ಪದವೇ ಬಂಗಾರ ಇವರಿಗೆ!


Team Udayavani, Feb 16, 2021, 7:21 PM IST

Untitled-3

ಪಾ ವೆಂ ಆಚಾರ್ಯರು ಶಬ್ದಮೀಮಾಂಸಕರು. ಒಂದೊಂದು ಶಬ್ದದ ಅರ್ಥಗಳನ್ನೂ ಹಿಂಜಿ ಅವುಗಳ ಒಳಾರ್ಥ, ವಿಶೇಷಾರ್ಥ, ಧ್ವನ್ಯಾರ್ಥ, ಅನ್ಯಾರ್ಥಗಳನ್ನೆಲ್ಲ ದಿನಗಟ್ಟಲೆ ಯೋಚಿಸುತ್ತಿದ್ದವರು. ಒಮ್ಮೆ ಅವರಿಗೆ ಯಾವುದೋ ಶಬ್ದದ ವ್ಯುತ್ಪತ್ತಿಯ ಬಗ್ಗೆ ತಿಳಿಯಬೇಕಾಗಿತ್ತು. ಅವರಿವರನ್ನು ಕೇಳಿದರು, ಮನೆಯಲ್ಲಿ, ಆಫೀಸಿನಲ್ಲಿ ಇದ್ದ ಪುಸ್ತಕಗ್ತ ಳನ್ನೆಲ್ಲ ತಡಕಾಡಿದರು, ಊರಿನ ಲೈಬ್ರರಿಯ ಪುಸ್ತಕಗಳಲ್ಲೂ ಹುಡುಕಿದರು. ಊಹ್ಞೂ, ಅವರಿಗೆ ಬೇಕಾದಷ್ಟು ವಿವರಗಳು ಸಿಗಲಿಲ್ಲ. ಕೊನೆಗೆ ಉಡುಪಿಯಲ್ಲಿದ್ದ ಬನ್ನಂಜೆ ಗೋವಿಂದಾ ಚಾರ್ಯರನ್ನು ಭೇಟಿಯಾಗಬೇಕೆಂದು ನಿಶ್ಚಯಿಸಿ ಉಡುಪಿಗೆ ಬಂದರು. ಅಲ್ಲಿ ಇಬ್ಬರೂ ವಿದ್ವಾಂಸರನಡುವೆ ತಾಸು-ತಾಸೆರಡರಷ್ಟು ಹೊತ್ತು ಗಂಭೀರ ಚರ್ಚೆ ನಡೆಯಿತು. ಅಂತೂ ಪಾವೆಂ ಅವರಿಗೆ ತೃಪ್ತಿಯಾಗುವಷ್ಟು ಮಾಹಿತಿ ಸಿಕ್ಕಿತು. “ಬರುತ್ತೇನೆ” ಎಂದು ಕೃತಜ್ಞತಾಪೂರ್ವಕ ನಮಸ್ಕರಿಸಿ ಅವರು ಹೊರಟರು.

ಪಾವೆಂ, ಬನ್ನಂಜೆಯವರ ಮನೆಯಿಂದ ಹೊರಟು ಹದಿನೈದು ನಿಮಿಷವಾಗಿತ್ತೋ ಇಲ್ಲವೋ, ಮತ್ತೆ ಕರೆಗಂಟೆ ಮೊಳಗಿತು. ಬಾಗಿಲು ತೆರೆದರೆ ಮತ್ತದೇ ಪಾವೆಂ! “ಕ್ಷಮಿಸಿ ಆಚಾರ್ಯರೇ, ಮಾತಾಡುವ ಭರದಲ್ಲಿ ಕೇವಲ ಒಂದೇ ಶಬ್ದದ ಬಗ್ಗೆ ಚರ್ಚೆ ಮಾಡುವುದಾಯಿತು. ನಾನು ಬಂದಿದ್ದದ್ದು ಎರಡು ಶಬ್ದಗಳ ಬಗ್ಗೆ ಚರ್ಚೆ ಮಾಡಬೇಕೆಂದು! ಆದರೆ ನಿಮ್ಮ ಅರ್ಥ-ವಿವರಣೆಗಳಿಂದಾಗಿ ಎಷ್ಟು ಖುಷಿಯಾಗಿತ್ತೆಂದರೆ ಆ ಎರಡನೇ ಶಬ್ದದ ವಿಚಾರವೇ ಮರೆತುಹೋಗಿತ್ತು. ದಾರಿಯಲ್ಲಿ ಹೋಗುವಾಗ ನೆನಪಾಗಿಬಿಟ್ಟಿತು. ಅದಕ್ಕೇ ಬಂದೆ!” ಎಂದರು.

ಪಾವೆಂ! ಶಬ್ದಗಳ ವಿಚಾರದಲ್ಲಿ ತುಂಬ ತಲೆಕೆಡಿಸಿಕೊಳ್ಳುತ್ತಿದ್ದ ಇನ್ನೋರ್ವ ಕನ್ನಡದ ಸಾಹಿತಿ ಎಂದರೆ ಗೋಪಾಲಕೃಷ್ಣ ಅಡಿಗರು.”ಶ್ರೀರಾಮನವಮಿಯ ದಿವಸ” ಕವಿತೆಯನ್ನು ಬರೆಯುವಾಗ “ಸುಟ್ಟಲ್ಲದೇ ಮುಟ್ಟೆನೆಂಬ..” ಎಂಬಸಾಲುಗಳನ್ನು ಬರೆದು ಮುಂದಿನ ಶಬ್ದವಾಗಿಏನನ್ನು ಬರೆಯಬೇಕು ಎಂಬ ಯೋಚನೆ ಬಂತು. ಇಡೀ ಪದ್ಯ ಪೂರ್ತಿಯಾದರೂ ಅದೊಂದು ಶಬ್ದ ಅಡಿಗರ ತಲೆತಿನ್ನತೊಡಗಿತು. ಆ ನಿರ್ದಿಷ್ಟಜಾಗದಲ್ಲಿ ಹಾಕಬೇಕಾದ ಶಬ್ದ ಯಾವುದು? ಹಗಲಿರುಳು ಅದೇ ಯೋಚನೆಯಾಯಿತು.

ಯಾವ್ಯಾವ ಪದಗಳನ್ನು ಬರೆದರೂ ಸಮಾಧಾನವಾಗಲಿಲ್ಲ. ಸರಿಯಾಗಿ ನಿದ್ದೆಯೂ ಬರಲಿಲ್ಲ. ಬಹಳಷ್ಟು ದಿನಗಳಾದ ಬಳಿಕ ಅಲ್ಲಿ ಅಡಿಗರು “ಉಡಾಫೆ” ಎಂಬ ಶಬ್ದ ಬರೆದು, “ಆಹಾ, ಇದೇ ಸರಿಯಾದುದು” ಎಂದು ನೆಮ್ಮದಿಯಿಂದ ನಿಟ್ಟುಸಿರುಬಿಟ್ಟರಂತೆ!

 

 

-ರೋಹಿತ್‌ ಚಕ್ರತೀರ್ಥ

ಟಾಪ್ ನ್ಯೂಸ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.