ಕಾಫಿಗೆ ಹೋಗೋಣ, ಬೇಗ ಬಾ…


Team Udayavani, Sep 24, 2019, 5:00 AM IST

f-13

“ನೀವು’, “ನೀವು’ ಎನ್ನುತ್ತಾ ಪರಿಚಯವಾದವರು, ಸ್ವಲ್ಪ ಹೊತ್ತಿಗೇ ನೀನು ಗೆ ಶಿಫ್ಟ್ ಆದೆವು. ನೀವು ಯೋಧ ಎಂದು ತಿಳಿದಾಗ, ನನಗೆ ಆದ ಸಂಭ್ರಮವನ್ನು ಹೇಗೆ ವಿವರಿಸಿಲಿ?

ನಮ್ಮಿಬ್ಬರ ಪರಿಚಯವಾಯ್ತಲ್ಲ; ಆ ಸಂದರ್ಭವೇ ಒಂದು ಆಕಸ್ಮಿಕ. ನಾನು ಮಲೆನಾಡಿನವಳಾದರೆ, ನೀನು ಬಯಲುಸೀಮೆಯವನು. ನಮ್ಮಿಬ್ಬರ ಪರಿಚಯ ಹೀಗೂ ಆಗಬಹುದೆಂದು ನಾನು ಕನಸೂ ಕಂಡಿರಲಿಲ್ಲ. ನಾವವತ್ತು ಮಲೆನಾಡಿನ ಕಡೆಗೆ ಹೊರಟಿದ್ದೆ, ಮಾರ್ಗ ಮಧ್ಯದಲ್ಲಿ ಬಸ್‌ಗೆ ಅದೇನಾಯಿತೋ ಗೊತ್ತಿಲ್ಲ. ನಿಂತ ಬಸ್ಸು ಮತ್ತೆ ಚಾಲೂ ಆಗಲೇ ಇಲ್ಲ. ಆದ ಕಾರಣ, ಬಸ್‌ನಿಂದ ಇಳಿದು ಮತ್ತೂಂದು ಬಸ್ಸಿಗಾಗಿ ಕಾಯುತ್ತಾ ನಿಂತಿದ್ದೆ. ಅದು ಮಳೆಗಾಲದ ದಿನವಾಗಿದ್ದರಿಂದ ತುಂತುರು ಮಳೆ ಮೆಲ್ಲಗೆ ಮೈ ಸೋಕುತಿತ್ತು. ನನ್ನ ಬಳಿ ಛತ್ರಿ ಇಲ್ಲದ ಕಾರಣ, ಮಳೆಹನಿಗೆ ಮೈ ಒಡ್ಡಿದ್ದೆ. ಅಷ್ಟರಲ್ಲೇ ಒಂದು ಬಸ್‌ ಬಂತು , ಅದನ್ನು ಏರಿ ಹಿಂದೆ ಮುಂದೆ ಕಣ್ಣು ಹಾಯಿಸಿದೆ, ಎಲ್ಲಾದರೂ ಸೀಟು ಸಿಗಬಹುದಾ ಅಂತ.

ಮೊದಲ ಡೋರ್‌ನಿಂದ 3ನೇ ಸೀಟಿನಲ್ಲಿ ಒಂದು ಸೀಟು ಖಾಲಿ ಇತ್ತು. ಆದರೆ ಆ ಸೀಟಿನ ಮೇಲೆ ಒಂದು ಬ್ಯಾಗ್‌ ಇತ್ತು, ಪಕ್ಕದಲ್ಲಿ ಕುಳಿತಿದ್ದವರು ನಿದ್ದೆಗೆ ಜಾರಿದ್ದರು. ಆದರೂ ಪರವಾಗಿಲ್ಲ ಎಂದು ಅವರತ್ತ ಸರಿಸಲು ಮುಂದಾದಾಗ ನನ್ನ ಕೈ ತಾಗಿ ಅವರಿಗೆ ಎಚ್ಚರವಾಯ್ತು. ಸರ್‌ ಈ ಸೀಟಿಗೆ ಯಾರದರು ಬರ್ತಾರ ಅಂತ ಕೇಳಿದೆ. ಇಲ್ಲ, ಅಂದಾಕ್ಷಣ ಆ ಸೀಟಲ್ಲಿ ಕುಳಿತೆ.

ನಾನು ಮಲೆನಾಡಿನವಳು ಎಂದು ತಿಳಿದಾಗ ನಿಮ್ಮ ಅಭಿಮಾನದ ಮಾತುಗಳು ನನಗಿನ್ನೂ ಜ್ಞಾಪಕವಿದೆ, ಕುವೆಂಪು ಅವರ ಕವಿತೆ , ಕಥನಗಳ ಸಾಲನ್ನು ನಾಲಗೆಯ ತುದಿಯಲ್ಲಿ ಹಿಡಿದಿಟ್ಟುಕೊಂಡಿದ್ದಿರಿ. ಆನಂತರದಲ್ಲಿ ನಿಮ್ಮ ಮಾತುಗಳು ಕವಿತೆ ಕವನ ಸಂಕಲನಗಳಿಂದ ಪ್ರಾರಂಭವಾಗಿ ಕಾದಂಬರಿಯಂತೆ ಮುಂದುವರಿಯಿತು. ಹೀಗೆ ನಿಮ್ಮ ಮಾತುಗಳನ್ನು ಕೇಳುತ್ತಾ ನಾನು ತುಸು ಮೈ ಮರೆತೆ, ನಿಮ್ಮಂಥ ಅಪರೂಪದ ವ್ಯಕ್ತಿ, ಗೆಳೆಯನಾಗಿ ಸದಾ ನನ್ನೊಂದಿಗಿದ್ದರೆ ಇನ್ನೂ ಚೆನ್ನಾಗಿರುತಿತ್ತು ಅನ್ನಿಸಿತು.

ಮಲೆನಾಡಿನ ಈ ಸೌಂದರ್ಯವನ್ನು ಬಯಲುಸೀಮೆಯ ಭಾಷೆಯಲ್ಲಿ ಕೇಳುವ ಹುಚ್ಚು ಹೆಚ್ಚಾಯಿತು. ಬಸ್ಸಿನಲ್ಲಿ ಅಕ್ಕ ಪಕ್ಕ ಕುಳಿತವರು, ಕಾಫಿ ಶಾಪ್‌ನಲ್ಲಿ ಎದುರು ಬದುರು ಕೂರಬೇಕೆನಿಸಿತು. ಮನಸ್ಸಿಗೆ ಸ್ವಲ್ಪ ಸಾಂತ್ವನ ಹೇಳಿ ಕಿಟಕಿಯಿಂದ ಆಚೆ ನೊಡಿದರೆ ನಾನು ಇಳಿಯುವ ಸ್ಥಳ ಬಂದೇ ಬಿಡೋದಾ… ನೋಡ ನೋಡುತ್ತಿದ್ದಂತೆಯೇ ಎರಡು ಗಂಟೆಯ ಹಾದಿ ಸಾಗಿತ್ತು .. ಮನಸ್ಸಿನಲ್ಲಿ ಏನನ್ನೊ ಕೇಳುವ ಬಯಕೆ ಮತ್ತೇನನ್ನೋ ಹೇಳುವ ಆಸೆ. ಹಾಗೆ ತೂತಿದ್ದವರು ನೀವು! ಬಸ್‌ ಪ್ರಯಾಣವೇ ಹಾಗೆ:ಅದು ಅಪರಿಚಿತರನ್ನು ಬೇಗ ಪರಿಚಯದ ವ್ಯಾಪ್ತಿಗೆ ಸೇರಿಸುತ್ತದೆ. ನಮ್ಮ ಕಥೆಯೂ ಹಾಗೇ ಆಯಿತು. “ನೀವು’, “ನೀವು’ ಎನ್ನುತ್ತಾ ಪರಿಚಯವಾದವರು, ಸ್ವಲ್ಪ ಹೊತ್ತಿಗೇ ನೀನು ಗೆ ಶಿಫ್ಟ್ ಆದೆವು. ನೀವು ಯೋಧ ಎಂದು ತಿಳಿದಾಗ, ನನಗೆ ಆದ ಸಂಭ್ರಮವನ್ನು ಹೇಗೆ ವಿವರಿಸಿಲಿ?

ಬಸ್‌ ಇಳಿಯುವ ಮೊದಲು ನಿಮ್ಮ ಫೋನ್‌ ನಂಬರ್‌ ಸಿಗಬಹುದಾ ಎಂದೆ. ಆ ಕ್ಷಣದಲ್ಲಿ ನಿನ್ನ ಮೊಗದಲ್ಲಿ ಕಿರುನಗೆ ಮೂಡಿತು, ಬಹುಶಃ ನಿನ್ನ ಮನಸ್ಸು ಕೂಡ ಇದನ್ನೇ ಬಯಸುತ್ತಿತ್ತೇನೊ ಅನ್ನಿಸಿತು…

ನಾನು ಎರಡನೇ ಬಾರಿ ಬಂದಾಗ, ಬಸ್‌ ಇಳಿದು ಬಸ್‌ ಸ್ಟಾಂಡ್‌ನ‌ಲ್ಲಿ ನಿಂತಿದ್ದೆ . ಅದೇ ಸಮಯಕ್ಕೆ ನನ್ನ ಮೊಬೈಲ್‌ ಬಡಿದುಕೊಳ್ಳುತಿತ್ತು ನೋಡಿದರೆ ನಿನ್ನದೇ ನಂಬರ್‌. ಆವತ್ತು, ಕಾಲ್‌ ರಿಸೀವ್‌ ಆದಾ, ಇಬ್ಬರೂ ಏಕಕಾಲಕ್ಕೆ – ಕಾಫಿಗೆ ಹೋಗೋಣ್ವಾ ಅಂದಿದ್ವಿ… ನೆನಪು ಬಂತಾ?

ಅಮೃತ ಚಂದ್ರಶೇಖರ ತೀರ್ಥಹಳ್ಳಿ

ಟಾಪ್ ನ್ಯೂಸ್

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.