಹಳಿತಪ್ಪಿ, ಭವಿಷ್ಯದ ತಲ್ಲಣಗಳು ಅಧೀರಗೊಳಿಸಿ ಹೈರಾಣಾಗಿದ್ದೆ. ಮಗ ಕೈ ಬಿಟ್ಟು ಹೋದಾನು ಎಂದೆಣಿಸಿದ ಅಪ್ಪ, ವಾತಾವರಣ ಬದಲಾದಲ್ಲಿ ಸರಿಯಾದಾನು ಎಂದು ನನ್ನನ್ನು ತಲುಪಿಸಿದ್ದು ಬೆಂಗಳೂರಿನ ನನ್ನಣ್ಣನ ಮನೆಗೆ.
ಹೆಚ್ಚೇನೂ ಓದಿಲ್ಲದ ನನ್ನನ್ನು ಷೇರು ದಲ್ಲಾಳಿಯ ಬಳಿ ಕೆಲಸಕ್ಕೆ ಸೇರಿಸಲಾಯಿತು. ಹಳ್ಳಿಯಿಂದ ಬಂದ ನನಗೆ ಇಂಗ್ಲಿಷ್ ಮೇಲೆ ಹಿಡಿತವಿರಲಿಲ್ಲ. ಹಾಗಾಗಿ ಅಲ್ಲಿಯ ವಾತಾವರಣಕ್ಕೆ ಹೊಂದಿಕೊಳ್ಳಲು ಬಹಳ ತ್ರಾಸವಾಯಿತು. ನನ್ನ ಇತಿಮಿತಿಗಳನ್ನು ಅರಿತಿದ್ದ ಸಹೋದ್ಯೋಗಿಗಳು ಕನ್ನಡಿಗರಾಗಿದ್ದರೂ, ಇಂಗ್ಲಿಷನ್ನೇ ಮುಂದಿಟ್ಟುಕೊಂಡು ಬಹಳವೇ ಶೋಷಣೆ ಮಾಡಿದ್ರು. ಕೆಲಸವಿಲ್ಲದಿದ್ದರೂ ಹೆಚ್ಚಿನ ಸಮಯ ಆಫೀಸಿನಲ್ಲಿ ಉಳಿಯುವಂತೆ ಮಾಡ್ತಿದ್ರು. ನಾನಲ್ಲಿ ಸೇರಿಕೊಂಡದ್ದು ಲೆಕ್ಕಿಗನ ಸಹಾಯಕನಾಗಿಯಾದ್ರೂ, ಕಚೇರಿಯ ಪರಿಚಾರಕ ರಜೆಯಲ್ಲಿದ್ದಾಗ ನನ್ನಿಂದಲೇ ಕಾಫಿ ಕಪ್ಪುಗಳು ಶುಚಿಗೊಳಿಸಲ್ಪಡುತ್ತಿದುÌ.
ಪ್ರತಿಕೂಲ ವಾತಾವರಣದ ಹೊರತಾಗಿಯೂ ನನಗೆ ಸಿಕ್ಕಿರೋ ಕೊನೆಯ ಅವಕಾಶವೆಂಬಂತೆ ಅದಕ್ಕೇ ಆತುಕೊಂಡ ನಾನು ಅಲ್ಲಿನ ಕೆಲಸಕಾರ್ಯಗಳನ್ನು ಬೇಗನೆ ಗ್ರಹಿಸಿಕೊಂಡೆ. ಕಾಲಕ್ರಮೇಣದಲ್ಲಿ ನನ್ನ ಕಾರ್ಯಕ್ಷಮತೆಯನ್ನು ಮನಗಂಡ ಸಹೋದ್ಯೋಗಿಗಳಿಂದ ಗೌರವವೂ ಸಿಕ್ಕಿತು. ಇನ್ನೇನು ಮುಗಿದೇಹೋಯ್ತು ಎಂದುಕೊಂಡ ಬದುಕಿಗೆ ಲಂಗರು ಹಾಕಲು ಸಾಧ್ಯವಾಗಿದ್ದು ಹಾಗೂ ಅವನತಿಯತ್ತ ಸಾಗಿದ್ದ ವಿಶ್ವಾಸ ಮರುಸ್ಥಾಪಿತಗೊಳ್ಳಲು ಸಾಧ್ಯವಾಗಿದ್ದು ಶ್ರದ್ಧೆ ಹಾಗೂ ಪರಿಶ್ರಮದಿಂದಲೇ.
ನೆಲೆಗೊಂಡ ವಿಶ್ವಾಸ ನನ್ನ ಓದು ಮುಂದುವರಿಕೆಗೆ ಸಹಕಾರಿಯಾಗಿದ್ದಲ್ಲದೆ, ಪೂರ್ವಾಶ್ರಮದಲ್ಲಿ ಪ್ರಾಪ್ತಿಯಾದ ಅರಿವಿನಿಂದಾಗಿ ನಂತರದಲ್ಲಿ ಸ್ವಂತದ “ಬಂಡವಾಳ ನಿರ್ವಹಣೆ ಸೇವಾ’ ಸಂಸ್ಥೆ ಪ್ರಾರಂಭಿಸಲು ಪ್ರೇರಕವಾಯ್ತು. ಸ್ವಸಾಮರ್ಥ್ಯದ ಬಗ್ಗೆ ನೆಚ್ಚಿಕೆಯಿಟ್ಟು, ಮಾಡೋ ಕೆಲಸದಲ್ಲಿ ತನ್ಮಯತೆಯಿಂದ ಸಮರ್ಪಿಸಿಕೊಂಡಲ್ಲಿ ತಡವಾಗಿಯಾದ್ರೂ ಫಲ ಸಿಗುತ್ತೆ ಅನ್ನೋದು ನನ್ನ ನಂಬಿಕೆ.
ಬಿ.ಸಿ. ನಾಗೇಂದ್ರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!
Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್ ಮಧ್ವರಾಜ್
Hassan Lok sabha Constituency: ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ
Lok sabha polls: ಸುರೇಶ್ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್ ದಾಸ್
Bike thief: ಬಜಪೆ ಪೊಲೀಸರಿಂದ ಅಂತರ್ ಜಿಲ್ಲಾ ಬೈಕ್ ಕಳ್ಳನ ಬಂಧನ