ಬದುಕು ಬಂಗಾರ ಮಾಡಿಕೊಳ್ಳುತ್ತೇನೆ, ನೀನಿಲ್ಲದೆಯೂ!


Team Udayavani, Jan 9, 2018, 1:01 PM IST

09-32.jpg

ಈಗ ನನ್ನೊಂದಿಗೆ ನಿನ್ನ ಅಸ್ತಿತ್ವದ ಯಾವುದೇ ಕುರುಹಿಲ್ಲ, ಮನದಲ್ಲಿ ನಿನ್ನ ನೆನಪಿನ ಪಳೆಯುಳಿಕೆಗಳಿಲ್ಲ. ಆದರೆ, ಈ ಬದುಕನ್ನು ಪ್ರೀತಿಸಲು ಹೇಳಿ ಕೊಟ್ಟ ಅಪ್ಪನಿದ್ದಾನೆ. ಮಗುವಿನಂಥ ಮನಸಿನ ಅಮ್ಮ ಇದ್ದಾಳೆ. ಎಡವಿ ಬಿದ್ದಾಗ ಮೊದಲು ನಕ್ಕು, ನಂತರ ಮೇಲೆತ್ತುವ ಸ್ನೇಹಿತರ ಬಳಗ ಈಗಲೂ ಜೊತೆಗಿದೆ. 

ನಿನ್ನ ಪ್ರೀತಿಯ ಸೋನೆಯಲಿ ಮಿಂದು, ಅತಿವೃಷ್ಟಿಯಲ್ಲಿ ಮುಳುಗಿದ್ದ ಹೃದಯದಲ್ಲೀಗ ಹನಿ ಪ್ರೀತಿಗೂ ಬರಗಾಲ. ನಿನ್ನ ಮಾತುಗಳ ಸುರಿಮಳೆಯಲ್ಲಿ ಮಿಂದೆದ್ದ ಕಿವಿಗಳಿಗೆ ಧ್ಯಾನದಂಥ ದಿವ್ಯ ಮೌನ. ಕೈ ಬೆರಳುಗಳ ನಡುವೆ ಬೆಸೆಯುತ್ತಿದ್ದ ನಿನ್ನ ಬೆರಳುಗಳಿರದೇ ಕೈಗಳಿಗೂ ಈಗ ಒಂಟಿತನ. ನಿನ್ನ ಅಸಂಖ್ಯ ನೋಟಗಳಿಗೆ ಜೊತೆಯಾಗುತ್ತಿದ್ದ ನನ್ನ ಕಣ್ಣುಗಳಲ್ಲಿ ಕಂಬನಿಯ ಮಂಜು.

ಬದುಕ ನಾವೆಯ ನಿನ್ನ ನಂಬುಗೆಯ ಸಾವಿರ ಕನಸುಗಳ ಹಾಯಿಯಲಿ ನೇಯ್ದ ಬದುಕು ಬಿರುಗಾಳಿಗೆ ದಿಕ್ಕೆಟ್ಟ ನೌಕೆ. ಪ್ರೀತಿಯೆಂಬ ಮಾಯೆಯ ಪೊರೆ ಆವರಿಸಿದ ಬದುಕಲೀಗ ಅಮಾವಾಸ್ಯೆಯ ಕಾರ್ಗತ್ತಲು. ಕಣ್ಣು ಹಾಯಿಸಿದಲ್ಲೆಲ್ಲಾ ನೀನು ಬಿಟ್ಟು ಹೋದ ಕೆಟ್ಟ ನೆನಪುಗಳು, ದಿಕ್ಕೆಟ್ಟು ಕೂತ ಭವಿಷ್ಯ, ಒಡೆದ ಕನ್ನಡಿಯಂತಾದ ಹೃದಯ, ಆ ಚೂರುಗಳಲ್ಲೂ ಕೇವಲ ನಿನ್ನದೇ ಪ್ರತಿಬಿಂಬ.

ಲೆಕ್ಕವಿರದಷ್ಟು ಅರ್ಥಹೀನ ಆಸೆಗಳು, ಮುತ್ತಿಕ್ಕಿದ್ದ ಆ ಮುಂಗುರುಳ ಒಡೆತನದ ಹಣೆ, ಜೊತೆಯಾಗಿ ಹಿಂಬಾಲಿಸಿದ ನಿನ್ನ ಹೆಜ್ಜೆಗಳು, ರಾತ್ರಿಯಲಿ ಪಿಸುಗುಡುತ್ತಿದ್ದ ಮೆಸೇಜುಗಳು, ರಾತ್ರಿ-ಹಗಲ ಕೂಡಿಸುತ್ತಿದ್ದ ಕರೆಗಳು.. ಈಗ ನೋಡಿದರೆ ಎಲ್ಲವೂ ಅರ್ಥಹೀನ.

ಇನ್ನೊಬ್ಬರ ಕೈ ಹಿಡಿದು ನಡೆದ, ನಿನ್ನ ಬದುಕ ದಾರಿಯಲಿ ನಾನೊಂದು ಗುಜರಿ ಲಾಟೀನು, ಏಣಿಯಲಿ ನಿನ್ನ ಹೆಜ್ಜೆ ಗುರುತ ಮೂಡಿಸಿಕೊಂಡ ಮೆಟ್ಟಿಲು, ದುರಂತ ಪ್ರೇಮ ಕಥೆಯೊಂದರ ನಾಯಕ(?), ಪ್ರೀತಿಯ ಜಗದಲಿ ದಿನವೂ ನಿನ್ನ ಪ್ರೀತಿಗಾಗಿ ಬೊಗಸೆಯೊಡ್ಡಿ ನಿಂತ ಅಲೆಮಾರಿ ನಿರ್ಗತಿಕ.

ಈಗ ಎಲ್ಲವೂ ಮುಗಿದು ಹೋದ ಭೂತಕಾಲ, ವರ್ತಮಾನದಲ್ಲಿ ನೀನು ಸುಳಿವಿರದ ಚಂಡಮಾರುತ, ಕಾಲದ ಗರ್ಭದಲ್ಲಿ ಕಳೆದು ಹೋದ ಹಲವಾರು ದುರಂತ ಪ್ರೇಮ ಕಥೆಗಳಲ್ಲಿ ನನ್ನದೊಂದು ಪೇಲವ ಪ್ರೇಮಕಥನ, ಚಂದ್ರಮನ ಆಣೆಯಿಟ್ಟು ಬಿಟ್ಟು ಹೋದ ಪ್ರೇಮಿಗಳ ಸಾಲಲ್ಲಿ ನಿನ್ನದೊಂದು ಹೆಸರು.

ಈಗ ನನ್ನೊಂದಿಗೆ ನಿನ್ನ ಅಸ್ತಿತ್ವದ ಯಾವುದೇ ಕುರುಹಿಲ್ಲ, ಮನದಲ್ಲಿ ನಿನ್ನ ನೆನಪಿನ ಪಳೆಯುಳಿಕೆಗಳಿಲ್ಲ. ಆದರೆ, ಈ ಬದುಕನ್ನು ಪ್ರೀತಿಸಲು ಹೇಳಿ ಕೊಟ್ಟ ಅಪ್ಪನಿದ್ದಾನೆ. ಮಗುವಿನಂಥ ಮನಸಿನ ಅಮ್ಮ ಇದ್ದಾಳೆ. ಎಡವಿ ಬಿದ್ದಾಗ ಮೊದಲು ನಕ್ಕು, ನಂತರ ಮೇಲೆತ್ತುವ ಸ್ನೇಹಿತರ ಬಳಗ ಈಗಲೂ ಜೊತೆಗಿದೆ. ಹಿಂದೆ ಬರುವ ಹುಡುಗಿಯರಿಗೂ ಕಮ್ಮಿಯೇನಿಲ್ಲ.

ಹೀಗಿರುವಾಗ, ಹುಡುಗ ಹುಡುಕಿಕೊಂಡು ಬಂದಾನು, ಪಾಪ, ಅವನು ಈಗಲೂ ನನ್ನ ನೆನಪಲ್ಲೇ ದಿನ ಕಳೆಯುತ್ತಿರಬಹುದು ಎಂದು ಕನಸಲ್ಲೂ ಎಣಿಸಬೇಡ. ನೆನಪಿಟ್ಟುಕೋ, ಬದುಕು ಬಂಗಾರ ಮಾಡಿಕೊಳ್ಳುತ್ತೇನೆ ನೀನಿಲ್ಲದೆಯೂ. 

ಗಣೇಶ ಆರ್‌.ಜಿ. ಶಿವಮೊಗ್ಗ

ಟಾಪ್ ನ್ಯೂಸ್

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ,

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ

9-aranthodu

Aranthodu: ಬೆಂಕಿ ಅವಘಡ; ತಪ್ಪಿದ ಭಾರೀ ಅನಾಹುತ

BS ಯಡಿಯೂರಪ್ಪನೇ ನನ್ನನ್ನು ವಾಪಸ್‌ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ

BS ಯಡಿಯೂರಪ್ಪನೇ ನನ್ನನ್ನು ವಾಪಸ್‌ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ

7-mng

Mangaluru: ಮದ್ಯಜಪ್ತಿ,16.4 ಕೆಜಿ ಡ್ರಗ್ಸ್‌ ವಶ: ಜಿಲ್ಲಾಧಿಕಾರಿ ಮಾಹಿತಿ

K.S. Eshwarappa ಗಂಡಸಾಗಿದ್ದರೆ ಮಗನಿಗೆ ಟಿಕೆಟ್‌ ಕೊಡಿಸಲಿ: ಮಧು

K.S. Eshwarappa ಗಂಡಸಾಗಿದ್ದರೆ ಮಗನಿಗೆ ಟಿಕೆಟ್‌ ಕೊಡಿಸಲಿ: ಮಧು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ,

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ

9-aranthodu

Aranthodu: ಬೆಂಕಿ ಅವಘಡ; ತಪ್ಪಿದ ಭಾರೀ ಅನಾಹುತ

Gajendragad; ದಕ್ಷಿಣ ಕಾಶಿ ಕಾಲಕಾಲೇಶ್ವರ ಅದ್ದೂರಿ ರಥೋತ್ಸವ

Gajendragad; ದಕ್ಷಿಣ ಕಾಶಿ ಕಾಲಕಾಲೇಶ್ವರ ಅದ್ದೂರಿ ರಥೋತ್ಸವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.