ಕರೆಯದೇ ಬಂದ ನೆಂಟ…


Team Udayavani, Nov 19, 2019, 4:53 AM IST

cc-7

ನಮ್ಮ ವಿಶ್ವವಿದ್ಯಾಲಯದಲ್ಲಿ ಶಕ್ತಿ ಸಂಭ್ರಮ ಕಾರ್ಯಕ್ರಮವಿತ್ತು. ಹೀಗಾಗಿ, ಕಾರ್ಯಕ್ರಮದ ಪೋಟೋಗ್ರಫಿ ಮತ್ತು ವರದಿಯನ್ನು ಮಾಡಬೇಕಿತ್ತು. ಸಂಜೆ ಕಾಲೇಜಿನಲ್ಲಿಯೇ ಏಳು ಘಂಟೆ ಆಗಿ ಹೋಯ್ತು. ಆ ಸಮಯದಲ್ಲಿ ನಮ್ಮ ವಿಶ್ವವಿದ್ಯಾಲಯದಲ್ಲಿ ಯಾವುದೆ ಆಟೋ ಆಗಲಿ, ಬಸ್‌ ಆಗಲಿ ಬರುವುದಿಲ್ಲ. ಇದನ್ನು ನಾನೂ ಕೂಡ ಮರೆತು ಹೋದೆ. ಪುಣ್ಯಕ್ಕೆ, ಜೊತೆಗೆ ನನ್ನ ಇಬ್ಬರು ಗೆಳತಿಯರು ಕೂಡ ಇದ್ದರು.

ನಮ್ಮ ಮೂರು ಜನರ ಹಾಸ್ಟೆಲ್‌ ಸಿಟಿಯಲ್ಲಿ ಇತ್ತು. ಸುಮಾರು ಮೂರು, ನಾಲ್ಕು ಕಿ.ಮೀ ದೂರ. ಹೀಗಾಗಿ, ತೊರವಿಯವರೆಗೂ ನಡೆದುಕೊಂಡು ಹೋಗಿ, ಅಲ್ಲಿಂದ ಬಸ್‌ ಹಿಡಿಯುವುದು ಅನಿವಾರ್ಯ. ಹಾಗಾಗಿ, ಹೊರಟೆವು. ಒಂದಷ್ಟು ದೂರ ಹೋದ ನಂತರ ಒಂದು ರಿಕ್ಷಾ ಬಂದು ನಮ್ಮ ಮುಂದೆ ನಿಂತಿತು. ಚಾಲಕ, “ನಾನು, ತೊರವಿವರೆಗೂ ಹೊರಟ್ಟಿದ್ದಿನಿ. ಬನ್ನಿ’ ಎಂದು ಕರೆದ. ಅಪರಿಚಿತ ಮುಖ, ನಾವು ಆಟೋ ಬೇಕು ಅಂತಲೂ ಕೇಳಿರಲಿಲ್ಲ. ತಾನಾಗೇ ಏಕೆ ಕೇಳುತ್ತಿದ್ದಾನೆ? ಇದರ ಹಿಂದೆ ಏನೋ ಮರ್ಮ ಇರಬೇಕು… ಅನ್ನೋ ಅನುಮಾನ ಮೂವರಲ್ಲಿ ಮೂಡಿತು. “ಬೇಡ, ಇನ್ನೇನು ಸ್ವಲ್ಪ ದೂರ ಇದೆ. ನಡೆದುಕೊಂಡೇ ಹೋಗೀ¤ವಿ’ ಎಂದು ಹೇಳಿದೆವು. ಆದರೂ ಕೂಡಾ ಅವರು-” ಯಾಕೆ ನಡೆದುಕೊಂಡು ಹೋಗ್ತಿàರಾ? ಕತ್ತಲೆ ಬೇರೆ ಆಗಿದೆ, ಬನ್ನಿ’ ಎಂದು ಆಟೋ ಹತ್ತಲು ಒಪ್ಪುವವರೆಗೂ ಆತ ಹೋಗಲೇ ಇಲ್ಲ. ಕೊನೆಗೆ ಒಲ್ಲದ ಮನಸ್ಸಿನಿಂದ ಆಟೋದಲ್ಲಿ ಕುಳಿತುಕೊಂಡೆವು. ತೊರವಿಗೆ ಬರುತ್ತಿದಂತೆಯೇ ಇಳಿದು, ದುಡ್ಡು ಕೊಡಲು ಹೋದರೆ, ರಿಕ್ಷಾ ಡ್ರೈವರ್‌ ತೆಗೆದುಕೊಳ್ಳಲು ನಿರಾಕರಿಸಿದರು. ಆದರೂ, ನಾವು ಬಿಡದೆ ತುಂಬಾ ಒತ್ತಾಯ ಮಾಡಿ ದುಡ್ಡು ಕೊಟ್ಟೆವು. ಆಗ ಅವರು ಹೇಳಿದ್ದು ; “ನಾನು ನಿಮ್ಮನ್ನು ದುಡ್ಡಿಗೋಸ್ಕರ ಕರೆದುಕೊಂಡು ಬಂದಿಲ್ಲ. ನಾನು ಕೂಡಾ ಈ ಕಡೆ ಹೊರಟ್ಟಿದ್ದೆ. ನೀವು ಕತ್ತಲೆಯಲ್ಲಿ ನಡೆದುಕೊಂಡು ಬರುತ್ತಿರುವುದರನ್ನು ನೋಡಿ ಬನ್ನಿ ಅಂದಿದ್ದು ‘ ಎಂದು ಹೇಳಿ ಹೊರಟುಹೋದರು. ಅವರ ಮಾತು ಕೇಳಿ, ನಮ್ಮ ಊಹೆಗಳೆಲ್ಲವೂ ತಲೆಕೆಳಗು ಆಯಿತು. ಜೊತೆಗೆ, ನಮಗೆ ಒಂದು ಥರ ಮುಜುಗರ ಅನಿಸಿತು. ಈ ಘಟನೆ ನಮಗೆ ಕಲಿಸಿದ ಪಾಠ ಏನೆಂದರೆ, ಎಲ್ಲರೂ ಒಂದೇ ರೀತಿ ಇರುವುದಿಲ್ಲ. ಎಲ್ಲರನ್ನೂ ಅನುಮಾನದಿಂದ ನೋಡುವುದು ತರವಲ್ಲ ಅನ್ನುವುದು.

ಏನೇ ಆದರೂ, ಕರೆಯದೇ ಬಂದ ನೆಂಟನಂತೆ ಬಂದು, ನಮಗೆ ನೆರವಾದ ಆಟೋ ಚಾಲಕನಿಗೆ ನಮೋನಮಃ.

ದೀಪಾ ಮಂಜರಗಿ

ಟಾಪ್ ನ್ಯೂಸ್

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

partner kannada movie

Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್‌’: ಟ್ರೇಲರ್‌, ಆಡಿಯೋದಲ್ಲಿ ಹೊಸಬರ ಚಿತ್ರ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.