ನಿನಗಾಗಿ ಕಾಯುತ್ತಲೇ ಇರುವೆ.. ಬಾ ನನ್ನ ಒಲವೇ..


Team Udayavani, May 28, 2019, 10:04 AM IST

waiting

“ಲೋ, ನಾವಿನ್ನೂ ಲೈಫ‌ಲ್ಲಿ ಸೆಟಲ್‌ ಆಗ್ಬೇಕು . ಯಾರ ಮೇಲೂ ಡಿಪೆಂಡ್‌ ಆಗ್ಬಾರ್ದಲ್ವಾ? ಕೆಲಸದ ಕಡೆ ಗಮನ ಕೊಡೋ. ನಾ ನಿನ್ನ ಬಿಟ್ಟು ಎಲ್ಲೂ ಹೋಗಲ್ಲ ಕಣೋ ಚಿನ್ನಪ್ಪಿ’.. ಅಂತೆಲ್ಲ ಬದುಕಿನ ಪಾಠ ಹೇಳಿ, ವಾಸ್ತವಕ್ಕೆ ಎಳತಂದು ಭವಿಷ್ಯದ ಕನಸುಗಳಿಗೆ ಇವತ್ತಿನಿಂದಲೇ ನೀರೆರೆಯುವ ಜಾಣೆ ನೀನು.

ಹಾಯ… ಚಿಂಪ್ಲಿ , ನಿನ್ನ ಚುಮು ಚುಮು ನೆನಪು ಮುಂಜಾನೆಯೇ ನನ್ನನ್ನ ಎಬ್ಬಿಸಿತು. ನೀ ಎಂದರೆ ಹೀಗೆ ಕಣೇ, ಸಾವಿರ ಅಚ್ಚರಿಗಳ ಅಪರೂಪದ
ಗುತ್ಛ. ಅದೆಷ್ಟೋ ದಿನಗಳ ತನಕ ಸದ್ದೇ ಇಲ್ಲದೆ ಉಳಿದು ಬಿಡುತ್ತೀಯ. ಕಾಲ… ಮಾಡಿದರೆ ಮೊಬೈಲ… ಸ್ವಿಚ್‌ ಆಫ್. ನಿನ್ನ ಬಿಟ್ಟಿರಲಾಗದೆ ಒಳಗೊಳಗೇ ಕುದ್ದು ಹೋಗಿ , ನಿನ್ನ ಮನೆಗೇ ಬಂದುಬಿಡೋಣ ಅಂದುಕೊಂಡಾಗೆಲ್ಲ ಎಂಥ¨ªೋ ಅಹಂ ಅಡ್ಡಬಂದು, ಸುಳ್ಳೇ ನೀನೇ ಬರಲಿ ಅಂತ ಚಡಪಡಿಸುತ್ತಾ ಕಾಯೋದು. ಅದು ಸಾಧ್ಯವಾಗದೇ ಹೋದಾಗ ಖುದ್ದು ನಾನೇ ನಿನ್ನ ಹುಡುಕಿಕೊಂಡು ಅಲೆಯುತ್ತಾ, ಕದರೂ ಒಮ್ಮೆ ನೋಡಿ ಬಿಡೋಣ ಅಂದುಕೊಳ್ಳುತ್ತಾ ಕಳ್ಳ ಹೆಜ್ಜೆಗಳಲ್ಲೇ ನಿನ್ನತ್ತ ನಡೆಯೋದು. ಹೀಗೆ, ನಿನ್ನ ಹುಡುಕ ಹೊರಟಾಗೆಲ್ಲೇ ನಾನು ಸೋತು ಹೋಗಿದ್ದೇನೆ. ನೀ ಇನ್ನೇನೋ ನನ್ನ ಕೈಯಿಂದ ಜಾರಿ ಹೋದೆಯೇನೋ ಅಂದುಕೊಂಡಾಗೆಲ್ಲಾ ತಟ್ಟನೆ ಎದುರಾಗಿಬಿಡುತ್ತೀಯಲ್ಲ? ಅದೇ ನನಗೆ ಅಚ್ಚರಿ.

ನನ್ನೆಲ್ಲಾ ಕೋಪ, ನಿನ್ನ ಮುಗುಳ್ನಗೆಯ ಬೆಚ್ಚನೆಯ ಅಪ್ಪುಗೆಗೆ ಕರಗಿ ಹೋಗುತ್ತದೆ. ನಿನ್ನನ್ನ ಹೇಗೆಲ್ಲಾ ತರಾಟೆಗೆ ತಗೋಬೇಕೆಂಬ ನನ್ನ ಮನೋಲೋಕದ ತಾಲೀಮು ಠುಸ್‌ ಪಟಾಕಿಯಂತಾಗುತ್ತದೆ. ಮನಸು ಮಾತೆಲ್ಲಾ ಮರೆತು ನಿನ್ನ ಕಿರುಬೆರಳು ಹಿಡಿದು ಹೊಸತೊಂದು ಲೋಕದೆಡೆಗೆ ನಡೆದು ಬಿಡುತ್ತದೆ. ನನ್ನನ್ನ ಒಬ್ಬಂಟಿಯಾಗಿಸಿ, ದೂರ ಮಾಡಿ ಹೋಗಿಬಿಡುತ್ತೀಯಲ್ಲ ಅಂತೆಲ್ಲ ರೊಳ್ಳೆ ತೆಗೆದರೆ, “ಸರಿ, ನಾಳೇನೇ ನಮ್ಮಿಬ್ಬರ ಮದ್ವೆ ಕಣೋ ಓಕೆನಾ?’ ಅನ್ನುತ್ತೀಯಲ್ಲ? ಆಗಿನ ಸಂಭ್ರಮವನ್ನು ಹೇಗೆ ವಿವರಿಸಲಿ?

“ಲೋ, ನಾವಿನ್ನೂ ಲೈಫ‌ಲ್ಲಿ ಸೆಟಲ್‌ ಆಗ್ಬೇಕು . ಯಾರ ಮೇಲೂ ಡಿಪೆಂಡ್‌ ಆಗ್ಬಾರ್ದಲ್ವಾ? ಕೆಲಸದ ಕಡೆ ಗಮನ ಕೊಡೋ. ನಾ ನಿನ್ನ ಬಿಟ್ಟು ಎಲ್ಲೂ ಹೋಗಲ್ಲ ಕಣೋ ಚಿನ್ನಪ್ಪಿ’.. ಅಂತೆಲ್ಲ ಬದುಕಿನ ಪಾಠ ಹೇಳಿ, ವಾಸ್ತವಕ್ಕೆ ಎಳತಂದು ಭವಿಷ್ಯದ ಕನಸುಗಳಿಗೆ ಇವತ್ತಿನಿಂದಲೇ ನೀರೆರೆಯುವ ಜಾಣೆ ನೀನು. ಹಳೆಯ ನೆನಪುಗಳು, ಇವತ್ತಿನ ಕ್ಷಣಗಳು, ಭವಿಷ್ಯದ ಕನಸುಗಳು ಎಲ್ಲವನ್ನೂ ಸುಂದರವಾಗಿಸಿಕೊಳ್ಳುವ ಅಪರೂಪದ ಹುಡುಗಿ ನೀನು.

ನನ್ನ ಇಡೀ ಬದುಕನ್ನ ನಿನ್ನ ಕೈಗೊಪ್ಪಿಸಿ ನಾ ನಿರಾಳವಾಗಿರಬಲ್ಲೆ ಕಣೆ ಹುಡುಗಿ. ಆದರೆ ಹೀಗೆ ತುಂಬಾ ದಿನ ಕಾಯಿಸಬೇಡ. ನಿನಗಾಗಿ ಪುಟ್ಟದೊಂದು ಗೂಡು ಕಟ್ಟುತ್ತಿದ್ದೇನೆ. ಆ ಗೂಡು ಸೇರಿದ ಮೇಲೆ ನಾನೇ ನಿನ್ನ ನೆರಳು. ನನ್ನೊಳಗಿನ ಹಾಡುಗಳಿಗೆಲ್ಲ ನೀನೇ ಕೊರಳು.

 -ನಿನ್ನವನು
ಜೀವ ಮುಳ್ಳೂರು

ಟಾಪ್ ನ್ಯೂಸ್

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.