ಬಾರೋ ಸಾಧಕರ ಕೇರಿಗೆ : ಪ್ರಾಮಾಣಿಕ ನೌಕರ


Team Udayavani, Dec 15, 2020, 8:19 PM IST

ಬಾರೋ ಸಾಧಕರ ಕೇರಿಗೆ : ಪ್ರಾಮಾಣಿಕ ನೌಕರ

ಮೈಕೆಲ್‌ ಫ್ಯಾರಡೆ, ಜಗತ್ತು ಕಂಡ ಶ್ರೇಷ್ಠ ವಿಜ್ಞಾನಿ. ಕೇವಲ ಮೂರೋ ನಾಲ್ಕೋ ವರ್ಷ ಶಾಲೆ ಕಲಿತಿದ್ದು ಬಿಟ್ಟರೆ, ಫ್ಯಾರಡೆಗೆ ಯಾವ ಶಾಸ್ತ್ರೀಯ ಶಿಕ್ಷಣವೂ ದೊರೆಯಲಿಲ್ಲ! ಕಡುಬಡತನದ ಕುಟುಂಬದಿಂದ ಬಂದ ಫ್ಯಾರಡೆ, ತನ್ನ ಹದಿಹರೆಯವನ್ನೆಲ್ಲ ಪ್ರಸ್ಸಿನಲ್ಲಿ ಪುಸ್ತಕಗಳಿಗೆ ಬೈಂಡ್‌ ಹಾಕುತ್ತ ಕಳೆಯಬೇಕಾಯಿತು.

ಆದರೆ, ಸ್ವಾಧ್ಯಾಯ ಮಾಡಿ, ಸರ್‌ ಹಂಫ್ರಿ ಡೇವಿಯ ಉಪನ್ಯಾಸಗಳನ್ನು ಕೇಳಿ, ಡೇವಿಯ ಕೈಕೆಳಗೆ ಸಹಾಯಕನಾಗಿ ದುಡಿದ ಫ್ಯಾರಡೆ, ಕೊನೆಗೆ ರಾಯಲ್‌ ಸೊಸೈಟಿಯ ಪ್ರಯೋಗಾಲಯದ ನಿರ್ದೇಶಕನಾಗುವ ಮಟ್ಟಕ್ಕೆ ಬೆಳೆದ. ವಿದ್ಯುತ್‌ ಮತ್ತು ಕಾಂತಶಕ್ತಿಗಳನಡುವಿನ ಸಂಬಂಧವನ್ನು ಬಳಸಿಕೊಂಡು ಅವನು ಮಾಡಿದ ಪ್ರಯೋಗಗಳು ಅವನಿಗೆ ವಿಶ್ವಮನ್ನಣೆ ಗಳಿಸಿಕೊಟ್ಟವು.

ಫ್ಯಾರಡೆ 25ರ ಯುವಕ ನಾಗಿದ್ದಾಗ, ಡೇವಿಯವರ ಅಚ್ಚುಮೆಚ್ಚಿನ ಸಹಾಯಕನಾಗಿದ್ದ. ಹೇಳಿದ ಕೆಲಸವನ್ನು ಚಾಚೂ ತಪ್ಪದೆ, ಕಿಂಚಿತ್‌ ಊನವೂ ಇಲ್ಲದಂತೆ ಮಾಡಿ ಮುಗಿಸುವ ಈ ಹುಡುಗನೆಂದರೆ ಡೇವಿಯವ ರಿಗೂ ಇಷ್ಟ. ಮುಂದೆ, ಫ್ಯಾರಡೆಯೇ ರಾಯಲ್‌ ಸೊಸೈಟಿಯ ಪ್ರಯೋಗಾಲಯದ ನಿರ್ದೇಶಕ ನಾದ ಮೇಲೆ, ಅವನ ಕೈಕೆಳಗೆ ಹಲವರು ಸಹಾಯಕರಾಗಿ ದುಡಿದರು. ಅವರಲ್ಲೊಬ್ಬ- ಆಂಡರ್‌ಸನ್‌. ಸೇನೆಯಲ್ಲಿ ಹಲವು ವರ್ಷ ಸೇವೆ ಸಲ್ಲಿಸಿ ನಿವೃತ್ತನಾಗಿ ಬಂದಿದ್ದ ಪ್ರಾಮಾಣಿಕ ಯೋಧ ಅವನು.

ಫ್ಯಾರಡೆ ವಿದ್ಯುತ್‌ ಮತ್ತು ಕಾಂತಗಳಲ್ಲದೆ ಗಾಜಿನ ತಯಾರಿಯಲ್ಲೂ ಬಹಳಷ್ಟು ಕೆಲಸ ಮಾಡಿದ್ದಾನೆ. ಅನೇಕ ಬಗೆಯ, ವಿವಿಧ ಗುಣಧರ್ಮದ ಗಾಜುಗಳನ್ನು ತಯಾರಿಸುವುದು ಅವನ ಪ್ರಯೋಗಗಳ ಭಾಗವಾಗಿತ್ತು. ಗಾಜಿನ ತಯಾರಿ ಕಷ್ಟ ಮಾತ್ರವಲ್ಲ, ಅಪಾರ ತಾಳ್ಮೆಯನ್ನು ಬೇಡುವ ಕೆಲಸ. ಒಂದೇ ಹದದಲ್ಲಿ ಬೆಂಕಿ ಊದುತ್ತ ಮರಳನ್ನು ಕರಗಿಸಿ ಬೇಕಾದ ದಪ್ಪದ ಗಾಜು ತಯಾರಿಸಬೇಕಾಗಿತ್ತು. ಅಂಥದೊಂದು ಕೆಲಸವನ್ನು ಒಂದು ದಿನ ಫ್ಯಾರಡೆ, ಆಂಡರ್‌ಸನ್‌ಗೆ ವಹಿಸಿ ಉಷ್ಣತೆ ಎಷ್ಟಿರಬೇಕು ಎನ್ನುವುದರ ಬಗ್ಗೆ ಸ್ಪಷ್ಟವಾದ ಸೂಚನೆಕೊಟ್ಟ.ಒಂದೇಉಷ್ಣತೆಯಲ್ಲಿಮರಳನ್ನುಕಾಯಿಸುವಂತೆ ಹೇಳಿ ಹೊರಟುಹೋದ. ಆದರೆ, ಬೇರೆ ಕೆಲಸಗಳಲ್ಲಿ ತೊಡಗಿಕೊಂಡ ಫ್ಯಾರಡೆಗೆ ಈ ಗಾಜಿನ ವಿಷಯ ಮರೆತೇ ಹೋಯಿತು. ಸೀದಾ ಮನೆಗೆ ಹೋಗಿಬಿಟ್ಟ! ಆದರೆ, ಹಲವು ಗಂಟೆಗಳು ಕಳೆದ ಮೇಲೆ ಅವನಿಗೆ ತಟ್ಟನೆ ಆಂಡರ್‌ಸನ್‌ನ ನೆನಪಾಯಿತು.

ಗಾಜಿನ ಕೆಲಸವನ್ನು ಮುಗಿಸುವುದಕ್ಕೆ ಹೇಳೇ ಇಲ್ಲವಲ್ಲ ಎಂದು ತಲೆಚಚ್ಚಿಕೊಂಡು, ವಾಪಸು ಪ್ರಯೋಗಾಲಯಕ್ಕೆ ಬಂದು ನೋಡಿದರೆ, ಅಲ್ಲಿ ಆಂಡರ್‌ಸನ್‌ ಉಷ್ಣತೆಯನ್ನು ಸಂಭಾಳಿಸಿಕೊಂಡು ಇನ್ನೂ ಮರಳಿನ ಜಾಡಿ ಹಿಡಿದುಕಾಯಿಸುತ್ತ ನಿಂತಿದ್ದ!

 

-ರೋಹಿತ್‌ ಚಕ್ರತೀರ್ಥ

ಟಾಪ್ ನ್ಯೂಸ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.