ಮನಸು ಈಗಲೂ ನಿನ್ನನ್ನೇ ಬಯಸುತಿದೆ…


Team Udayavani, Aug 7, 2018, 6:00 AM IST

8.jpg

ಕೊನೆಯ ಬೆಂಚಿನಲ್ಲಿ ಕೂರುತ್ತಿದ್ದ ನಾನು ಎಲ್ಲರನ್ನೂ ನೋಡುತ್ತಿದ್ದೆ. ಆದರೆ, ನನ್ನನ್ನು ನೋಡುವವಳೂ ಒಬ್ಬಳು ಇದ್ದಾಳೆಂದು ಸ್ನೇಹಿತ ಹೇಳುವವರೆಗೂ ನನಗೆ ತಿಳಿದಿರಲಿಲ್ಲ. 

ಹಾಯ್‌ ಶ್ರೀ,
 ನಾನು ನಿನ್ನ ಮುದ್ದಿನ ಪಂಡು. ಈಗ ನೀನು ಎಲ್ಲಿದ್ದೀಯೋ? ಹೇಗಿದ್ದೀಯೋ? ನನಗಂತೂ ತಿಳಿಯದು. ನಿನ್ನನ್ನು ನೋಡಿದ ಮೊದಲ ದಿನದಿಂದಲೇ ನಿನ್ನ ಮೇಲೆ ಪ್ರೀತಿಯಾಯಿತು. ಅಂದಿನಿಂದ ಇಂದಿನವರೆಗೂ ಮನಸ್ಸಲ್ಲಿ ನಿನ್ನದೇ ಗುನುಗು. ನಿನ್ನನ್ನು ನೋಡದೇ ಸುಮಾರು ಆರೇಳು ವರ್ಷಗಳು ಉರುಳಿಹೋದವೆಂದರೆ ನನಗಿನ್ನೂ ನಂಬಲಾಗುತ್ತಿಲ್ಲ! 

ಆಗ ನಾವೆಲ್ಲಾ ಹತ್ತನೇ ತರಗತಿಯಲ್ಲಿದ್ದೆವು. ಕೊನೆಯ ಬೆಂಚಿನಲ್ಲಿ ಕೂರುತ್ತಿದ್ದ ನಾನು ಎಲ್ಲರನ್ನೂ ನೋಡುತ್ತಿದ್ದೆ. ಆದರೆ, ನನ್ನನ್ನು ನೋಡುವವಳೂ ಒಬ್ಬಳು ಇದ್ದಾಳೆಂದು ಸ್ನೇಹಿತ ಹೇಳುವವರೆಗೂ ನನಗೆ ತಿಳಿದಿರಲಿಲ್ಲ. ಪಕ್ಕದಲ್ಲಿ ಕೂರುತ್ತಿದ್ದ ಸ್ನೇಹಿತ, ಆ ಹುಡುಗಿ ಯಾಕೋ ನಿನ್ನನ್ನೇ ನೋಡಿ ನಗುತ್ತಿರುತ್ತಾಳೆ? ಎಂದು ಕೇಳುತ್ತಿದ್ದ. ಏನೋ ತಮಾಷೆ ಮಾಡ್ತಿದ್ದಾನೆ ಎಂದುಕೊಂಡು ನಾನು ಗಮನ ಹರಿಸಿರಲಿಲ್ಲ. ಆದರೂ ಅವನು ಪ್ರತಿದಿನವೂ ಅದನ್ನೇ ಹೇಳುತ್ತಿದ್ದುದರಿಂದ, ನೋಡಿಯೇ ಬಿಡೋಣ ಇವನು ಹೇಳುತ್ತಿರುವುದು ಸುಳ್ಳೋ? ನಿಜವೋ? ಎಂದು ಪರೀಕ್ಷಿಸಲು ಒಂದು ದಿನ ನಾನೂ ನಿನ್ನತ್ತ ತಿರುಗಿ ನೋಡಿಯೇ ಬಿಟ್ಟೆ! 

ಹಾಗೆ ನೋಡಿದಾಗ ನನಗೆ ನೀನು ಮಾತ್ರ ಕಾಣಲಿಲ್ಲ. ಬದಲಿಗೆ ನನ್ನ ಭವಿಷ್ಯವೇ ನಿನ್ನಲ್ಲಿ ಕಾಣಿಸಿಬಿಟ್ಟಿತು. ಅದುವರೆಗೂ ಲಂಗು-ಲಗಾಮಿಲ್ಲದೆ, ಎಲ್ಲೆಲ್ಲೋ ಸುತ್ತುತ್ತಿದ್ದ ನನ್ನ ಮನಸ್ಸು ಅಂದಿನಿಂದ ನಿನ್ನದೇ ಧ್ಯಾನದಲ್ಲಿ ಮುಳುಗಿಹೋಯಿತು. 

ನಿನ್ನ ನೋಡುವ ಸಲುವಾಗಿಯೇ, ನೋಟ್ಸ್‌ ಬೇಕೆಂಬ ನೆಪವೊಡ್ಡಿ  ನಿಮ್ಮ ಮನೆಗೆ ಬರುತ್ತಿದ್ದೆ. ನಿನಗೂ ನನ್ನ ಮೇಲೆ ಅಷ್ಟೇ ಪ್ರೀತಿ ಇದ್ದುದರಿಂದ, ಅದೇ ನೆಪವನ್ನೊಡ್ಡಿ ನೀನೂ ನಮ್ಮ ಮನೆಗೆ ಬರುತ್ತಿದ್ದೆ. ಆದರೂ ನನ್ನ ಮನದಾಳದ ಗೊಂದಲಕ್ಕೆ ಉತ್ತರವಾಗಿ, ನೀನೇ ಅಲ್ಲವೇ ನೋಟ್ಸ್‌ಅನ್ನು ಹಿಂದಿರುಗಿಸುವಾಗ, ಅದರೊಳಗೆ “ಐ ಲವ್‌ ಯೂ’ ಎಂದು ಬರೆದು,ನನಗೆ ಪ್ರೇಮಲೋಕವನ್ನು ಪರಿಚಯಿಸಿದ್ದು?

 ಹೀಗೆ ಸುಂದರವಾಗಿ ಸಾಗುತ್ತಿದ್ದ ನಮ್ಮಿಬ್ಬರ ಪ್ರೇಮದ ಪಯಣದ ಮೇಲೆ ಅದ್ಯಾರ ಕಣ್ಣು ಬಿತ್ತೋ? ನಮ್ಮಿಬ್ಬರ ಪ್ರೀತಿಯ ವಿಷಯ ನಮ್ಮ ಮನೆಗಳಲ್ಲಿ ತಿಳಿದು, ರಂಪವಾಯಿತು. ಅದೊಂದು ದಿನ ನಿಮ್ಮಮ್ಮ, “ಇನ್ಮುಂದೆ ನಮ್ಮ ಮನೆಯ ಹತ್ತಿರ ಬರಬೇಡಪ್ಪ’ ಎಂದು ಹೇಳಿಬಿಟ್ಟರು. ಅಂದಿನಿಂದ ನಿನ್ನನ್ನು ಭೇಟಿಯಾಗಲು ನಾನು ಮಾಡದ ಪ್ರಯತ್ನವಿಲ್ಲ. ನಿನ್ನ ಮನೆಯವರು ನಿನಗೇನು ಹೇಳಿ ನನ್ನಿಂದ ದೂರವಿಟ್ಟರೋ ನನಗಂತೂ ಗೊತ್ತಿಲ್ಲ. ನೀನು ನನ್ನನ್ನು ಬಿಟ್ಟು ಹೋಗಿ ಎಷ್ಟೋ ವರ್ಷಗಳು ಕಳೆದರೂ, ನಿನ್ನ ನೆನಪುಗಳು ಈಗಲೂ ಕಾಡುತ್ತಲೇ ಇವೆ. ಮನಸ್ಸು ಇಂದಿಗೂ ನಿನ್ನನ್ನೇ ಬಯಸುತ್ತಿದೆ. ಈಗ ಹಠಾತ್ತಾಗಿ ನಾನು ಈ ಪತ್ರ ಬರೆಯಲು ಕಾರಣ ಕೂಡ ನೀನೇ ಶ್ರೀ. ಈ ಪತ್ರ ಓದಿದರೆ ನೀನು ವಾಪಸ್‌ ಬಂದೇ ಬರ್ತೀಯಾ ಅನ್ನೋ ಭರವಸೆ ನನ್ನದು. ಹಾಗೆಯೇ ಆಗಲಿ ಎಂದು ಆಶಿಸುತ್ತಾ…….

ಇಂತಿ,
ನಿನ್ನ ಮುದ್ದಿನ ಪಂಡು
-ಗಿರೀಶ್‌ ಚಂದ್ರ ವೈ.ಆರ್‌.

ಟಾಪ್ ನ್ಯೂಸ್

Rajveer Diler: ಬಿಜೆಪಿ ಸಂಸದ ರಾಜವೀರ್ ದಿಲೇರ್ ಹೃದಯಾಘಾತದಿಂದ ನಿಧನ

Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್‌ವೀರ್ ದಿಲೇರ್ ನಿಧನ

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Rajveer Diler: ಬಿಜೆಪಿ ಸಂಸದ ರಾಜವೀರ್ ದಿಲೇರ್ ಹೃದಯಾಘಾತದಿಂದ ನಿಧನ

Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್‌ವೀರ್ ದಿಲೇರ್ ನಿಧನ

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್‌ ಮುರಿದು ಕಳ್ಳತನ

Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್‌ ಮುರಿದು ಕಳ್ಳತನ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.