ದುಡ್ಡಿಗಿಂತ ಮುಖ್ಯವಾದದ್ದು


Team Udayavani, Sep 10, 2019, 5:52 AM IST

y-3

ಜೀನ್‌ ಲೂಯಿ ರುಡೋಲ್ಫ್ ಅಗಾಸಿ ಹತ್ತೂಂಬತ್ತನೆ ಶತಮಾನದ ಪ್ರಸಿದ್ಧ ನ್ಯಾಚುರಲಿಸ್ಟ್‌ಗಳಲ್ಲಿ ಒಬ್ಬ. ಸ್ವಿಜರ್‌ಲ್ಯಾಂಡ್‌ ದೇಶದವನು. ಫಾಸಿಲ್‌ಗ‌ಳನ್ನು ಬಳಸಿಕೊಂಡು ಭೂಮಿಯ ಪ್ರಾಗೇತಿಹಾಸದ ಬಗ್ಗೆ ಸಂಶೋಧನೆ ನಡೆಸಿದವರಲ್ಲಿ ಪ್ರಮುಖ. ಜೀವಿಗಳ ವಿಕಾಸ ಹೇಗಾಯಿತೆಂಬ ವಿಷಯದಲ್ಲಿ ಅಗಾಸಿಯ ಸಿದ್ಧಾಂತಕ್ಕೂ ಚಾರ್ಲ್ಸ್‌ ಡಾರ್ವಿನ್ನನ ವಿಕಾಸವಾದಕ್ಕೂ ವ್ಯತ್ಯಾಸಗಳಿದ್ದರೂ ಜೀವವಿಜ್ಞಾನದಲ್ಲಿ ಅಗಾಸಿಯ ಸಾಧನೆ ಕಡಿಮೆಯದೇನೂ ಅಲ್ಲ. ಹಾರ್ವರ್ಡ್‌ಯಲ್ಲಿ ಪ್ರಾಣಿಶಾಸ್ತ್ರದ ಪ್ರಾಧ್ಯಾಪಕನೂ ಆಗಿದ್ದ ಅಗಾಸಿ ಅಮೆರಿಕದ ಶಿಕ್ಷಣ ಕ್ಷೇತ್ರವನ್ನು ಅಗಾಧವಾಗಿ ಪ್ರಭಾಸಿದವನು ಕೂಡ.

ಅದೊಂದು ದಿನ ಯಾವುದೋ ಸಂಘದ ಒಂದಷ್ಟು ಪದಾಧಿಕಾರಿಗಳು ಅಗಾಸಿಯನ್ನು ನೋಡಲು ಬಂದರು. ಆ ಸಮಯದಲ್ಲಿ ಆತ ಜೀವವಿಜ್ಞಾನದ ಒಂದು ಪ್ರಮುಖ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದ. ಸಂಘದ ಸದಸ್ಯರು ಬಂದದ್ದು ಅಗಾಸಿಯನ್ನು ಒಂದು ಕಾರ್ಯಕ್ರಮಕ್ಕೆ ಮುಖ್ಯ ಭಾಷಣಕಾರನಾಗಿ ಕರೆಯುವುದಕ್ಕೆ. ನಾನು ಭಾಷಣ ಮಾಡಬೇಕೆಂದು ನೀವು ಹೇಳುತ್ತಿರುವ ವಿಷಯ, ನನ್ನ ಸದ್ಯದ ಸಂಶೋಧನೆಗೆ ಸಂಬಂಧಪಟ್ಟದ್ದಲ್ಲ. ಅದು ಸಂಪೂರ್ಣ ಬೇರೆಯೇ ವಿಷಯ. ಅದರ ಕುರಿತು ಮಾತಾಡಬೇಕಾದರೆ ನಾನು ಅದಕ್ಕೂ ಒಂದಷ್ಟು ತಯಾರಿ ಮಾಡಿಕೊಳ್ಳಬೇಕು. ಅದಕ್ಕೆ ಮತ್ತಷ್ಟು ಸಮಯ ಬೇಕು. ನನ್ನ ಸದ್ಯದ ಸಂಶೋಧನೆಯ ಕೆಲಸದ ಮಧ್ಯದಲ್ಲಿ ನನಗೆ ಅಂಥಾದ್ದಕ್ಕೆಲ್ಲ ಸಮಯವಿಲ್ಲ. ಆದ್ದರಿಂದ ನಿಮ್ಮ ಕಾರ್ಯಕ್ರಮಕ್ಕೆ ಬಂದು ಭಾಷಣ ಮಾಡಲು ಸಾಧ್ಯಲ್ಲ, ಕ್ಷಮಿಸಿ ಎಂದು ಒಂದು ಭಾಷಣವನ್ನೇ ಮಾಡಿಬಿಟ್ಟ ಅಗಾಸಿ! ಆದರೆ, ಬಂದವರು ಬರಿಗೈಯಲ್ಲಿ ಮರಳುವುದಿಲ್ಲ ಎಂದು ನಿರ್ಧರಿಸಿಯೇ ಬಂದಂತಿತ್ತು. ಕಾರ್ಯಕ್ರಮಕ್ಕೆ ಬರಬೇಕೆಂದು ಅವರು ಬಗೆ ಬಗೆಯಾಗಿ ಅಗಾಸಿಯನ್ನು ಬೇಡಿಕೊಂಡರು. ಕೊನೆಯ ಅಸ್ತ್ರವೆಂಬಂತೆ ಆ ತಂಡದ ನೇತೃತ್ವ ವಹಿಸಿದ್ದ ವ್ಯಕ್ತಿ, ಪ್ರೊಫೆಸರ್‌ ಅಗಾಸಿಯವರೇ, ನಿಮ್ಮ ಭಾಷಣಕ್ಕೆ ನಾವು ಒಂದು ಒಳ್ಳೆಯ ಮೊತ್ತದ ಸಂಭಾವನೆಯನ್ನೂ ಕೊಡುತ್ತೇವೆ ಎಂದ. ಅಷ್ಟು ಹೊತ್ತು ಸಮಾಧಾನದಿಂದ ಮಾತಾಡುತ್ತಿದ್ದ ಅಗಾಸಿ ಈಗ ಕೋಪದಿಂದ ಕೂಗಿದ: ಏನಂದುಕೊಂಡಿದ್ದೀರಿ ನನ್ನನ್ನು? ನನ್ನ ಅಮೂಲ್ಯ ಸಮಯವನ್ನು ದುಡ್ಡು ಸಂಪಾದಿಸುತ್ತ ಹಾಳುಮಾಡಬೇಕೆಂದು ಹೇಳುತ್ತಿದ್ದೀರಾ? ಅದಕ್ಕೆಲ್ಲ ಅವಕಾಶ ಕೊಡುವವನು ನಾನಲ್ಲ!

ರೋಹಿತ್‌ ಚಕ್ರತೀರ್ಥ

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-addasd

Mumbai Indians: ಸೂರ್ಯಕುಮಾರ್‌ ಶೀಘ್ರ ಚೇತರಿಕೆ ಸಾಧ್ಯತೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.