ರೂಪ ಕೈಕೊಟ್ಟರೂ ಬುದ್ಧಿಕೈಕೊಡಲಿಲ್ಲ!


Team Udayavani, Sep 22, 2020, 9:23 PM IST

ರೂಪ ಕೈಕೊಟ್ಟರೂ ಬುದ್ಧಿಕೈಕೊಡಲಿಲ್ಲ!

ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಅಬ್ರಹಾಂ ಲಿಂಕನ್ನನ್ನು ಶತಾಯ ಗತಾಯ ಸೋಲಿಸಲೇಬೇಕೆಂದು ವಿರೋಧಿಗಳು ಪಣತೊಟ್ಟಿದ್ದರು. ಅವನ ಬಗ್ಗೆ ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯ ಮೂಡಿಸಲು ಅವರು ನಿರ್ಧರಿಸಿದರು. ಆತನ ಪೂರ್ವಾಪರ ಜಾಲಾಡಲಾಯಿತು. ಅವನ ಅದುವರೆಗಿನ ವೈಫ‌ಲ್ಯಗಳನ್ನು ಪಟ್ಟಿ ಮಾಡಿ ಪ್ರಜೆಗಳ ಮುಂದಿಡಲಾಯಿತು. ಅವನು ಅಸಮರ್ಥ, ಬುದ್ಧಿಹೀನ, ಅನನುಭವಿ ಎಂದೆಲ್ಲ ಜರೆಯಲಾಯಿತು.ಕೊನೆಗೆ ವಿರೋಧಿಗಳು ಆತನ ದೇಹದ ಊನಗಳನ್ನು ಎತ್ತಿ ಆಡಿಕೊಳ್ಳಲು ಶುರುಮಾಡಿದರು. ಲಿಂಕನ್ನ ಮುಖ ವಿಕಾರವಾಗಿದೆ, ಆತ ದೆವ್ವದಂತೆ ಕಾಣುತ್ತಾನೆ. ಆತ ಜಗತ್ತಿನ ಅತಿ ಕುರೂಪಿ ವ್ಯಕ್ತಿ ಎಂದೆಲ್ಲ ಪ್ರಚಾರ ಮಾಡಿದರು. ಪತ್ರಿಕೆಗಳು ಸಭ್ಯತೆಯ ಎಲ್ಲೆಯನ್ನೂ ಮೀರಿ ಆತನ ದೇಹ, ರೂಪಗಳನ್ನು ಗೇಲಿಮಾಡಿ ಬರೆದವು. ಫೋಟೋಗ್ರಫಿ ಅಷ್ಟೇನೂ ಚಾಲ್ತಿಗೆ ಬರದ ಸಮಯವಾದ್ದರಿಂದ ದೇಶದ ಬಹಳಷ್ಟು ಪ್ರಜೆಗಳು ಆತನ ಫೋಟೋ ನೋಡಿರಲಿಲ್ಲ; ಅವರಿಗೆ ಪತ್ರಿಕೆಗಳಲ್ಲಿ ಮತ್ತು ಪ್ರತಿಪಕ್ಷದವರ ಬಾಯಲ್ಲಿ ಬಂದ ವಿವರಣೆಗಳೇ ಮುಖ್ಯ ಆಕರವಾಗಿದ್ದವು. ಇವಕ್ಕೆಲ್ಲ ಒಂದುಕೊನೆ ಹಾಡೋಣ ಎಂದು ಸ್ವತಃ ಲಿಂಕನ್‌, ಮ್ಯಾಥ್ಯೂ

ಬ್ರ್ಯಾಡಿ ಎಂಬ ಫೋಟೋಗ್ರಾಫ‌ರನ ಬಳಿ ಹೋಗಿ ಫೋಟೋ ತೆಗೆಸಿಕೊಂಡ. ಆದರೆ ಬ್ರ್ಯಾಡಿ, ಇದ್ದದ್ದನ್ನು ಇದ್ದಂತೆ ಸೆರೆಹಿಡಿಯುವ ಬದಲು, ಆ ಫೋಟೋದಲ್ಲಿ ತನ್ನಕೈಚಳಕ ತೋರಿಸಿದ! ಲಿಂಕನ್ನ ಮುಖ ಕಡಿಮೆಕಳಾಹೀನವಾಗುವಂತೆ ಮಾಡಿದ. ಮುಖದ ರೇಖೆಗಳನ್ನುಕೆತ್ತಿ (ಅರ್ಥಾತ್‌ ಅಳಿಸಿ, ಬರೆದು, ತೀಡಿ) ಸರಿಮಾಡಿದ! ಲಿಂಕನ್ನ ಉದ್ದುದ್ದದ ಕೈಬೆರಳುಗಳು ಮಡಚಿರುವಂತೆ ತೋರಿಸಿದ. ಅವನಕೊಕ್ಕರೆ ಕೊರಳುಕಾಣದಂತೆ ತಾನೇ ಒಂದು ದೊಡ್ಡ ಕಾಲರ್‌ ಸೇರಿಸಿದ.

ಒಳಸೇರಿದ್ದ ಅವನಕೆನ್ನೆಗಳನ್ನುಕೊಂಚ ಉಬ್ಬಿಸಿದ. ಒಟ್ಟಾರೆಯಾಗಿ, ಲಿಂಕನ್ನ ಫೋಟೋ ನೋಡಿದವರು ಪರವಾಗಿಲ್ಲ, ಜನ ಹೇಳುವಷ್ಟೇನೂ ಈತಕುರೂಪಿಯಲ್ಲ ಎಂಬ ಅಭಿಪ್ರಾಯ ತಾಳುವಂತೆ ಮಾಡುವಲ್ಲಿ ಬ್ರ್ಯಾಡಿ ಯಶಸ್ವಿಯಾದ! ಲಿಂಕನ್‌ ಅಧ್ಯಕ್ಷೀಯ ಚುನಾವಣೆಯ ಪ್ರಚಾರದಲ್ಲಿ ತೊಡಗಿಕೊಂಡಿದ್ದಾಗ, ಒಮ್ಮೆ ಒಬ್ಬ ವ್ಯಕ್ತಿ ಆತನ ತೀರ ಹತ್ತಿರ ಬಂದು ತನ್ನ ರಿವಾಲ್ವರನ್ನು ಚಕ್ಕನೆ ತೆಗೆದು ಲಿಂಕನ್ನ ಹಣೆಗೆ ಇಟ್ಟುಬಿಟ್ಟನಂತೆ! ಬೆವರಿಳಿಯುವ ಸನ್ನಿವೇಶವಾದರೂ ಲಿಂಕನ್‌ ತಡವರಿಸದೆ- ಏನು ವಿಷಯ? ಯಾಕೆ ನನಗೆ ಗುರಿ ಇಟ್ಟಿದ್ದೀಯ? ಎಂದು ಕೇಳಿದನಂತೆ.

ರಿವಾಲ್ವರ್‌ ಹಿಡಿದಾತ- ನನಗಿಂತಲೂ ಕುರೂಪಿಗಳಾದವರನ್ನುಕೂಡಲೇ ಗುಂಡಿಟ್ಟುಕೊಲ್ಲಬೇಕು ಅಂತ ಪ್ರತಿಜ್ಞೆ ಮಾಡಿದ್ದೇನೆ.ಆಕಾರಣಕ್ಕೇ ಈಗ ನಿನ್ನನ್ನು ಮುಗಿಸಬೇಕು ಅಂತ ಬಂದಿದ್ದೇನೆ ಎಂದು ಉತ್ತರಿಸಿದ. ಈ ಮಾತುಕೇಳುತ್ತಿದ್ದಂತೆಯೇ ಲಿಂಕನ್ನ ನೆರಿಗೆಗಟ್ಟಿದ್ದ ಹಣೆ ಸಡಿಲವಾಯಿತು. ಉಸಿರಾಟ ಸಹಜಸ್ಥಿತಿಗೆ ಬಂತು. ನಿಂತಿದ್ದ ಗುಂಡಿಗೆ ಚಲಿಸಿತು. ಮುಖದಲ್ಲಿ ನಿರಾಳತೆಕಾಣಿಸಿತು. ಲಿಂಕನ್‌ ಉತ್ತರಿಸಿದ: ನಾನು ನಿನಗಿಂತಕುರೂಪಿಯಾಗಿದ್ದರೆ ಖಂಡಿತ ಬದುಕಿರಲು ಇಷ್ಟಪಡುವುದಿಲ್ಲ. ನೀನು ನನ್ನನ್ನು ಈಗಲೇ ಗುಂಡು ಹೊಡೆದು ಉರುಳಿಸಬಹುದು! ಲಿಂಕನ್‌ ದೇಶವನ್ನು ಗೆದ್ದುದು ತನ್ನ ರೂಪದಿಂದಲ್ಲ; ಇಂಥ ಜಾಣ ಮಾತುಗಳಿಂದಲೇ ! ­

 

ರೋಹಿತ್‌ ಚಕ್ರತೀರ್ಥ

ಟಾಪ್ ನ್ಯೂಸ್

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

Chitradurga; We are not waiting for anyone, nomination is sure…: M. Chandrappa

Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

Chitradurga; We are not waiting for anyone, nomination is sure…: M. Chandrappa

Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

Sathish Ninasam- Rachita Ram: ಮ್ಯಾಟ್ನಿಯಲ್ಲಿ ಹಾರರ್‌ ಶೋ

Sathish Ninasam- Rachita Ram: ಮ್ಯಾಟ್ನಿಯಲ್ಲಿ ಹಾರರ್‌ ಶೋ

17

ಕೋರ್ಟ್‌ ಮೇಲೆ ಪಟ್ಟಭದ್ರರ ಒತ್ತಡ: ವಕೀಲರ ಪತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.