ಗ್ರಾಫಿಕ್ಸ್‌ ಗಮ್ಮತ್ತು! 


Team Udayavani, Dec 11, 2018, 11:55 AM IST

graphics.jpg

ಇದು ಬಣ್ಣಗಳಿಂದ ಝಗಮಗಿಸುವ ಲೋಕ. ಮನೆಯೊಳಗೂ, ಮನೆಯಿಂದ ಹೊರಕ್ಕೆ ಕಾಲಿಟ್ಟರೂ, ಮಾಲ್‌, ಸಿನಿಮಾ ಮಂದಿರ, ಅಂಗಡಿ ಮಳಿಗೆ, ರಸ್ತೆ, ಬಸ್‌ ನಿಲ್ದಾಣ ಎಲ್ಲಿಗೆ ಕಾಲಿಟ್ಟರೂ ಕಣ್ಣಿಗೆ ರಾಚುವುದು ಬಣ್ಣ ವಿನ್ಯಾಸಗಳು. ಜಾಹಿರಾತುಗಳು, ಸೂಚನಾ ಫ‌ಲಕಗಳು, ಪುಸ್ತಕ ಮುಖಪುಟಗಳು, ಪತ್ರಿಕೆಗಳು, ಬ್ರೋಚರ್‌ಗಳು, ಪೋಸ್ಟರ್‌ಗಳು ಇವೆಲ್ಲದರ ಹಿಂದಿರುವುದು ಗ್ರಾಫಿಕ್‌ ಡಿಸೈನರ್‌. 

ಗ್ರಾಫಿಕ್‌ ಡಿಸೈನರ್‌ಗೆನು ಕೆಲಸ?: ಯಾವುದೇ ಉತ್ಪನ್ನವಾದರೂ, ಲೋಗೋ, ಪೋಸ್ಟರ್‌, ಜಾಹಿರಾತು ಫ‌ಲಕವಾದರೂ ಮಾರುಕಟ್ಟೆಗೆ ಬಿಡುವ ಮುನ್ನ ಅತ್ಯಾಕರ್ಷಕವಾಗಿ ಡಿಸೈನ್‌ ಮಾಡಲಾಗುತ್ತದೆ. ಬ್ರ್ಯಾಂಡಿಂಗ್‌, ಮಾರ್ಕೆಟಿಂಗ್‌ ತಂತ್ರಗಳನ್ನು ಅನುಸರಿಸಿ ಡಿಸೈನ್‌ ರೂಪಿಸುವ ತಂತ್ರಜ್ಞನೇ ಗ್ರಾಫಿಕ್‌ ಡಿಸೈನರ್‌. ಆನ್‌ಲೈನ್‌ ಪ್ರಪಂಚದಲ್ಲೂ ಗ್ರಾಫಿಕ್‌ ಡಿಸೈನರ್‌ನ ಪ್ರಭಾವ ಗಾಢವಾಗಿದೆ.

ಫೇಸ್‌ಬುಕ್‌ನ ಬಣ್ಣ ಯಾವುದೆಂದು ಕೇಳಿದರೆ, “ನೀಲಿ’ ಎಂದು ಮಗು ಕೂಡಾ ಹೇಳುತ್ತದೆ. ಜಾಲತಾಣಗಳ ಬಣ್ಣ ಸಂಯೋಜನೆ, ಐಕಾನ್‌, ಸೆಲಿಗಳ ಹಿಂದಿರುವುದು ಕೂಡಾ ಗ್ರಾಫಿಕ್‌ ಡಿಸೈನರ್‌. ಅವನನ್ನು ಚಿತ್ರ, ಫೋಟೋ, ಅಕ್ಷರ, ಆಕಾರ ಮತ್ತು ಗ್ರಾಫಿಕ್‌ಗಳನ್ನು ಬಳಸಿ ಯಶಸ್ವಿಯಾಗಿ ಸಂವಹನ ನಡೆಸಬಲ್ಲ ಚತುರ ಕಲಾವಿದ ಎನ್ನಬಹುದು. ಗ್ರಾಫಿಕ್‌ ಡಿಸೈನರ್‌ ಕುಂಚ, ಕ್ಯಾನ್ವಾಸ್‌ ಜೊತೆ ಆಟವಾಡುವವನಲ್ಲ. ಈತ ಕಂಪ್ಯೂಟರ್‌ ಪರದೆಯೆದುರು ಕುಳಿತು ಕೆಲಸ ಮಾಡುವಾತ.

ಗ್ರಾಹಕನ ನಾಡಿಮಿಡಿತ: ಗ್ರಾಫಿಕ್‌ ಡಿಸೈನರ್‌ನ ಕೆಲಸ ಮೀಟಿಂಗ್‌ನಿಂದ ಶುರುವಾಗುತ್ತದೆ. ಗ್ರಾಹಕನಿಗೆ ಏನು ಬೇಕೆನ್ನುವುದನ್ನು ಮೊದಲು ಆತ ಗ್ರಹಿಸುತ್ತಾನೆ. ಅದು ಬಹಳ ಮುಖ್ಯವಾದ ಕೆಲಸ. ತನಗೇನು ಬೇಕು ಎನ್ನುವುದಕ್ಕಿಂತಲೂ ಗ್ರಾಹಕ ಏನು ಬಯಸುತ್ತಿದ್ದಾನೆ ಎನ್ನುವುದನ್ನು ಗೊಂದಲಗಳಿಲ್ಲದಂತೆ ಸ್ಪಷ್ಟ ಪಡಿಸಿಕೊಳ್ಳಬೇಕು. ಗ್ರಾಹಕನ ಅಮೂರ್ತ ಭಾವನೆಗಳಿಗೆ ಒಂದು ರೂಪ ಕೊಡಲು ಪ್ರಯತ್ನಿಸಬೇಕು. ಚಿತ್ರಕ್ಕೆ ಸೂಕ್ತವಾದ ಅಕ್ಷರ ಶೈಲಿ (ಫಾಂಟ್‌), ಬಣ್ಣ, ಡಿಸೈನ್‌ ಲೇಔಟ್‌ ಬಳಕೆ ಆತನದೇ ಕೈಚಳಕ. 

ಗ್ರಾಫಿಕ್‌ ಡಿಸೈನರ್‌ನ ವಿದ್ಯಾರ್ಹತೆ: ವಿದ್ಯಾರ್ಹತೆಗಿಂತ ಮುಖ್ಯವಾಗಿ ಸೃಜನಶೀಲ ಮನಸ್ಸು ಮೊದಲ ಅರ್ಹತೆ. ಇಂದು ಅನೇಕ ಖಾಸಗಿ ಡಿಸೈನ್‌ ಸ್ಕೂಲ್‌ಗ‌ಳು, ಆನ್‌ಲೈನ್‌ ಕೋರ್ಸ್‌ಗಳು, ಸರ್ಕಾರಿ ಕಲಾ ಶಾಲೆಗಳಲ್ಲಿ ಗ್ರಾಫಿಕ್‌ ಡಿಸೈನಿಂಗ್‌ ತರಬೇತಿ ಪಡೆಯಬಹುದು. ಇದಲ್ಲದೆ ವಿಶುವಲ್‌ ಆರ್ಟ್ಸ್, 2ಡಿ, 3ಡಿ, ಡಿಜಿಟಲ್‌ ಫೋಟೋಗ್ರಫಿ ಮುಂತಾದವನ್ನೂ ಈ ತರಗತಿಗಳಲ್ಲಿ ಕಲಿಯಬಹುದು.

ಗ್ರಾಫಿಕ್‌ ಡಿಸೈನರ್‌ಗೆ ಹತ್ತು ಹಲವು ಸಾಫ್ಟ್ವೇರ್‌ಗಳ ಪರಿಣತಿ ಬೇಕಾಗುತ್ತದೆ. ಅಡೋಬ್‌ ಇಲ್ಲಸ್ಟ್ರೇಟರ್‌, ಫೋಟೋಶಾಪ್‌, ಕೋರೆಲ್‌ ಡ್ರಾ, ಕ್ವಾರ್ಕ್‌ ಎಕ್ಸ್‌ಪ್ರೆಸ್‌, ಇನ್‌ಡಿಸೈನ್‌ ಮೊದಲಾದ ಡಿಸೈನ್‌ ಟೂಲ್‌ಗ‌ಳ ಪರಿಚಯ ಇರಬೇಕಾಗುತ್ತದೆ. ಕಾಲೇಜನ್ನು ಆಯ್ಕೆ ಮಾಡುವಾಗ, ಇಂಟರ್ನ್ಶಿಪ್‌ ದೊರೆಯುವಂತಹ ಕಾಲೇಜುಗಳನ್ನು ಸೇರುವುದು ಉತ್ತಮ. 

ಎಲ್ಲೆಲ್ಲಾ ಕೆಲಸ ಗಿಟ್ಟಿಸಬಹುದು?
-ಜಾಹೀರಾತು ವಿಭಾಗ 
-ಸಾರ್ವಜನಿಕ ಸಂಪರ್ಕ ವಿಭಾಗ(ಪಬ್ಲಿಕ್‌ ರಿಲೇಷನ್ಸ್‌ )
-ಪುಸ್ತಕ ಮುದ್ರಣ 
-ದಿನಪತ್ರಿಕೆ, ವಾರಪತ್ರಿಕೆಗಳು
-ಆನ್‌ಲೈನ್‌ ಸಂಸ್ಥೆಗಳು
-ಸಿನಿಮಾ ಕಲಾ ನಿರ್ದೇಶಕ
-ಇಂಡಸ್ಟ್ರಿಯಲ್‌ ಡಿಸೈನರ್‌
-ಆರ್ಕಿಟೆಕ್ಟ್
-ಮಲ್ಟಿಮೀಡಿಯಾ ಡಿಸೈನರ್‌

* ರಘು. ವಿ., ಪ್ರಾಂಶುಪಾಲರು

ಟಾಪ್ ನ್ಯೂಸ್

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.