ಕೊಡೆ ಕೊಡ್ತೀನಿ ಕುಣಿಬೇಕ್‌ ನೋಡ್‌!


Team Udayavani, May 23, 2017, 10:46 AM IST

kode.jpg

ನನಗೆ ಹೇಗಾದರೂ ಮಳೆಯಿಂದ ನನ್ನ ಲ್ಯಾಪ್‌ಟಾಪ್‌ ರಕ್ಷಿಸಲೇಬೇಕಿತ್ತು. ಹಾಗಾಗಿ ಮಳೆಯಲ್ಲಿ ಒಂದೆರಡು ಸ್ಟೆಪ್ಪು ಹಾಕಿದ್ದೂ ಆಯಿತು, ನನ್ನ ಸ್ನೇಹಿತರ ಮುಂದೆ ನಗೆಪಾಟಲಿಗೆ ಈಡಾಗಿದ್ದೂ ಆಯಿತು. ಸರಿ ಅವಳು ಹೇಳಿದಂತೆ ಡ್ಯಾನ್ಸ್‌ ಮಾಡಿಯಾಯಿತಲ್ಲ, ಇನ್ನಾದರೂ ಕೊಡೆ ಕೊಡಿ ಅಂತ ಕೇಳಿದೆ. ಅಷ್ಟರಲ್ಲಿ ಮಳೆ ನಿಂತುಹೋಗಬೇಕೇ?! 

ಪಂಚನದಿಗಳ ನಾಡು ಬಿಜಾಪುರದಿಂದ ಪಶ್ಚಿಮ ಘಟ್ಟದ ಸೆರಗಿಗೆ ಅಂಟಿಕೊಂಡಿರುವ ಬೆಳಗಾವಿ ನಗರಕ್ಕೆ ಉನ್ನತ ಶಿಕ್ಷಣಕ್ಕಾಗಿ ಬಂದಿದ್ದೆ. ಆಗ, ಮುಂಗಾರು ಮಳೆಯಲ್ಲಿ ಮೀಯುತ್ತಿದ್ದ ನಕ್ಷತ್ರ ಕಣ್ಣಿನ, ಗುಂಗುರು ಕೂದಲ, ದುಂಡು ಮುಖದ ಕನ್ಯೆಯ ಬಗ್ಗೆ ಮನಸಿನಲ್ಲಾದ ತಳಮಳದ ಬಗ್ಗೆ ಹೇಳಲೇಬೇಕಾಗಿದೆ.

ಆ ಹುಡುಗಿಯನ್ನು ನೋಡಿದ ತಕ್ಷಣ, ಇವಳು ಮುದ್ದು ಮನಸಿನ ಗುಲ್‌ಮೊಹರ್‌ ಹುಡುಗಿ ಅನ್ನಿಸಿಬಿಟ್ಟಿತು. ಉತ್ತರ ಕರ್ನಾಟಕದಲ್ಲಿ ಪ್ರೀತಿಯ ಸಂಕೇತವೇ ಎಂದುಕೊಂಡ ಗುಲ್‌ಮೊಹರ್‌ ಹೂ ನೆನಪಾದದ್ದು, ಈ ಕೆಂಪು ಗುಲ್‌ಮೊಹರ್‌ ಹೂವಿನ ಹಾಗಿದ್ದ ಅವಳ ಮುಖವನ್ನು ನೋಡಿದಾಗ. ಅವಳನ್ನು ನೋಡುತ್ತಿದ್ದಂತೆ ಸಮಯ ಹೋಗಿದ್ದೇ ತಿಳಿಯಲಿಲ್ಲ. ಆ ಬೆಡಗಿಯ ವರ್ಣನೆ ಮಾಡಲಿಕ್ಕೆ ಕವಿಯಾಗಬೇಕೆಂದೆನಿಸಿದ್ದು ನಿಜ.

ಪ್ರತಿದಿನದಂತೆ ಧೋ ಎನ್ನುತ್ತಿದ್ದ ಮುಂಗಾರು ಮಳೆ ಒಂದು ಕಡೆ, ಬೆಳಗಾವಿ ನಗರದಿಂದ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ದೂರದ ಹಾದಿ ಅನ್ನೋದು ಇನ್ನೊಂದು ಕಡೆ, ಮಳೆಯ ಮಧ್ಯೆ ಸರಕಾರಿ ಬಸ್‌ ಹಿಡಿದು ಹೋಗುವುದೆಂದರೆ ಜಂಗಿ ಕುಸ್ತಿ ಮಾಡಿದಂತೆಯೇ ಸರಿ. ಆವತ್ತು, ಬಸ್‌ನಲ್ಲಿ ಸೀಟ್‌ ಸಿಗದೆ ಮುಂಬದಿ ಡೋರ್‌ನಲ್ಲಿ ನಿಂತಿದ್ದೆ. ಆಗ ಮಳೆ, ಬಸ್‌, ಕಾಲೇಜ್‌ ಎಂಬ ಗೊಂದಲದ ಮಧ್ಯೆ ಕಂಡವಳೇ ಈ ಗುಲ್‌ಮೊಹರ್‌ ಹುಡುಗಿ.

ಮಳೆ ಬರುತ್ತಿತ್ತು. ಆಕೆ‌ ತನ್ನ ಕೈಯನ್ನು ಕಿಟಕಿಯ ಹೊರ ಹಾಕಿ ಚಿಟಪಟ ಮಳೆಯ ಹನಿಗಳೊಂದಿಗೆ ಆಡುತ್ತಿದ್ದಳು. ಅವಳ ಆ ಆಟ ವಿಶ್ವವಿದ್ಯಾಲಯ ತಲುಪುವವರೆಗೂ ನಡೆದಿತ್ತು. ಅಂದು ಕಂಡಕ್ಟರ್‌, ಕಾಲೇಜಿನ ಸಮೀಪವಿರುವ ಹೈವೇ ಸ್ಟಾಪ್‌ನಲ್ಲಿ ಬಸ್‌ ನಿಲ್ಲಿಸಿದರು. ಅಲ್ಲಿಂದ ವಿ.ವಿ. ಅರ್ಧ ಕಿ.ಮೀ. ದೂರ. ತುಂಬಾ ಜನರು ಇಳಿದುಕೊಂಡರು. ಆ ಮಳೆಯಲ್ಲಿಯೇ ಒದ್ದೆಯಾಗಿ ಯೂನಿವರ್ಸಿಟಿಯತ್ತ ದಾಪುಗಾಲಿಡತೊಡಗಿದೆವು. 

ನನ್ನ ಬ್ಯಾಗ್‌ನಲ್ಲಿ ಲ್ಯಾಪ್‌ಟಾಪ್‌ ಇತ್ತು. ಮಳೆಯಲ್ಲಿ ನೆನೆದರೆ ಏನು ಮಾಡುವುದೆಂಬ ಚಿಂತೆಯಲ್ಲಿ ಬ್ಯಾಗನ್ನು ಎದೆಗವುಚಿಕೊಂಡು ನಡೆಯತೊಡಗಿದೆ. ಅಷ್ಟರಲ್ಲೇ ಕಣ್ಣಿಗೆ ಬಿದ್ದಳು ಗುಲ್‌ಮೊಹರ್‌ ಹುಡುಗಿ. ಕೈಯಲ್ಲಿ ಕೊಡೆ ಇದ್ದರೂ ಬಿಡಿಸದೆ ಮಳೆಯಲ್ಲಿ ನೆನೆಯುತ್ತ ಹೋಗುತ್ತಿದ್ದಳಾಕೆ. ಎಂಥ ಹುಚ್ಚು ಹುಡುಗಿಯಪ್ಪಾ ಎನ್ನಿಸಿತು. ನನ್ನಿಂದ ತಡೆಯಲಾಗಲಿಲ್ಲ. ಅವಳನ್ನು ಮಾತನಾಡಿಸಿಯೇಬಿಡೋಣವೆಂದು ಅವಳ ಬಳಿ ತೆರಳಿ ಕೇಳಿದೆ: “ರೀ, ಕೊಡೆಯಿದ್ದರೂ ಮಳೆಯಲ್ಲಿ ಯಾಕೆ ನೆನೆಯುತ್ತಿದ್ದೀರಾ?’. “ಅದೆಲ್ಲಾ ನಿಮಗ್ಯಾಕ್ರೀ? ಮಳೆಯಲ್ಲಿ ನೆನೆಯೋದು ನಂಗಿಷ್ಟ. ಏನಿವಾಗ?’ ಎಂದು ನಡೆದುಹೋಗತೊಡಗಿದಳು.

ನಿಜ ಹೇಳಬೇಕೆಂದರೆ ನನಗೆ ಅವಳಲ್ಲಿ ಮಾತಾಡಬೇಕೆಂದಿರಲಿಲ್ಲ. ನನ್ನ ಲ್ಯಾಪ್‌ಟಾಪ್‌ಅನ್ನು ಮಳೆಯಿಂದ ರಕ್ಷಿಸಲು ಕೊಡೆ ಕೇಳ್ಳೋಣ ಅಂತ ಮಾತನಾಡಿಸಿದ್ದು. ಮುಂದೆ ಹೋಗುತ್ತಿದ್ದ ಅವಳ ಬಳಿಗೆ ಮತ್ತೆ ಓಡಿ “ರೀ, ಬ್ಯಾಗಲ್ಲಿ ಲ್ಯಾಪ್‌ಟಾಪ್‌ ಇದೆ. ಮಳೆಯಲ್ಲಿ ನೆಂದು ಹೋಗ್ತಿದೆ. ಪ್ಲೀಸ್‌, ನಿಮ್ಮ ಕೊಡೆ ಕೊಡು¤ತೀರಾ?’ ಎಂದು ಕೇಳಿದೆ. “ಕೊಡೆ ಕೊಡ್ತೀನ್ರಿ. ಆದ್ರ ನೀವು ಈ ಖಾಲಿ ರೋಡ್‌ನಾÂಗ ಮಳೆಯಲ್ಲಿ ಡ್ಯಾನ್ಸ್‌ ಮಾಡಬೇಕ್‌. ಅವಾಗ್‌ ಕೊಡೆ ಕೊಡ್ತೀನಿ’ ಎಂದಳು. ಆಕೆಯ ಚಾಲೆಂಜ್‌ ಕೇಳಿ ನಾನು ಸುಸ್ತು ಹೊಡೆದಿದ್ದೆ. 

ನನಗೆ ಹೇಗಾದರೂ ಮಳೆಯಿಂದ ನನ್ನ ಲ್ಯಾಪ್‌ಟಾಪ್‌ ರಕ್ಷಿಸಲೇಬೇಕಿತ್ತು. ಹಾಗಾಗಿ ಮಳೆಯಲ್ಲಿ ಒಂದೆರಡು ಸ್ಟೆಪ್ಪು ಹಾಕಿದ್ದೂ ಆಯಿತು, ನನ್ನ ಸ್ನೇಹಿತರ ಮುಂದೆ ನಗೆಪಾಟಲಿಗೆ ಈಡಾಗಿದ್ದೂ ಆಯಿತು. ಸರಿ ಅವಳು ಹೇಳಿದಂತೆ ಡ್ಯಾನ್ಸ್‌ ಮಾಡಿಯಾಯಿತಲ್ಲ, ಇನ್ನಾದರೂ ಕೊಡೆ ಕೊಡಿ ಅಂತ ಕೇಳಿದೆ. ಅಷ್ಟರಲ್ಲಿ ಮಳೆ ನಿಂತುಹೋಗಬೇಕೇ?! ಅವಳು ನನ್ನ ಅವಸ್ಥೆ ಕಂಡು ಮನಸಾರೆ ನಕ್ಕುಬಿಟ್ಟಳು. ನಗುತ್ತಲೇ ಕ್ಲಾಸಿಗೆ ಹೋದಳು. ಆವತ್ತಿನಿಂದ ಆ ಗುಲ್‌ಮೊಹರ್‌ ಗೆಳತಿ ಮತ್ತೆ ಯಾವಾಗ ಸಿಗುತ್ತಾಳ್ಳೋ ಎಂದು ಕಾಯುವುದೇ ನನ್ನ ಹೊಸ ಹವ್ಯಾಸವಾಗಿಬಿಟ್ಟಿದೆ.

– ಆರೀಫ್ ವಾಲೀಕಾರ, ಬೆಳಗಾವಿ

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.