ಅಮ್ಮಾ, ಮನೇಗ್‌ ಬರ್ತಿದ್ದೀನಿ…

ಮೊದಲ ಸ್ಯಾಲರಿ, ಮೊದಲ ಯುಗಾದಿ

Team Udayavani, Apr 2, 2019, 6:00 AM IST

a-2

ಬದುಕಿನಲ್ಲಿ ಇಷ್ಟು ವರ್ಷಗಳ ಕಾಲ ಆಚರಿಸಿದ ಹಬ್ಬಗಳಿಗಿಂತ ಇದು ವಿಶೇಷ ಅನಿಸುತ್ತದೆ. ಅದಕ್ಕೆ ಕಾರಣವಾದದ್ದು ದುಡಿಮೆ. ಅದರಲ್ಲೂ ದುಡಿದ ಹಣದಲ್ಲಿ ಮೊದಲ ಹಬ್ಬ. ಅಪರೂಪವಾದದ್ದು ಆಕಸ್ಮಿಕವಾಗಿ ನಡೆದುಹೋದಂತೆ…

ಬದುಕಿನ ದೊಡ್ಡ ದೊಡ್ಡ ಸಂತೋಷಗಳಿಗೆ ಸಣ್ಣ ಸಣ್ಣ ಕಾರಣಗಳು ಸಾಕು. ಮನದ ಬಾಗಿಲ ಮುಂದೆಯೇ ಅಪಾರ ಆನಂದವನ್ನು ಚೆಲ್ಲುತ್ತವೆ. ಎಷ್ಟೆಲ್ಲಾ ಓದಿದ್ದರೂ ಏನೆಲ್ಲಾ ಮಾಡಿದ್ದರೂ ಕೆಲಸವೊಂದು ದಕ್ಕದೇ ಹೋದಾಗ “ಭೂಮಿಗೆ ಭಾರ’ ಎಂಬಷ್ಟಲ್ಲದಿದ್ದರೂ “ಮನೆಗೆ ಭಾರ’ ಅಂತ ಅನ್ನಿಸುತ್ತದೆ. ಇಂಥದ್ದೇ ಬೇಕೆಂದೇನೂ ಇಲ್ಲ… ಯಾವ ಕೆಲಸವಾದರೂ ಸರಿ ಎಂಬ ಮನಸ್ಸಿನ ರಾಜಿ ಮಾತಿಗೆ ಬೆಂಗಳೂರು, ಮಂಗಳೂರು, ಗೋವಾ, ಮುಂಬೈಯಂಥ ದೊಡ್ಡ ನಗರಗಳು ಕಿವಿಯಾಗುತ್ತವೆ. ಕೈ ಮಾಡಿ ಕರೆಯುತ್ತವೆ. ಮೂರೊಪ್ಪತ್ತಿನ ಹಸಿವನ್ನು, ರಾತ್ರಿಯ ಹೊರಳಾಟವನ್ನು ಸುಲಭವಾಗಿ ಸಹಿಸಿಕೊಳ್ಳುವ ಭರವಸೆ ನೀಡುತ್ತವೆ.

ಬದುಕಿನಲ್ಲಿ ಬೇಸತ್ತು ಹೋದವರಿಗೆ ಇಷ್ಟು ಸಾಕಲ್ಲವೇ? ಯಾರಿಗೂ ಹೇಳದೇ, ಕೇಳದೆ ಹೊರಡುವುದು ಆ ನಗರಗಳಿಗೇ. ಮಹಾನಗರಗಳ್ಳೋ… ಬಾಚಿ ತಬ್ಬಿಕೊಳ್ಳುತ್ತವೆ. ಮೊದಲ ಎರಡು ಮೂರು ದಿನಗಳನ್ನು ಸಹಿಸಿಕೊಂಡುಬಿಟ್ಟರೆ ಮತ್ತೆ ಎರಡು ಮೂರು ತಿಂಗಳು ಏನೆಂದರೆ ಏನೂ ನೆನಪಾಗದಂತೆ, ತಲೆ ಗಿಮ್ಮೆನ್ನುಸುವ ಮಾಯೆ, ನಗರ ಬದುಕಿನದ್ದು. ಮತ್ತೆ ಮನೆ- ಊರು ನೆನಪಾಗುವುದೇ ಹಬ್ಬವೆಂಬ ಸಡಗರಗಳಿಗೆ, ಕಂಪನಿ ಬೋನಸ್‌ ಘೋಷಣೆ ಮಾಡಿದಾಗ.

ಫ್ರೆಂಡ್‌ಗೆ ಫೋನ್‌ಕಾಲ್‌
“ನಾಳೆ ಊರಿಗೆ ಬರ್ತಾ ಇದೀನಿ. ನಮ್ಮನೆಯಲ್ಲಿ ಹೇಳಿ ಬಿಡು’ ಅನ್ನುವ ಮಾತು ಕೇಳಿ ಆ ಕಡೆಯಿಂದ ಅಚ್ಚರಿ. “ನೀನು ಬರೋದೇ ಇಲ್ಲ ಅನ್ಕೊಂಡಿದ್ದೆ! ಎಲ್ಲಿದ್ದೀಯಾ..?’ ಎಂಬ ಪ್ರಶ್ನೆಗೆ, “ಈಗ ಅದೆಲ್ಲ ಹೇಳ್ಳೋಕ್ಕಾಗಲ್ಲ… ನಾಳೆ ಊರಲ್ಲಿ ಮಾತಾಡೋಣ. ನಿನ್ನ ಡ್ರೆಸ್‌ ಸೈಜ್‌ ಹೇಳು’ ಎಂದು ಕೇಳುತ್ತಾ ಆ ಕಡೆಯಿಂದ ಬಂದ ಉತ್ತರವನ್ನು ಸರಿಯಾಗಿ ನೆನಪಿಟ್ಟುಕೊಂಡು, ಎಲ್ಲವನ್ನೂ ಖರೀದಿಸಿ ರೈಲು ಹತ್ತಿದ ಮನಸ್ಸಿನ ಉದ್ದಕ್ಕೂ ರೈಲು ಹಳಿಗಳ ಮೇಲೆ ನೆನಪುಗಳ ಓಟ…

ಬದಲಾದ ವೇಷಭೂಷಣ
ಮೈ ತುಂಬಾ ಮಹಾನಗರದ ಪೋಷಾಕು. ಜೀನ್ಸ್‌ ಪ್ಯಾಂಟು, ಟಿ ಶರ್ಟು, ಬಣ್ಣದ ಬೂಟು, ಕಿವಿಯಲ್ಲಿ ಇಯರ್‌ಫೋನು, ಸ್ಟೈಲಿಶ್‌ ವಾಚು ಹಾಕಿಕೊಂಡು ಊರಿನಲ್ಲಿ ಹೋಗುತ್ತಿದ್ದರೆ, “ಯಾರಿದು?’ ಎಂಬ ಬೆರಗು. ಬರೀ ಹರಕು ಬಟ್ಟೆ ತೊಟ್ಟು, ಅವರಿವರು ಕೊಟ್ಟ ಉಡುಪು ಧರಿಸಿ ಸವೆಸಿದ್ದ ಬದುಕಿಗೆ ಒಂದಿಷ್ಟು ಹೊಸತನ ತೊಡಿಸುವ ಹೊತ್ತು. ಮನೆಗೆ ಬಂದೊಡನೆ ಮನೆತುಂಬ ಆವರಿಸಿದ ಖುಷಿ. ಹಬ್ಬವನ್ನೇ ತಿರಸ್ಕರಿಸಿದ್ದವರಿಗೆ ಹೊಸ ಸಂವತ್ಸರ. ಹೆಚ್ಚಾದ ಹಬ್ಬದ ಸಡಗರ.

ಮನೆ ಮಂದಿಗೆಲ್ಲ ಬಟ್ಟೆ
ಹುಟ್ಟಿದಾಗಿನಿಂದಲೂ ಅಪ್ಪ- ಅಮ್ಮ ಕೊಡಿಸಿದ ಬಟ್ಟೆಯನ್ನೇ ಉಟ್ಟು, ದೊಡ್ಡವರಾದವರಿಗೆ, ಹೊಸ ಬಟ್ಟೆ ಧರಿಸುವುದು ಹಬ್ಬದಲ್ಲಿ ನಿಜಕ್ಕೂ ದುಪ್ಪಟ್ಟಿನ ಸಂಭ್ರಮ. ಅಪ್ಪನಿಗೆ ಬಿಳಿ ಬಟ್ಟೆ, ಅಮ್ಮನಿಗೆ ಇಷ್ಟದ ಸೀರೆ, ತಮ್ಮ- ತಂಗಿಯರಿಗೆ ಕಾಲೇಜಿಗೊಪ್ಪುವ ಡ್ರೆಸ್ಸು… ಎಲ್ಲರ ಮುಖದಲ್ಲಿಯೂ ಹೊಸ ಬಟ್ಟೆಯ ಘಮ. ಮತ್ತೆ ಬರುವುದೇ ಇಲ್ಲ ಅಂದುಕೊಂಡಿದ್ದ ಹೆತ್ತವರಿಗೆ ಮತ್ತೂಮ್ಮೆ ಹುಟ್ಟಿ ಬಂದಂತೆ. ಹೊಸ ಬಟ್ಟೆಗಳನ್ನುಟ್ಟು ಎಲ್ಲರಿಗೂ ತೋರಿಸಿ ಬರುವ ಉಮೇದು.

ಕಂಪನಿ ಕೊಟ್ಟ ಗಿಫ್ಟ್ ಬಾಕ್ಸ್‌
ಹಬ್ಬಕ್ಕೆ ವಾರವಿದ್ದಾಗ, ಕಂಪನಿ ತನ್ನ ಉದ್ಯೋಗಿಗಳಿಗೆ ಪಟಾಕಿ ಬಾಕ್ಸ್‌ ಅಥವಾ ಸ್ವೀಟ್‌ ಬಾಕ್ಸ್‌ನ ಎರಡು ಆಯ್ಕೆ ಇಟ್ಟಿತ್ತು. ಅದರಲ್ಲಿ ಮನೆಯ ಎಲ್ಲರಿಗೂ ಕೊಡುವ ಖುಷಿಯಲ್ಲಿ ಸ್ವೀಟ್‌ ಅನ್ನೇ ಆಯ್ದುಕೊಂಡು ಬಂದು ಒಂದೊಂದೇ ಪೊಟ್ಟಣ ಕೈಗಿಟ್ಟು ಅವರ ಕಂಗಳಲ್ಲಿ ಕಂಡ ಸಿಹಿ ಪ್ರೀತಿಗೆ ಹೃದಯವೆಲ್ಲ ಜೇನುಗೂಡು. ಬದುಕಿನ ಅಷ್ಟೂ ಕಾಲದ ಕಹಿ ಮರೆಸುವ ತಾಕತ್ತು. ಎಷ್ಟೊಂದು ಸಮಾಧಾನ, ಸಂತೃಪ್ತಿ, ಸಂತೋಷವನ್ನು ಕೊಟ್ಟಿತು ಒಂದು ಕೆಲಸ.

ಹಬ್ಬದ ರೇಶನ್‌ ಖರೀದಿ
ಮೊದಲ ಕುಶಲೋಪರಿ ಮುಗಿದು ಮರುದಿನದ ಹಬ್ಬಕ್ಕೆ ಬೇಕಾದುದನ್ನು ಕೇಳಿ, ಪಟ್ಟಿ ಬರೆದುಕೊಂಡು, ಫ್ರೆಂಡ್‌ ಜೊತೆ ಹೋಗಿ ಹಬ್ಬ ಮುಗಿದ ನಂತರವೂ ಮೂರು ತಿಂಗಳಿಗಾಗುವಷ್ಟು ಸಾಮಾನು ಖರೀದಿಸಿ ಮನೆಗೆ ತಂದು ಹಾಕಿದಾಗ ಜವಾಬ್ದಾರಿ ನಿಭಾಯಿಸಿದ ಸಾರ್ಥಕತೆ. ಇಡೀ ಮನೆಯಲ್ಲಿ ಗರಿಗೆದರಿದ ಖುಷಿಯ ಕುಣಿತ. ಅವತ್ತಿನ ಊಟಕ್ಕೆ ಹೊಸರುಚಿ. ಎಲ್ಲವನ್ನೂ ಅಮ್ಮನೇ ಕೈತುತ್ತು ಕೊಟ್ಟಂತೆ.

ಬದುಕಿನಲ್ಲಿ ಇಷ್ಟು ವರ್ಷಗಳ ಕಾಲ ಆಚರಿಸಿದ ಹಬ್ಬಗಳಿಗಿಂತ ಇದು ವಿಶೇಷ ಅನಿಸುತ್ತದೆ. ಅದಕ್ಕೆ ಕಾರಣವಾದದ್ದು ದುಡಿಮೆ. ಅದರಲ್ಲೂ ದುಡಿದ ಹಣದಲ್ಲಿ ಮೊದಲ ಹಬ್ಬ. ಅಪರೂಪವಾದದ್ದು ಆಕಸ್ಮಿಕವಾಗಿ ನಡೆದುಹೋದಂತೆ. ಹಬ್ಬ ಮುಗಿದ ಮರುದಿನ ಎಲ್ಲವನ್ನೂ ಕೊಟ್ಟ ನಗರದತ್ತ ಹೊರಟಾಗ ಮತ್ತಷ್ಟು ಕನಸುಗಳು ಬೆನ್ನ ಹಿಂದೆ ಬಿದ್ದಂತೆ. ಅವುಗಳನ್ನು ಈಡೇರಿಸುವ ತಾಯಗರ್ಭ ನಗರ. ಮತ್ತೆ ಕೈಬೀಸುತ್ತದೆ. ಹೆತ್ತವರ ಹಾರೈಕೆಗಳು ಈಗ ಮುಂದೆ ಮುಂದೆ ಸಾಗಿ ದಾರಿಯನ್ನು ಸೊಬಗುಗೊಳಿಸುತ್ತವೆ.

– ಸೋಮು ಕುದರಿಹಾಳ

ಟಾಪ್ ನ್ಯೂಸ್

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

19-kushtagi

Kushtagi:ವಿದ್ಯುತ್‌ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ

18=

Festivals: ಹಬ್ಬಗಳು ಮರೆಯಾಗುತ್ತಿವೆಯೇ?

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.