ನಿನ್‌ ಮಾತು ಕೇಳದಿದ್ರ ಮನಸ್ಸಿಗೆ ಖುಷಿ ಇರೂದಿಲ್ಲ…


Team Udayavani, May 15, 2018, 1:50 PM IST

n-5.jpg

ಸಿಟ್ಟ ತರಿಸಿದ ನಂತ್ರ ಸಮಾಧಾನ ಮಾಡೋ ಕಲಾ ಮಾತ್ರ ನಿನಗಷ್ಟ ಗೊತ್ತದ ನೋಡ. ಬಣ್ಣಬಣ್ಣದ್ದ ಮಾತ, ಮಾತಾಡಾಕತ್ತಿ ಅಂದ್ರ, 100 ಡಿಗ್ರಿ ಸೆಲ್ಸಿಯಸ್‌ ಕುದಿಯುವ ಸಿಟ್ಟ ಕೂಡ ತಣ್ಣಗ ಅಂದ್ರ ತಣ್ಣಗ ಆಗತೈತಿ. 

ಆತ್ಮೀಯ ಮಾತುಗಾರ,
 ಅಲ್ಲ, ಹೆಂಗ ಮಾತಾಡಬೇಕ ಅಂತ ನಿನ್ನಿಂದ ಕಲಿಬೇಕ ನೋಡ. ಅಷ್ಟ ಮೋಡಿ ಮಾಡತಿ, ಮಾತಿನ್ಯಾಗ ನೀ. ಆ ದೇವರ, ಮಾತಿನ ಭಂಡಾರ ಮಾತ್ರ ಬಾಳ ಕೊಟ್ಟಾನ ನಿನಗ. ಫೋನ್‌ ಮತ್ತ ಮೆಸೇಜ್‌ಗೆ ರಿಪ್ಲೆ„ ಮಾಡಲಿಲ್ಲಂದ್ರ ನನಗ ಸಿಟ್ಟ ಬರತೈತಿ ಅಂತ ಗೊತ್ತೈತಿ ನಿನಗ. ಅಂದ್ರೂ ನನ್ನ ಕಾಡೋದ ಬಿಡಲ್ಲ ನೀ. ಯಾಕ ರಿಪ್ಲೆ„ ಮಾಡಲ್ಲ? ಜಗತ್ತನ್ಯಾಗ ನೀ ಒಬ್ಬನ ಕೆಲಸಾ ಮಾಡತಿಯೇನ್‌? ಬೇಕಾದವರಿಗೆ ಸ್ವಲ್ಪಾದರೂ ವ್ಯಾಳಾ ತಗೊಂಡ, ಕಾಲ್‌, ಮೆಸೇಜ್‌ ಮಾಡಬೇಕ. ಯಾವಾಗರ ಒಮ್ಮೊಮ್ಮೆ ಆಗಿದ್ರ ಸುಮ್ಮನಿರತಿ¨ªೆ, ಆದ್ರ ಬಾಳ ಸತಿ ಉತ್ತರಾ ಕೊಡಲ್ಲ. ಆನಂದ ಆಗತದ ಏನ ನಿಂಗ ಕಾಡೊದ್ರಾಗ? ಸಿಟ್ಟ ತರಿಸಿದ ನಂತ್ರ ಸಮಾಧಾನ ಮಾಡೋ ಕಲಾ ಮಾತ್ರ ನಿನಗಷ್ಟ ಗೊತ್ತದ ನೋಡ. ಬಣ್ಣಬಣ್ಣದ್ದ ಮಾತ, ಮಾತಾಡಾಕತ್ತಿ ಅಂದ್ರ, 100 ಡಿಗ್ರಿ ಸೆಲ್ಸಿಯಸ್‌ ಕುದಿಯುವ ಸಿಟ್ಟ ಕೂಡ ತಣ್ಣಗ ಅಂದ್ರ ತಣ್ಣಗ ಆಗತೈತಿ. ಅಂಥಾ ಮಾತಿನ ಸರದಾರ ನೋಡ ನೀ.

ಜಗಳ ಅತಿರೇಕಕ್ಕ ಹೋಗಿ, ನಾ ಮಾತಾಡೋದ ಬಿಟ್ಟಿನೀ ಅಂದ್ರ, “ದೇವ್ರ, ಸಿಟ್ಟಾಗತಿ ಸಿಟ್ಟಾಗ, ಬೈಯತಿ ಬೈ. ಆದ್ರ ನನ್ನ ಜೊತಿ ಮಾತ ಮಾತ್ರ ಬಿಡಬ್ಯಾಡ. ನಿನ್ನ ಮಾತ ಕೇಳದಿದ್ರ ಮನಸ್ಸಿಗೆ ಖುಷಿ ಇರುದಿಲ್ಲಲೇ… ಜಗಳಾ ತಗದ್ರೂ ನನ್ನ ಜೊತಿ ತಗಿ, ಆದ್ರ ಮಾತ ಬಿಡಬ್ಯಾಡ. ಮಾತ ಬಂದ್‌ ಅಂದ್ರ, ನನ್ನ ಉಸರ ನಿತಂಗ ಆಗತೈತಿ. ಹಂಗ ಮಾಡಬ್ಯಾಡ. ಕೆಲಸ ಅಂದ್ರ ಸ್ವಲ್ಪ ಬಿಜಿ ಇರತೇನಿ, ಅನುಸರಿಸಿಕೊ. ಸಂತೋಷದಿಂದ ಮಾತಾಡಲೇ ನನ್ನ ಜೊತಿ’ ಅಂದ ಅಗದೀ ಕರುಣಾ ಬರೋವಂಗ ಮಾತಾಡತಿ. ಬಾಳ ಕಾಡಬ್ಯಾಡ, ನನ್ನ ಭಾವನೆಗಳಿಗೆ ಕಿಮ್ಮತ್ತ ಕೊಡುತ ಬಾ ಅಂದ್ರ, “ಅಯ್ಯೋ ಹುಚ್ಚಿ, ನಿನ್ನಲ್ಲಿ ನನಗ ಬಾಳ ಸೇರಿದ್ದ, ನಿನ್ನ ಭಾವನೆಗೊಳ. ನಾ ಯಾಕ ನಿನ್ನ ಭಾವನೆಗೊಳ ಜೊತಿ ಆಟಾ ಆಡ್ಲಿ? ನನ್ನ ನಿನ್ನ ಪ್ರೀತಿ ತಳಪಾಯ ಈ ಭಾವನೆಗೊಳನ, ಇವಿಲ್ಲದ ಜೀವನ ನಡೆಯೊಲ್ಲ. ಮ್ಯಾಲ ನನ್ನ ಬಿಟ್ಟ ಯಾರ ಜೊತಿ ಜಗಳಾ ತಗಿತಿ ನೀ? ತಗಿ ಎಷ್ಟ ಜಗಳ ಬೇಕೊ ಅಷ್ಟ. ನಾ ಏನೂ ಅನ್ನಲ್ಲ. ನೀನ ಕರೆಕ್ಟ್. ಆತಿಲೋ? ಸಾಯೋವರೆಗೂ ನಾ ನಿನ್ನ ಜೊತಿ ಮಾತಾಡಬೇಕ ಅಷ್ಟ’ ಅಂದ ನಾ ಅಳುವಂಗ ಮಾಡತಿ.

ಹೌದ, ನೀ ಹೇಳಿದಂಗ ನನಗ ಸಿಟ್ಟ ಬಾಳ. ತಡಕೊಳ್ಳಾಕ ಆಗಲ್ಲ. ಆದ್ರ ನಿನ್ನ ಮಾತು ಏನ್‌ ಅದಾವಲಾ ಅವ, ಏಕದಮ್‌ ನನ್ನ ಸಿಟ್ಟ ಕರಗಿಸಿ ಬಿಡತಾವ ನೋಡ. ಅದಕ್ಕ ಅನ್ನಾತೇನಿ, ಮಾತಿನ ಭಂಡಾರ ನಿನಗ ಒಲದೈತಿ, ಹಂಗಾಗಿ ನನ್ನ ಸಮಾಧಾನ ಮಾಡೊದ್ರಾಗ ನಿಂದ ಎತ್ತಿದ ಕೈ.
ನಿನ್ನ ಮಾತಗಳಿಗೆ ಮರುಳಾದಕಿ
ಪೂವು

ಮಾಲಾ ಮ. ಅಕ್ಕಿಶೆಟ್ಟಿ

ಟಾಪ್ ನ್ಯೂಸ್

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-aaaa

Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.