ತಗೋಳೆ ತಗೋಳೇ,ನನ್ನೇ ತಗೋಳೇ!


Team Udayavani, May 21, 2019, 6:00 AM IST

shutterstock_287308562

ಈ ಜಗತ್ತಿನಲ್ಲಿ ಒಬ್ಬೊಬ್ಬರದ್ದು ಒಂದೊಂದು ಮನಃಸ್ಥಿತಿ. ಹಾಗಾಗಿ, ಪ್ರತಿಯೊಬ್ಬರೂ ತಮ್ಮ ಅರಿವಿಗೆ ಬಂದಿದ್ದನ್ನಷ್ಟೇ ವಿದ್ಯಾರ್ಥಿಗಳ ಮುಂದಿಡುತ್ತಾರೆ ಮತ್ತು ಹೇರುತ್ತಾರೆ. ಹಣ ಕೊಡುವ ಓದು ಮೇಲು, ಬೇಗ ಜೀವನವನ್ನು ಸೆಟ್ಲು ಮಾಡುವ ಓದು ಶ್ರೇಷ್ಠ ಎನ್ನುವ ಫೀಲ್‌ ಹುಟ್ಟಿಸುತ್ತಾರೆ…

ಈಗೀಗ ವಿಚಿತ್ರ ನಂಬಿಕೆಯೊಂದು ವಿದ್ಯಾರ್ಥಿಗಳ ನಿದ್ದೆಗೆಡಿಸುತ್ತಿದೆ. ಸೈನ್ಸ್‌ ಹೆಚ್ಚು ಆರ್ಟ್ಸ್ ಕಡಿಮೆ ಅನ್ನೋ ಮೆಂಟಾಲಿಟಿಯವರ ಟಾರ್ಚರ್‌ ಅದು. “ಸೈನ್ಸ್‌ ಬುದ್ಧಿವಂತರಿಗೆ, ಆರ್ಟ್ಸ್ ದಡ್ಡರಿಗೆ’  ಅನ್ನೋ ಒಂದು ಅಲಿಖೀತ ಸಂವಿಧಾನವನ್ನು ಬರೆದು, ಅದನ್ನು ಮಕ್ಕಳ ಮೇಲೆ ಹೇರುತ್ತಲೇ ಇರುತ್ತಾರೆ. ಮಕ್ಕಳು ಗಲಿಬಿಲಿಗೊಳ್ಳುತ್ತಾರೆ. ಆಗ ವಿದ್ಯಾರ್ಥಿ, “ಅಯ್ಯೋ! ಮುಂದೇನು?’ ಎಂದು ತಲೆಮೇಲೆ ಕೈಹೊತ್ತು ಕೂರುತ್ತಾನೆ. ಕವಲು ದಾರಿಯಲ್ಲಿ ನಿಂತು ಕಣ್‌ ಕಣ್‌ ಬಿಡುತ್ತಾನೆ. ತೊಂಭತ್ತರಷ್ಟು ಅಂಕ ಪಡೆದವನಿಗೆ ಸಾಹಿತ್ಯ ಓದುವ ಆಸೆ ಇದ್ದರೂ ಎಳೆದುಕೊಂಡು ಹೋಗಿ ಲ್ಯಾಬಿನೊಳಗೆ ನೂಕುವುದು ಈಗಿನ ಜಮಾನ.

ಸೈನ್ಸ್‌ಗೆ ಭಾವರಸಗಳಿಲ್ವೇ?
ಮತ್ತೆ ಕೆಲವರಿದ್ದಾರೆ, “ಲ್ಯಾಬ್‌ನಿಂದ ಬರುವ ಕೆಟ್ಟ ವಾಸನೆಯೇ ಸೈನ್ಸು’, “ರಸಭಾವಗಳು ಇಲ್ಲದ್ದು. ಅದೆಂಥ ಓದು’ ಎನ್ನುವ ಕೀಳು ಭಾವದ ವ್ಯಾಖ್ಯಾನ ಅವರದ್ದು. ಈ ಜಗತ್ತಿನಲ್ಲಿ ಒಬ್ಬೊಬ್ಬರದ್ದು ಒಂದೊಂದು ಮನಃಸ್ಥಿತಿ. ಹಾಗಾಗಿ, ಪ್ರತಿಯೊಬ್ಬರೂ ತಮ್ಮ ಅರಿವಿಗೆ ಬಂದಿದ್ದನ್ನಷ್ಟೇ ವಿದ್ಯಾರ್ಥಿಗಳ ಮುಂದಿಡುತ್ತಾರೆ ಮತ್ತು ಹೇರುತ್ತಾರೆ. ಹಣ ಕೊಡುವ ಓದು ಮೇಲು, ಬೇಗ ಜೀವನವನ್ನು ಸೆಟ್ಲು ಮಾಡುವ ಓದು ಶ್ರೇಷ್ಠ ಎನ್ನುವ ಫೀಲ್‌ ಹುಟ್ಟಿಸುತ್ತಾರೆ. ಅದು ನಿಜಕ್ಕೂ ತಪ್ಪು. ಕೋರ್ಸಿನ ಶ್ರೇಷ್ಠತೆ ಅದು ಕೊಡುವ ಕೆಲಸದಲ್ಲಿ ಇಲ್ಲ, ತರುವ ಹಣದಲ್ಲೂ ಇಲ್ಲ. ಅದನ್ನು ಬದುಕಿಗೆ ಒಗ್ಗಿಸಿಕೊಳ್ಳುವುದರಲ್ಲಿದೆ. ಶಿಕ್ಷಣವೆಂದರೆ, ಹಣವಲ್ಲ ಬದುಕು.

ಆರ್ಟ್ಸ್ ? ಸೈನ್ಸೋ..?
ಆ ವಿಚಾರವನ್ನು ವಿದ್ಯಾರ್ಥಿಗಳಿಗೆ ಬಿಟ್ಟುಬಿಡಿ. ವಿದ್ಯಾರ್ಥಿಯ ಮುಂದಿನ ಆಸಕ್ತಿ, ಗುರಿಗಳೇನು ಅನ್ನೋದು ಆತನಿಗಲ್ಲದೇ, ಬೇರಾರಿಗೂ ತಿಳಿಯೋದಿಲ್ಲ. ಎರಡರಲ್ಲೂ ಬದುಕಿದೆ. ಸೈನ್ಸ್‌ ತೆಗೆದುಕೊಂಡು, ಮೂವತ್ತು ಮಾರ್ಕ್‌ ಪಡೆದು ಪಾಸಾದರೆ, ಯಾರೂ ಕರೆದು ಕೆಲಸ ಕೊಡೋದಿಲ್ಲ. ಯಾವುದು ಓದಿ¤ದೀನಿ ಅನ್ನುವುದಕ್ಕಿಂತ ಹೇಗೆ ಓದಿ¤ದೀನಿ ಅನ್ನೋದೂ ಮುಖ್ಯವಾಗುತ್ತೆ. ಹಾಗಂತ, ಆರ್ಟ್ಸ್ ತೆಗೆದುಕೊಂಡವನು, ಕೈಲಾಗದವರೂ ಅಲ್ಲ. ಬದುಕಿಗೆ ಎರಡೂ ಬೇಕು. ಇವೆರಡು ಬದುಕಿನ ನಾಣ್ಯದ ಎರಡು ಮುಖಗಳು.

ಆರ್ಟ್ಸ್ ಸೊಗಸಾದ ಚಿತ್ರಗಳನ್ನು ರೂಪಿಸಿದರೆ, ಮಂದ ದೃಷ್ಟಿಯವರಿಗೆ ಅದು ಚೆನ್ನಾಗಿ ಕಾಣಿಸುವಂತೆ ಸೈನ್ಸ್‌ ಕನ್ನಡಕ ರೂಪಿಸುತ್ತದೆ. ಆರ್ಟ್ಸ್ ಒಂದೊಳ್ಳೆ ಸಿನಿಮಾವನ್ನು ಮಾಡಿದರೆ, ಸೈನ್ಸ್‌ ಮಾಡಿದ ಟಿವಿಯಲ್ಲಿ ಅದನ್ನು ನೋಡಿ, ಶಿಳ್ಳೆ ಹೊಡೆಯುತ್ತೇವೆ. ಆರ್ಟ್ಸ್ ಒಂದು ಹಾಡನ್ನು ಕಟ್ಟಿದರೆ, ಸೈನ್ಸ್‌ ರೂಪಿಸಿದ ಮೊಬೈಲಿಂದ, ಇಯರ್‌ಫೋನ್‌ನಿಂದ ಅದನ್ನು ಕೇಳಿ ಎಂಜಾಯ್‌ ಮಾಡುತ್ತೇವೆ. ಈಗ ಹೇಳಿ ಯಾವುದು ಹೆಚ್ಚು? ಆಟೊÕàì, ಸೈನ್ಸೋ?

ಸೈನ್ಸ್‌ ಓದಿಗೆ ಹೆಚ್ಚು ವ್ಯಾಪಕತೆ ಇದೆ ಎಂದು ಬಿಂಬಿಸಲಾಗುತ್ತಿದೆ. ಆರ್ಟ್ಸ್ ಓದು ವ್ಯರ್ಥವೆಂದು ಸಾರಲಾಗುತ್ತಿದೆ. ಎಲ್ಲವೂ ಬರೀ ಬೊಗಳೆ. ಪ್ರತಿಯೊಂದಕ್ಕೂ ಅದರದೇ ಆದ ವಿಶಿಷ್ಟತೆ ಇದೆ. ಅದನ್ನು ಬಳಸಿಕೊಂಡು ಬೆಳೆಯುವ ಚಾಕಚಕ್ಯತೆ, ಆಸಕ್ತಿ ನಮ್ಮಲ್ಲಿ ಇರಬೇಕಷ್ಟೇ!

ವಿದ್ಯಾರ್ಥಿಯೇ ಅಂತಿಮ
ಎಸ್ಸೆಸ್ಸೆಲ್ಸಿಯಲ್ಲಿ ನಲವತ್ತು ಪರ್ಸೆಂಟು ತೆಗೆದುಕೊಂಡವನಿಗೆ ಡಾಕ್ಟರ್‌ ಆಗುವ ಯೋಗ್ಯತೆ ಇಲ್ಲ ಅನ್ನೋದು ಸರಿಯಲ್ಲ. ಆ ಪರೀಕ್ಷೆಯಲ್ಲಿ ಕೇಳಿದ ಪ್ರಶ್ನೆಗಳಿಗಿಂತ ಅವುಗಳನ್ನು ಹೊರತುಪಡಿಸಿ ಅವನಿಗೆ ಹೆಚ್ಚು ತಿಳಿದಿರಬಹುದು. ಯಾವುದು ಓದಬೇಕು ಅನ್ನೋದಕ್ಕೆ ಮಾರ್ಕ್‌ ಮಾತ್ರವೇ ಮುಖ್ಯ ಆಗಿರುವುದಿಲ್ಲ. ವಿದ್ಯಾರ್ಥಿಯ ಆಸಕ್ತಿಯೂ ಮುಖ್ಯ. ಅವನ ಸಾಮರ್ಥ್ಯವೂ ಅಷ್ಟೇ ಮುಖ್ಯ. ನೀವು ಬೇಕಾದರೆ ಪಕ್ಕದಲ್ಲಿ ಕುಳಿತು, ಆ ಕೋರ್ಸುಗಳ ಸಾಧಕ  ಬಾಧಕಗಳ ಬಗ್ಗೆ ಸಲಹೆ ನೀಡಬಹುದಷ್ಟೇ. ಹೆಚ್ಚೆಂದರೆ, ಆಯ್ಕೆಗಳನ್ನು ಮುಂದಿಡಬಹುದಷ್ಟೇ. ವಿದ್ಯಾರ್ಥಿ ತನಗೆ ಬೇಕಾಗಿರೋದನ್ನು ಆರಿಸಿಕೊಳ್ಳಲಿ.

ಆರ್ಟ್ಸ್ ಓದಿದವ ಬದುಕಿದ್ದ…
ಒಂದಾನೊಂದು ಕಾಡಿನಲ್ಲಿ ಇಬ್ಬರು ಗೆಳೆಯರು ನಡೆದು ಹೋಗುತ್ತಿದ್ದರು. ಒಬ್ಬ ಸೈನ್ಸ್‌ ಓದಿಕೊಂಡವ, ಇನ್ನೊಬ್ಬ ಆರ್ಟ್ಸ್. ಆ ದಾರಿಯಲ್ಲಿ ಸತ್ತ ಹುಲಿಯೊಂದರ ಅಸ್ತಿಪಂಜರ ಕಾಣುÕತ್ತೆ. ಸೈನ್ಸ್‌ ಓದಿದವನು “ಇದು ಹುಲಿ, ಅದರ ಎಲ್ಲ ಮೊಳೆಗಳನ್ನೂ ಜೋಡಿಸಿ ಅದಕ್ಕೆ ಪ್ರಾಣ ಕೊಡೋದು ಗೊತ್ತು. ಅದನ್ನು ಸೈನ್ಸ್‌ ನನಗೆ ಕಲಿಸಿದೆ’ ಅಂದ. ಆರ್ಟ್ಸ್ ಹುಡುಗನಿಗೆ, ಹುಲಿಯ ಕತೆಗಳು ಗೊತ್ತಿದ್ದವು. ಅದರ ಆಕ್ರಮಣದ ಬಗ್ಗೆ ನಾನಾ ಕತೆಗಳನ್ನು ಓದಿದ್ದ. ಅವನ ಮಾತು ಕೇಳದೇ, ಸೈನ್ಸ್‌ ಓದಿದವ ಹುಲಿಗೆ ಪ್ರಾಣಬರಿಸಿದ! ಎದ್ದು ಬಂದ ಹುಲಿ, ಅವನನ್ನು ತಿಂದು ಹಾಕಿತು! ಆರ್ಟ್ಸ್ ಹುಡುಗ ಬದುಕಿದ್ದ!

– ಸದಾಶಿವ್‌ ಸೊರಟೂರು

ಟಾಪ್ ನ್ಯೂಸ್

OTT: ಸದ್ದಿಲ್ಲದೆ ಓಟಿಟಿಗೆ ಬಂತು ʼಒಂದು ಸರಳ ಪ್ರೇಮಕಥೆ’: ಯಾವುದರಲ್ಲಿ ಸ್ಟ್ರೀಮಿಂಗ್?‌

OTT: ಸದ್ದಿಲ್ಲದೆ ಓಟಿಟಿಗೆ ಬಂತು ʼಒಂದು ಸರಳ ಪ್ರೇಮಕಥೆ’: ಯಾವುದರಲ್ಲಿ ಸ್ಟ್ರೀಮಿಂಗ್?‌

Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್‌ ಎಫ್‌ ಕೆನಡಿ ಹಿಟ್ಲರ್‌ ನನ್ನು ಬಂಧಿಸಿದ್ದು!

Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್‌ ಎಫ್‌ ಕೆನಡಿ ಹಿಟ್ಲರ್‌ ನನ್ನು ಬಂಧಿಸಿದ್ದು!

17

ನಿರ್ಮಾಪಕನಾದ ರಾಜಮೌಳಿ ಪುತ್ರ: ಎರಡು ಹೊಸ ಸಿನಿಮಾ ಅನೌನ್ಸ್; ಲೀಡ್‌ ರೋಲ್ ನಲ್ಲಿ ಫಾಫಾ

ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ

ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ

Apex

CAA: ದೇಶದಲ್ಲಿ ಸಿಎಎ ಜಾರಿಗೆ ತಡೆ ನೀಡಲ್ಲ, 3 ವಾರದೊಳಗೆ ಉತ್ತರ ನೀಡಿ: ಸುಪ್ರೀಂಕೋರ್ಟ್

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

Pan India: ಯಶ್‌ ʼಟಾಕ್ಸಿಕ್‌ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ

Pan India: ಯಶ್‌ ʼಟಾಕ್ಸಿಕ್‌ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

OTT: ಸದ್ದಿಲ್ಲದೆ ಓಟಿಟಿಗೆ ಬಂತು ʼಒಂದು ಸರಳ ಪ್ರೇಮಕಥೆ’: ಯಾವುದರಲ್ಲಿ ಸ್ಟ್ರೀಮಿಂಗ್?‌

OTT: ಸದ್ದಿಲ್ಲದೆ ಓಟಿಟಿಗೆ ಬಂತು ʼಒಂದು ಸರಳ ಪ್ರೇಮಕಥೆ’: ಯಾವುದರಲ್ಲಿ ಸ್ಟ್ರೀಮಿಂಗ್?‌

Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್‌ ಎಫ್‌ ಕೆನಡಿ ಹಿಟ್ಲರ್‌ ನನ್ನು ಬಂಧಿಸಿದ್ದು!

Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್‌ ಎಫ್‌ ಕೆನಡಿ ಹಿಟ್ಲರ್‌ ನನ್ನು ಬಂಧಿಸಿದ್ದು!

17

ನಿರ್ಮಾಪಕನಾದ ರಾಜಮೌಳಿ ಪುತ್ರ: ಎರಡು ಹೊಸ ಸಿನಿಮಾ ಅನೌನ್ಸ್; ಲೀಡ್‌ ರೋಲ್ ನಲ್ಲಿ ಫಾಫಾ

ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ

ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ

12-malpe

Malpe: ಶ್ರೀ ವಡಭಾಂಡ ಬಲರಾಮ ದೇವಸ್ಥಾನ: ತೋರಣ ಮುಹೂರ್ತ, ಉಗ್ರಾಣ ಮುಹೂರ್ತ ಸಂಪನ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.