ನಮ್ಮವರಿಗೆ ಇದ್ದಿಲು ಹೊರಗಿನವರಿಗೆ ವಜ್ರ


Team Udayavani, Sep 15, 2020, 6:26 PM IST

ನಮ್ಮವರಿಗೆ ಇದ್ದಿಲು ಹೊರಗಿನವರಿಗೆ ವಜ್ರ

ಮದ್ರಾಸ್‌ ಪ್ರಾಂತ್ಯಕ್ಕೆಲ್ಲ ಪ್ರಸಿದ್ಧವಾಗಿದ್ದ ಪ್ರಸಿಡೆನ್ಸಿ ಕಾಲೇಜಿನ ಇಂಟರ್‌ ಮೀಡಿಯೆಟ್‌ ತರಗತಿಗಳಲ್ಲಿ ಶೈಕ್ಷಣಿಕ ವರ್ಷದ ಮೊದಲ ದಿನ. ವಿಜ್ಞಾನ ಪ್ರೊಫೆಸರರು ತರಗತಿ ಪ್ರವೇಶಿಸಿ, ಪ್ಲಾಟ್‌ಫಾರಮ್ಮಿನಲ್ಲಿ ನಿಂತು ಎಲ್ಲರನ್ನೂ ಒಮ್ಮೆ ಅವಲೋಕಿಸುತ್ತ ಬರುವಾಗಕಣ್ಣಿಗೆ ಬಿದ್ದದ್ದು, ಆ ಪುಟ್ಟ ಹುಡುಗ.17 – 18 ರ ಹರೆಯದ, ಮೀಸೆ ಮೂಡುತ್ತಿದ್ದ ಯುವಕರ ಮಧ್ಯದಲ್ಲಿ,14ಕ್ಕೂಕಾಲಿಡದ ಈ ಪುಟ್ಟ ಬಾಲಕ, ಮೊದಲ ಬೆಂಚಲ್ಲಿಕೂತು ಏನು ಮಾಡುತ್ತಿದ್ದಾನೆ? ಯಾರಯ್ಯ ನೀನು? ಕಾಲೇಜಿನ ತರಗತಿಯಲ್ಲಿ ನಿನಗೇನುಕೆಲಸ? ಎಂದು ಸ್ವಲ್ಪಕುತೂಹಲ, ಸ್ವಲ್ಪ ಅಸಹನೆಯಿಂದಕೇಳಿದರು.

ಹುಡುಗ ಎದ್ದುನಿಂತ. ಸ್ವಲ್ಪವೂ ಅಳುಕದೆ ಹೇಳಿದ: ನಾನು ಈ ಕ್ಲಾಸಿನ ವಿದ್ಯಾರ್ಥಿ ಸ್ವಾಮಿ. ಪಾಠಕೇಳಲು ಬಂದಿದ್ದೇನೆ! ಹಾಗೆ ಹೇಳಿದ್ದು ಚಂದ್ರಶೇಖರ ವೆಂಕಟರಾಮನ್‌. ಸಂಕ್ಷಿಪ್ತವಾಗಿ ಸಿ.ವಿ. ರಾಮನ್‌.ಆತನಿಗಿನ್ನೂ13 ತುಂಬಿರಲಿಲ್ಲವೆಂಬುದು ಸತ್ಯವೇ ಆದರೂ, ಆತಕಾಲೇಜು ಸೇರಲು ಬೇಕಾದ ಎಲ್ಲ ಅರ್ಹತೆಗಳನ್ನು ಸಂಪಾದಿಸಿಕೊಂಡೇ ಬಂದಿದ್ದ.

ಹತ್ತನೇ ತರಗತಿಯನ್ನು ಹನ್ನೆರಡನೇ ವಯಸ್ಸಿಗೇ ಪೂರೈಸಿಯೇ ಕಾಲೇಜು ಮೆಟ್ಟಿಲು ಹತ್ತಿದ್ದ. ಅಷ್ಟೇಕೆ, ಭೌತಶಾಸ್ತ್ರದ ಉದ್ಗಂಥಗಳನ್ನೆಲ್ಲ ಓದಿಕೊಂಡಿದ್ದ. ಕೆಲವು ವಿಷಯಗಳಲ್ಲಿಕಾಲೇಜಿನ ಪ್ರಾಧ್ಯಾಪಕರಿಗಿದ್ದಷ್ಟೇ ಜ್ಞಾನವನ್ನೂ ಸಂಪಾದಿಸಿದ್ದ. ರಾಮನ್‌ ತನ್ನ ವಯಸ್ಸಿಗೆ ಮೀರಿದ ಜ್ಞಾನವನ್ನು ಸಂಪಾದಿಸಿದ್ದರಷ್ಟೇ ಅಲ್ಲ, ಹಾಗೆ ಹೆಚ್ಚುವರಿ ಜ್ಞಾನ ಸಂಪಾದಿಸಿದ್ದೇನೆಂಬ ಅರಿವೂ ಅವರಿಗಿತ್ತು. ಭೌತಶಾಸ್ತ್ರದ ವಿಷಯದಲ್ಲಿ ತಮ್ಮ ತಿಳಿವಳಿಕೆಯ ಬಗ್ಗೆ ಅವರಿಗೆ ಯಾವುದೇ ಅನುಮಾನಗಳಿರಲಿಲ್ಲ.

1906ರಲ್ಲಿ ಲಂಡನ್ನಿಂದಪ್ರಕಟವಾಗುತ್ತಿದ್ದ, ಆಗಿನ ಕಾಲದ ಪ್ರಸಿದ್ಧ ವಿಜ್ಞಾನ ಪತ್ರಿಕೆ ಫಿಲಸಾಫಿಕಲ್‌ಜರ್ನಲ್ ನಲ್ಲಿ ಒಂದುಪ್ರಬುದ್ಧ ಲೇಖನ ಪ್ರಕಟವಾಯಿತು. ಲೇಖಕರ ಹೆಸರು ಚಂದ್ರಶೇಖರ ವೆಂಕಟರಾಮನ್‌, ಬಿ.ಎ ವಿದ್ಯಾರ್ಥಿ, ಪ್ರಸಿಡೆನ್ಸಿ ಕಾಲೇಜು ಎಂದು ಇತ್ತು. ಸಹಜವಾಗಿಯೇ ಆ ಕಾಲೇಜಿನ ಪ್ರಾಧ್ಯಾಪಕರ ಗಮನವನ್ನು ಅದು ಸೆಳೆಯಿತು. ಸೀನಿಯರ್‌ ಪ್ರೊಫೆಸರ್‌ ಒಬ್ಬರು ರಾಮನ್ನರನ್ನುಕರೆದುಕೇಳಿದರು: “ಏನಯ್ಯ, ಈ ಲೇಖನವನ್ನು ನೀನು ನನಗೆ ತೋರಿಸಿಯೇ ಇಲ್ಲವಲ್ಲ?’ ಸ್ವಲ್ಪವೂ ಅಳುಕದೆ ರಾಮನ್‌- ಆರು ತಿಂಗಳ ಹಿಂದೆಯೇ ಅದನ್ನು ತಮ್ಮಕೈಗಿಟ್ಟಿದದೆ. ನಿಮ್ಮ ಪ್ರತಿಕ್ರಿಯೆಯನ್ನೂ ಕೇಳಿದ್ದೆ. ಆದರೆ ನೀವದನ್ನು ಓದಿದ ಬಗ್ಗೆ ಯಾವೊಂದು ಮಾತನ್ನೂ ಆಡಿಲ್ಲ. ಹುಡುಕಿದರೆ ಅದು ನಿಮ್ಮ ಮೇಜು ಅಥವಾ ಕಪಾಟಿನಲ್ಲೇ ಸಿಗಬಹುದು ಎಂದು ಪ್ರತ್ಯುತ್ತರಿಸಿದರು!

ಹೌದು, ಅದು ಪ್ರಾಧ್ಯಾಪಕರ ಮೇಜಿನಲ್ಲೇ ಕಡತಗಳ ಮಧ್ಯೆ ಆರು ತಿಂಗಳಿಂದ ಬಿದ್ದುಕೊಂಡಿತ್ತು! ಇಲ್ಲಿನವರಿಗೆ ಇದ್ದಿಲಾಗಿ ಕಂಡದ್ದು ಹೊರಗಿನವರಿಗೆ ವಜ್ರವೆಂದು ಅರಿವಾಗಿತ್ತು. ರಾಮನ್ನರಿಗೆ ಭೌತಶಾಸ್ತ್ರದ ಬಗ್ಗೆಯಷ್ಟೇ ಅಲ್ಲ, ಸಾಧನೆಯನ್ನು ಗುರುತಿಸುವುದರಲ್ಲಿ ಜನ ತೋರುವ ಔದಾಸೀನ್ಯದ ಬಗ್ಗೆಯೂ ಆಳವಾದ ಅರಿವಿತ್ತು. ಸಾಧನೆ ಮಾಡಿ ಮೌನವಾಗುಳಿದರೆ ಪ್ರಯೋಜನವಿಲ್ಲ, ಅದನ್ನು ಸರಿಯಾದ ವೇದಿಕೆಯಲ್ಲಿಟ್ಟಾಗಷ್ಟೇ ಅದಕ್ಕೆ ಮರ್ಯಾದೆ ಎಂಬುದು ಬಹುಶಃ ಅವರು ಕಾಲೇಜಿನಲ್ಲಿಕಲಿತ ಹಲವು ಪಾಠಗಳಲ್ಲೊಂದು. ­

 

-ರೋಹಿತ್‌ ಚಕ್ರತೀರ್ಥ

ಟಾಪ್ ನ್ಯೂಸ್

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

16-adu-jeevitham

Movie Review: ಆಡು ಜೀವಿದಂ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.