ನಮ್‌ ಒಗ್ಗರಣೆ ಸರ್‌…


Team Udayavani, Aug 29, 2017, 6:00 AM IST

FOOD-p.jpg

ಗೌಡರ ಜೊತೆ ಹರಟುತ್ತಾ ಕುಳಿತು ಬಿಡುವುದೇ? ಭೋಜನಪ್ರಿಯರಾಗಿದ್ದ ಮಾಸ್ತರರು, ಗೌಡರ ಮನೆಯಲ್ಲಿ ಘಮ್ಮೆಂದು ಬರುತ್ತಿದ್ದ ಒಗ್ಗರಣೆಯ ಪರಿಮಳಕ್ಕೆ ಮನಸೋತು, ಮೂಗರಳಿಸುತ್ತಾ ಅಲ್ಲೇ ಕುಳಿತುಬಿಟ್ಟಿದ್ದಾರೆ…

ಆಗಿನ್ನೂ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ದಿನಗಳು, ಆ ಬಾಲ್ಯದ ದಿನಗಳನ್ನು ಹೇಗೆ ಮರೆಯಲಾದೀತು ಹೇಳಿ? ಸದಾ ಹಚ್ಚ ಹಸಿರಿನಿಂದ ಕೂಡಿದ್ದ ದಿನಗಳವು. ನಮ್ಮೂರಿನ ಕನ್ನಡ ಶಾಲೆಯಲ್ಲಿ ಓದುತ್ತಿದ್ದಾಗ ನಮ್ಮ ಶಿಕ್ಷಕರೊಬ್ಬರ ಹೆಸರು- “ಒಗ್ಗರಣೆ ಸರ್‌’! 

“ಇದೇನಪ್ಪಾ, ಒಗ್ಗರಣೆ ಸರ್‌!’ ಎಂದುಕೊಂಡಿರಾ? ಅವರಿಗೆ ಆ ಹೆಸರು ಬಂದಿದ್ದಕ್ಕೂ ಕಾರಣವಿದೆ. ಅವರು ನಮ್ಮೆಲ್ಲರ ನೆಚ್ಚಿನ ಗುರುಗಳು. ಪ್ರತಿವರ್ಷವೂ ಗ್ರಾಮದಲ್ಲಿ ಪ್ರಾಥಮಿಕ ಶಾಲಾ ವತಿಯಿಂದ ಮಕ್ಕಳ ಗಣತಿ ಮಾಡಲಾಗುತ್ತಿತ್ತು. ಪ್ರತಿ ಶಿಕ್ಷಕರಿಗೂ ಗ್ರಾಮದ ಒಂದೊಂದು ಓಣಿಯನ್ನು ಜನಗಣತಿ ಮಾಡಲು ಹಂಚಲಾಗಿತ್ತು. ಹೀಗೆಯೇ ಶಿವಣ್ಣ ಮಾಸ್ತರರಿಗೂ ಜವಾಬ್ದಾರಿ ನೀಡಿದ್ದರು. ಅವರು ತಮ್ಮ ಜೊತೆ ಸಹಾಯಕ್ಕೆಂದು ಇಬ್ಬರು ಶಿಷ್ಯರನ್ನು ಕರೆದುಕೊಂಡು ಹೋಗಿದ್ದರು.

ಹೀಗೆ ಜನಗಣತಿ ಮಾಡುತ್ತಾ ಮೇಲಿನ ಓಣಿಯ ಗೌಡರ ಮನೆ ತಲುಪಿದಾಗ ಉಪಾಹಾರದ ಸಮಯವಾಗಿತ್ತು. ಗೌಡರ ಮನೆಯಲ್ಲಿ ಗಣತಿ ಮಾಹಿತಿ ಪಡೆದ ಶಿವಣ್ಣ ಮಾಸ್ತರರು, ಅಲ್ಲಿಂದ ಮೇಲೆ ಏಳಲು ತಯಾರೇ ಇಲ್ಲ! ಗೌಡರ ಜೊತೆ ಹರಟುತ್ತಾ ಕುಳಿತು ಬಿಡುವುದೇ? ಭೋಜನಪ್ರಿಯರಾಗಿದ್ದ ಮಾಸ್ತರರು, ಗೌಡರ ಮನೆಯಲ್ಲಿ ಘಮ್ಮೆಂದು ಬರುತ್ತಿದ್ದ ಒಗ್ಗರಣೆಯ ಪರಿಮಳಕ್ಕೆ ಮನಸೋತು, ಮೂಗರಳಿಸುತ್ತಾ ಅಲ್ಲೇ ಕುಳಿತುಬಿಟ್ಟಿದ್ದಾರೆ. ಮಾಸ್ತರರ ಬಗ್ಗೆ ಗೊತ್ತಿದ್ದ ಶಿಷ್ಯರು ಒಳಗೊಳಗೇ ಮುಸಿ ಮುಸಿ ನಕ್ಕಿದ್ದಾರೆ. ಬಹುಶಃ ಇದನ್ನರಿತ ಗೌಡರು, ಮಾಸ್ತರರಿಗೆ ದಣಿದು ಹಸಿವಾಗಿರಬಹುದೆಂದು ಭಾವಿಸಿ, ಆಗ ತಾನೇ ತಯಾರಾಗಿದ್ದ ಒಗ್ಗರಣೆಯಿಂದ ಚುರುಮುರಿ ಮಾಡಿಸಿ ಚಹಾದೊಂದಿಗೆ ನೀಡಿದ್ದಾರೆ. ಅವರ ಜೊತೆಗಿದ್ದ ಶಿಷ್ಯರೂ ಅದನ್ನು ಚಪ್ಪರಿಸಿ ಅದನ್ನು ಬಾರಿಸಿದ್ದಾರೆ.

ಮರುದಿನ ಕ್ಲಾಸ್‌ಗೆ ಬಂದಾಗ ತರಗತಿಯ ತುಂಬಾ ಅದೇ ಸುದ್ದಿ. ಅವರೊಂದಿಗೆ ಹೋಗಿದ್ದ ಶಿಷ್ಯರು ನಡೆದಿದ್ದನ್ನು ಎಲ್ಲರಿಗೂ ಒಂದಿಷ್ಟು ಮಸಾಲೆ ಬೆರೆಸಿ ಹೇಳಿ, ಹೇಳಿ ಮಾಸ್ತರರಿಗೆ “ಒಗ್ಗರಣೆ ಸರ್‌’ ಎಂಬ ಬಿರುದಾಂಕಿತವನ್ನು ದಯಪಾಲಿಸಿಬಿಟ್ಟರು. ಅದು ಎಷ್ಟರ ಮಟ್ಟಿಗೆ ಪ್ರಚಲಿತವಾಗಿಬಿಟ್ಟಿತೆಂದರೆ, ಶಾಲೆಗೆ ಹೋಗುವ ಅಣ್ಣ- ಅಕ್ಕರಿಗೂ, ಮುಂದೆ ಬರುವ ತಮ್ಮ- ತಂಗಿಯರಿಗೂ ಅವರು “ಒಗ್ಗರಣೆ ಸರ್‌’ ಆಗಿಬಿಟ್ಟಿದ್ದರು! ವಿದ್ಯಾರ್ಥಿಗಳಿಗೆ ಅವರ ನಿಜನಾಮ ಮರೆತೇ ಹೋಯ್ತು. 

ನಮ್ಮ ಶಿವಣ್ಣ ಮಾಸ್ತರರೇ ಹಾಗೆ. ಕುಡಿ ಮೀಸೆ ತಿರುವುತ್ತಾ, ಕೈಯಲ್ಲೊಂದು ನೀರಿನ ಬಾಟಲ್‌ ಹಿಡಿದು ತರಗತಿ ಪ್ರವೇಶಿಸಿದರೆ ಇಡೀ ಕ್ಲಾಸ್‌ ಸೈಲೆಂಟ್‌! “ತೊಳೆ ತೊಳೆ ಹಲಸಿನ ತೊಳೆ, “ಟಣ್‌ ಟಣ್‌ ಟಡಲ್‌ ಕಡಲ್‌’ ಇವು ಅವರು ವಿದ್ಯಾರ್ಥಿಗಳಿಗೆ ಹೊಡೆಯುವಾಗ ಬಳಸುತ್ತಿದ್ದ ಪಾರಿಭಾಷಿಕ ಪದಗಳು. ಶಾಲೆಗೆ ಬರದೇ ಇರುವ ವಿದ್ಯಾರ್ಥಿಗಳನ್ನು ಎತ್ತಾಕಿಕೊಂಡು ಬರಲು ನಮ್ಮಲ್ಲೇ ಒಂದು ಕ್ಷಿಪ್ರ ಕಾರ್ಯಾಚರಣೆಯ ಪಡೆಯನ್ನು ನೇಮಿಸಿದ್ದರು. ಯಾರು ದೀರ್ಘ‌ ಗೈರಾಗಿರುತ್ತಾರೋ ಅಂಥ ಸಹಪಾಠಿಗಳ ಮನೆಗೆ ಹೋಗಿ ನಾವೇ ಹೊತ್ತುಕೊಂಡು ಬರುತ್ತಿದ್ದೆವು. ನಮ್ಮ ಶಿವಣ್ಣ ಸರ್‌ಗೆ ವಿದ್ಯಾರ್ಥಿಗಳ ಹಾಜರಾತಿ ಮುಖ್ಯವಾಗಿತ್ತು.

ಸಹೃದಯದ, ಹಾಸ್ಯಮಿಶ್ರಿತ ಗಡಸಿನ ವ್ಯಕ್ತಿತ್ವ ಅವರದು. ನಾವು ಮಾಡಿದ ಕೀಟಲೆಗಳಿಗೆ ಕ್ಷಮೆ ಕೋರುತ್ತಾ, ಅವರು ಈಗ ಎಲ್ಲೇ ಇದ್ದರೂ ಸುಖವಾಗಿರಲಿ ಎಂದು ಅವರ ಶಿಷ್ಯಕೋಟಿ ಬೇಡಿಕೊಳ್ಳುತ್ತದೆ.

– ಕುಮಾರಸ್ವಾಮಿ ವಿರಕ್ತಮಠ

ಟಾಪ್ ನ್ಯೂಸ್

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

jds

JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

jds

JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.