ಹ್ಯಾಪಿ ಬರ್ತ್‌ ಡೇ ಟು ಯೂ…


Team Udayavani, May 15, 2018, 1:58 PM IST

n-8.jpg

ಇಂದು ನಿನ್ನ ಬರ್ತ್‌ಡೇ. ನೀನ್‌ ನಿನ್‌ ಬಗ್ಗೆ ಕಟ್ಕೊಂಡಿರೋ ಎಲ್ಲಾ ಕನಸೂ ನನಸಾಗ್ಲಿ. ನಿನ್‌ ಆರೋಗ್ಯ ಚೆನ್ನಾಗಿರ್ಲಿ. ನನ್‌ ಸಾಂಗತ್ಯದ ಬಯಕೆ ನಿನ್ನಲ್ಲಿ ನೂರ್ಮಡಿಯಾಗ್ಲಿ ಅಂತ ಬಯಸ್ತೀನಿ.

ಬದುಕಲ್ಲಿ ಕೆಲವರ ಆಗಮನವೇ ವಿಚಿತ್ರ ಅಲ್ವಾ? ಎಲ್ಲೋ ಹುಟ್ಟಿ ಎಲ್ಲೋ ಬೆಳೆವ ಎರಡು ಜೀವಗಳು ಒಂದನ್ನೊಂದು ವಿಪರೀತ ಅನ್ನೋವಷ್ಟು ಹಚ್ಕೊಂಡು ಎದೆಯುಸಿರ ಬಡಿತಾನೂ ತಿಳ್ಕೊಳ್ಳೋ ಮಟ್ಟಕ್ಕೆ ಹತ್ರ ಆಗೋದು ಇವತ್ತಿಗೂ ಆಶ್ಚರ್ಯಾನೇ. ನೆಪವಲ್ಲದ ನೆಪಕ್ಕೆ ಶುರು ಮಾಡಿದ ಮಾತು ಆಮೇಲೆ ನಗು, ಖುಷಿ, ದುಃಖ, ಅಳು, ಬೇಸರ, ಕೋಪ ಎಲ್ಲಾನೂ ದಾಟಿ ಸ್ನೇಹದ ಬೇಲೀನಾ ಗಟ್ಟಿ ಮಾಡಿದ್ದು ಸುಳ್ಳಲ್ಲ. ನಿಜ ಹೇಳ್ಬೇಕಂದ್ರೆ, ನಿಂಗೆ ಮೂಗ್‌ ತುದೀಲಿರೋ ಕೋಪಾನೇ ನಮ್ಮಿಬ್ರ ನಡುವಿನ ಗ್ಯಾಪನ್ನ ಕಮ್ಮಿ ಮಾಡಿದ್ದು. ಮೊದ್ಲಿಗೆ ನಯನಾಜೂಕಲ್ಲಿ ಆಡ್ತಿದ್ದ ಮಾತು ನಿನ್ನ ಹುಸಿಕೋಪಕ್ಕೆ ನಾ ಬೇಡುತ್ತಿದ್ದ ಕ್ಷಮೆ ನಿಮಿತ್ತಾನೇ ಸಲುಗೆ ಬೆಳೆಸ್ಕೊಂಡ್ವಿ.

“ಆ ನಿನ್ನ ಹುಸಿಮುನಿಸು ಕ್ಷಣಮಾತ್ರಕ್ಕೆ ಸೀಮಿತವಾಗುವುದೇ ಆದರೆ, ಅದಕ್ಕಿಂತ ಬಲುಸೊಗಸು ಬೇರೊಂದಿಲ್ಲ’ ಅಂತ ನಾನ್‌ ಹೇಳ್ತಿದ್ದಿದ್ದು ಇದ್ಕೆàನೇ. ಪ್ರತಿಸಲ ಕೋಪಿಸ್ಕೊಂಡಾಗ್ಲೂ “ನಂಗೆ ನೀನ್‌ ಬೇಡ ಹೋಗು’ ಅನ್ನೋ ಒರಟು ಮಾತಲ್ಲಿ “ನೀನಿಲೆªà ನಂಗೇನೂ ಇಲ್ಲ. ಪ್ಲೀಸ್‌, ನನ್ನ ಬಿಟ್‌ ಹೋಗ್ಬೇಡ್ವೋ’ ಅನ್ನೋ ಮೃದುವಾದ ನಿವೇದನೆಯೂ ನಿನ್ನ ಮಾತಲ್ಲಿ ಇರಿ¤ತ್ತು.

 ನಿಜ ಹೇಳ್ಬೇಕಂದ್ರೆ, ನಿನ್ಮೆಲೆ ಮನಸಾಗಿದ್ದು ಆ ಸ್ಟೇಜಿನ ಮೇಲೆ ನಿನ್ನ ಡ್ಯಾನ್ಸ್‌ ನೋಡಿದ್‌ ದಿನಾನೇ. ಹಾnಂ, ಡ್ಯಾನ್ಸ್‌ ಅನ್ನೋ ದ್ಕಿಂತ ನಿನ್ನ ಮುಖದ ಹಾವಭಾವ ನೋಡೀನೇ ಅನ್ನಬಹುದು. ಹಾಗಂತ ನಾ ಬರೀ ನಿನ್ನ ಸೌಂದರ್ಯೋಪಾಸಕ ಮಾತ್ರ ಅಲ್ಲ. ನಿನ್ನ ಮುದ್ದಾದ ಅಕ್ಷರ, ನಿನ್‌ ಡ್ಯಾನ್ಸು, ನಿನ್‌ ಪೇಂಟಿಂಗ್ಸ್‌, ನಿನ್‌ ತುಂಟಾಟ, ನಿನ್‌ ಮೆಚೂರಿಟಿ, ನಿನ್‌ ವಿದ್ಯೆ ಎಲ್ಲಾನೂ ಕಂಡು ನಯವಾಗಿ ಅಸೂಯೆಪಡ್ತೀನಿ. ಆ ಅಸೂಯೇಲೂ ಇದೆಲ್ಲಾ ಇನ್ಮುಂದೆ ನಂದೇ ಅಲ್ವಾ ಅನ್ನಿಸಿ ಸಖತ್‌ ಖುಷಿ ಆಗುತ್ತೆ.

ಸ್ನೇಹ ಪ್ರೀತಿಯಾಗಿ ತಿರುಗಿದ್ಮೇಲೆ ಒಟ್ಟಿಗೆ ಕಳೆದ ಕ್ಷಣಗಳು ಲೆಕ್ಕಕ್ಕೆ ಸಿಗ್ದೆ ಇರೋವಷ್ಟಾದ್ರೂ ತಿರುಗಿ ನೋಡಿದ್ರೆ ಸೆಕೆಂಡಿಗೂ ಚಿಕ್ಕದೇನೋ ಅನ್ಸಿಬಿಡುತ್ತೆ. ನೀ ಕೈಗೆ ಕಟ್ಟಿದ ದಾರ, ನಿನ್ನ ಮುದ್ದಾದ ಅಕ್ಷರದಲ್ಲಿನ ಪ್ರೇಮಪತ್ರ, ನಿನ್ನ ಕೈಯ್ನಾರೆ ಅದ್ಭುತವಾಗಿ ಮೂಡಿಬಂದ ಚಿತ್ರಗಳು ನನ್ನೊಂದಿಗೆ ನನ್ನುಸಿರನ್ನೂ ಕದೀತಾ ನನ್‌ ಜೊತೇನೇ ಬದುಕ್ತವೆ. ಈ ನಡುವೆ ತುಂಬಾ ಸಿಟ್ಟು ಮಾಡ್ಕೊಳ್ತಾ ಇದ್ದೀನಿ. ನಿನ್ನ ಕಳ್ಕೊಳ್ತೀನೇನೋ ಅನ್ನೋ ಭೀತಿಯೇ ಅದಕ್ಕೆಲ್ಲಾ ಕಾರಣ ಇರಬಹುದು ಅನ್ಸುತ್ತೆ. ನಿಂಗೆ ಏನೇ ಕೇಳ್ಬೇಕು, ಏನೋ ಹೇಳ್ಬೇಕು ಅನ್ಸಿದ್ರೂ ಮೊದು ನೆನಪಾಗೋ ವ್ಯಕ್ತಿ ನಾನಾಗ್ಬೇಕು ಅನ್ನೋ ಆಸೆ ನನ್ನದು. ಅಕಸ್ಮಾತ್‌ ನೀನು ನನ್ನಿಂದ ದೂರ ಆದ್ರೆ ನಾನ್‌ ಅದ್ಹೇಗೆ ಖುಷಿಯಿಂದ ಇರಿನಿ? ಯೋಚೆ° ಮಾಡಿದ್ದೀಯಾ ಇಲ್ಲಿ ನನ್‌ ಪರಿಸ್ಥಿತಿ ಹೇಗಿರುತ್ತೆ ಅಂತ? 

ಇಂದು ನಿನ್ನ ಬರ್ತ್‌ಡೇ. ನೀನ್‌ ನಿನ್‌ ಬಗ್ಗೆ ಕಟ್ಕೊಂಡಿರೋ ಎಲ್ಲಾ ಕನಸೂ ನನಸಾಗ್ಲಿ. ನಿನ್‌ ಆರೋಗ್ಯ ಚೆನ್ನಾಗಿರ್ಲಿ. ನನ್‌ ಸಾಂಗತ್ಯದ ಬಯಕೆ ನಿನ್ನಲ್ಲಿ ನೂರ್ಮಡಿಯಾಗ್ಲಿ ಅಂತ ಬಯಸ್ತೀನಿ. ಹಾಗೇ ನಿಮ್ಮಪ್ಪ ಅಮ್ಮಂಗೆ ಥ್ಯಾಂಕ್ಸ್‌ ಹೇಳು, ನಂಗೆ ನಿನ್ನಂಥ ಕಿನ್ನರಿನ ಸೃಷ್ಟಿ ಮಾಡಿದ್ಕೆ…
ಐ ವಿಷ್‌ ಯೂ ಹ್ಯಾಪಿ ಬರ್ತ್‌ಡೇ … ನಿನಗಾಗಿ ಸರ್‌ಪ್ರçಸ್‌ಗಳು ಕಾಯ್ತಾ ಇವೆ.. ಬೇಗ ಓಡೋಡಿ ಬಾ..

ಅರ್ಜುನ್‌ ಶೆಣೈ

ಟಾಪ್ ನ್ಯೂಸ್

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ

Loksabha election; ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ

Temperature ರಾಜ್ಯದ 10 ಜಿಲ್ಲೆಗಳಲ್ಲಿ ಬೀಸಲಿದೆ ಬಿಸಿಗಾಳಿ

Temperature ರಾಜ್ಯದ 10 ಜಿಲ್ಲೆಗಳಲ್ಲಿ ಬೀಸಲಿದೆ ಬಿಸಿಗಾಳಿ

6-court

Mangaluru: ಬಾಲಕಿಯನ್ನು ಅಪಹರಿಸಿ ಅತ್ಯಾಚಾರ; ಅಪರಾಧಿಗೆ 10 ವರ್ಷ ಕಠಿನ ಕಾರಾಗೃಹ ಶಿಕ್ಷೆ

ಸಂಪತ್ತು ಹಂಚಿಕೆ ಬಗ್ಗೆ ನಾವೆಲ್ಲಿ ಹೇಳಿದ್ದೇವೆ: ಖರ್ಗೆ ಪ್ರಶ್ನೆ

ಸಂಪತ್ತು ಹಂಚಿಕೆ ಬಗ್ಗೆ ನಾವೆಲ್ಲಿ ಹೇಳಿದ್ದೇವೆ: ಖರ್ಗೆ ಪ್ರಶ್ನೆ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ

Loksabha election; ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ

Temperature ರಾಜ್ಯದ 10 ಜಿಲ್ಲೆಗಳಲ್ಲಿ ಬೀಸಲಿದೆ ಬಿಸಿಗಾಳಿ

Temperature ರಾಜ್ಯದ 10 ಜಿಲ್ಲೆಗಳಲ್ಲಿ ಬೀಸಲಿದೆ ಬಿಸಿಗಾಳಿ

6-court

Mangaluru: ಬಾಲಕಿಯನ್ನು ಅಪಹರಿಸಿ ಅತ್ಯಾಚಾರ; ಅಪರಾಧಿಗೆ 10 ವರ್ಷ ಕಠಿನ ಕಾರಾಗೃಹ ಶಿಕ್ಷೆ

ಸಂಪತ್ತು ಹಂಚಿಕೆ ಬಗ್ಗೆ ನಾವೆಲ್ಲಿ ಹೇಳಿದ್ದೇವೆ: ಖರ್ಗೆ ಪ್ರಶ್ನೆ

ಸಂಪತ್ತು ಹಂಚಿಕೆ ಬಗ್ಗೆ ನಾವೆಲ್ಲಿ ಹೇಳಿದ್ದೇವೆ: ಖರ್ಗೆ ಪ್ರಶ್ನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.