ಹೋಟೆಲ್‌ ಮಾಣಿಯಿಂದ ಹೈಸ್ಕೂಲ್‌ ಶಿಕ್ಷಕನಾದುದು


Team Udayavani, Mar 10, 2020, 5:20 AM IST

ಹೋಟೆಲ್‌ ಮಾಣಿಯಿಂದ ಹೈಸ್ಕೂಲ್‌ ಶಿಕ್ಷಕನಾದುದು

ಈ ಜೀವನ ಬಲು ವಿಚಿತ್ರ .ಬದುಕಿನಲ್ಲಿ ಅಂದುಕೊಂಡ ಯಾವುದೇ ಕಾರ್ಯ ಆಗುತ್ತಿದೆ ಎನ್ನುವಾಗಲೇ ಅಂದುಕೊಂಡಿರದ ಹಲವಾರು ಕಾರ್ಯಗಳು ಜರುಗುತ್ತವೆ. ನಾನು ಪಿ.ಯು.ಸಿ ಪ್ರವೇಶ ಪಡೆಯುವವರಿಗೆ ಭವಿಷ್ಯದಲ್ಲಿ ಏನಾಗಬೇಕೆಂಬ ಸ್ಪಷ್ಟ ಪರಿಕಲ್ಪನೆಯಿರಲಿಲ್ಲ. ಕಾರಣ, ಮನೆಯ ಬಡತನ. ಕಲಿಕೆಯ ಹಾದಿಯಲ್ಲಿ ಎಲ್ಲಿ ಶಿಕ್ಷಣ ಮೊಟಕು ಗೊಳ್ಳುವುದೇ ಎಂಬ ಆತಂಕದಲ್ಲಿಯೇ ಕಾಲೇಜು ಮೆಟ್ಟಿಲು ಏರಿದ್ದೆ. ಸಹಪಠ್ಯ ,ಇನ್ನಿತರ ಚಟುವಟಿಕೆಗಳಲ್ಲಿ ಭಾಗವಹಿಸಿ, ಉತ್ತಮ ಪ್ರದರ್ಶನ ನೀಡುತ್ತಿದ್ದೆ.ನನ್ನ ವಾಕ್‌ ಚಾತುರ್ಯ ಕಂಡು ನಿನಗೆ ಶಿಕ್ಷಕ ವೃತ್ತಿ ಹೇಳಿ ಮಾಡಿಸುವಂತಿದೆ. ನಿನ್ನಲ್ಲಿನ ಸಹನೆ, ತಾಳ್ಮೆ, ಕಲಿಯುವ ಕಲಿಸುವ ಇಚ್ಛೆ ಅದಕ್ಕೆ ಪೂರಕ ಎಂದೆಲ್ಲಾ ಒಂದಷ್ಟು ಜನ ಸಲಹೆ ನೀಡಿದರು. ಅದೇ ವೇಳೆಗೆ ಟಿ.ಸಿ ಎಚ್‌ ಕಲಿತರೆ ನೌಕರಿ ಗ್ಯಾರಂಟಿ ಎಂಬ ನಂಬಿಕೆ ಬೆಳೆದಿತ್ತು. ಕಾರಣ, ಶಿಕ್ಷಣ ಮಂತ್ರಿಗಳಾಗಿದ್ದ ಗೋವಿಂದೇಗೌಡರು ಒಂದು ಲಕ್ಷಕ್ಕೂ ಅಧಿಕ ಶಿಕ್ಷಕರನ್ನು ನೇಮಕ ಮಾಡಿಕೊಂಡಿದ್ದರು.

ಹೀಗಿರಲು ನಾನೂ ಪಿ.ಯು.ಸಿ ಮುಗಿಸಿ, ಟಿ.ಸಿ.ಎಚ್‌ ಮಾಡಿ ಪ್ರಾಥಮಿಕ ಶಾಲಾ ಶಿಕ್ಷಕ ಆಗಬೇಕೆಂಬ ಬಯಕೆ ಹುಟ್ಟಿತು. ಆಗ ಟಿ.ಸಿ.ಎಚ್‌ ಸರಕಾರಿ ಕೋಟಾದಡಿ ಸೀಟು ಸಿಗಲು ತೀವ್ರ ಸ್ಪರ್ಧೆಯಿತ್ತು. ತುಂಬಾ ಕಷ್ಟ ಪಟ್ಟು ಓದಿದೆ. ದುರಾದೃಷ್ಟ 0.3 ಅಂಕಗಳ ಅಂತರದಲ್ಲಿ ನನಗೆ ಟಿ.ಸಿ ಎಚ್‌ ಸೀಟು ಸಿಗಲಿಲ್ಲ. ಎರಡನೆ ಪಟ್ಟಿಯಲ್ಲಿ ಸಿಗಬಹುದೆಂಬ ಆಶಾವಾದದಲ್ಲಿ ಬಿ.ಎ ಪ್ರವೇಶ ಪಡೆಯಲಿಲ್ಲ. ಆಗಲೂ ಕೇವಲ 0.1 ಅಂಕಗಳ ಅಂತರದಲ್ಲಿ ಸೀಟು ಸಿಗಲಿಲ್ಲ. ಇತ್ತ ಶಿಕ್ಷಣ ನಿಂತಿತು.

ಶಿಕ್ಷಕನಾಗಬೇಕೆಂಬ ಆಸೆ ತೊರೆದು ಮಂಗಳೂರು,ಉಡುಪಿ, ಗೋವಾ ಇತರೆಡೆ ಕೂಲಿ ಕೆಲಸಕ್ಕೆ ಹೋದೆ. ಈ ಅವಧಿಯಲ್ಲಿ ಹತ್ತಾರು ಕೆಲಸ ಮಾಡಿದೆ. ಒಂದು ವರ್ಷ ಆದ ಬಳಿಕ ಹಲವರ ಹೇಳಿಕೆಯಂತೆ ಬಿ.ಎಗೆ ಪ್ರವೇಶ ಪಡೆದೆ. ಮನೆಯಲ್ಲಿ ನೇಕಾರಿಕೆ ಕಾರ್ಯ ಮಾಡುತ್ತಾ ಓದಿ ಪದವಿಯನ್ನು ಅತ್ಯುನ್ನತ ದರ್ಜೆಯಲ್ಲಿ ಪಾಸಾದೆ.

ಮುಂದೇನು? ಬಿ.ಇಡಿ ಮಾಡಬೇಕೆಂಬ ಆಸೆ ಚಿಗುರಿತು. ತುಮಕೂರಿನ ಸಿದ್ದಗಂಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸರಕಾರಿ ಕೋಟಾದಡಿ ಸೀಟು ಸಿಕ್ಕಿತು. ಸಿದ್ದಗಂಗಾ ಮಠದಲ್ಲಿ ಉಳಿದು ಅತ್ಯಂತ ಕಡಿಮೆ ಖರ್ಚಿನಲ್ಲಿ ಬಿ.ಇಡಿ ಓದಿ ಹೆಚ್ಚಿನ ಅಂಕ ಪಡೆದು ಪಾಸಾದೆ. ಈ ವೇಳೆಗೆ ಮನೆಯಲ್ಲಿ ಎಂಥ ಬಡತನವಿತ್ತು ಅಂದರೆ, ಬಿ.ಇಡಿ ಮುಗಿಸಿ ಊರಿಗೆ ಹೋಗಿ ಯಾವ ಕೆಲಸವಾದರೂ ಸರಿ ಮಾಡಬೇಕೆಂದು ನಿರ್ಧರಿಸುವಷ್ಟು. ಬಾಗಲಕೋಟೆಯ ಎಂ.ಬಿ.ಬಿ ಎಸ್‌ ಕಾಲೇಜು ಆವರಣದಲ್ಲಿರುವ ಬಸವೇಶ್ವರ ಕ್ಯಾಂಟಿನ್‌ನಲ್ಲಿ ಸಪ್ಲಾಯರ್‌ ಆಗಿ ಕೆಲಸಕ್ಕೆ ಸೇರಿದೆ. ತಿಂಗಳಿಗೆ ಊಟ, ವಸತಿ ಸಹಿತ 1,200 ರೂಪಾಯಿ ನನ್ನ ಪಗಾರ. ಕಷ್ಟದ ಕೆಲಸ. ಇಷ್ಟಪಟ್ಟು ಮಾಡಿದೆ. ಕೆವಲ ಒಂದು ತಿಂಗಳ ಒಳಗೆ ಉತ್ತಮ ಮಾಣಿ ಎಂದು ಹೆಸರು ಗಳಿಸಿದೆ.

ಗಿರಾಕಿಗಳ ಮಾಲೀಕರ ನೆಚ್ಚಿನ ಸಪ್ಲಾಯರ್‌ ಆದೆ. ನನ್ನ ವಿದ್ಯಾರ್ಹತೆ ತಿಳಿದು. ಕೆಲವರು ಅನುಕಂಪ ತೋರಿದರು. ಇನ್ನು ಕೆಲವರು ಸಲಹೆ ಕೊಟ್ಟರು. ಹೀಗಿರಲು, ಶಿಕ್ಷಕರ ನೇಮಕಕ್ಕೆ ಅರ್ಜಿ ಕರೆಯುತ್ತಾರೆ ಎಂಬ ಸುದ್ದಿ ಸಿಕ್ಕಿತು. ಹೋಟೆಲ್‌ ಮಾಣಿಯಾಗಿದ್ದುಕೊಂಡೇ ಕೆಲಸದ ನಂತರ ಸಿಗುವ ಒಂದೆರಡು ತಾಸು ಓದಿದೆ. ಪರೀಕ್ಷೆ ಬರೆದೆ. ಫ‌ಲಿತಾಂಶ ನಾನು ಪ್ರೌಢ ಶಾಲಾ ಶಿಕ್ಷಕನಾಗಿ ಆಯ್ಕೆಯಾಗಿದ್ದೆ. ಆ ಹುದ್ದೆ ಹಲವರಿಗೆ ಸಣ್ಣದು ಎನಿಸಬಹುದು. ಅವತ್ತು ನಾನಿದ್ದ ಪರಿಸ್ಥಿತಿಯಲ್ಲಿ ಅದೇ ನಂಗೆ ದೊಡ್ಡದು. ಇಂದು ಅದೇ ಹುದ್ದೆಯಲ್ಲಿ ಸಾರ್ಥಕ ಸೇವೆ ಸಲ್ಲಿಸುತ್ತಿರುವೆ. ಮಾಡುವ ಕೆಲಸದಲ್ಲಿ ನಿಷ್ಟೆ,ನಿಯತ್ತು,ಪ್ರಾಮಾಣಿಕತೆ ಇದ್ರೆ ಯಶಸ್ಸು ಖಚಿತ. ಹೋಟೆಲ್‌ ಸಪ್ಲಾಯರನಿಂದ ಹೈಸ್ಕೂಲ್‌ ಶಿಕ್ಷಕನಾಗಿ ಬದಲಾದೆನಲ್ಲ; ಆವರೆಗಿನ ನನ್ನ ಜೀವನದ ಹಾದಿ ನೆನಸಿಕೊಂಡರೆ ಈಗಲೂ ಸಂತಸ ಎನಿಸುತ್ತದೆ.

-ರಂಗನಾಥ ಎನ್‌ ವಾಲ್ಮೀಕಿ

ಟಾಪ್ ನ್ಯೂಸ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.