ನನಗೂ ಒಬ್ಬ ಗೆಳೆಯ ಬೇಕು!


Team Udayavani, Feb 25, 2020, 5:06 AM IST

majji-13

ಪ್ರೀತಿ ಪ್ರೇಮ, ಆಕರ್ಷಣೆ ಈ ಎಲ್ಲಾ ನವಿರುತನಗಳ ಮೀರಿಯೂ, ಬೇಕು ಬೇಡಗಳ ಪ್ರಶ್ನೆಗಳನ್ನು ಮೀರಿಯೂ ಕೇವಲ ಮನಸಿನ ಹಟಮಾರಿತನವನ್ನು ರಮಿಸಲು, ಆಗಾಗ ಸಂತೈಸಲು, ಹೃದಯದ ಪಿಸುಮಾತಿಗೆ ದನಿಯಾಗಲು ಆಪ್ತ ಜೀವವೊಂದು ಬೇಕೆನ್ನಿಸುತ್ತದಲ್ಲ ಅದಕ್ಕಾದರೂ ಗೆಳೆಯ ಬೇಕು..

ಹೌದು.. ತುಂಬಾ ಸಲ ನನಗೂ ಒಬ್ಬ ಗೆಳೆಯ ಬೇಕು ಅನ್ನಿಸುತ್ತೆ. ಎಂತಹ ಗೆಳೆಯ ಬೇಕು? ಹೃದಯವಂತನಾಗಿರಬೇಕಾ, ಹಣವಂತನಾಗಿರಬೇಕಾ? ಪಾಪದವನಾಗಿರಬೇಕಾ, ಒರಟನಾಗಿರಬೇಕಾ?
ಸದಾ ಕಾಡುವವನಾಗಿರಬೇಕಾ, ಕಾಡಿಸಿಕೊಳ್ಳುವವನಾಗಿರಬೇಕಾ? ಗಂಭೀರವಾಗಿರಬೇಕಾ, ತುಂಟನಾಗಿರಬೇಕಾ? ಉಹೂಂ.. ಇಂತಹ ಯಾವ ಪ್ರಶ್ನೆಗಳಿಗೂ ನನ್ನಲ್ಲಿ ಉತ್ತರವಿಲ್ಲ. ಆದರೂ,

ನನಗೊಬ್ಬ ಗೆಳೆಯ ಬೇಕು. ಗೆಳತಿಯರ ಹಿಂಡಿನೊಳಗೆ ಹರಟೆ ಹೊಡೆಯುತ್ತಾ ಕುಳಿತಾಗ, ಹೃದಯದ ಯಾವುದೋ ಮೂಲೆಯ ಕೋಣೆ ಈಗಲೂ ಖಾಲಿ ಇದೆ ಎಂಬ ಕಸಿವಿಸಿ ಮೂಡುತ್ತದಲ್ಲ? ಆಗ. ಕಾಲೇಜಿನ ಕಾರಿಡಾರಿನಲ್ಲಿ ಎರಡು ಜೀವಗಳು ಲೋಕ ಮರೆತಂತೆ ಮಾತಿಗಿಳಿದದ್ದು ಆಕಸ್ಮಿಕವಾಗಿ ಕಣ್ಣಿಗೆ ಬಿದ್ದಾಗ ಒಮ್ಮೆ ಜೀವ ಸಣ್ಣಗೆ ತುಯ್ಯುತದಲ್ಲ? ಆಗ.

ಸೋನೆ ಮಳೆಯೊಳಗೆ ನಡೆಯುತ್ತಿರುವಾಗ ಕೊಡೆಯ ಮೇಲೆ ಬೀಳುವ ಹನಿಗಳ ಟಪಗುಟ್ಟುವಿಕೆಗೆ ಎದೆಯ ಯಾವುದೋ ತಂತಿ ಮೀಟಿದಂತಾಗುತ್ತದಲ್ಲ? ಆಗ. ಪ್ರತಿ ವರ್ಷ ಬರುವ ಪ್ರೇಮಿಗಳ ದಿನದಂದು ಕಾರಣವಿಲ್ಲದೇ ನನ್ನೊಳಗೆ ವಿಷಾದ ಮೂಡುತ್ತದಲ್ಲ? ಆಗ.

ಪರಿಚಿತರ ಮುಖಗಳೆಲ್ಲ ಬೇಸರವೆನ್ನಿಸಿ ಅನಾಮಿಕನೊಬ್ಬನ ಸಾಂಗತ್ಯ ಬೇಕೆನ್ನಿಸುತ್ತದಲ್ಲ? ಆಗ. ಹಾಡುತ್ತಿರುವ ಹಾಡು ಇದ್ದಕ್ಕಿದ್ದಂತೆ ಮರೆತು ಕಂಗಾಲಾಗುವಾಗ ಮುಂದಿನ ಸಾಲನ್ನು ನೆನಪಿಸಲು, ಇದುವರೆಗೆ ಯಾರಿಗೂ ಹೇಳದೇ ಮನಸ್ಸಿನಲ್ಲಿ ಬಚ್ಚಿಟ್ಟುಕೊಂಡ ಗುಟ್ಟುಗಳಿಗೆಲ್ಲ ಕಿವಿಯಾಗಲು ಯಾರಾದರೂ ಬೇಕು ಎನ್ನಿಸುತ್ತದಲ್ಲ? ಆಗ.. ನನಗೂ ಒಬ್ಬ ಗೆಳೆಯ ಬೇಕೇ ಬೇಕೆನ್ನಿಸುತ್ತೆ.

ಪ್ರೀತಿ ಪ್ರೇಮ, ಆಕರ್ಷಣೆ ಈ ಎಲ್ಲಾ ನವಿರುತನಗಳ ಮೀರಿಯೂ, ಬೇಕು ಬೇಡಗಳ ಪ್ರಶ್ನೆಗಳನ್ನು ಮೀರಿಯೂ ಕೇವಲ ಮನಸಿನ ಹಟಮಾರಿತನವನ್ನು ರಮಿಸಲು, ಆಗಾಗ ಸಂತೈಸಲು, ಹೃದಯದ ಪಿಸುಮಾತಿಗೆ ದನಿಯಾಗಲು ಆಪ್ತ ಜೀವವೊಂದು ಬೇಕೆನ್ನಿಸುತ್ತದಲ್ಲ ಅದಕ್ಕಾದರೂ ಗೆಳೆಯ ಬೇಕು..

– ವೀಚೀ

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.