ಬಾರೋ ಸಾಧಕರ ಕೇರಿಗೆ : ಪಾಂಡಿತ್ಯವನ್ನು ಮೀರಬಲ್ಲ ಮಾನವೀಯತೆ


Team Udayavani, Jan 5, 2021, 7:52 PM IST

ಬಾರೋ ಸಾಧಕರ ಕೇರಿಗೆ :  ಪಾಂಡಿತ್ಯವನ್ನು ಮೀರಬಲ್ಲ ಮಾನವೀಯತೆ

ವಿವೇಕಾನಂದರು ದೇಶದಲ್ಲಿ ಪರ್ಯಟನ ಮಾಡುತ್ತ, ತಾವು ಹೋದಲ್ಲೆಲ್ಲ ಅಧ್ಯಾತ್ಮ, ಯೋಗ, ಸಂಸ್ಕೃತಿಗಳ ಬಗ್ಗೆ ಉಪನ್ಯಾಸಗಳನ್ನು ಕೊಡುತ್ತಿದ್ದ ಕಾಲ ಅದು. ಹಾಗೆ ಸಂಚರಿಸುತ್ತ ಒಂದು ಹಳ್ಳಿಗೆ ಬಂದರು. ಸ್ವಾಮಿಗಳು ಬಂದರುಎಂದು ಅಲ್ಲಿ ಒಂದು ಉಪನ್ಯಾಸ ಕಾರ್ಯಕ್ರಮ ಏರ್ಪಾಟಾಯಿತು.

ಊರಿನ ದೊಡ್ಡ ವ್ಯಕ್ತಿಗಳು, ಪಂಡಿತರು, ಪ್ರಾಜ್ಞರು ಎಲ್ಲರೂ ಕಾರ್ಯಕ್ರಮಕ್ಕೆ ಖುದ್ದಾಗಿ ಹಾಜರಾಗಬೇಕೆಂದು ಊರಗೌಡ ಪ್ರಚಾರವನ್ನೂ ಭರಪೂರವಾಗಿಯೇ ಮಾಡಿದ. ಜನ ಸೇರಿತು. ಉದ್ಘೋಧಕವಾದಉಪನ್ಯಾಸ ಕಾರ್ಯಕ್ರಮ ನಡೆಯಿತು. ಸ್ವಾಮೀಜಿಗಳ ಮಾತು ಮುಗಿದ ಮೇಲೆ ಅಲ್ಲೇ ಪ್ರಶ್ನೋತ್ತರ ಕಾರ್ಯಕ್ರಮ ಆಯೋಜನೆಯಾಯಿತು. ನೆರೆದವರೆಲ್ಲರೂ ತಮಗೆ ಅರ್ಥವಾಗದ ವಿಷಯಗಳ ಕುರಿತು ಪ್ರಶ್ನೆ ಕೇಳಿ, ಉತ್ತರ ಪಡೆದು ತೃಪ್ತರಾಗಿ ತೆರಳುತ್ತಿದ್ದರು. ಸ್ವಾಮಿ ವಿವೇಕಾನಂದರು ಕೂಡ ಅಷ್ಟೂ ಜನರ ಪ್ರಶ್ನೆಗಳಿಗೆ, ಅವುಗಳ ಆಶಯ ಏನೇ ಇರಲಿ, ಸಮಾಧಾನಚಿತ್ತದಿಂದ, ಅತ್ಯಂತ ಶಾಂತ ದನಿಯಿಂದ ಉತ್ತರಿಸುತ್ತಿದ್ದರು. ಹೀಗೆ ಸುಮಾರು ಅರ್ಧ-  ಮುಕ್ಕಾಲು ತಾಸು ಕಳೆದ ಮೇಲೆಅಲ್ಲಿ ನೆರೆದಿದ್ದ ಜನಜಂಗುಳಿನಿಧಾನವಾಗಿ ಕರಗಿತು. ಎಲ್ಲರೂ ಮನೆಗೆ ತೆರಳಿದರು.

ಎಲ್ಲರೂ ಹೋದ ಮೇಲೆ ವಿವೇಕಾನಂದರು ನೋಡುತ್ತಾರೆ, ಅಲ್ಲೊಬ್ಬ ವೃದ್ಧ ನಿಂತಿದ್ದಾನೆ. ವಯಸ್ಸು 75ರ ಆಜುಬಾಜು. ಹೆಚ್ಚೇನೂ ಸ್ಥಿತಿವಂತವಲ್ಲದಬಟ್ಟೆಬರೆ. ಕೈಯಲ್ಲಿ ಊರುಗೋಲು. ಮಾಸಿದ ತಲೆ, ಗಡ್ಡ. ಆದರೆ ಕಣ್ಣುಗಳಲ್ಲಿಏನೋ ದಿವ್ಯವಾದ ಹೊಳಪು. ವಿವೇಕಾನಂದರು ಆ ವೃದ್ಧನತ್ತ ತಾವಾಗಿ ನಡೆದುಬಂದರು. ಏನು ಅಜ್ಜ? ನಿನ್ನ ಪ್ರಶ್ನೆ ಏನು ಕೇಳು ಎಂದರುಅನುನಯದಿಂದ. ಬುದ್ಧಿ! ಪ್ರಶ್ನೆ ಕೇಳುವುದಕ್ಕೆ ನಾನೇತರವನು! ನೀವೇನೋ ದೊಡ್ಡ ದೊಡ್ಡ ವಿಚಾರಗಳ ಬಗ್ಗೆಯೆಲ್ಲ ಮಾತಾಡಿದಿರಿ. ಅದೆಲ್ಲವನ್ನುಬುದ್ಧಿಯೊಳಗೆ ಇಳಿಸಿಕೊಳ್ಳಲು ನನಗಾದರೂ ಏನು ಶಕ್ತಿ ಇದೆ! ನೀವು ದೊಡ್ಡವರು, ಪಂಡಿತರು, ಮಹಾತ್ಮರು! ನಾನೋ ಕೂಲಿನಾಲಿ ಮಾಡುವಹರಿಜನ. ನಾನು ಇಲ್ಲಿ ನಿಂತದ್ದು ನಿಮಗೆ ಪ್ರಶ್ನೆ ಕೇಳಲಿಕ್ಕಲ್ಲ. ಪಾಪ, ನೀವುಅಷ್ಟೊಂದು ಹೊತ್ತಿಂದ ಬಿಡುವೇ ಇಲ್ಲದಂತೆ ಮಾತಾಡಿದ್ದೀರಿ. ನಿಮಗೆ ಸುಸ್ತಾಗಿರಬಹುದು. ಗಂಟಲು ಒಣಗಿರಬಹುದು. ಮಹಾತ್ಮರಾದ ನೀವುನಮ್ಮ ಹಟ್ಟಿಗೆ ಬಂದು ಒಂದು ಲೋಟ ಹಾಲು ಕುಡಿದಿದ್ದರೆ ನನಗೆಷ್ಟೋ ಸಂತೋಷ ವಾಗುತ್ತಿತ್ತು. ಆದರೆ, ಸ್ವಾಮಿಗಳು ನೀವು, ನಮ್ಮ ಹಟ್ಟಿಗೆ ಬರುತ್ತೀರೋ ಇಲ್ಲವೋ ಎಂಬ ಸಂಕೋಚದಿಂದ ಯೋಚಿಸುತ್ತ ನಿಂತಿದ್ದೆ ಎಂದ. ವಿವೇಕಾನಂದರ ಕಣ್ಣುಗಳು ತೇವಗೊಂಡವು. ಅಷ್ಟು ಹೊತ್ತು ನಿರರ್ಗಳವಾಗಿ ಮಾತಾಡಿದ್ದ ಸ್ವಾಮೀಜಿಯ ಗಂಟಲು ಕೂಡ ವೃದ್ಧನ ಕಳಕಳಿಯ ಮಾತುಗಳನ್ನು ಕೇಳುತ್ತ ಉಡುಗಿಬಿಟ್ಟಿತು! ಮಾತೇ ಹೊರಡದಾಯಿತು! ಅವರು ಆ ಅಜ್ಜನ ಹೆಗಲಿಗೆ ಕೈಹಾಕಿ ಬರಸೆಳೆದರು. ದಾರಿ ತೋರಿಸು ಎಂಬಂತೆ ಅಜ್ಜನ ಕಡೆ ಸನ್ನೆ ಮಾಡಿ ಮುಗುಳ್ನಕ್ಕರು. ಅಜ್ಜನ ಸಂಗಡ ಆತನ ಹಟ್ಟಿಗೆ ಸಂತೋಷದಿಂದ ನಡೆದರು.

 

– ರೋಹಿತ್‌ ಚಕ್ರತೀರ್ಥ

ಟಾಪ್ ನ್ಯೂಸ್

UPSC ಪರೀಕ್ಷೆಯಲ್ಲಿ 101ನೇ ರ್‍ಯಾಂಕ್ ಪಡೆದ ಸೌಭಾಗ್ಯಗೆ ಗುರುವಾಗಿ ನಿಂತದ್ದು ಡಾ.ಅಶ್ವಿನಿ

UPSC ಪರೀಕ್ಷೆಯಲ್ಲಿ 101ನೇ ರ್‍ಯಾಂಕ್ ಪಡೆದ ಸೌಭಾಗ್ಯಗೆ ಗುರುವಾಗಿ ನಿಂತದ್ದು ಡಾ.ಅಶ್ವಿನಿ

ಛತ್ತೀಸ್‌ಗಢದ ಕಂಕೇರ್‌ನಲ್ಲಿ ಎನ್ ಕೌಂಟರ್: ನಕ್ಸಲ್ ನಾಯಕ ಸೇರಿ 18 ಮಾವೋವಾದಿಗಳ ಹತ್ಯೆ

ಛತ್ತೀಸ್‌ಗಢದ ಕಂಕೇರ್‌ನಲ್ಲಿ ಎನ್ ಕೌಂಟರ್: ನಕ್ಸಲ್ ನಾಯಕ ಸೇರಿ 18 ಮಾವೋವಾದಿಗಳ ಹತ್ಯೆ

UPSC Result: ಬೀದರ್ ನ ಮೊಹಮ್ಮದ್ ಅಸೀಮ್‌ ಮುಜತೇಬಾಗೆ 481ನೇ ರ‍್ಯಾಂಕ್‌

UPSC Result: ಬೀದರ್ ನ ಮೊಹಮ್ಮದ್ ಅಸೀಮ್‌ ಮುಜತೇಬಾಗೆ 481ನೇ ರ‍್ಯಾಂಕ್‌

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

19

Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

UPSC ಪರೀಕ್ಷೆಯಲ್ಲಿ 101ನೇ ರ್‍ಯಾಂಕ್ ಪಡೆದ ಸೌಭಾಗ್ಯಗೆ ಗುರುವಾಗಿ ನಿಂತದ್ದು ಡಾ.ಅಶ್ವಿನಿ

UPSC ಪರೀಕ್ಷೆಯಲ್ಲಿ 101ನೇ ರ್‍ಯಾಂಕ್ ಪಡೆದ ಸೌಭಾಗ್ಯಗೆ ಗುರುವಾಗಿ ನಿಂತದ್ದು ಡಾ.ಅಶ್ವಿನಿ

7-

Obsessive Psychiatry: ಗೀಳು ಮನೋರೋಗ

ಛತ್ತೀಸ್‌ಗಢದ ಕಂಕೇರ್‌ನಲ್ಲಿ ಎನ್ ಕೌಂಟರ್: ನಕ್ಸಲ್ ನಾಯಕ ಸೇರಿ 18 ಮಾವೋವಾದಿಗಳ ಹತ್ಯೆ

ಛತ್ತೀಸ್‌ಗಢದ ಕಂಕೇರ್‌ನಲ್ಲಿ ಎನ್ ಕೌಂಟರ್: ನಕ್ಸಲ್ ನಾಯಕ ಸೇರಿ 18 ಮಾವೋವಾದಿಗಳ ಹತ್ಯೆ

6-thyroid

Thyroid Disease: ಥೈರಾಯ್ಡ್ ಅನಾರೋಗ್ಯ ನಿರ್ಲಕ್ಷಿಸಿದರೆ ಮಾರಕವಾದೀತು ಎಚ್ಚರ!

5-shirva

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇವಸ್ಥಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.