ಮನಸೆ ರಿಲ್ಯಾಕ್ಸ್‌ ಪ್ಲೀಸ್‌… ನಾನು, ನೇರ-ದಿಟ್ಟ-ನಿರಂತರ… ನೀವು?


Team Udayavani, Jul 28, 2020, 2:24 PM IST

ಮನಸೆ ರಿಲ್ಯಾಕ್ಸ್‌ ಪ್ಲೀಸ್‌… ನಾನು, ನೇರ -ದಿಟ್ಟ-ನಿರಂತರ… ನೀವು?

ನೇರ, ದಿಟ್ಟತನ ಎಲ್ಲ ಸಮಯದಲ್ಲೂ ಕೆಲಸ ಮಾಡೋಲ್ಲ. ಆಫೀಸಲ್ಲಿ ಬಾಸ್‌ ಮುಂದೆಯೋ, ನಮಗಿಂತ ಹಿರಿಯರ ಬಳಿಯೋ ಇದು ಕೆಲಸಕ್ಕೆ ಬಾರದು.

ಲೇ, ಅವರಿಂದ ದೂರ ಇದ್ದುಬಿಡಿ, ಅವರು ಮುಖಕ್ಕೆ ಹೊಡೆದಂತೆ ಮಾತಾಡ್ತಾರೆ… ಹೀಗಂತ ಎಚ್ಚರಿಕೆ ನೀಡುವುದನ್ನು ಕೇಳಿಸಿಕೊಂಡಿರುತ್ತೀರಿ. ಇದರಂತೆ, ನಾನು ನೇರಾನೇರ. ಇದ್ದದ್ದನ್ನು ಇದ್ದಂಗೆ ಹೇಳ್ತೀನಿ. ನನ್ನ ಮಾತಿಂದ ಬೇರೆಯವರಿಗೆ ಕೋಪ ಬಂದ್ರೆ ಬರಲಿ, ನನಗೇನಂತೆ? ಅನ್ನುವವರನ್ನೂ ನೀವು ನೋಡಿರಬಹುದು.

ಮುಖಕ್ಕೆ ಹೊಡೆದಂತೆ ಮಾತಾಡೋದು, ಇದ್ದದ್ದನ್ನು ಇದ್ದಂತೆಯೇ ಹೇಳಿಬಿಡುವುದು- ಎರಡೂ ಒಂದೇನೇ. ಸುಮ್ಮನೆ ಗಮನಿಸಿ. ಇಂಥ ವ್ಯಕ್ತಿತ್ವದವರಲ್ಲಿ ಆತ್ಮವಿಶ್ವಾಸ ಜಾಸ್ತಿ ಇರ್ತದೆ. ಕಾರಣ, ಮುಖಕ್ಕೆ ಹೊಡೆದಂಗೆ ಮಾತಾಡೋದು. ಈ ರೀತಿ ಮಾತೋಡೇದೇ ಇವರ ಟ್ರೇಡ್‌ ಮಾರ್ಕ್‌. ಅದೇ ಅವರ ಆಸ್ತಿ.

ನೇರವಂತಿಕೆ ಇದೆಯಲ್ಲ; ಇದು ಬಹಳ ಡೇಂಜರ್‌. ಟೈಮಿಂಗ್‌ ಸರಿ ಇಲ್ಲ ಅಂದರೆ ಸಮಸ್ಯೆಯೇ ಜಾಸ್ತಿ. ಹೇಗೆಂದರೆ, ನಮ್ಮ ನಿಷ್ಠುರ ಮಾತುಗಳನ್ನು ಕೇಳಿಸಿಕೊಳ್ಳುವ ವ್ಯಕ್ತಿ ಶಾರ್ಟ್ ಟೆಂಪರ್‌ ಆಗಿದ್ದರೆ, ಕಥೆ ಮುಗಿದೇ ಹೋಯಿತು- ಉಗುರಲ್ಲಿ ಹೋಗುವುದಕ್ಕೆ ಕೊಡಲಿ ತಗೊಂಡರು ಅಂತಾರಲ್ಲ? ಆ ರೀತಿ ಜಗಳ ಶುರುವಾಗಿಬಿಡುತ್ತದೆ. ನೆನಪಿರಲಿ: ಪ್ರತಿ ಮಾತಿಗೂ ಸಮಯ-ಸಂದರ್ಭ ಅರ್ಥಾತ್‌ ಟೈಮಿಂಗ್‌ ಅಂತ ಇರುತ್ತದೆ. ಅದು ಸರಿ ಇದ್ದರೇನೇ ಮಾತಿಗೆ ಅರ್ಥ ಬರುವುದು. ನೇರವಾಗಿ ಮಾತಾಡೋರಲ್ಲಿ ಬಹುತೇಕರಿಗೆ “ನಾನು’ ಅನ್ನೋದು ಇರುತ್ತದೆ. ತನ್ನ ಜಡ್ಜ್ ಮೆಂಟ್‌ ಸರಿಯಾಗಿಯೇ ಇರುತ್ತದೆ ಅನ್ನೋ ವಿಶ್ವಾಸ ಇರುತ್ತದೆ. ಇಲ್ಲ, ನೀವು ಹೇಳಿದ್ದು ಸರಿ ಇಲ್ಲ ಅಂತ ಸುಮ್ಮನೆ ಅಂದುನೋಡಿ, ಅವರಿಗೆ ನಖಶಿಖಾಂತ ಕೋಪ ಏರಿ ಕೂಗಾಡಲು ಶುರು ಮಾಡಿಬಿಡುತ್ತಾರೆ.

“ನಾನು’ ಅನ್ನೋದು ದೊಡ್ಡ ಕಾಯಿಲೆ. ಅದರಿಂದ ಬಿಡಿಸಿಕೊಳ್ಳುವುದು ಕಷ್ಟ. ನಾನು- ಅನ್ನುವುದರಲ್ಲೇ ಒಂದು ನೆಗೆ ಟೀವ್‌ ಥಾಟ್‌ ಇರುತ್ತದೆ. ಒಂದು ಸಲ ನೆಗೆಟೀವ್‌ ಥಿಂಕಿಂಗ್‌ ಶುರುವಾದರೆ, ಹೊಸದಾಗಿ ಕಲಿಯುವ- ತಿಳಿಯುವ ಆಸಕ್ತಿಯೇ ಇರೋದಿಲ್ಲ. ಜೊತೆಗೆ ನಾನು, ನನಗೆ ಗೊತ್ತು ಅನ್ನೋದೆಲ್ಲ ತಲೆಯಲ್ಲಿ ಇರುವುದರಿಂದ, ಆಗ ಗಳಿಸಿದ ತಿಳುವಳಿ ಕೆಯೇ ಗಟ್ಟಿ. ಹೀಗಾಗಿ, ಇವರು ಇದ್ದಲ್ಲೇ ಕೂಪ ಮಂಡೂಕದ ರೀತಿ ಇರುತ್ತಾರೆ. ಜಗತ್ತು, ಜನ ಬಹಳ ಮುಂದೆ ಹೋಗಿರುತ್ತಾರೆ. ಅದನ್ನು ಒಪ್ಪಿಕೊಳ್ಳಲು ಇವರು ಸಿದ್ಧರಿರುವುದಿಲ್ಲ.

ನೇರ, ದಿಟ್ಟತನ ಎಲ್ಲ ಸಮಯದಲ್ಲೂ ಕೆಲಸ ಮಾಡೋಲ್ಲ, ಆಫೀಸಲ್ಲಿ ಬಾಸ್‌ ಮುಂದೆಯೋ, ನಮಗಿಂತ ಹಿರಿಯರ ಬಳಿಯೋ ಇದು ಕೆಲಸಕ್ಕೆ ಬಾರದು. ಅವರ ಎದುರು ಹಾಗೆಲ್ಲಾ  ಮಾತಾಡಿದರೆ, ಇವನಿಗೇನು ಇಷ್ಟು ದುರಹಂಕಾರ ಅಂದುಕೊಳ್ಳುತ್ತಾರೆ. ಹೀಗಾಗಿ, ಇದ್ದುದನ್ನು ಇದ್ದಂತೆ ಯಾವಾಗ ಹೇಳಬೇಕು, ಯಾವಾಗ ಹೇಳಬಾರದು ಎಂಬ ಸೆನ್ಸ್ ಇರಬೇಕು.

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.