ನಾನೂ ಸೈಕಲ್‌ ಬಿಟ್ಟೆ…


Team Udayavani, Mar 28, 2017, 3:50 AM IST

28-JOSH-8.jpg

ಚಿಕ್ಕವರಿದ್ದಾಗ ನಾವು ಏನೇ ಮಾಡಿದರೂ ನಮಗೆ ಇಷ್ಟವಾಗುತ್ತಿತ್ತು. ನಾನು ಅಜ್ಜಿ ಮನೆಯಲ್ಲಿಯೇ ಇರುತ್ತಿದ್ದೆ. ನಾನು ಜಾಸ್ತಿ ಆಟವಾಡಿರುವುದಾಗಲಿ, ಏನೇ ಆಗಲಿ ನನಗೆ ಈಗಲೂ ನೆನಪಿವೆ. ಅದರಲ್ಲಿಯೂ ನಾನು ಸೈಕಲ್‌ ಕಲಿತ ಅನುಭವ ನೆನಸಿಕೊಂಡರೆ ಈಗಲೂ ನಗೆಯುಕ್ಕುತ್ತದೆ. ಅಪ್ಪ ಕೊಡಿಸಿದ ಸೈಕಲ್‌ ಮೇಲೆ ತುಂಬಾ ಓಡಾಡುತ್ತಿದ್ದೆ. ನನಗೆ ನನ್ನ ಸೈಕಲ್‌ ಬಿಟ್ಟಿರೋಕೇ ಆಗುತ್ತಿರಲಿಲ್ಲ. ರಾತ್ರಿಯೂ ಮಲಗುವಾಗ ಕೋಣಿಯೊಳಗೆ ತಂದು ಇಟ್ಟುಕೊಳ್ಳುತ್ತಿದ್ದೆ. ಸೈಕಲ್‌ ಬೆಲ್‌ ಬಾರಿಸಲು ತುಂಬಾ ಇಷ್ಟವಾಗುತ್ತಿತ್ತು. ರಸ್ತೆಯಲ್ಲಿ ಯಾರೂ ಇಲ್ಲದಿದ್ದರೂ ಟಿಂಗ್‌ ಟಿಂಗ್‌ ಅಂತಾ ಬೆಲ್‌ ಹಾಕುತ್ತಿದ್ದೆ. ಸೈಕಲ್‌ ಕಲಿತ ಕತೆ ಹೇಳುತ್ತೇನೆ.

ನಾನಾಗ ನಾಲ್ಕನೇ ತರಗತಿಯಲ್ಲಿದ್ದೆ. ಅಪ್ಪ ಮಧ್ಯಾಹ್ನ ನಿದ್ದೆ ಹೋದ ನಂತರ ಅವರಿಗೆ ಗೊತ್ತಿಲ್ಲದಂತೆ ಸೈಕಲ್‌ ಕಲೀತಾ ಇದ್ದೆ. ಆಗೆಲ್ಲಾ ಸೈಕಲ್‌ ಬಾಡಿಗೆಗೆ ಸಿಗುತ್ತಿದ್ದವು. ಅರ್ಧ ತಾಸಿಗೆ ಒಂದು ರುಪಾಯಿ, ಒಂದು ತಾಸಿಗೆ ಎರಡು ರುಪಾಯಿಯಂತೆ ಸೈಕಲ್‌ ಬಾಡಿಗೆಗೆ ಸಿಗುತ್ತಿದ್ದವು. ಅವು ಚಿಕ್ಕ ಚಿಕ್ಕ ಸೈಕಲ್‌ಗ‌ಳು. ಅಜ್ಜಿ ಮನೆಯ ಹತ್ತಿರ ನನಗೆ ಕೆಲವು ಜನ ಸ್ನೇಹಿತರಿದ್ದರು. ಅವರಲ್ಲಿಗೆ ಹೋಗಿ, ಒಂದು ಸಲ ಸೈಕಲ್‌ ಬಿಡುವುದನ್ನು ಕಲಿಸಿಕೊಡಿ ಅಂತ ಕೇಳಿದೆ. ಅವರು ಹೂಂ ಎಂದು ನನ್ನನ್ನು ಕರೆದುಕೊಂಡು ಹೋದರು.

ನೀಲಾ ನನ್ನ ಸ್ನೇಹಿತೆ. ಅವಳಿಗೆ ಸೈಕಲ್‌ ಹೊಡೆದು ಅನುಭವವಿತ್ತು. ಅವಳು ಸೈಕಲ್‌ ಬಿಡುವುದನ್ನು ನೋಡುತ್ತಾ ನಿಂತಿದ್ದೆ. ಅವಳು ಹೊಡೆಯುತ್ತ ಹೊಡೆಯುತ್ತ ತನ್ನ ಎರಡೂ ಕೈಗಳನ್ನು ಬಿಟ್ಟು ಸಾಹಸ ಪ್ರದರ್ಶನ ಮಾಡತೊಡಗಿದಳು. ಅದನ್ನು ನೋಡಿದ ಮೇಲಂತೂ ನನಗೆ ಸೈಕಲ್‌ ಕಲಿಯದಿದ್ದರೂ ಚಿಂತೆಯಿಲ್ಲ, ಅದರ ಮೇಲೆ ಕುಳಿತುಕೊಳ್ಳುವ ಹಂಬಲ ಆಕಾಶ ಮುಟ್ಟಿತು. ನೀಲಾಳನ್ನು ಸೈಕಲ್‌ ಕೊಡೆಂದು ಕೇಳಿದೆ. ಅವಳು ಕೊಟ್ಟಳು. ಸೈಕಲ್‌ ಹಿಂದೆ ಕೈ ಹಿಡಿದು ಸೈಕಲ್‌ ಓಡಿಸು ಎಂದಳು. ನಾನು, ಹೇಗೂ ಅವಳು ಹಿಡಿದಿರುತ್ತಾಳಲ್ಲಾ ಅಂತ ಮೊದಲ ಸಾಹಸ ಪ್ರದರ್ಶನಕ್ಕೆ ಅಣಿಯಾದೆ. ಪೆಡಲ್‌ ತುಳಿಯುತ್ತಿದ್ದಂತೆ ಹ್ಯಾಂಡಲ್‌ ಅಲುಗಾಡತೊಡಗಿತು, ನಡುಗತೊಡಗಿತು. ಪೆಡಲ್‌ ತುಳಿಯುತ್ತಾ ಮುಂದೆ ಹೋದಂತೆ, ಎರಡು ಕೈಗಳನ್ನು ಬಿಟ್ಟೆ. ಹಾಗೂ ಹೀಗೂ ಸೈಕಲ್‌ ಮುಂದಕ್ಕೆ ಹೋಗುತ್ತಿತ್ತು. ಎಲ್ಲವೂ ಸರಿಯಾಗುತ್ತಿತ್ತು, ನಾನು ಹಿಂದಿರುಗಿ ನೋಡದಿದ್ದರೆ. ನಾನು ಆತ್ಮವಿಶ್ವಾಸದಿಂದ ಸೈಕಲ್‌ ಬಿಡುವುದನ್ನು ಕಂಡು ನೀಲಾ ತನ್ನ ಸಹಾಯಹಸ್ತ ಬಿಟ್ಟಿದ್ದಳು. ನಾನೊಬ್ಬಳೇ ಸೈಕಲ್‌ ತುಳಿದುಕೊಂಡು ಮುಂದಕ್ಕೆ ದೂರ ಬಂದುಬಿಟ್ಟಿದ್ದೆ. ಹಿಂದಿರುಗಿ ನೋಡಿದ ಕ್ಷಣದಲ್ಲೇ, ಅವಳು ಹಿಡಿದಿದ್ದಾಳೆಂಬ ಧೈರ್ಯದಲ್ಲಿದ್ದ ನನ್ನ ಜಂಘಾಬಲ ಉಡುಗಿತು. ಆಮೇಲೆ ಏನಾಗಬೇಕಿತ್ತೋ ಅದಾಯಿತು. ನಾನು ಸೀದಾ ಹೋಗಿ ಬಿದ್ದಿದ್ದು ಮುಳ್ಳಿನ ಕಂಟಿಯೊಳಗೆ. ಕೈ ಕಾಲಲ್ಲೆಲ್ಲ ತರಚಿದ ಗಾಯಗಳಾದವು. ಅಪ್ಪನಿಂದ ಗಾಯವನ್ನೂ, ಬಿದ್ದ ವಿಷಯವನ್ನೂ ಮುಚ್ಚಿಟ್ಟೆ.

ಸೌಮ್ಯ ಆರ್‌. ನಾಯಕೋಡಿ, ವಿಜಯಪುರ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.