ಆ ಬ್ಯಾಗ್‌ನಲ್ಲಿ ನನ್ನ ಬದುಕಿತ್ತು!


Team Udayavani, Jan 16, 2018, 1:23 PM IST

19-26.jpg

ಎಂಟು ವರ್ಷಗಳ ಹಿಂದೆ ನಮ್ಮ ಹಳ್ಳಿಯಿಂದ 380 ಕಿ.ಮೀ ದೂರವಿರುವ ಬೆಂಗಳೂರಿಗೆ ಉದ್ಯೋಗಕ್ಕಾಗಿ ಪಯಣ ಬೆಳೆಸಿದ್ದೆ. ಅಪ್ಪ- ಅಮ್ಮ ಸಾಲ ಮಾಡಿ ಒಂದಿಷ್ಟು ಹಣ ಕೊಟ್ಟು ಕಳುಹಿಸಿದ್ದರು. ನಾನೊಬ್ಬನೇ ರೈಲಿನಲ್ಲಿ ಬೆಂಗಳೂರಿಗೆ ಹೊರಟಿದ್ದೆ. ಅದು ನನ್ನ ಮೊದಲ ರೈಲು ಪ್ರಯಾಣ. ಕಾಲಿಡಲು ಸ್ಥಳವಿಲ್ಲದೆ ನಿಂತುಕೊಂಡೇ ಹೊರಟಿದ್ದೆ. ನಾಲ್ಕೈದು ಸ್ಟಾಪ್‌ಗ್ಳ ನಂತರ ಒಬ್ಬ ಅಜ್ಜಿಯ ದಯೆಯಿಂದ ಸೀಟು ಸಿಕ್ಕಿತು. ರಾತ್ರಿ ಸಮಯ. ಯಾರನ್ನು ನಂಬುವುದೋ, ಯಾರನ್ನು ಬಿಡುವುದೋ ಗೊತ್ತಿಲ್ಲ. ಆದರೂ ಸಮಯ ಕಳೆದಂತೆ ನಿದ್ರೆ ಹತ್ತಿತು. ಬೆಳಗ್ಗೆ 7 ಗಂಟೆಗೆ ಎಚ್ಚರವಾದಾಗ, ಒಮ್ಮೆಲೆ ಹೃದಯ ಬಡಿತ ನಿಂತೇ ಹೋಯ್ತು!

ಕಾರಣ, ನಾನು ತಂದ ಬ್ಯಾಗ್‌ ಮಾಯವಾಗಿತ್ತು. ವಿದ್ಯಾಭ್ಯಾಸದ ಎಲ್ಲ ಒರಿಜಿನಲ್‌ ಸರ್ಟಿಫಿಕೆಟ್‌ಗಳು ಅದರಲ್ಲೇ ಇದ್ದವು. ಮನೆಯಿಂದ ತಂದಿದ್ದ ಹಣ ಕೂಡ. ಅಕ್ಕಪಕ್ಕ ಇದ್ದವರನ್ನು ಕೇಳಿದರೂ, ಎಲ್ಲ ಕಡೆ ಹುಡುಕಿದರೂ ಪ್ರಯೋಜನವಾಗಲಿಲ್ಲ. ನನ್ನ ಕಥೆ ಮುಗಿಯಿತು ಎಂದು ತಲೆ ಮೇಲೆ ಕೈಯಿಟ್ಟು ನಿಲ್ದಾಣದಲ್ಲಿ ಅಳುತ್ತಾ ಕೂತಿದ್ದೆ. ಅಷ್ಟರಲ್ಲಿ ನನ್ನ ಬಳಿ ಬಂದ ಒಬ್ಬ ವ್ಯಕ್ತಿ, “ಬಾಬು, ಈ ಬ್ಯಾಗ್‌ ನಿನ್ನದಾ?’ ಎಂದು ಕೇಳಿದರು. ಕಣ್ಣೆತ್ತಿ ನೋಡಿದೆ. ಆ ಬ್ಯಾಗ್‌ ನನ್ನದೇ ಆಗಿತ್ತು. ಹೋದ ಜೀವ ಮತ್ತೆ ಬಂತು. “ಹೌದು ಸರ್‌’ ಎಂದು ಬ್ಯಾಗ್‌ ತಗೊಂಡು ನೋಡ್ತೀನಿ, ಸರ್ಟಿಫಿಕೆಟ್ಸ್‌ ಎಲ್ಲಾ ಸೇಫ್. ಆದರೆ, ಹಣ ಮಾತ್ರ ಇರಲಿಲ್ಲ. ಯಾರೋ ಅದರಲ್ಲಿದ್ದ ಹಣವನ್ನೆಲ್ಲ ಎತ್ತಿಕೊಂಡು, ಬ್ಯಾಗನ್ನು ಎಸೆದು ಹೋಗಿದ್ದರು. ಅವರು ಬ್ಯಾಗ್‌ ಎತ್ತಿಕೊಂಡು ನೋಡಿದಾಗ, ಅದರಲ್ಲಿ ಸರ್ಟಿಫಿಕೆಟ್ಸ್‌ಗಳು ಕಾಣಿಸಿವೆ. ಅಳುಮೋರೆ ಹಾಕಿ ಕೂತಿದ್ದ ನನ್ನದೇ ಬ್ಯಾಗ್‌ ಇರಬಹುದೆಂದು ನನಗೆ ತಂದುಕೊಟ್ಟರು. ಹಣ ಇರದದ್ದನ್ನು ನೋಡಿ ಮತ್ತೆ ಮುಖ ಬಾಡಿತು. ಈಗ ನಾನು ಹೋಗಬೇಕಿದ್ದ ಆಫೀಸ್‌ಗೆ ಹೇಗೆ ಹೋಗಲಿ? ಹೇಗೆ ಕೆಲಸ ಪಡೆಯಲಿ? ಎಂದು ಚಿಂತೆಯಾಯಿತು. 

ನನ್ನ ಬಾಡಿದ ಮುಖ ನೋಡಿದ ಆ ಮನುಷ್ಯ, ಯಾಕೆ? ಹಣ ಇಲ್ಲವಾ ಬಾಬು ಎಂದು ಕೇಳಿ, ಬೆಂಗಳೂರಿನಂಥ ಮಹಾನಗರಗಳಲ್ಲಿ ಕಳ್ಳತನ ಸಾಮಾನ್ಯ. ನಮ್ಮ ಎಚ್ಚರದಲ್ಲಿ ನಾವು ಇರಬೇಕು ಎಂದು ಹೇಳಿ ಟಿಫಿನ್‌ ಮಾಡಿಸಿದರು. ನಂತರ ನನ್ನನ್ನು ಆಫೀಸ್‌ವರೆಗೆ ಡ್ರಾಪ್‌ ಮಾಡಿದರು. ನನಗೆ ಆ ಕೆಲಸವನ್ನೂ ಕೊಡಿಸಿದರು. ಅಷ್ಟೇ ಅಲ್ಲ, ಹತ್ತಿರದಲ್ಲೇ ನನಗೊಂದು ರೂಂ ಮಾಡಿಸಿಕೊಟ್ಟರು. “ಸರ್‌, ನಿಮ್ಮ ವಿಳಾಸ ಕೊಡಿ. ಖಂಡಿತಾ, ನಾನು ನನ್ನ ಮೊದಲ ಸಂಬಳವನ್ನು ನಿಮಗೇ ನೀಡುತ್ತೇನೆ’ ಎಂದರೂ, ಆ ವ್ಯಕ್ತಿ ತನ್ನ ಪರಿಚಯ ಹೇಳದೆ ಹಾಗೇ ಹೊರಟುಹೋದರು. ಪ್ರಸ್ತುತ ನಾನು ಒಂದೊಳ್ಳೆ ಕಂಪನಿಯಲ್ಲಿ ಮ್ಯಾನೇಜರ್‌ ಆಗಿರುವುದಕ್ಕೆ, ಅಂದು ನನ್ನ ಕೈ ಹಿಡಿದ ಆ ಮಹಾನ್‌ ವ್ಯಕ್ತಿಯೇ ಕಾರಣ. 

ಪ್ರಭಾಕರ ಪಿ.

ಟಾಪ್ ನ್ಯೂಸ್

ಛತ್ತೀಸ್‌ಗಢದ ಕಂಕೇರ್‌ನಲ್ಲಿ ಎನ್ ಕೌಂಟರ್: ನಕ್ಸಲ್ ನಾಯಕ ಸೇರಿ 18 ಮಾವೋವಾದಿಗಳ ಹತ್ಯೆ

ಛತ್ತೀಸ್‌ಗಢದ ಕಂಕೇರ್‌ನಲ್ಲಿ ಎನ್ ಕೌಂಟರ್: ನಕ್ಸಲ್ ನಾಯಕ ಸೇರಿ 18 ಮಾವೋವಾದಿಗಳ ಹತ್ಯೆ

UPSC Result: ಬೀದರ್ ನ ಮೊಹಮ್ಮದ್ ಅಸೀಮ್‌ ಮುಜತೇಬಾಗೆ 481ನೇ ರ‍್ಯಾಂಕ್‌

UPSC Result: ಬೀದರ್ ನ ಮೊಹಮ್ಮದ್ ಅಸೀಮ್‌ ಮುಜತೇಬಾಗೆ 481ನೇ ರ‍್ಯಾಂಕ್‌

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

19

Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್‌

BCCI instructions to share photos of the IPL match day ground!

IPL 2024 ಪಂದ್ಯ ದಿನ ಮೈದಾನದ ಫೋಟೋ ಹಂಚದಂತೆ ಬಿಸಿಸಿಐ ಸೂಚನೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

7-

Obsessive Psychiatry: ಗೀಳು ಮನೋರೋಗ

ಛತ್ತೀಸ್‌ಗಢದ ಕಂಕೇರ್‌ನಲ್ಲಿ ಎನ್ ಕೌಂಟರ್: ನಕ್ಸಲ್ ನಾಯಕ ಸೇರಿ 18 ಮಾವೋವಾದಿಗಳ ಹತ್ಯೆ

ಛತ್ತೀಸ್‌ಗಢದ ಕಂಕೇರ್‌ನಲ್ಲಿ ಎನ್ ಕೌಂಟರ್: ನಕ್ಸಲ್ ನಾಯಕ ಸೇರಿ 18 ಮಾವೋವಾದಿಗಳ ಹತ್ಯೆ

6-thyroid

Thyroid Disease: ಥೈರಾಯ್ಡ್ ಅನಾರೋಗ್ಯ ನಿರ್ಲಕ್ಷಿಸಿದರೆ ಮಾರಕವಾದೀತು ಎಚ್ಚರ!

5-shirva

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇವಸ್ಥಾನ

UPSC Result: ಬೀದರ್ ನ ಮೊಹಮ್ಮದ್ ಅಸೀಮ್‌ ಮುಜತೇಬಾಗೆ 481ನೇ ರ‍್ಯಾಂಕ್‌

UPSC Result: ಬೀದರ್ ನ ಮೊಹಮ್ಮದ್ ಅಸೀಮ್‌ ಮುಜತೇಬಾಗೆ 481ನೇ ರ‍್ಯಾಂಕ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.