ನೆನಪುಗಳ ನೆರಳು ಜೊತೆಗೇ ಇರ್ತದೆ!


Team Udayavani, Oct 20, 2020, 8:20 PM IST

josh-tdy-4

ನೀನೊಂದು ಸುಂದರ ಸ್ವಪ್ನ. ನಿನ್ನೊಂದಿಗೆಕಳೆದಕ್ಷಣಗಳು ಜೀವನದಲ್ಲಿ ಎಂದಿಗೂ ಮರೆಯಲಾರದಂತಹವು. ಆ ದಿನಗಳ ಲವಲವಿಕೆ- ಚೈತನ್ಯ ಹೇಳತೀರದು. ನಿನ್ನ ಧ್ವನಿಯೊಂದೇ ಸಾಕಾಗಿತ್ತು, ಮನಸ್ಸು ರಿಚಾರ್ಜ್‌ ಆಗಲು. ಹಲವಾರು ಕಲ್ಪನೆಗಳನ್ನು, ಕನಸುಗಳನ್ನು ಹುಟ್ಟುಹಾಕಿದ್ದ ಸ್ವಪ್ನಸುಂದರಿ ನೀನು.

ಬದುಕಿನ ವಿವಿಧ ಮಜಲುಗಳಲ್ಲಿ ನಿನ್ನದೊಂದು ಪಾತ್ರವನ್ನು ಸೃಷ್ಟಿಸಿಕೊಡಲೇಬೇಕು ಎಂದು ಆ ಭಗವಂತನಲ್ಲಿ ಬೇಡಿಕೊಂಡ ದಿನಗಳು ಹಲವಾರು. ಆ ಮನಸ್ಥಿತಿ ರೂಪಿತವಾದದ್ದು ನಿನ್ನಿಂದಲೇ.ಕಾಣದ ದಿನಗಳಿಗೆ ಹಲವು ಬಣ್ಣಗಳನ್ನು ಎರಚಿ ರಂಗುರಂಗಿನ ರಂಗೋಲಿಯನ್ನು ರಚಿಸಿ,ಕಲ್ಪನೆಗಳ ಕಾರ್ಮೋಡವನ್ನು ಸೃಷ್ಟಿಸಿದವಳು ನೀನು. ನಾವಂದುಕೊಂಡಂತೆ ಜಗತ್ತು ಇದ್ದಿದ್ದರೆ ಅದೆಷ್ಟೋ ಚೆನ್ನಾಗಿರುತ್ತಿತ್ತು. ಆದರೆ ಬಯಸಿದ್ದೇ ಬದುಕಾಗಳು ಸಾಧ್ಯವೇ?

ಕೆಲವೊಮ್ಮೆ ನಮ್ಮ ಬದುಕಿಗೆ ಮತ್ಯಾರೋ ಹೇಳದೇಕೇಳದೆ ಬಂದುಬಿಡುತ್ತಾರೆ.  ಅವರ ಖುಷಿಗಾಗಿ ನಮ್ಮ ಸಂಭ್ರಮವನ್ನೇ ಬಲಿಕೊಡಬೇಕಾಗುತ್ತದೆ. ಇಷ್ಟವಿಲ್ಲದಿದ್ದರೂ ನಾವು ನೋವನ್ನು ಸ್ವೀಕರಿಸಲೇಬೇಕಾದ ಸಂದರ್ಭ ಬಂದುಬಿಡುತ್ತದೆ. ನಿನ್ನ ಜೊತೆಗಿನ ಬದುಕುವ ವಿಷಯವಾಗಿ ನೂರಲ್ಲ, ಸಾವಿರಕನಸುಕಟ್ಟಿಕೊಂಡಿದ್ದವ ನಾನು. ಅಂಥವನಿಗೂ ಅನ್ಯಾಯವಾಗಿಹೋಯಿತಲ್ಲ… ಇರಲಿ ಬಿಡು, ಈಗ ಆಗಿರುವುದಕ್ಕೆಲ್ಲಾ ನೀನೇ ಕಾರಣ ಎಂದು ನಾನು ಹೇಳುವುದಿಲ್ಲ. ಇನ್ಯಾವತ್ತೂ ನೀನು ನನಗೆ ಸಿಗುವುದಿಲ್ಲ ಎಂದು ಗೊತ್ತಾದ ನಂತರವೂ ನಿನ್ನನ್ನು ನಾನು ಜರಿಯುವುದಿಲ್ಲ. ಟೀಕಿಸುವುದಿಲ್ಲ. ಬೇರೆಯವರ ಸಂತೋಷಕ್ಕಾಗಿ ನೀನೂ ನೋವು ಸ್ವೀಕರಿಸಿದೆ. ಅದರ ಮುಂದಿನ ಭಾಗವೆಂಬಂತೆ ನನ್ನಿಂದ ದೂರವಾದೆ. ಅದು ನನಗಾದ ಅನ್ಯಾಯವೆಂದು ನಾನೇಕೆ ಹೇಳಲಿ..? ನೀನು ನನಗಿಷ್ಟವಾದ ಮೇಲೆ, ನಿನ್ನ ನಿರ್ಧಾರಗಳೂ ನನಗೆ ಇಷ್ಟವೇ. ನಿನ್ನ ಯಾವುದೇ ನಿರ್ಧಾರಕ್ಕೆ ನನ್ನ ಸಮ್ಮತಿ ಇದ್ದೇ ಇರುತ್ತದೆ. ನಮ್ಮಿಬ್ಬರ ಅಗಲಿಕೆ ನಿನ್ನ ಮನದೊಳಗೆ ಅದೆಷ್ಟು ನೋವುಗಳನ್ನು ಹುಟ್ಟಿಸಿತೋ ನಾ ಅರಿಯೆ. ಆದರೆಊಹೆಗೂ ಮೀರಿದ ನೋವು ನಿನಗಾಗಿದೆ ಎಂಬುದು ಮಾತ್ರ ಸತ್ಯ. ನನ್ನ ಬಾಳಿಂದ ನೀನು ಮರೆಯಾದರೂ ನಿನ್ನ ನೆನಪುಗಳ ನೆರಳು ಎಂದಿಗೂ ಮರೆಯಾಗುವುದಿಲ್ಲ. ಈ ಕ್ಷಣಕ್ಕೆ ಅದಷ್ಟೇ ಸತ್ಯ.

 

– ವೆಂಕಟೇಶ ಚಾಗಿ

ಟಾಪ್ ನ್ಯೂಸ್

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.