ಕನ್ನಡಕಕ್ಕಾಗಿ ಕೈ ಎತ್ತು!


Team Udayavani, Apr 4, 2017, 5:16 PM IST

04-JOSH-6.jpg

ಅದೇಕೋ ಗೊತ್ತಿಲ್ಲ. ನನ್ನ ಕನ್ನಡಕ ಚೆನ್ನಾಗಿಯೇ ಇದ್ದರೂ, ನಿನ್ನ ಕನ್ನಡಕದ ಮೇಲೆ ನನಗೇಕೋ ಕಣ್ಣು. ಕೊಕ್ಕರೆಯ ಕಾಲಿನಂತೆ ಸುಂದರ ಆಗಿತ್ತದು.

ನಮ್ಮದು ಅಗಾಧ ಕನ್ನಡಕಪ್ರೇಮ! ಹುಡುಗರ ಸಾಲಿನಲ್ಲಿ ನಾವು ಮೂವರು ಕನ್ನಡಕಧಾರಿಗಳು. ಆದರೆ, ಹುಡುಗಿಯರ ಸಾಲಿನಲ್ಲಿ ನೀ ಒಬ್ಬಳೇ. ಪದವಿಯ ಕಡೆಯ ವರ್ಷದ ದಿನಗಳ ನೆನಪು ಈಗಲೂ ಹಸಿರಾಗಿದೆ. ನಮ್ಮ ವಿಭಾಗದ ನೂರಾ ಹನ್ನೆರಡು ವಿದ್ಯಾರ್ಥಿಗಳು
ಈ ವರ್ಷ ಒಂದು ದಿನವೂ ತಪ್ಪಿಸಿಕೊಳ್ಳದೆ ಕಾಲೇಜಿಗೆ ಬರಬೇಕೆಂಬ ಅಲಿಖೀತ ಒಪ್ಪಂದ ನೆನಪಿದೆಯಾ? ಒಪ್ಪಂದದ ಮೇರೆ ಮೀರಿದವರು ಪಾರ್ಟಿ ಕೊಡಿಸಬೇಕೆಂಬ ಕರಾರು ಇತ್ತಲ್ಲವೇ? ಅದೇಕೋ ಗೊತ್ತಿಲ್ಲ. ನನ್ನ ಕನ್ನಡಕ ಚೆನ್ನಾಗಿಯೇ ಇದ್ದರೂ, ನಿನ್ನ ಕನ್ನಡಕದ ಮೇಲೆ ನನಗೇಕೋ ಕಣ್ಣು.

ಕೊಕ್ಕರೆಯ ಕಾಲಿನಂತೆ ಸುಂದರ ಆಗಿತ್ತದು. ನಿನ್ನ ಕನ್ನಡಕ ಅಕಸ್ಮಾತ್‌ ಬಿದ್ದು ಒಡೆಯಿತೆಂದು, ನೀನು ಎರಡು ದಿನ ಕಾಲೇಜಿಗೆ ಬರಲೇ ಇಲ್ಲ. ಕನ್ನಡಕ ಬಿದ್ದು ಚೂರಾದಾಗ, ನನ್ನ ಹೃದಯವೇ ಪುಡಿಯಾದಂತೆ ದುಃಖೀಸಿದ್ದೆ. ಆದರೂ,  ಆ ದುಃಖವನ್ನು ನಿನ್ನೆದುರು ತೋರಿಸಿಕೊಳ್ಳಲಿಲ್ಲ. ಮಾರನೆಯ ದಿನ ಹೊಸ ಕನ್ನಡಕದಲ್ಲಿ ಬಂದಾಗ ನಿನಗೆ ಪಾರ್ಟಿಗಾಗಿ ಪೀಡಿಸಿದವರಲ್ಲಿ ನಾನೇ ಮೊದಲಿಗನಾಗಿದ್ದೆ! ಆದರೆ, ಕನ್ನಡಕಕ್ಕೆ ಹಣ ಖರ್ಚಾಯಿತೆಂದು ನೀ ಅಂದಾಗ ನಾವೇ ಹಂಚಿಕೊಂಡು ಪಾರ್ಟಿ ಮಾಡಿದ್ದೇವಲ್ಲವೆ?
ಪದವಿಯ ಮೊದಲ ವರ್ಷದಲ್ಲಿ ತಮಾಷೆಗೆಂದು ನನ್ನ ನಿನ್ನ ಕನ್ನಡಕಗಳನ್ನು ಬದಲಾಯಿಸಿಕೊಂಡು ಆದ ಫ‌ಜೀತಿ ಈಗಲೂ ನಗು ಸ್ಪುರಿಸುತ್ತದೆ.

ಅದೃಷ್ಟವಶಾತ್‌, ಒಂದೇ ಒಂದು ಪೀರಿಯಡ್‌ ಹೀಗೆ ಬದಲಾಯಿಸಿಕೊಂಡದ್ದು! ಅದೂ ಕನ್ನಡ ತರಗತಿಯಲ್ಲಿ. ವರ್ಷಕ್ಕೊಂದರಂತೆ ನಾನೂ ಕನ್ನಡಕ ಬದಲಿಸು ತ್ತೇನೆ. ಆದರೆ, ನಾನೂ ನೀನೂ ಬದಲಾಗಿಲ್ಲ. ಹೊಸ ವರುಷದ ಹೊಸ ಕನ್ನಡಕದ ಕಣ್ಣಿನಲ್ಲಿ ನಿನ್ನನ್ನು ನೋಡ ಬಯಸುತ್ತೇನೆ. 

ಶಿವನಾಪುರ ನರಸಿಂಹಮೂರ್ತಿ, ಬೆಂಗಳೂರು

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.