- Saturday 07 Dec 2019
ಹೇ.. ಮೌನಿಯೇ ಉತ್ತರಿಸುವೆಯಾ ಬಲು ಬೇಗನೇ..
Team Udayavani, Nov 12, 2019, 5:45 AM IST
ಮುದ್ದಿನ ಹುಡುಗಿ ಚೆಂದ ,ಮೌನದ ರೂಪವೇ ಅಂದ. ಚಂದಕ್ಕೆ ಚಂದ ಅಂತೆ ನಿನ್ನ ಅಂದವೂ… ಈ ಹಾಡು, ನಿನ್ನನ್ನು ನೋಡಿದ ಕೂಡಲೇ ಮನದ ಮೂಲೆಯಲ್ಲಿ ಪಲ್ಲವಿಸುತ್ತದೆ.ಮೌನಂ ಸಮ್ಮತಿ ಲಕ್ಷ್ಮಣಂ ಎಂಬ ಮಾತಿನಂತೆ,ನಿನ್ನ ಪ್ರತಿಯೊಂದು ಮೌನವೂ ಸಾವಿರ ಅರ್ಥವನ್ನು ನೀಡಬಲ್ಲದು.
ಹೌದು, ನಿನ್ನ ಪರಿಚಯ ನಿನ್ನೆ ಮೊನ್ನೆಯದಲ್ಲ. ಬರೋಬ್ಬರಿ ಐದು ವರ್ಷಗಳಷ್ಟು ಹಳೆಯದು. ಯಾವತ್ತೂ ನಿನ್ನ ನೋಡಿದೆನೋ ಅವತ್ತೇ ನನ್ನ ಎದೆಯಾಳದಲ್ಲಿ ಪ್ರೀತಿಯ ಮೊದಲ ಪಲ್ಲವಿ ಚಿಗುರಿತು. ಅಲ್ಲಿಂದಲೇ ಶುರುವಾಯಿತು ನೋಡು, ನಿನ್ನ ಮಾತನಾಡಿಸಲೆಂದೇ ದಿನಕ್ಕೊಂದು ನೆಪವಿಡುತ್ತಿದ್ದೆ. ದಿನಕ್ಕೊಂದು ಬಗೆಯ ಸರ್ಕಸ್ ಮಾಡಿ ನಿನ್ನ ಮನಸ್ಸನ್ನು ಗೆಲ್ಲಲು ಪ್ರಯತ್ನಿಸುತ್ತಿದ್ದೆ. ಗೊತ್ತಿಧ್ದೋ ಗೊತ್ತಿಲ್ಲದೆಯೋ ನಿನ್ನ ಪ್ರೀತಿ ಎಂಬ ಮಾಯಾಜಾಲಕ್ಕೆ ಬಿದ್ದಿದ್ದೆ. ಆದರೆ, ಅದನ್ನೆಲ್ಲವೂ ಅರಿಯದಷ್ಟು ತೀರಾ ಮುಗೆª ನೀನಲ್ಲ. ನಿನ್ನ ಮುಗª ನಗು ಕೆಲವೊಮ್ಮೆ ನನ್ನೆಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುತ್ತಿತ್ತು. ಇಷ್ಟು ವರ್ಷಗಳ ನಂತರವೂ ನನ್ನನ್ನು ಕಾಯಿಸುವ ಹಠ ಯಾಕೆ ಎಂಬುದೇ ನನಗೆ ತಿಳಿಯಲಿಲ್ಲ. ಇಲ್ಲಿಯವರೆಗೂ ನನ್ನ ತಾಳ್ಮೆಯನ್ನು ಪರೀಕ್ಷೆಯಲ್ಲಿ ಜಯಶಾಲಿಯಾಗಿದ್ದೀಯಾ ಎಂದು ಭಾವಿಸಿದ್ದೇನೆ .
ಕೇಳು, ನಿನ್ನಷ್ಟು ಮೌನಿ ನಾನಲ್ಲ. ಏನೇ ಇದ್ದರೂ ಮರು ಮಾತಿಲ್ಲದೇ ಹೇಳಿ ಬಿಡುವ ವ್ಯಕ್ತಿತ್ವ ನನ್ನದು. ಆದರೆ, ನಿನ್ನ ಎದುರಲ್ಲಿ ನಿಂತು ಮಾತನಾಡುವ ಧೈರ್ಯ ನನಗೆ ಬರಲೇ ಇಲ್ಲ. ನಿನಗಾಗಿ ಮಾಡುತ್ತಿದ್ದ ಒಂದೊಂದು ಸರ್ಕಸ್ಗಳನ್ನು ನೆನಪಿಸಿಕೊಂಡರೆ ನಗು ಒತ್ತರಿಸಿಕೊಂಡು ಬರುತ್ತದೆ. ದಿನಕ್ಕೊಂದು ನೆಪವೊಡ್ಡಿ ನಿನ್ನ ಎದುರು ಬಂದು ನಿಲ್ಲುವ ಪರಿ ಬೇಜಾರಾಗಿದೆ. ನಿನ್ನ ಕಲರ್ಫುಲ್ ಕನಸುಗಳಿಗೆ ನಾನು ಬಣ್ಣ ಹಚ್ಚುವೆನು. ಇನ್ನಾದರೂ ಮೌನ ಮುರಿದು ಉತ್ತರಿಸಿ ಬಿಡು ಬಲು ಬೇಗ.
-ಸಾಯಿನಂದಾ ಚಿಟ್ಪಾಡಿ
ಈ ವಿಭಾಗದಿಂದ ಇನ್ನಷ್ಟು
-
ಗಣಿತ ಸಮ್ಮೇಳನಗಳಲ್ಲಿ ಗಂಭೀರವಾದ ಉಪನ್ಯಾಸವಾದ ಮೇಲೆ ಪ್ರಶ್ನೋತ್ತರ ನಡೆಯುವುದು ರೂಢಿ. ಉಪನ್ಯಾಸದ ತಲೆಬುಡ ಅರ್ಥವಾಗದವರು ಕೂಡ ಆಗ ತಮಗೆಲ್ಲ ಅರ್ಥವಾಗಿದೆ ಎಂದು...
-
ನನ್ನ ಮೊಮ್ಮಗನನ್ನು ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ಹಾಸ್ಟೆಲ್ಗೆ ಸೇರಿಸುವ ಸಲುವಾಗಿ ಬಾಡಿಗೆ ಕಾರೊಂದರಲ್ಲಿ ಬೆಳಗಿನ ಜಾವ ಐದು ಘಂಟೆಗೆ ಚಿತ್ರದುರ್ಗದಿಂದ...
-
"ನಮ್ಮ ಕುಟುಂಬ' ಅಂತ ಒಂದು ಗ್ರೂಪ್ ರಚನೆ ಮಾಡಿದ್ದು ಚಿಕ್ಕಪ್ಪನ ಮಕ್ಕಳು. ಇದರ ಉದ್ದೇಶ, ಊರಲ್ಲಿದ್ದು, ನಗರಗಳಲ್ಲಿ ಚೆಲ್ಲಾಪಿಲ್ಲಿಯಾಗಿದ್ದ ಅಷ್ಟೂ ಸಂಬಂಧಿಕರನ್ನು...
-
ಬಸ್ಸ್ಟಾಪ್ ನಲ್ಲಿ ಇಳಿದೆ. ಹಸಿವಾಗಿತ್ತು. ನನ್ನ ಬಳಿ ಹೆಚ್ಚು ಹಣವಿರಲಿಲ್ಲ. ಅದೊಂದು ಚಿಕ್ಕ ಅಂಗಡಿ ಬಳಿ ಹೋದೆ. ಪೇಪರ್ ಮತ್ತು ಎರಡು ಬಾಳೆ ಹಣ್ಣು ಕೇಳಿ, ನನ್ನ...
-
ಮಳೆ ಎಂದರೆ ಮನುಷ್ಯರಿಗಷ್ಟೇ ಅಲ್ಲ, ಪರಿಸರದ ಜೀವ ಸಂಕುಲಗಳಿಗೆಲ್ಲ ಸಂಭ್ರಮ. ಕಪ್ಪೆಗಳು ನೀರಿನಲ್ಲಿ ಕುಳಿತು ಗಾಳಿಯೊಂದಿಗೆ ರಾಗ ಭಾವವನ್ನು ತೇಲಿ ಬಿಡುತ್ತವೆ....
ಹೊಸ ಸೇರ್ಪಡೆ
-
ಲಕ್ನೋ: ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಎಗ್ಗಿಲ್ಲದೇ ಮುಂದುವರಿದಿದೆ. ಗುರುವಾರವಷ್ಟೇ ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಮೇಲೆ ಬೆಂಕಿ ಹಚ್ಚಿ...
-
ಹೊಸದಿಲ್ಲಿ: ಪಾಕಿಸ್ಥಾನ, ಅಫ್ಘಾನಿಸ್ಥಾನ, ಬಾಂಗ್ಲಾದೇಶಗಳಲ್ಲಿ ಕಿರುಕುಳ ಅನುಭವಿಸುತ್ತಿದ್ದವರಿಗೆ ಉತ್ತಮ ನಾಳೆಯ ಅವಕಾಶವನ್ನು ಕಲ್ಪಿಸುವುದೇ ಪೌರತ್ವ (ತಿದ್ದುಪಡಿ)...
-
ಹೊಸದಿಲ್ಲಿ: ಈರುಳ್ಳಿ ದರ ಕಡಿಮೆಯಾಗುವ ಲಕ್ಷಣಗಳು ಸದ್ಯಕ್ಕೆ ಗೋಚರಿ ಸುತ್ತಿಲ್ಲ. ಶುಕ್ರವಾರ ಈರುಳ್ಳಿ ಬೆಲೆ ಕೇಜಿಗೆ 165 ರೂ. ತಲುಪಿದೆ. ವಿದೇಶಗಳಿಂದ ಆಮದು ಮಾಡಿಕೊಂಡಿರುವ...
-
ನವದೆಹಲಿ: ತನ್ನನ್ನು ಅತ್ಯಾಚಾರ ಮಾಡಿದ್ದ ಆರೋಪಿಯೊಬ್ಬನ ಸಹಿತ ಇತರೇ ನಾಲವರು ದುಷ್ಕರ್ಮಿಗಳಿಂದ ಗುರುವಾರದಂದು ಹಲ್ಲೆಗೊಳಗಾಗಿ ಬಳಿಕ ಬೆಂಕಿ ಹಚ್ಚಲ್ಪಟ್ಟಿದ್ದ...
-
ಉಡುಪಿ: ಅದಮಾರು ಮಠದ ಪರ್ಯಾಯದಲ್ಲಿ ಕಾಲೇ ವರ್ಷತು ಪರ್ಜನ್ಯಃ| ಪೃಥಿವೀ ಸಸ್ಯಶಾಲಿನಿ|| ದೇಶಃ ಅಯಂ ಕ್ಷೋಭರಹಿತಃ| ಸಜ್ಜನಾಃ ಸಂತು ನಿರ್ಭಯಾಃ|| ಎಂಬಂತೆ ಈ ನಾಲ್ಕು ವಿಷಯಗಳ...