ಬದುಕು, ಕೆಟ್ಟುನಿಂತ ಹಡಗಿನ ಎಂಜಿನ್‌ ಇದ್ದಂತೆ…


Team Udayavani, Oct 13, 2020, 7:40 PM IST

josh-tdy-3

ಬೃಹತ್‌ ಹಡಗಿನ ಇಂಜಿನ್‌ಕೆಟ್ಟು ನಿಂತಿತ್ತು. ಹತ್ತಾರು ತಜ್ಞರು ಬಂದು ಪರೀಕ್ಷಿಸಿದರು. ಆದರೇನಂತೆ? ಸಾಕಷ್ಟು ಹಳೆಯ ಹಡಗು ಅದಾಗಿದ್ದರಿಂದ, ಅದನ್ನು ಸರಿಪಡಿಸುವುದು ಸಾಧ್ಯವಾಗಲಿಲ್ಲ. ಹಳೆಯದೆನ್ನುವ ಕಾರಣಕ್ಕೇ ಅದು ಸಾವಿರಾರು  ಪಯಣಿಗರನ್ನು ಆಕರ್ಷಿಸುತ್ತಿತ್ತು. ಲಕ್ಷಾಂತರ ರೂಪಾಯಿಗಳಷ್ಟು ಆದಾಯವನ್ನು ತಂದುಕೊಡುತ್ತಿತ್ತು. ಹಾಗಾಗಿ, ಮಾಲೀಕರಿಗೆ ನಿಂತು ಹೋದ ಆದಾಯದ ಚಿಂತೆ. ಹಡಗಿನ ಎಂಜಿನ್‌ ರಿಪೇರಿ ಮಾಡುವಂತೆ ಮಾಲೀಕರು ಅದೆಷ್ಟೋ ಜನರಿಗೆ ಹೇಳಿನೋಡಿದರು. ಆದರೆ ಹಲವರು ಪ್ರಯತ್ನಿಸಿದರೂ ಎಂಜಿನ್‌ ರಿಪೇರಿಯಾಗಲಿಲ್ಲ.

ಹೀಗಿರುವಾಗಲೇ, ಸುಕ್ಕು ಗಲ್ಲದ, ಬಿಳಿಯ ಗಡ್ಡದ ಗೂನು ಬೆನ್ನಿನ ವೃದ್ಧನೊಬ್ಬ, ತಾನು ಎಂಜಿನ್‌ ರಿಪೇರಿ ಮಾಡುವುದಾಗಿ ಬಂದ.ಗಂಟೆಗಟ್ಟಲೆಕಾಲ ಏನನ್ನೂ ಮಾಡದೇ  ಸುಮ್ಮನೇ ಇಂಜಿನನ್ನು ದಿಟ್ಟಿಸುತ್ತಕುಳಿತಿದ್ದ ಅವನೆಡೆಗೆ ಹಡಗಿನ ಮಾಲೀಕರಿಗೆ ಸಣ್ಣದ್ದೊಂದು ಅಸಹನೆ. ಆದರೆ ವೃದ್ಧನಿಗೆ ಅವರೆಡೆಗೆ ಲಕ್ಷ್ಯವಿಲ್ಲ. ಸಾಕಷ್ಟುಕಾಲ ಇಂಜಿನ್‌ ಗಮನಿಸಿದ ವೃದ್ಧ,ಕೊನೆಯಲ್ಲೊಮ್ಮೆ ಎದ್ದು ನಿಂತ. ಹಾಗೆ ನಿಂತವನು ತನ್ನ ಚೀಲದಲ್ಲಿದ್ದ ಸಣ್ಣದೊಂದು ಸುತ್ತಿಗೆಯಿಂದ ಇಂಜಿನ್‌ನ ಮೂಲೆಯೊಂದಕ್ಕೆ ಎರಡು ಪೆಟ್ಟು ಹಾಕಿದ.

ಏನಾಶ್ಚರ್ಯ..!! ತಕ್ಷಣವೇ ಇಂಜಿನ್‌ ಸದ್ದು ಮಾಡಿತ್ತು. ಮಾಲೀಕರಿಗೆ ಖುಷಿಯೋ ಖುಷಿ. ಕೆಲಸ ಮುಗಿಸಿದ ವೃದ್ಧ ಒಂದೂ ಮಾತಾಡದೆ ಎದ್ದು ಹೋದ. ಮರುದಿನ ಆತ ಬಿಲ್‌ ಕಳಿಸಿದಾಗ, ಮಾಲೀಕರಿಗೆ ಗಾಬರಿ. ಬಿಲ್ಲಿನ ಮೊತ್ತ- 25000 ರೂ. ಎಂದಿತ್ತು! ಸುತ್ತಿಗೆಯಿಂದ ಎರಡು ಸಲ ಬಾರಿಸಿದ್ದು ಬಿಟ್ಟರೇ ಬೇರಿನ್ನೇನೂ ಮಾಡಿಲ್ಲ. ಅಷ್ಟುಕೆಲಸಕ್ಕೇ ಯಾರಾದರೂ 25000 ರೂ.ಕೇಳಬಹುದಾ? ಮುದಿಯನಿಗೆ ತಲೆಕೆಟ್ಟಿರಬೇಕು. ಸರಿಯಾದ ಬಿಲ್‌ಕಳಿಸಲು ಹೇಳಿ ಎಂದ ಹಡಗಿನೆ ಮಾಲೀಕ. ಮರುದಿನ, ಆ ವೃದ್ಧ ಮತ್ತೂಂದು ಬಿಲ್‌ಕಳುಹಿಸಿದ್ದ. ಅದು ಹೀಗಿತ್ತು. “ಒಟ್ಟು ಶುಲ್ಕ: 25000/-, ಸುತ್ತಿಗೆಯಿಂದ ಬಾರಿಸಿದ್ದಕ್ಕೆ ಶುಲ್ಕ:50/-, ಎಲ್ಲಿ ಬಾರಿಸಬೇಕೆನ್ನುವ ನನ್ನ ಅನುಭವದ ಜ್ಞಾನಕ್ಕೆ:24950/-‘. ಅದನ್ನು ಕಂಡ ಹಡಗಿನ ಮಾಲೀಕರ ತುಟಿಯಂಚಲ್ಲಿ ಅರ್ಥಪೂರ್ಣ ಮೆಚ್ಚುಗೆಯ ಕಿರುನಗು.

ಬದುಕಿಗೆ ತುಂಬ ಹತ್ತಿರವೆನಿಸುವ ಅರ್ಥಪೂರ್ಣ ಕತೆಯಿದು.ಕಷ್ಟಗಳಿಗೆ ಬೆದರಿ ನಿಲ್ಲುವ ಬದುಕು ಸಹ ಥೇಟು ಈ ಕೆಟ್ಟುನಿಂತ ಹಡಗಿನ ಇಂಜಿನ್‌ನಂಥದ್ದು. ಅದನ್ನು ಸಂಭಾಳಿಸುವುದಕ್ಕೆ ಪ್ರಯತ್ನ, ಪರಿಶ್ರಮಗಳು ಬೇಕು. ಆದರೆ ಹಾಗೆ ಮಾಡುವ ಪ್ರಯತ್ನಕ್ಕೊಂದು ಗೊತ್ತುಗುರಿಯಿರದಿದ್ದರೇ ಎಲ್ಲವೂ ವ್ಯರ್ಥವೇ. ಸಡ್ಡು ಹೊಡೆಯುವ ಮುನ್ನ ಸರಿಯಾದ ಮಾರ್ಗ ಯಾವುದೆನ್ನುವುದರ ಅರಿವಿರಬೇಕು. ಸರಿಯಾದ ದಿಕ್ಕಿಗಿರುವ ಪರಿಶ್ರಮಕ್ಕೆ ಮಾತ್ರವೇ ಬೆಲೆ. ಅದಕ್ಕೆ ಮಾತ್ರ ಗೆಲುವು ಅಲ್ಲವಾ..?

 

ಮೂಲ : ಕ್ರಿಸಾಂತಾ ಬೆಲ್ಲಾ

ಅನುವಾದ : ಗುರುರಾಜ ಕೊಡ್ಕಣಿ ಯಲ್ಲಾಪುರ

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.