ಜಗಳಗಳ ಕಳೆದು ಪ್ರೀತಿಯಿಂದ ಗುಣಿಸವಾ…


Team Udayavani, Dec 17, 2019, 6:09 AM IST

jagala

ನಿನಗೇನೋ ಆಗಿರೋದು! ನೋ ಶೇವ್‌ ನವೆಂಬರ್‌ ಅಂತ ಸ್ಟೈಲಿಗೆ ಬಿಟ್ಟ ಮಾಮೂಲಿ ಗಡ್ಡವೇನೋ ಅದು? ಆದರೆ, ನನಗೆ ನಿನ್ನ ಮೋಡಿಗಿಂತ ಅದರ ಮೋಡಿಯೇ ಇಮ್ಮಡಿಯೇನೋ ಎಂಬ ಭಾವನೆ. ಡಿಸೆಂಬರ್‌ ಕೊನೆಗೆ ಕ್ಲೀನ್‌ ಶೇವ್‌ ಮಾಡಿ ಬೋಲ್ಡಾಗಿ ಎದ್ದು ಕಾಣಿಸುವ ಲೆಕ್ಕಾಚಾರವನ್ನು ನೀನು ಹಾಕಿರಬಹುದು.ಆದರೆ, ಪ್ರೀತಿಯಲ್ಲಿ ಕೂಡಿಸಿ, ಕಳೆದು, ಗುಣಿಸಿ,ಭಾಗಿಸುವ ಲೆಕ್ಕಕಿಂತ ಮಿಗಿಲಾದದ್ದೇ ಇದೆಯಲ್ಲ…

ನನ್ನ ನಿನ್ನ ಪ್ರೀತಿಸಾಗರಕ್ಕೆ ವಿಸ್ತೀರ್ಣ ಕಂಡುಹಿಡಿಯುವ ಮಾಪಕವನ್ನು ಯಾವ ವಿಜ್ಞಾನಿಯೂ ಶೋಧಿಸಿಲ್ಲ? ಇನ್ನು ಉದ್ದಳತೆ, ಅಗಲಗಳ ಕುರಿತು ಮಾಹಿತಿ ಯಾರಿಗಿದೆ ಹೇಳು? ಕೋನಮಾಪಕ, ತ್ರಿಜ್ಯ,ಇಂಚುಪಟ್ಟಿ ಇವೆಲ್ಲ ಯಾವುದೂ ಸಾಲದು ನನ್ನೊಡೆಯ. ನಮ್ಮಿಬ್ಬರ ಪ್ರೀತಿ ಶುರುವಾದದ್ದಕ್ಕೆ ಸೂತ್ರ, ಪ್ರಮೇಯಗಳು ಕೂಡ ಉತ್ತರ ಹೇಳಲಾರವೇನೋ. ಪ್ರೀತಿಯ ವರ್ಗ, ಘನ, ಇತ್ಯಾದಿ ಕಂಡುಹಿಡಿಯಲು, ಘಾತ ಸಂಖ್ಯೆಯನ್ನು ಬಿಡಿಸಲು ಗಣಕಯಂತ್ರಕ್ಕೂ ಅಸಾಧ್ಯವೇನೋ.

ವರ್ಗ,ಘನಮೂಲವ ಬಿಡಿಸಲು ಕೂತ ಗಣಿತಜ್ಞ ಅರ್ಧ ಶತಮಾನ ಕಳೆದರೂ ಅಸಾಧ್ಯವೆಂದು ಹೊರಬಂದಾನೇನೋ. ಇನ್ನು ಅಪವರ್ತನ,ಲ.ಸಾ.ಅ,ಮ.ಸಾ.ಅಗಳು ಪ್ರೀತಿಯಲ್ಲಿ ಬಿಡಿಸಿದಷ್ಟು ದೊಡ್ಡ ಪ್ರೀತಿಯ ಮೊತ್ತವನ್ನೇ ನೀಡುತ್ತವಲ್ಲವೆ? ನಮ್ಮ ಪ್ರೀತಿಗೆ ನಾವೇ ಸಮವಾಗಿರುವ ವಿಷಮ,ಮಿಶ್ರ ಭಿನ್ನರಾಶಿಗಳ ಗೊಡವೆಯೇಕೆ? ದಶಮಾಂಶ,ಅನುಪಾತ, ಸಮಾನುಪಾತವೆಂಬ ಬಹು ಕಠಿಣ ಅಂಶಗಳನ್ನು ದೂರವೇ ಇಡೋಣ.

ಯಾಕೀ ಲೆಕ್ಕಾಚಾರದ ದೊಡ್ಡ ತಲೆನೋವಿನ ಕೆಲಸ? ನಮ್ಮ ಸ್ನೇಹ, ಪ್ರೇಮ, ಪ್ರೀತಿಯನ್ನೆಲ್ಲ ಕೂಡಿಸಿ,ವಿರಸ,ಜಗಳಗಳ ಕಳೆದು,ಪ್ರೀತಿಯಿಂದ ಗುಣಿಸಿ,ನೆಗೆಟಿವ್‌ ಎನರ್ಜಿಯನ್ನು ಭಾಗಿಸಿ ಸಮ,ಬೆಸಗಳ ಭೇದ ತೊರದೇ ಅವಿಭಾಜ್ಯ, ಭಾಜ್ಯವೆಂಬ ಗೊಡವೆಗೆ ಹೋಗದ ಪ್ರೀತಿಯೆಂಬ ದೊಡ್ಡ ಸಂಖ್ಯೆಯನ್ನು ಅಪ್ಪಿಕೊಳ್ಳೊಣ ಬಾ.

* ಸಾವಿತ್ರಿ ಶ್ಯಾನುಭಾಗ

ಟಾಪ್ ನ್ಯೂಸ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ

Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ

ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್‌ ಸಿಟಿ ಅಧಿಕಾರಿ ಶ್ರೀನಿವಾಸ

ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್‌ ಸಿಟಿ ಅಧಿಕಾರಿ ಶ್ರೀನಿವಾಸ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.