ಆ ವ್ಯಕ್ತಿ ಬರದೇ ಹೋಗಿದ್ದರೆ…


Team Udayavani, Dec 3, 2019, 12:38 PM IST

josh-tdy-11

ನನ್ನ ಮೊಮ್ಮಗನನ್ನು ಮೂಡಬಿದಿರೆಯ ಆಳ್ವಾಸ್‌ ಕಾಲೇಜಿನ ಹಾಸ್ಟೆಲ್‌ಗೆ ಸೇರಿಸುವ ಸಲುವಾಗಿ ಬಾಡಿಗೆ ಕಾರೊಂದರಲ್ಲಿ ಬೆಳಗಿನ ಜಾವ ಐದು ಘಂಟೆಗೆ ಚಿತ್ರದುರ್ಗದಿಂದ ಹೊರಟೆ. ಅಲ್ಲಿ ನಮ್ಮ ಎಲ್ಲ ಕೆಲಸ ಮುಗಿಸಿ ಮತ್ತೆ ನಾನು ನನ್ನ ಮಗಳು ಲಲಿತೆ ವಾಪಸ್ಸು ಹೊರಟಾಗ ಸಂಜೆ 6 ಗಂಟೆ. ಮಳೆಯ ಸೂಚನೆ ಜೋರಾಗಿಯೇ ಇತ್ತು.

ಹೇಗೂ ಕಾರು ಇದೆಯಲ್ಲ ಅನ್ನೋ ಧೈರ್ಯ. ಸಂಜೆ ಬಂದನೆಂಟರು ವಾಪಸ್‌ ಹೋಗೋಲ್ಲ ಅನ್ನೋ ಹಾಗೆ ಮುಂಗಾರು ಮಳೆ

ಧೋ ಎಂದು ಸುರಿಯತೊಡಗಿತು. ಗಂಟೆ ರಾತ್ರಿ ಒಂಭತ್ತು. ಇದ್ದಕ್ಕಿದ್ದಂತೆ ನಮ್ಮ ಕಾರು ಧಡ್‌, ಧಡ್‌ ಎಂದು ಎಡ

ತಿರುವಿನ ಪ್ರಪಾತದ ಪಕ್ಕದಲ್ಲಿ ನಿಂತುಬಿಟ್ಟಿತು. ಕಾರಿನೊಳಗಿದ್ದ ನಮ್ಮ ಎದೆ ಝಲ್‌ ಎಂದಿತು.

ಹೊರಗೆ ಗಾಢಾಂಧಕಾರ. ಕಾರಿನ ಲೈಟೂ ಹೊತ್ತುತ್ತಿಲ್ಲ. ನಮಗೆ ಕಾಣದ ದೇವರೆಲ್ಲ ನೆನಪಿಗೆ ಬಂದರು. ಏನಾಯ್ತಪ್ಪ ಎಂದೆ ಡ್ರೆವರ್‌ಗೆ. “ಮೇಡಮ್‌, ಕಾರು ಒಂಚೂರೂ ಮುಂದೋಗ್ತಿಲ್ಲಅಂದ . ರಾತ್ರಿ ಸಮಯ. ಕಾರಿನಲ್ಲಿ ತಾಯಿಮಗಳು ಇಬ್ಬರೇ! ಅಷ್ಟರಲ್ಲಿ ಎದುರಿಗೆ ಸ್ಕೂಟರ್‌ ಸವಾರನೊಬ್ಬ ಬಂದವನೇ, ಬೆಳಕಿಗಾಗಿ ಬೈಕ್‌ ಚಾಲನೆಯಲ್ಲೇ ಇಟ್ಟು, “ಏನಾಗಿದೆ?’ ಅಂದ. ಡ್ರೈವರ್‌ ಬೈಕ್‌ನ ಬೆಳೆಕಿನಲ್ಲಿಯೇ ಬಾನೆಟ್‌ ತೆರೆದು ನೋಡಿ ಅಣ್ಣಾ, ಗಾಡಿಯ ಬೆಲ್ಟ್ ಕಟ್ಟಾಗಿದೆ. ಕಾರು ಮುಂದೆ ಹೋಗೋಲ್ಲಎಂದ. ಅವನ ಮಾತಿಂದ ನಮ್ಮ ಜಂಘಾಬಲವೇ ಉಡುಗಿಹೋಯ್ತು. ಈ ರಾತ್ರಿಯಲ್ಲಿ ನಾವು ಎಲ್ಲಿ ಹೋಗಬೇಕು ಈ ಕಾಡಿನಲ್ಲಿ? ಮಾಂಗಲ್ಯ ಸರ, ಕೈಯಲ್ಲಿ ನಾಲ್ಕು ಬಳೆ, ಸ್ವಲ್ಪ ದುಡ್ಡು ಇತ್ತು.. ಈ ಸ್ಕೂಟರ್‌ನವನು ಏನಾದರೂ ನಕ್ಸಲೈಟೆ? ಹೀಗೆ ಏನೇನೋ ಕೆಟ್ಟ ಆಲೋಚನೆಗಳೇ ಧುತ್ತೆಂದು ಎರಗಿ ಆ ಚಳಿಯಲ್ಲೂ ಮೈ ಬೆವರಿದ್ದು ದಿಟ! ಆಗ ಸ್ಕೂಟರಿನವನು ಅಮ್ಮಾ ನಮ್ಮ ಮನೆಗೇ ಬನ್ನಿ .

ಅಲ್ಲೇ ಉಳ್ಕೊಂಡು ಬೆಳಗ್ಗೆ ಹೋಗಿಅಂದ. ಈ ದಾರಿಹೋಕನನ್ನು ನಂಬುವುದು ಹೇಗೆ? ಇಲ್ಲೇ ಇರೋಣವೆಂದರೆ ಕಾರಿನ ಒಳಗೆ ರಾತ್ರಿಯಿಡೀ ಕಳೆಯೋದು ಹೇಗೆ? ನಾನು ಏನೂ ಮಾತನಾಡದದ್ದನ್ನು ನೋಡಿ ಅಮ್ಮಾ, ಬೇರೆ ಯಾವುದಾದ್ರೂ ಕಾರ್‌ ಬಾಡಿಗೆಗೆ ಹೇಳಾ ಎಂದ. ಆಯ್ತು ಎಂದೆ. ಫೋನಿನಲ್ಲಿ ಮಾತನಾಡಿ ಇನ್ನು ಹತ್ತು ನಿಮಿಷದಲ್ಲಿ ಬೇರೆ ಕಾರು ಬರುತ್ತೆ. ಬಾಡಿಗೆ ಮಾತ್ರ ಅವನು ಹೇಳಿದಷ್ಟು ಕೊಡಿಅಂದ. ಕಾರು ಬಂದನಂತರ ಹೋಗಪ್ಪಾ ಎಂದೆ ನಾನು. ಹದಿನೈದು ನಿಮಿಷದ ನಂತರ ಕಾರೊಂದು ಬಂದು ನಿಂತಿತು. ಆಗ ನನಗೆ ಸ್ವಲ್ಪ ಧೈರ್ಯ ಬಂತು. ನಿನ್ನ ಹೆಸರೇನಪ್ಪ ಎಂದೆ. ಹರ್ಷ ಅಂದ. ನಮ್ಮನ್ನು ಬೇರೊಂದು ಕಾರಿಗೆ ಹತ್ತಿಸಿ, “ನಾನು ಬರ್ತಿನಿ ಮೇಡಮ್‌ಅಂತ ಹೊರಟೇ ಬಿಟ್ಟ. ಯಾಕೋ ನನ್ನ ಕಣ್ಣಾಲಿಗಳು ತುಂಬಿ ಬಂದವು.

ಆವತ್ತು ಚಿತ್ರದುರ್ಗವನ್ನು ತಲುಪಿದಾಗ ರಾತ್ರಿ 12 ಘಂಟೆ. ಹರ್ಷ ಯಾರೋ ಗೊತ್ತಿಲ್ಲ. ಆದರೆ ಇಂದು ನಮ್ಮ ಕುಟುಂಬದವರಿಗೆಲ್ಲ ತುಂಬಾ ಆತ್ಮೀಯ. ಆವತ್ತು ದೇವರೇ ಹರ್ಷನ ರೂಪದಲ್ಲಿ ಬಂದು ನಮ್ಮನ್ನು ಕಾಪಾಡಿದ ಎಂಬ ನಂಬಿಕೆ ನಮ್ಮದು.

 

ಎಮ್‌.ಎಸ್‌.ಮಂಜುಳ ಡಾ. ಸ್ವಾಮಿ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.