ತಲೆ ಚಕ್ಕರ್‌ ಬರ್ತಿದೆ…


Team Udayavani, Aug 14, 2018, 6:00 AM IST

8.jpg

ಅದು 1998. ನಾನಾಗ 6ನೇ ತರಗತಿ ಓದುತ್ತಿದ್ದೆ. ನನ್ನ ತಮ್ಮನೂ ಕೂಡ ನನಗೆ ಕ್ಲಾಸ್‌ ಮೇಟ್‌ ಆಗಿದ್ದ. ಈಗಿರುವಂತೆ ನೂರೆಂಟು ಟಿವಿ ಚಾನೆಲ್‌ಗ‌ಳು ಆಗ ಇರಲಿಲ್ಲ. ನಮ್ಮ ಮನರಂಜನೆಗೆ ಡಿಡಿ 1 ಚಾನೆಲ್‌ ಒಂದೇ ಆಧಾರ. ರವಿವಾರಕ್ಕೊಮ್ಮೆ ಬರುವ ಸಿನಿಮಾ ನೋಡಲು ಕಾತುರದಿಂದ ಕಾಯುತ್ತಿದ್ದೆವು. ಅದೇ ಚಾನೆಲ್‌ನಲ್ಲಿ ಪ್ರತಿ ಬುಧವಾರ ರಾತ್ರಿ 9ಕ್ಕೆ “ಮಿಸ್ಟರ್‌ – ಮಿಸೆಸ್‌ ಗುಂಡಣ್ಣ’ ಎನ್ನುವ ಹಾಸ್ಯ ಧಾರಾವಾಹಿ ಪ್ರಸಾರವಾಗುತ್ತಿತ್ತು. ದ್ವಾರಕೀಶ್‌, ಸಾಧುಕೋಕಿಲ ಅವರ ನಟನೆಯ ಆ ಧಾರಾವಾಹಿ ನಮಗೆ ತುಂಬಾ ಅಚ್ಚುಮೆಚ್ಚು. ಆದರೆ, ಅಪ್ಪ ಅಷ್ಟೊತ್ತಲ್ಲಿ ಟಿವಿ ನೋಡೋಕೆ ಬಿಡುತ್ತಿರಲಿಲ್ಲ. ಅದೇ ಧಾರಾವಾಹಿ ಶುಕ್ರವಾರ ಮಧ್ಯಾಹ್ನ 12ಕ್ಕೆ ಮರುಪ್ರಸಾರವಾಗುತ್ತಿತ್ತು. ಅದನ್ನು ನೋಡಲೇಬೇಕೆಂಬ ಹಂಬಲದಿಂದ ಒಮ್ಮೆ ನಾನು ನನ್ನ ತಮ್ಮ ಸೇರಿ ಒಂದು ಚಕ್ಕರ್‌ವ್ಯೂಹ ರಚಿಸಿದೆವು. 

ಒಂದು ಶುಕ್ರವಾರ ಶಾಲೆಯಲ್ಲಿ ಮೊದಲೆರಡು ತರಗತಿಗಳು ಮುಗಿದಿದ್ದವು. 3ನೇ ಪಿರಿಯಡ್‌ ತೆಗೆದುಕೊಳ್ಳಲು ಹಿಂದಿ ಟೀಚರ್‌ ತರಗತಿಗೆ ಬಂದರು. ಇನ್ನೇನು ಅವರು ಪಾಠ ಶುರುಮಾಡುತ್ತಾರೆ ಎನ್ನುವಷ್ಟರಲ್ಲಿ ನನ್ನ ತಮ್ಮ ಎದ್ದು ನಿಂತು “ಮೇಡಂ, ನಮ್ಮಣ್ಣಂಗೆ ಹುಷಾರಿಲ್ಲ. ತಲೆ ಚಕ್ಕರ್‌ ಬರ್ತಿದೆ’ ಅಂತೇಳಿ ಸುಮ್ನೆ ಕೂತ. ಟೀಚರ್‌ ನನ್ನತ್ರ ಬಂದು, “ಪಾಠ ಕೇಳ್ಳೋಕೆ ಆಗುತ್ತೋ ಅಥವಾ ಮನೆಗೆ ಹೋಗ್ತಿಯೋ?’ ಅಂತ ಕೇಳಿದರು. ಅವರು ಕೊಟ್ಟ ಈ ಬಂಪರ್‌ ಆಫ‌ರ್‌ ಕೇಳಿ ನಾನು ಮನದಲ್ಲೇ ಕುಣಿದಾಡಿ, “ಮೇಡಂ, ತುಂಬಾ ತಲೆ ಸುತ್ತುತ್ತಾ ಇದೆ. ಕೂತ್ಕೊಳಕ್ಕೆ ಆಗಲ್ಲ. ಮನೆಗೆ ಹೋಗ್ತಿನಿ’ ಅಂತ ಎದ್ದು ನಿಂತೆ. ಮೊದಲ ಹೆಜ್ಜೆಯಲ್ಲೇ ಬೀಳುವಂತೆ ನಟಿಸಿ ಅಲ್ಲೇ ಕುಸಿದು ಕೂತೆ. 

ಇದನ್ನು ನೋಡಿದ ಮೇಡಂ, “ನೀನೊಬ್ಬನೇ ಹೋಗಬೇಡ ಜೊತೇಲಿ ನಿನ್ನ ತಮ್ಮನ್ನ ಕರೆದುಕೊಂಡು ಹೋಗು’ ಎಂದು ಹೇಳಿದ ಕೂಡಲೇ ನನ್ನ ತಮ್ಮ ನನ್ನ ಪಕ್ಕ ಹಾಜರಾದ. ಒಂದೇ ಏಟಿಗೆ ಎರಡು ಹಕ್ಕಿ ಹೊಡೆದವರಂತೆ ಇಬ್ಬರೂ ಹಿಗ್ಗಿನಿಂದ ಶಾಲೆ ಆವರಣದಿಂದ ಮಾಯವಾಗಿ ಮನೆಗೆ ತಲುಪಿ, ಅಮ್ಮನಿಗೆ ಇನ್ನೊಂದು ಸುಳ್ಳು ಹೇಳಿ ಖುಷಿಯಾಗಿ ಧಾರಾವಾಹಿ ನೋಡಿದೆವು. ಹೀಗೆ ಕ್ಲಾಸಿಗೆ ಚಕ್ಕರ್‌ ಹೊಡೆದು, ನಮ್ಮಿಷ್ಟದ ಧಾರಾವಾಹಿ ನೋಡಿದ್ದು, ಆಗಾಗ ಮನಸ್ಸಿಗೆ ಕಚಗುಳಿ ಇಡುತ್ತಾ ನೆನಪಿನ ಅಂಗಳದಲ್ಲಿ ಹಾಗೆಯೇ ಉಳಿದುಕೊಂಡಿದೆ.

ಶಿವರಾಜ್‌ ಬಿ.ಎಲ್‌. ದೇವದುರ್ಗ

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.