ಬಿಡಲಾರೆ ಎಂದೂ ನಿನ್ನ ನೀನಾದೆ ನನ್ನೀ ಪ್ರಾಣ…


Team Udayavani, May 9, 2017, 3:45 AM IST

08-JOSH-6.jpg

ಹೆಲೋ ಗೆಳೆಯ, 
ನಾ ಏನೆಂದು ಬರೆಯಲಿ ಹೇಳು? ಈ ಹೃದಯ ಬರೆಯುವ ಕವನದಲ್ಲಿ ಭಾವನೆಗಳು ನೂರಾರು, ಭಾವನೆಗಳ ಮಡಿಲಿನಲ್ಲಿ ಕನಸುಗಳು ಹಲವಾರು. ನಾ ಕಂಡ ಕನಸಿಗೆ ಜೊತೆಯಾದವ ನೀನು. ನೆನಪಿದೆಯಾ ಗೆಳೆಯ? ನನ್ನೊಂದಿಗೆ ಸ್ನೇಹ ಬೆಳೆಸಲು, ನಿನ್ನ ಫೋನ್‌ನಂಬರ್‌ ಅನ್ನು ಚೀಟಿಯಲ್ಲಿ ಬರೆದು, ನಾ ಬರುವ ರೋಡಿನಲ್ಲಿ ಎಸೆದು ಹೋಗಿದ್ದೆ. ಅದನ್ನು ನಾನು ನೋಡಿಯೂ ನೋಡದಂತೆ ಹಾಗೆಯೇ ಇಟ್ಟು ದಿನಾ ನಿನಗೆ ಬೇರೆ- ಬೇರೆ ನಂಬರ್‌ಗಳಿಂದ ಮಿಸ್ಡ್ಕಾಲ್‌ ಕೊಟ್ಟು ಆಟವಾಡಿಸುತ್ತಿದ್ದೆ ಅಲ್ವಾ? ಅಂತೂ- ಇಂತೂ ಒಂದಿನ ಮರೆಯಲ್ಲಿ ನಿಂತು ಮಿಸ್ಡ್ಕಾಲ್‌ ಬಂದಾಗ ರಿಸೀವ್‌ ಮಾಡಿ ಕಂಡು ಹಿಡಿದಿºಟ್ಟೆ !

ನೀನೇನೂ ಅತಿ ಸುಂದರನಲ್ಲ. ತುಂಬಾ ಓದಿಕೊಂಡವನೂ ಇಲ್ಲ. ಆದರೂ ಗೊತ್ತಿಲ್ಲದಂತೆ ನನ್ನನ್ನು ಗೆದ್ದುಬಿಟ್ಟೆ. ಹತ್ತಿರದಲ್ಲೇ ಸ್ನೇಹಿತರೆಲ್ಲರೂ ಟ್ರಿಪ್‌ ಹೋಗೋಣ ಅಂತ ಹೇಳಿ ಗೋಪಾಲಸ್ವಾಮಿ ಬೆಟ್ಟಕ್ಕೆ ಕರೆದುಕೊಂಡು ಹೋಗಿದ್ದೇ ನಿನ್ನ ಜೊತೆ ಪ್ರೀತಿಯಲ್ಲಿ ಬೀಳಲು ಕಾರಣವಾಯಿತು. ನನ್ನ ಜೀವನದಲ್ಲಿ ಅದೇ ಮೊದಲ ದೂರ ಪ್ರಯಾಣ. ಅದೂ ಒಬ್ಬ ಹುಡುಗನ ಜೊತೆ.  ಅಂದು ನಿನಗಾಗಿ ನಾ ಬರೆದ ಕವನ…

ನಾ ಕಾಣದಿರುವ ಸ್ಥಳ ಮನದಲೆಲ್ಲಾ ತಳಮಳ,
ಜೊತೆಯಲ್ಲಿದ್ದ ನನ್ನ ಗೆಳೆಯ
ಆ ದಿನ ಹೊಸ ಅನುಭವದ ಸಮಯ
ಸ್ವಲ್ಪ ನನಗಾಗುತ್ತಿತ್ತು ಭಯ…
ಆ ಹಸಿರಿನ ಪರಿಸರದಲ್ಲಿ ನಿನ್ನೊಡನೆ ಬೈಕಿನಲ್ಲಿ, ಬೆಟ್ಟ ಗುಡ್ಡಗಳ ಮಧ್ಯೆ ನಿನ್ನೊಡನೆ ನಾನಿದ್ದೆ. ಆಗಲೇ ನೀ ನನ್ನ ಮನಸ್ಸನ್ನು ಕದ್ದಿದ್ದೆ. ನನ್ನ ಹುಟ್ಟಿದ ದಿನದಂದು ನೀ ಕೊಟ್ಟ ಸೀರೆ, ಗೊಂಬೆ, ಮುಂಗಾರು ಮಳೆ ವಾಚು- ಇವು ನನಗೆ ಅತ್ಯಮೂಲ್ಯ ಮಾಣಿಕ್ಯ ಕಣೋ!
ಇಂದಿಗೆ 5 ವರ್ಷ ನಮ್ಮ ಪ್ರೀತಿಗೆ. ಮನೆಯವರಿಗೆ ನಮ್ಮ ಪ್ರೀತಿಯ ಸುಳಿವೇ ಗೊತ್ತಾಗದಂತೆ ನೋಡಿಕೊಂಡೆವು. ನಮ್ಮ ಓದು, ಕೆಲಸ ಎಲ್ಲವೂ ಅವರ ಇಷ್ಟದಂತಾಯಿತು. ನಿಮ್ಮ ಮನೆಯವರು ನನ್ನನ್ನು ಒಪ್ಪಿದ ಹಾಗೆ, ನಮ್ಮ ಮನೆಯಲ್ಲೂ ನಿನ್ನನ್ನು ಒಪ್ಪಿದರೆ ಸಾಕು ಎಂದು ಪ್ರಾರ್ಥಿಸುತ್ತೇನೆ. ಮುಂದೆ ಯಾವುದೇ ಕಾರಣಕ್ಕೂ ನನ್ನ ಮೇಲೆ ಕೋಪ ಮಾಡಿಕೊಳ್ಳಬೇಡವೋ. ಯಾಕೆಂದರೆ ನಿನ್ನದು ಭಯಂಕರ ಕೋಪದ ವ್ಯಕ್ತಿತ್ವ ಕಣೋ…  ಆದರೂ ಇಷ್ಟ ಆಗುತ್ತೀಯಾ, ಯಾಕೆ ಗೊತ್ತಾ? ನೀನು ನನ್ನನ್ನು ನೋಡದೇ ಕೆಲಸಕ್ಕಾಗಲೀ, ಮನೆಗಾಗಲೀ ಹೋಗುವುದೇ ಇಲ್ಲ. ಎಷ್ಟೊತ್ತಾದರೂ ನಮ್ಮ ಮನೆಯ ಮುಂದೆ ನಿಂತು, ಫೋನ್‌ ಮಾಡಿ ನೋಡಿಕೊಂಡು ಐ ಲವ್‌ ಯೂ ಅಂತ ಹೇಳಿದರೇನೇ ನಿನ್ನ ದಿನ ಪೂರ್ತಿ ಆಗೋದು ಅಲ್ವಾ? ಈ ಐ ಲವ್‌ ಯು ಎಂಬುದನ್ನು ನಾವು ದಿನದಲ್ಲಿ ಎಷ್ಟು ಸಲ ಹೇಳುತ್ತೀವೋ ಲೆಕ್ಕ ಇಲ್ಲ ಅಲ್ವಾ?  ಲೋ, ಮುಖ್ಯವಾದ ಒಂದು ವಿಷಯಾನೇ ಮರೆತಿದ್ದೆ ಕಣೋ, ಐ ಲವ್‌ ಯು. ನಾನು ನಿನ್ನ ತುಂಬಾ ತುಂಬಾ ಪ್ರೀತಿಸ್ತೀನಿ ಕಣೋ. ಎಷ್ಟು ಅಂದ್ರೆ, ಮಗುವಿನ ಥರ. ನಿನಗೆ ಗೊತ್ತಾ? ನಮ್ಮನ್ನು ದೂರ ಮಾಡಲು ದೊಡ್ಡ ಕಾರಣ ಬೇಕು. ಆದರೆ, ನಾವಿಬ್ಬರೂ ಸನಿಹ ಸೇರಲು ಸಣ್ಣ ನೆಪ ಸಾಕು… ಹಣವನ್ನು ಯಾರು ಬೇಕಾದರೂ ಸಂಪಾದಿಸಬಹುದು. ಆದರೆ, ಪ್ರೀತಿಯನ್ನು ಹಣ ಕೊಟ್ಟು ಖರೀದಿಸಲು ಸಾಧ್ಯವಿಲ್ಲ ಅಲ್ವಾ? ನನ್ನಷ್ಟು ನಿನ್ನನ್ನು ಇಷ್ಟಪಡೋರು ಯಾರೂ ಇಲ್ಲ ಕಣೋ… ನೆನಪಿರಲಿ!
 
ಇಂತಿ ನಿನ್ನ ಪ್ರೀತಿಯ
ಜೀವನದ ಸಂಗಾತಿ ಗೆಳತಿ

ಟಾಪ್ ನ್ಯೂಸ್

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

Loan: ಸಾಲ ಪಡೆಯಲು ಸತ್ತ ವ್ಯಕ್ತಿಯನ್ನೇ ಬ್ಯಾಂಕಿಗೆ ಕರೆತಂದ ಮಹಿಳೆ… ಕೊನೆಗೆ ಆದದ್ದೇ ಬೇರೆ

Loan: ಸತ್ತ ವ್ಯಕ್ತಿಯನ್ನು ಕರೆತಂದು ಸಾಲ ಪಡೆಯಲು ಮುಂದಾದ ಮಹಿಳೆ… ಕೊನೆಗೆ ಆದದ್ದೇ ಬೇರೆ

Kalaburagi; Congress government has given 2000 compensation to farmers like beggars: Vijayendra

Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

ಡಿ.ಕೆ.ಶಿವಕುಮಾರ್, ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ದೂರು

Election; ಡಿ.ಕೆ.ಶಿವಕುಮಾರ್, ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.