ಮೊದಲ ದಿನದ ಪುಳಕ ಒಬ್ಬನೇ ನಾನಿಲ್ಲಿ ತಬ್ಬಿಬ್ಬುಗೊಂಡಿಹೆನು


Team Udayavani, Jan 17, 2017, 3:50 AM IST

josh-page-4–2.jpg

ಅಂದು ಕಾಲೇಜಿಗೆ ಹೋಗುವ ಮೊದಲ ದಿನ. ಮನಸ್ಸಿನಲ್ಲಿ ಮೋಡ ಕವಿದ ವಾತಾವರಣ. ಎದೆಯಲ್ಲಿ ಢವಢವ. ಕತ್ತಲೆಯ ಪ್ರಪಂಚಕ್ಕೆ ಕಾಲಿಡುವ ಹಾಗೆ. ಅಲ್ಲಿ ನನ್ನವರು ಯಾರೂ ಇಲ್ಲ ಎಂಬ ಅನಾಥ ಪ್ರಜ್ಞೆ. ಇದು ನಾನು ಮೊದಲ ದಿನ ಸ್ನಾತಕೋತ್ತರ ಪದವಿಗೆ ಬರುವಾಗ ಇದ್ದ ಆತಂಕದ ಕ್ಷಣಗಳು.

ನಮ್ಮೂರಿಂದ ಸುಮಾರು 250 ಕಿಲೋ ಮೀಟರ್‌ ದೂರವಿರುವ ಕುವೆಂಪು ವಿಶ್ವವಿದ್ಯಾಲಯಕ್ಕೆ ಬರಬೇಕೆಂದರೆ ಸಾಮಾನ್ಯನಾ… ಅದೂ ಎಂದೂ ಅಪ್ಪ-ಅಮ್ಮನನ್ನು ಬಿಟ್ಟಿರದೆ ಇದ್ದ ಹುಡುಗನಿಗೆ. ದಿಕ್ಕು ತೋಚದಾಗಿತ್ತು. ಕಾಲೇಜಿಗೆ ಅಪ್ಲಿಕೇಷ‌ನ್‌ ಹಾಕಲು ಮತ್ತೆ ಪ್ರವೇಶ ಪರೀಕ್ಷೆ ಬರೆಯಲು ಬಂದಾಗ ಈ ತರಹದ ಯಾವ ಭಯವೂ ನನ್ನಲ್ಲಿರಲಿಲ್ಲ, ಏಕೆಂದರೆ ಹೊಸ ವಾತಾವರಣಕೆ ಕಾಲಿಡುವೆನೆಂಬ ಕುತೂಹಲವಿರಬೇಕು ನನಗೆ ಗೊತ್ತಿಲ್ಲ. ಆದರೆ ಸೀಟು ಸಿಕ್ಕಿ ನನ್ನ ಲಗೇಜ್‌ ತುಂಬಿಕೊಂಡು ಶಿವಮೊಗ್ಗದತ್ತ ತಿರುಗುವಾಗ ತವರು ಮನೆಯಿಂದ ಗಂಡನ ಮನೆಗೆ ಹೋಗುವ ಹೆಣ್ಣಿಗಾಗುವ ದುಃಖ ನನ್ನಲ್ಲಿ ಉಮ್ಮಳಿಸಿ ಬಂತು. ಒಂದು ಕಡೆ ಮೇಲ್ನೋಟಕ್ಕೆ ಮಂದಹಾಸ ಬೀರುತ್ತಾ, ಎದೆಯಲ್ಲಿ ದುಃಖದ ಮಡುವನ್ನೇ ತುಂಬಿಕೊಂಡು ಬೀಳ್ಕೊಟ್ಟ ಅಪ್ಪ, ತಡೆಯಲಾರದ ಸಂಕಟವನ್ನು ಮನದಲ್ಲೇ ಅಡಗಿಸಿಕೊಂಡು ಕಣ್ಣಲ್ಲಿ ಅಮೃತ ಬಿಂದುಗಳನ್ನು ಸುರಿಸುತ್ತ ನನ್ನ ಬೀಳ್ಕೊಟ್ಟ ಅಮ್ಮನನ್ನ ನೋಡಿದ ಆ ಕ್ಷಣ ತಿಳಿಯಿತು ಹೆತ್ತವರ ಪ್ರೀತಿ ಎಂತದ್ದೆಂದು.

ಟ್ರೆ„ನ್‌ ಹತ್ತಲು ರೈಲ್ವೇ ಸ್ಟೇಷನ್‌ಗೆ ಬಂದರೆ ಅಬ್ಟಾ…. ಅಲ್ಲಿ ಸುಮಾರು ಜನರಿರುತ್ತಾರಾ? ಇಲ್ಲ. ಆ ಜಾತ್ರೆಯನ್ನು ಕಂಡು ನನ್ನೆದೆಯ ಬಡಿತ ಪರರಿಗೆ ಕೇಳುವಂತಿತ್ತು. ಇದನ್ನು ಕಂಡ ನನಗೆ ಯಾವ ಓದು ಬೇಡ, ಯಾವ ಕಾಲೇಜು ಬೇಡ ಮನೆಗೆ ಹೋಗಿ ಅಪ್ಪ ಅಮ್ಮನ ಜೊತೆ ಇದ್ದು ಬಿಡೋಣ ಎನಿಸಿತು. ಆದರೆ ಒಂದು ಕ್ಷಣ ನನ್ನ ಮುಂದಿನ ಭವಿಷ್ಯವನ್ನು ನೆನೆದು ಸ್ಟೇಷನ್‌ನಲ್ಲೇ ಕುಳಿತೆ. 

ಅಲ್ಲಿಗೆ ಪುಸ್ತಕದ ಚೀಲವನ್ನು ನೇತಾಕಿಕೊಂಡು, ಕೈಯಲ್ಲಿ ಲಗೇಜು ಹಿಡಿದ ಒಂದು ಯುವಕರ ಗುಂಪು ಎಕ್ಸ್‌ಪ್ರೆಸ್‌ ಟ್ರೆ„ನ್‌ ರೀತಿ ಧಾವಿಸಿತು. ಇವರನ್ನು ಕಂಡ ನನಗೆ ಬಹುಶಃ ಇವರು ಯಾವುದೋ ಕಾಲೇಜಿನ ಹುಡುಗರು ಎಂದುಕೊಂಡು ಸುಮ್ಮನಾದೆ. ಆದರೆ ಮನಸ್ಸು ತಡೆಯಲಾರದೆ ನೀವು ಶಿವಮೊಗ್ಗಕ್ಕೆ ಹೋಗುತ್ತೀರಾ ಎಂದೆ. ಹೌದು ಎಂದರು. ಬೆಣ್ಣೆಯ ಕೊಡ ಕೈಗಿತ್ತಂತಾಯಿತು. ಅವರನ್ನು ನಾನು ಪರಿಚಯ ಮಾಡಿಕೊಂಡೆ. ಹೆಚ್ಚಾಗಿ ಮಾತನಾಡುವುದಕ್ಕೆ ಇವರ್ಯಾರೂ ನನಗೆ ಅಷ್ಟೇನೂ ಪರಿಚಯದವರಲ್ಲ, ಸುಮ್ಮನೆ ಕುಳಿತೆ. 

ನನ್ನ ದುಗುಡದ ಮುಖ ನೋಡಿದ ಆ ಗುಂಪಿನ ಒಬ್ಬ ಯುವಕ ಬಂದು ನನ್ನ ಮಾತನಾಡಿಸಿದ. ಹೀಗೆ ಆ ಗುಂಪು ನನಗೆ ಪರಿಚಯವಾಯಿತು. ಒಂದೇ ಟ್ರೆ„ನಿನಲ್ಲಿ ಬಂದು ಕಾಲೇಜು ಸೇರಿದೆವು. ಆದರೆ ಕಾಲೇಜಿಗೆ ಬಂದ ನಂತರ ಅವರೆಲ್ಲ ಬೇರೆ ಕಡೆ ಹೋದರು. ಮತ್ತೆ ದುಗುಡದ ವಾತಾವರಣ ನನ್ನಲ್ಲಿ ಮನೆ ಮಾಡಿತು. ನನ್ನವರಿಲ್ಲ ಎಂದೆನಿಸಿತು. ಧೈರ್ಯ ಮಾಡಿ ಹಾಸ್ಟೆಲಿನತ್ತ ಧಾವಿಸಿ ಹಾಸ್ಟೆಲ್‌ಗೆ ಪ್ರವೇಶ ಪಡೆದೆ. 

ಒಂದೆರಡು ದಿನ ಕಳೆಯಿತು. ನರಕಯಾತನೆ ಅನುಭವಿಸುತ್ತಿದ್ದ ನನಗೆ ಒಂದುಕ್ಷಣ ಸಂತೋಷಕ್ಕೆ ಪಾರೇ ಇಲ್ಲದಂತಾಯಿತು. ಏಕೆ ಗೊತ್ತಾ? ಟ್ರೆ„ನಿನಲ್ಲಿ ಬಂದವರು ನನ್ನೆದುರಿಗೆ ದಿಢೀರನೆ ಪ್ರತ್ಯಕ್ಷರಾದರು. ನನ್ನನ್ನು ನೋಡಿ ಹಾಯ್‌ ಮಗ ನೀನೇನೋ ಇಲ್ಲಿ ಎಂದು ಕೇಳಿದಾಗ ನನಗೆ ಹಸುವನ್ನು ಕಂಡು ಕರು ಕುಣಿದಾಡುವಂತೆ ಖುಷಿಪಟ್ಟೆ. ಅವರೆಲ್ಲರೂ ನನ್ನನ್ನು ಅವರ ಬಂಧುವಂತೆ ಸ್ವಾಗತಿಸಿ ತಮ್ಮ ಗುಂಪಿಗೆ ಸೇರಿಸಿಕೊಂಡರು. ನನ್ನಲ್ಲಿ ಭಯ, ಅನಾಥ ಪ್ರಜ್ಞೆ ದಿನಗಳೆದಂತೆ ಮಾಯವಾಯಿತು. 

ಈ ನನ್ನ ಗೆಳೆಯರು ಒಬ್ಬೊಬ್ಬರೂ ಒಂದೊಂದು ರೀತಿಯ ಟ್ಯಾಲೆಂಟೆಡ್‌ ಪರÕನ್‌ಗಳು. ಇವರ ಜೊತೆ ನಾನೊಬ್ಬ ಕಾಮಿಡಿ ಸ್ಟಾರ್‌ ಸೇರಿಕೊಂಡಾಗ ನಮ್ಮ ಹ್ಯಾಪಿಗೆ ಎಲ್ಲೆಯೇ ಇಲ್ಲದಂತಾಗಿದೆ. ಜರ್ನಲಿಸಂ ಓದುವ ನನ್ನನ್ನು ಪತ್ರಕರ್ತರೇ ಎಂದು ಬಾಯಿ ತುಂಬ ಕರೆಯುವಾಗ ನನಗಾಗುವ ಸಂತೋಷ ಅಷ್ಟಿಷ್ಟಲ್ಲ. 

– ಗಿರೀಶ ಜಿ ಆರ್‌
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ,
ಕುವೆಂಪು ವಿಶ್ವವಿದ್ಯಾನಿಲಯ.

ಟಾಪ್ ನ್ಯೂಸ್

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.