ಮನೆಯೇ ಗ್ರಂಥಾಲಯ : ಗಡಿನಾಡು ಬೀದರಿನಲ್ಲಿ ಪುಸ್ತಕದ ಮಹಾಮನೆ


Team Udayavani, Feb 16, 2021, 7:11 PM IST

ಮನೆಯೇ ಗ್ರಂಥಾಲಯ : ಗಡಿನಾಡು ಬೀದರಿನಲ್ಲಿ ಪುಸ್ತಕದ ಮಹಾಮನೆ

ಕಲ್ಯಾಣ ‌ ಕರ್ನಾಟಕ ಭಾಗದ ಗಡಿಜಿಲ್ಲೆ ಬೀದರ್‌ ನಗರದಲ್ಲಿ ಸಮಾನ ಮನಸ್ಕ ತಂಡವೊಂದು ವಿಶಿಷ್ಟ, ವಿಭಿನ್ನ ಮತ್ತು ಅಪೂರ್ವ ಅನ್ನಿಸುವಂಥ ಸಮಾಜಮುಖೀ ಕಾರ್ಯ ಮಾಡುತ್ತಿದೆ. ಸರ್ಕಾರದ ದೊಡ್ಡ ದೊಡ್ಡ ಹುದ್ದೆಗಳಲ್ಲಿರುವವರು, ನಿವೃತ್ತ ಅಧಿಕಾರಿಗಳು ಮತ್ತು ಸಮಾಜಸೇವಕರನ್ನು ಒಳಗೊಂಡಿರುವ ಜನರೆಲ್ಲಾ ಸೇರಿಕೊಂಡು “ಶಾಹಿದ್‌ ಭಗತ್‌ ಸಿಂಗ್‌ ‘ ಹೆಸರಿನಲ್ಲಿ ‘ ಚಾರಿಟೇಬಲ್‌ ಟ್ರಸ್ಟ್ ‘ ಕಟ್ಟಿದ್ದಾರೆ. ಈ ಟ್ರಸ್ಟ್‌ ಅಡಿಯಲ್ಲಿ ಮುಂದೇನು? ಎನ್ನುವ ಆಲೋಚಿಸುವ ಹೊತ್ತಿಗೆ ಎಲ್ಲರಿಗೂ ಹೊಳೆದದ್ದು- “ಗ್ರಂಥಾಲಯ ಮಾಡೋಣ’ ಎಂಬ ಐಡಿಯಾ ಜೊತೆಯಾಗಿದೆ.

ಗ್ರಂಥಾಲಯ ಮಾಡಬೇಕಾದರೆ ಸುಸಜ್ಜಿತ ಕಟ್ಟಡವೊಂದು ಅಗತ್ಯವಾಗಿ ಬೇಕು. ಅಂಥದೊಂದು ಬಿಲ್ಡಿಂಗ್‌ ಎಲ್ಲಿದೆ ಎಂಬ ಯೋಚನೆಯಲ್ಲೇ ತಂಡದ ಸದಸ್ಯರು, ವಿಶಾಲವಾದ ಕಟ್ಟಡವನ್ನು ಬಾಡಿಗೆಗೆ ಪಡೆಯಲು ಹುಡುಕಾಟ ನಡೆಸಿದ್ದರು. ಆಗಶಿವರಾಜ್‌ ಪಾಟೀಲ್‌ ಎನ್ನುವ ಸರ್ಕಾರಿ ನೌಕರ, ಬೀದರ್‌ ನಗರದ ಸಿದ್ದೇಶ್ವರ ಕಾಲೋನಿ ನೌಬಾದಿನಲ್ಲಿದ್ದ ತಮ್ಮ ಸೈಟ್‌ ಅನ್ನು ಬಳಗದವರಿಗೆ ಉಚಿತವಾಗಿ ನೀಡಿ, ಗ್ರಂಥಾಲಯ ನಿರ್ಮಾಣಕ್ಕೆ ಇದು ನನ್ನ ಕಡೆಯ ಕಾಣಿಕೆ ಎಂದರಂತೆ!

ಗ್ರಂಥಾಲಯ ನಿರ್ಮಾಣಕ್ಕೆ ಅಗತ್ಯವಿದ್ದ ಜಾಗವೇನೋ ದಾನದ ರೂಪದಲ್ಲಿ ಬಂತು. ಇನ್ನು ಕಟ್ಟಡ ನಿರ್ಮಾಣಕ್ಕೆ ಹಣ ಬೇಕು. ಅದನ್ನು ಬೇರೆ ಯಾರೋ ಕೊಡಬಹುದು ಎಂದು ಕಾಯುವ ಬದಲು ನಾವೇ ಸ್ವಲ್ಪ ಸ್ವಲ್ಪ ‌ ಹಣ ಹಾಕಿದರೆ ಹೇಗೆ ಎಂದು ಯೋಚಿಸಿದ ಈ ತಂಡದವರಿಗೆ, ಸರ್ಕಾರಿ ನೌಕರರು, ನಿವೃತ್ತ ನೌಕರರು, ಸಮಾಜ ಸೇವಕರು, ಜನಪ್ರತಿನಿಧಿಗಳು ಸೇರಿದಂತೆ ಹಲವರು ಜೊತೆಯಾದರು. ಪರಿಣಾಮ, 15 ಲಕ್ಷ ರೂ. ವೆಚ್ಚದಲ್ಲಿ ಒಂದು ಅಂತಸ್ತಿನ ಸುಸಜ್ಜಿತ ಗ್ರಂಥಾಲಯ ಕಟ್ಟಡ ನಿರ್ಮಾಣವಾಯಿತು.  2019 ರ ಜನವರಿ 20 ರಂದು ಖ್ಯಾತ ವಿಚಾರವಾದಿ ಆನಂದ ತೇಲ್ತುಂಬಡೆ ಅವರಿಂದ ಉದ್ಘಾಟನೆಯೂ ನಡೆದು, ಈ ಪುಸ್ತಕ ‌ ಮನೆಗೆ ‘ಕೆಂಪು – ನೀಲಿ ಗ್ರಂಥಾಲಯ’ ಎಂದು ಹೆಸರಿಡಲಾಯಿತು.

ಹೆಸರಿಗಿದೆ ವಿಶೇಷ ಅರ್ಥ :

ಈ ಗ್ರಂಥಾಲಯಕ ಇಟ್ಟಿರುವ ಹೆಸರಿಗೆ ವಿಶೇಷ ಅರ್ಥವಿದೆ. “ಕೆಂಪು’ ಎಂಬುದು ವರ್ಗದ ಸಂಕೇತವಾದರೆ “ನೀಲಿ’ ಜಾತಿಯ ಸಂಕೇತವನ್ನು ಸೂಚಿಸುತ್ತದೆ. ದೇಶದಲ್ಲಿ ಕೆಂಪು – ನೀಲಿ ಬಣ್ಣಗಳು ಒಗ್ಗೂಡಿ, ಒಂದೇ ಪಥದಲ್ಲಿ ಮುನ್ನಡೆಯಬೇಕು. ಆಗ ವರ್ಗರಹಿತ ಮತ್ತು ಜಾತಿರಹಿತ ಸಮಾಜ ರೂಪುಗೊಳ್ಳಲು ಸಾಧ್ಯ ಎನ್ನುವ ಸದಾಶಯದಿಂದ ಕಟ್ಟಡಕ್ಕೆ “ಕೆಂಪು – ನೀಲಿ ಗ್ರಂಥಾಲಯ” ಕರೆಯಲಾಗಿದೆ.

ಸ್ಪರ್ಧಾತ್ಮಕ ಪರೀಕ್ಷೆಯ ಪುಸ್ತಕಗಳಿವೆ! :

ಇದು ಮೊಬೈಲ್‌, ಕಂಪ್ಯೂಟರ್‌, ಆನ್‌ ಲೈನ್‌ ಜಮಾನಾ. ಪುಸ್ತಕಗಳನ್ನು ಓದುವವರಿಲ್ಲ ಎನ್ನುತ್ತಿರುವ ಈ ಕಾಲಘಟ್ಟದಲ್ಲಿಯೇ ಪುಸ್ತಕ  ಪ್ರೇಮಿಗಳಿಗೆ ಹೊಸ ಹೊಸ ಪುಸ್ತಕವನ್ನು ಪರಿಚಯಿಸುತ್ತಿರುವುದು ಇಲ್ಲಿನ ವಿಶೇಷ. ಎರಡು ಪುಸ್ತಕ ಕೋಣೆ, ಒಂದು ವಿಶಾಲವಾದ ರೀಡಿಂಗ್‌ರೂಮ್‌ ಹೊಂದಿರುವ ಈ ಗ್ರಂಥಾಲಯದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಪುಸ್ತಕಗಳಿವೆ. ವಿವಿಧ ದಿನಪತ್ರಿಕೆ,ವಾರಪತ್ರಿಕೆ, ಮಾಸ ಪತ್ರಿಕೆ, ಪಾಕ್ಷಿಕಗಳಿವೆ. ಶರಣ, ದಾಸ, ಸೂಫಿ ಸಾಹಿತ್ಯ ಸೇರಿದಂತೆ ಕನ್ನಡ, ಹಿಂದಿ, ಇಂಗ್ಲಿಷ್‌ ಭಾಷೆಯ ಬಹುತೇಕ ಸಾಹಿತ್ಯ ಪುಸ್ತಕಗಳೂ ಇಲ್ಲಿವೆ. ಜೊತೆಗೆ ಎ ದರ್ಜೆಯಿಂದ ಡಿ ಗ್ರೂಪ್‌ ವರೆಗಿನ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗಲು ಅಗತ್ಯವಿರುವ ಪುಸ್ತಕಗಳನ್ನು ಓದಲು ವ್ಯವಸ್ಥೆ ಮಾಡಲಾಗಿದೆ. ದಿನವೂ 30ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಓದಲೆಂದು ಈ ಗ್ರಂಥಾಲಯಕ್ಕೆ ಬರುತ್ತಾರೆ.

ತರಬೇತಿ ಕೇಂದ್ರ ಸ್ಥಾಪನೆಯ ಗುರಿ :

ಈ ಗ್ರಂಥಾಲಯವು ಓದಿನ ತಾಣವಷ್ಟೇ ಅಲ್ಲ; ಹಲವು ವಿಚಾರಗಳನ್ನು ಕುರಿತ ಮುಕ್ತ ಚರ್ಚೆಗೆ ವೇದಿಕೆಯೂ ಆಗುತ್ತಿರುವುದು ಒಳ್ಳೆಯ ಬೆಳವಣಿಗೆ ಅನ್ನಲೇಬೇಕು. ಗ್ರಂಥಾಲಯದ ಅಂಗಳವು ಈಗಾಗಲೇ ಹಲವು ಹೊಸಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿದೆ. ಮುಂದಿನ ದಿನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕೇಂದ್ರ ಸ್ಥಾಪಿಸುವ ‌ಗುರಿಯನ್ನೂ ಹಾಕಿಕೊಂಡಿದ್ದೇವೆ ಎನ್ನುತ್ತಾರೆ ಎನ್ನುತ್ತಾರೆ ಟ್ರಸ್ಟ್‌ ಸದಸ್ಯರಾದ ಗಗನ ಫುಲೆ.

“ಬೀದರ್‌’ ಎಂದರೆ ಧರಿನಾಡು, ಬರದ ಬೀಡು. ಇಲ್ಲಿನ ಕೆಂಪು ನೆಲ ಶರಣರ ಕಾಯಕ ಭೂಮಿ, ಶರಣರ ವಚನಗಳು ಈ ನೆಲದ ಐಸಿರಿಯನ್ನು ಎತ್ತಿ ತೋರಿಸುತ್ತವೆ, ಇಂಥ ಹಿನ್ನೆಲೆಯ ಕಲ್ಯಾಣ ಶರಣರ ನೆಲದಲ್ಲಿ ಸಮಾನ ಮನಸ್ಕರೆಲ್ಲರೂ ಕೂಡಿಕೊಂಡು, ಪ್ರತಿಫಲಾಪೇಕ ಇದಲ್ಲದೆ ಗ್ರಂಥಾಲಯ ನಿರ್ಮಿಸಿದ್ದು ಹೆಮ್ಮೆಯ ಸಂಗತಿ

ಮೂರು ಸಾವಿರ ಪುಸ್ತ ಕ :

“ಕಂಪು – ನೀಲಿ ಗ್ರಂಥಾಲಯ’ ನಿರ್ಮಾಣದ ಸುದ್ದಿ ತಿಳಿಯುದ್ದಂತೆಯೇ ಬೀದರ್‌ ನವರಾದ ಮಲ್ಲಿಕಾರ್ಜುನ ಸುಭಾನೆ ಮತ್ತು ಮಾರುತಿ ಗೋಖಲೆ ತಲಾ 2 ಲಕ್ಷ ರೂ., ಅಭಿಮನ್ಯು 1 ಲಕ್ಷ, ಶಂಕರ ಸುಬಾನೆ 1 ಲಕ್ಷ , ಅಲಿಂಸಾಬ್‌ 50 ಸಾವಿರ ರೂ. ಮೌಲ್ಯದ ಪುಸ್ತಕಗ್ತ‌ಳನ್ನು ಖರೀದಿಸಿ ಕೊಟ್ಟಿದ್ದಾರೆ. ಸರ್ಕಾರಿ ನೌಕರರು, ನಿವೃತ್ತ ನೌಕರರು, ಸಮಾಜ ಸೇವಕರೂ ಈ ಪುಣ್ಯಕಾರ್ಯದಲ್ಲಿ ಕೈ ಜೋಡಿಸಿದ್ದಾರೆ. ಪರಿಣಾಮವಾಗಿ 3 ಸಾವಿರಕ್ಕೂ ಹೆಚ್ಚು ಪುಸ್ತಕಗಳು ಕೆಂಪು- ನೀಲಿ ಗ್ರಂಥಾಲಯದ ಒಡಲನ್ನು ಸೇರಿಕೊಂಡಿವೆ.

 

-ಬಾಲಾಜಿ ಕುಂಬಾರ, ಚಟ್ನಾಳೆ

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.