ಪ್ರಪೋಸ್‌ ಮಾಡೋಕೆ ಐಡಿಯಾ ಕೊಡಿ, ಪ್ಲೀಸ್‌…


Team Udayavani, Jun 12, 2018, 6:00 AM IST

x-9.jpg

ನಮ್ಮ ತರಗತಿ ಒಂಬತ್ತು ಗಂಟೆಗೆ ಪ್ರಾರಂಭವಾದರೂ, ಕಾಡುವ ಆ ಬಾಲೆಯನ್ನು ನೋಡುವಾಸೆಯಿಂದ ಒಂದು ಗಂಟೆ ಮುಂಚಿತವಾಗಿ ಕ್ಯಾಂಪಸ್‌ನಲ್ಲಿರುತ್ತಿದ್ದೆ. ಸದಾ ಗೆಳೆಯರ ಜೊತೆ ಇರುತ್ತಿದ್ದ ನನಗೆ ಒಂಟಿಯಾಗಿ ಓಡಾಡಬೇಕು ಎನಿಸುತ್ತಿತ್ತು. ತರಗತಿಗೆ ಹೋದರೆ ಯಾರೋ ನನ್ನನ್ನು ಹಿಡಿದು ಹೊರ ನಡೆ ಎಂದು ತಳ್ಳಿದಂತಾಗುತ್ತಿತ್ತು. 

ತರಗತಿ ಪ್ರಾರಂಭವಾಗಲು ಕೆಲವೇ ನಿಮಿಷಗಳು ಬಾಕಿ ಇದ್ದವು. ಅವತ್ಯಾಕೋ ನನಗೆ ತರಗತಿಗೆ ಹೋಗುವ ಬದಲು ಕ್ಯಾಂಪಸ್‌ ಸುತ್ತೋಣ ಅನ್ನಿಸಿತು. ಪುಸ್ತಕದಚೀಲವನ್ನು ಹೆಗಲಿಗೇರಿಸಿ ತರಗತಿಯಿಂದ ಹೊರ ನಡೆದೆ.

ಅದ್ಯಾವ ದೇವರ ಹಾರೈಕೆಯ ಫ‌ಲವೋ ಗೊತ್ತಿಲ್ಲ, ಕಣ್ಣೆದುರಿಗೆ ಒಬ್ಬಳು ಸುಂದರಿ ಎದುರಾದಳು. ಗಳಿಗೆಗೊಮ್ಮೆ ತನ್ನ ಮುಂಗುರುಳ ನೇವರಿಸುತ್ತ, ಗ್ಯಾಲಕ್ಸಿಯಂತೆ ಹೊಳೆಯುವ ಕಂಗಳನ್ನು ತಿರುಗಿಸುತ್ತ,  ಹೈ ಹೀಲ್ಡ್‌ ಪಾದರಕ್ಷೆ ಧರಿಸಿ ನನ್ನ ಮುಂದೆ ನಡೆವಾಗ, ಅವಳ ಪ್ರೀತಿಯ ಬಲೆಗೆ ಬೀಳದೇ ಇರಲಾಗಲಿಲ್ಲ. ತರಗತಿಯಿಂದ ಹೊರಬಂದದ್ದು ಒಳ್ಳೆಯದಾಯಿತು ಎಂದು ಮನಸ್ಸಿನಲ್ಲೇ ಅಂದುಕೊಂಡೆ. ಆದರೆ, ಅವಳನ್ನು ಮಾತನಾಡಿಸುವ ಧೈರ್ಯ ಮಾತ್ರ ಬರಲಿಲ್ಲ.

ಅಂದು ರಾತ್ರಿ ಆ ಉದ್ದಜಡೆಯ ಸುಂದರಿ ಅತಿಯಾಗಿ ಕಾಡಿದಳು. ಅಲ್ಲಿಂದ ಪ್ರಾರಭವಾಯಿತು ನೋಡಿ ನನ್ನ ಪ್ರೀತಿ ಎಂಬ ಫ‌ಜೀತಿ. ನಮ್ಮ ತರಗತಿ ಒಂಬತ್ತು ಗಂಟೆಗೆ ಪ್ರಾರಂಭವಾದರೂ, ಕಾಡುವ ಆ ಬಾಲೆಯನ್ನು ನೋಡುವಾಸೆಯಿಂದ ಒಂದು ಗಂಟೆ ಮುಂಚಿತವಾಗಿ ಕ್ಯಾಂಪಸ್‌ನಲ್ಲಿರುತ್ತಿದ್ದೆ. ಸದಾ ಗೆಳೆಯರ ಜೊತೆ ಇರುತ್ತಿದ್ದ ನನಗೆ ಒಂಟಿಯಾಗಿ ಓಡಾಡಬೇಕು ಎನಿಸುತ್ತಿತ್ತು. ತರಗತಿಗೆ ಹೋದರೆ ಯಾರೋ ನನ್ನನ್ನು ಹಿಡಿದು ಹೊರ ನಡೆ ಎಂದು ತಳ್ಳಿದಂತಾಗುತ್ತಿತ್ತು. 

ನನ್ನ ಈ ಪೀಕಲಾಟ ಬಹುಶಃ ಅವಳಿಗೆ ತಿಳಿಯಿತು ಎಂದು ಕಾಣುತ್ತದೆ. ಎದುರಿಗೆ ಬಂದಾಗ ನನ್ನ ನೋಡಿ ಕಿರುನಗೆ ಬೀರಲು ಪ್ರಾರಂಭಿಸಿದಳು. ಆಗೆಲ್ಲಾ ನನಗೆ “ಮಗಾ ಲಡ್ಡು ಬಂದು ಬಾಯಿಗೆ ಬಿತ್ತು’ ಎನಿಸುತ್ತಿತ್ತು. ಕ್ಯಾಂಪಸ್‌ನ ತುಂಬೆಲ್ಲ ನಲಿದಾಡುವ ನವ ಜೋಡಿಗಳನ್ನು ಕಂಡಾಗ, ನನಗೂ ಅವರಂತೆಯೇ ನನ್ನ ಹುಡುಗಿಯ ಕೈ ಹಿಡಿದು ನಲಿಯುವ ಆಸೆ ಮೂಡುತ್ತಿತ್ತು. ಆದರೆ, ಅವಳ ಮುಂದೆ ನಿಂತು “ನಾನು ನಿನ್ನನ್ನು ಪ್ರೀತಿಸ್ತಿದೀನಿ’ ಎಂದು ಹೇಳುವ ಧೈರ್ಯ ಇರಲಿಲ್ಲ. ಹೇಳುವುದು ಬಿಡಿ, ಅವಳ ಎದುರು ನಿಲ್ಲುವ ಶಕ್ತಿಯೂ ಇರಲಿಲ್ಲ ಅನ್ನಿ. ಏಕಾಏಕಿ ಅವಳ ಬಳಿ ಹೋಗಿ, “ಐ ಲವ್‌ ಯೂ’ ಅಂದುಬಿಟ್ಟರೆ, ಅವಳಿಗೆ ಕೋಪ ಬರಬಹುದು, ಭಯವಾಗಬಹುದು, ಅವಳ ಮೃದು ಮನಸ್ಸಿಗೆ ನೋವಾಗಬಹುದು…ನನ್ನನ್ನು ನೋಡಿ ನಸುನಕ್ಕ ಮಾತ್ರಕ್ಕೆ ಅವಳು ನನ್ನನ್ನು ಪ್ರೀತಿಸುತ್ತಿದ್ದಾಳೆ ಎಂದು ಹೇಗೆ ತಿಳಿಯಲಿ? ಹೀಗೆಲ್ಲಾ ಅನಿಸಿತು. 

ಆದರೆ, ಅದೆಷ್ಟೇ ಪ್ರಯತ್ನಿಸಿದರೂ, ಅವಳನ್ನು ಮನಸ್ಸಿನಿಂದ ಆಚೆಗೆ ಇಡಲು ಸಾಧ್ಯವಾಗಲೇ ಇಲ್ಲ. ನಾನೀಗ ಪ್ರೀತಿಯಲ್ಲಿ ಬಿದ್ದು ನೀರಿನಿಂದ ಹೊರಬಂದ ಮೀನಿನ ರೀತಿ ವಿಲವಿಲನೆ ಒದ್ದಾಡುತ್ತಿದ್ದೇನೆ. ಅವಳು ನನ್ನನ್ನು ಪ್ರೀತಿಸುತ್ತಿದ್ದಾಳ್ಳೋ, ಇಲ್ಲವೋ ತಿಳಿಯುಲ್ಲ. ಆದರೆ, ಅವಳು ನನ್ನೆದುರಿಗೆ ಬಂದಾಗ ತಪ್ಪದೇ ನನ್ನನ್ನು ನೋಡಿ ಕಿರುನಗೆ ಬೀರುತ್ತಾಳೆ. ಅದಕ್ಕೆ ನಾನಿನ್ನೂ ಯಾವುದೇ ಪ್ರತ್ಯುತ್ತರಕೊಟ್ಟಿಲ್ಲ. 
ಗೆಳೆಯರೇ, ನಿಮ್ಮಲ್ಲಿ ನನ್ನದೊಂದು ಕೋರಿಕೆ; ಈ ನಸುನಗುವ ಮೋಹಿನಿಯ ಎದುರು ನಿಂತು ಪ್ರಪೋಸ್‌ ಮಾಡುವ ಐಡಿಯಾ ಕೊಡಿ, ಪ್ಲೀಸ್‌!

ಗಿರೀಶ ಜಿ.ಆರ್‌ ಗಂಗನಹಳ್ಳಿ

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qweqwewq

Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು

1-wewqe

Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.